<p>ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಮತ್ತು ರಾಮದೇವ್ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಗಳು ಸಂಘದ ~ಭಯೋತ್ಪಾದಕ~ ಸಂಪರ್ಕಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಸಲುವಾಗಿ ಆರೆಸ್ಸೆಸ್ - ಬಿಜೆಪಿ ಹಮ್ಮಿಕೊಂಡಿರುವ ವ್ಯಾಪಕ ಯೋಜನೆಯ ಭಾಗಗಳಾಗಿದ್ದು, ~ನಿಮ್ಮನ್ನೂ ಅವರು ಈ ಯೋಜನೆಯ ವ್ಯಾಪ್ತಿಗೆ ತರಬಹುದು~ ಎಂದು ಕಾಂಗ್ರೆಸ್ ಧುರೀಣ ದಿಗ್ವಿಜಯ ಸಿಂಗ್ ಗುರುವಾರ ಶ್ರೀ ಶ್ರೀ ರವಿಶಂಕರ ಗುರೂಜಿ ಅವರನ್ನು ಎಚ್ಚರಿಸಿದ್ದಾರೆ.<br /> <br /> ರಾಮದೇವ್ ಮತ್ತು ಅಣ್ಣಾ ಹಜಾರೆ ಅವರು ಆರೆಸ್ಸೆಸ್- ಬಿಜೆಪಿಯ ~ಎ~ ಮತ್ತು ~ಬಿ~ ಭಾಗವಾಗಿದ್ದು, ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ~ಸಿ~ ಭಾಗವಾಗಬಹುದು ಎಂದು ಹೇಳಿರುವ ಏಐಸಿಸಿ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಈ ಎರಡು ಸಂಘಟನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದಾರೆ.<br /> <br /> ಟ್ವಿಟರ್ ಸಂದೇಶದಲ್ಲಿ ತಮ್ಮ ಈ ಎಚ್ಚರಿಕೆಯನ್ನು ನೀಡಿರುವ ಕಾಂಗ್ರೆಸ್ ಧುರೀಣ, ~ಯೋಜನೆ ಎ, ಬಿ ಮತ್ತು ಸಿ - ಇವು ತಾವು ಶಾಮೀಲಾಗಿರುವ ಭಯೋತ್ಪಾದಕ ಚಟುವಟಿಕೆಗಳಿಂದ ಜನರ ಮನಸ್ಸನ್ನು ಭ್ರಷ್ಟಾಚಾರದತ್ತ ತಿರುಗಿಸಲು ಸಂಘ- ಬಿಜೆಪಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಎಂದು ಹೇಳಿದ್ದಾರೆ.<br /> <br /> ನಂತರ ಸುದ್ದಿಗಾರ ಜೊತೆ ಮಾತನಾಡುತ್ತಿದ್ದ ದಿಗ್ವಿಜಯ ಸಿಂಗ್ ಅವರು ~ಯೋಜನೆ ಎ ಅಂದರೆ ರಾಮದೇವ್, ಯೋಜನೆ ಬಿ ಅಂದರೆ ಅಣ್ಣಾ ಹಜಾರೆ ಮತ್ತು ಯೋಜನೆ ಸಿ ಅಂದರೆ ಶ್ರೀ ಶ್ರೀ ರವಿಶಂಕರ ಎಂದು ನುಡಿದರು.<br /> ~ರವಿ ಶಂಕರ ಗುರೂಜಿ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ಜೀವನ ಕಲೆ ಶಿಬಿರದಲ್ಲಿ 2001ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾನೂ ಪಾಲ್ಗೊಂಡಿದ್ದೆ. ಸಂಘ- ಬಿಜೆಪಿ ಬಗ್ಗೆ ಅವರು ಎಚ್ಚರ ವಹಿಸಬೇಕು ಎಂದೂ ಇನ್ನೊಂದು ಟ್ವಿಟರ್ ಸಂದೇಶದಲ್ಲಿ ಸಿಂಗ್ ಹೇಳಿದ್ದಾರೆ.<br /> <br /> ಇದಕ್ಕೆ ಪ್ರತಿಕ್ರಿಯಿಸಿರುವ ರವಿಶಂಕರ ಗುರೂಜಿ ಅವರು ~ಜನರು ಹಲವಾರು ವಿಷಯಗಳನ್ನು ಬರೆಯುತ್ತಾರೆ. ಪ್ರತಿಯೊಂದು ಟೀಕೆಗೂ ನಾನು ಉತ್ತರ ಬರೆಯುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರ್ಯ ಇದೆ~ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ಮತ್ತು ರಾಮದೇವ್ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಗಳು ಸಂಘದ ~ಭಯೋತ್ಪಾದಕ~ ಸಂಪರ್ಕಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಸಲುವಾಗಿ ಆರೆಸ್ಸೆಸ್ - ಬಿಜೆಪಿ ಹಮ್ಮಿಕೊಂಡಿರುವ ವ್ಯಾಪಕ ಯೋಜನೆಯ ಭಾಗಗಳಾಗಿದ್ದು, ~ನಿಮ್ಮನ್ನೂ ಅವರು ಈ ಯೋಜನೆಯ ವ್ಯಾಪ್ತಿಗೆ ತರಬಹುದು~ ಎಂದು ಕಾಂಗ್ರೆಸ್ ಧುರೀಣ ದಿಗ್ವಿಜಯ ಸಿಂಗ್ ಗುರುವಾರ ಶ್ರೀ ಶ್ರೀ ರವಿಶಂಕರ ಗುರೂಜಿ ಅವರನ್ನು ಎಚ್ಚರಿಸಿದ್ದಾರೆ.<br /> <br /> ರಾಮದೇವ್ ಮತ್ತು ಅಣ್ಣಾ ಹಜಾರೆ ಅವರು ಆರೆಸ್ಸೆಸ್- ಬಿಜೆಪಿಯ ~ಎ~ ಮತ್ತು ~ಬಿ~ ಭಾಗವಾಗಿದ್ದು, ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ~ಸಿ~ ಭಾಗವಾಗಬಹುದು ಎಂದು ಹೇಳಿರುವ ಏಐಸಿಸಿ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಈ ಎರಡು ಸಂಘಟನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದಾರೆ.<br /> <br /> ಟ್ವಿಟರ್ ಸಂದೇಶದಲ್ಲಿ ತಮ್ಮ ಈ ಎಚ್ಚರಿಕೆಯನ್ನು ನೀಡಿರುವ ಕಾಂಗ್ರೆಸ್ ಧುರೀಣ, ~ಯೋಜನೆ ಎ, ಬಿ ಮತ್ತು ಸಿ - ಇವು ತಾವು ಶಾಮೀಲಾಗಿರುವ ಭಯೋತ್ಪಾದಕ ಚಟುವಟಿಕೆಗಳಿಂದ ಜನರ ಮನಸ್ಸನ್ನು ಭ್ರಷ್ಟಾಚಾರದತ್ತ ತಿರುಗಿಸಲು ಸಂಘ- ಬಿಜೆಪಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಎಂದು ಹೇಳಿದ್ದಾರೆ.<br /> <br /> ನಂತರ ಸುದ್ದಿಗಾರ ಜೊತೆ ಮಾತನಾಡುತ್ತಿದ್ದ ದಿಗ್ವಿಜಯ ಸಿಂಗ್ ಅವರು ~ಯೋಜನೆ ಎ ಅಂದರೆ ರಾಮದೇವ್, ಯೋಜನೆ ಬಿ ಅಂದರೆ ಅಣ್ಣಾ ಹಜಾರೆ ಮತ್ತು ಯೋಜನೆ ಸಿ ಅಂದರೆ ಶ್ರೀ ಶ್ರೀ ರವಿಶಂಕರ ಎಂದು ನುಡಿದರು.<br /> ~ರವಿ ಶಂಕರ ಗುರೂಜಿ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರ ಜೀವನ ಕಲೆ ಶಿಬಿರದಲ್ಲಿ 2001ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾನೂ ಪಾಲ್ಗೊಂಡಿದ್ದೆ. ಸಂಘ- ಬಿಜೆಪಿ ಬಗ್ಗೆ ಅವರು ಎಚ್ಚರ ವಹಿಸಬೇಕು ಎಂದೂ ಇನ್ನೊಂದು ಟ್ವಿಟರ್ ಸಂದೇಶದಲ್ಲಿ ಸಿಂಗ್ ಹೇಳಿದ್ದಾರೆ.<br /> <br /> ಇದಕ್ಕೆ ಪ್ರತಿಕ್ರಿಯಿಸಿರುವ ರವಿಶಂಕರ ಗುರೂಜಿ ಅವರು ~ಜನರು ಹಲವಾರು ವಿಷಯಗಳನ್ನು ಬರೆಯುತ್ತಾರೆ. ಪ್ರತಿಯೊಂದು ಟೀಕೆಗೂ ನಾನು ಉತ್ತರ ಬರೆಯುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರ್ಯ ಇದೆ~ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>