<p>ಬೆಂಗಳೂರು: `ವರನಟ ಡಾ.ರಾಜ್ ಕುಮಾರ್ ಅವರ ನೆನಪುಗಳೊಂದಿಗೆ ಭವಿಷ್ಯದ ಸಿನಿಮಾವನ್ನು ರೂಪಿಸುವ ಬಗ್ಗೆ ಕನಸು ಕಾಣಬೇಕಿದೆ~ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು. <br /> <br /> ಅಕಾಡೆಮಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್ ಅವರು ಸೆರೆ ಹಿಡಿದ ಡಾ.ರಾಜ್ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಡಾ.ರಾಜ್ ಅವರ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಛಾಯಾಗ್ರಹಣ ಎಂಬುದು ಹಳೆಯ ನೆನಪುಗಳ ಪ್ರತಿಬಿಂಬವಾಗಿದೆ. ಹಾಗೆಯೇ ಭವಿಷ್ಯದ ಬಗ್ಗೆ ಕನಸು ಕಾಣಲು ಕೂಡ ಇದು ಸಹಕಾರಿಯಾಗಿದೆ~ ಎಂದು ಹೇಳಿದರು.<br /> <br /> `ಲಕ್ಷ್ಮೀನಾರಾಯಣ ಅವರ ಚಿತ್ರಗಳು ವೈವಿಧ್ಯಮಯವಾಗಿವೆ. ರಾಜ್ ಅವರ ಜೀವನದ ವಿವಿಧ ಮುಖಗಳನ್ನು ಅವು ಪ್ರಸ್ತುತ ಪಡಿಸಿವೆ. ಭಾನುವಾರದವರೆಗೆ ಪ್ರದರ್ಶನ ನಡೆಯಲಿದ್ದು ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ~ ಎಂದರು. <br /> <br /> ಚಿತ್ರನಟ ಪುನೀತ್ ರಾಜ್ಕುಮಾರ್ ಮಾತನಾಡಿ, `ನನ್ನ ತಂದೆ ರಾಜ್ ಅವರ ಜೀವನದ ಅನೇಕ ಸಂಗತಿಗಳನ್ನು ಪ್ರದರ್ಶನ ಬಿಂಬಿಸಿದೆ. ಸ್ವತಃ ನನಗೇ ಗೊತ್ತಿರದ ಅನೇಕ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ. ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅಕಾಡೆಮಿ ಸಹಾಯ ಮಾಡಿದೆ~ ಎಂದು ಅವರು ತಿಳಿಸಿದರು.<br /> <br /> `ರಾಜ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಾದ್ಯಂತ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ ಬಗ್ಗೆ ಜನರಿಗೆ ಇರುವ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ~ ಎಂದರು. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಬಿ ಝಳಕಿ ಮಾತನಾಡಿ `ಪ್ರದರ್ಶನದಲ್ಲಿ ಕಪ್ಪು ಬಿಳುಪು ಚಿತ್ರಗಳ ಮೂಲಕ ರಾಜ್ ಅವರ ವೈವಿಧ್ಯಮಯ ಚಿತ್ರಗಳನ್ನು ಬಿಂಬಿಸಿರುವುದು ಸಂತಸದ ಸಂಗತಿಯಾಗಿದೆ. ಇದೊಂದು ಅಪರೂಪದ ಚಿತ್ರಗಳ ಅದ್ಭುತ ಸಂಗ್ರಹವಾಗಿದೆ~ ಎಂದು ಹೇಳಿದರು.ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ವರನಟ ಡಾ.ರಾಜ್ ಕುಮಾರ್ ಅವರ ನೆನಪುಗಳೊಂದಿಗೆ ಭವಿಷ್ಯದ ಸಿನಿಮಾವನ್ನು ರೂಪಿಸುವ ಬಗ್ಗೆ ಕನಸು ಕಾಣಬೇಕಿದೆ~ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು. <br /> <br /> ಅಕಾಡೆಮಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್ ಅವರು ಸೆರೆ ಹಿಡಿದ ಡಾ.ರಾಜ್ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಡಾ.ರಾಜ್ ಅವರ ಚಿತ್ರರಂಗಕ್ಕೂ ಈಗಿನ ಚಿತ್ರರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಛಾಯಾಗ್ರಹಣ ಎಂಬುದು ಹಳೆಯ ನೆನಪುಗಳ ಪ್ರತಿಬಿಂಬವಾಗಿದೆ. ಹಾಗೆಯೇ ಭವಿಷ್ಯದ ಬಗ್ಗೆ ಕನಸು ಕಾಣಲು ಕೂಡ ಇದು ಸಹಕಾರಿಯಾಗಿದೆ~ ಎಂದು ಹೇಳಿದರು.<br /> <br /> `ಲಕ್ಷ್ಮೀನಾರಾಯಣ ಅವರ ಚಿತ್ರಗಳು ವೈವಿಧ್ಯಮಯವಾಗಿವೆ. ರಾಜ್ ಅವರ ಜೀವನದ ವಿವಿಧ ಮುಖಗಳನ್ನು ಅವು ಪ್ರಸ್ತುತ ಪಡಿಸಿವೆ. ಭಾನುವಾರದವರೆಗೆ ಪ್ರದರ್ಶನ ನಡೆಯಲಿದ್ದು ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ~ ಎಂದರು. <br /> <br /> ಚಿತ್ರನಟ ಪುನೀತ್ ರಾಜ್ಕುಮಾರ್ ಮಾತನಾಡಿ, `ನನ್ನ ತಂದೆ ರಾಜ್ ಅವರ ಜೀವನದ ಅನೇಕ ಸಂಗತಿಗಳನ್ನು ಪ್ರದರ್ಶನ ಬಿಂಬಿಸಿದೆ. ಸ್ವತಃ ನನಗೇ ಗೊತ್ತಿರದ ಅನೇಕ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ. ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅಕಾಡೆಮಿ ಸಹಾಯ ಮಾಡಿದೆ~ ಎಂದು ಅವರು ತಿಳಿಸಿದರು.<br /> <br /> `ರಾಜ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಾದ್ಯಂತ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ ಬಗ್ಗೆ ಜನರಿಗೆ ಇರುವ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ~ ಎಂದರು. <br /> <br /> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಬಿ ಝಳಕಿ ಮಾತನಾಡಿ `ಪ್ರದರ್ಶನದಲ್ಲಿ ಕಪ್ಪು ಬಿಳುಪು ಚಿತ್ರಗಳ ಮೂಲಕ ರಾಜ್ ಅವರ ವೈವಿಧ್ಯಮಯ ಚಿತ್ರಗಳನ್ನು ಬಿಂಬಿಸಿರುವುದು ಸಂತಸದ ಸಂಗತಿಯಾಗಿದೆ. ಇದೊಂದು ಅಪರೂಪದ ಚಿತ್ರಗಳ ಅದ್ಭುತ ಸಂಗ್ರಹವಾಗಿದೆ~ ಎಂದು ಹೇಳಿದರು.ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ್, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>