<p>ರಾಮನವಮಿ ಪ್ರಯುಕ್ತ ಶನಿವಾರ ಸಂಜೆ ಯಲಹಂಕದ ವಿನಾಯಕನಗರ ಶ್ರೀ ಸೀತಾರಾಮ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ (ಕೊತ್ತನೂರು) ದೀಪಾಭಟ್ ಮತ್ತು ತಂಡ ನಡೆಸಿಕೊಟ್ಟ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ ತಂಡದ ಪ್ರೌಢ ಪ್ರತಿಭೆಯನ್ನು ಅನಾವರಣಗೊಳಿಸಿತು. <br /> <br /> ದೀಪಾ ಕಲಾಕ್ಷಿತಿಯ ಗುರು ಪ್ರೊ.ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ, ಜನ ಮನ್ನಣೆ ಗಳಿಸಿದ ಕಲಾವಿದೆ. ಪುರಂದರದಾಸರ ರಚನೆ `ಗಜವದನಾ ಬೇಡುವೆ~ ಎಂಬ ಪ್ರಾರ್ಥನಾ ನೃತ್ಯದಿಂದ ಅವರು ಕಾರ್ಯಕ್ರಮ ಪ್ರಾರಂಭಿಸಿದರು.<br /> <br /> ಅಲರಿಪು, ಸುಬ್ರಹ್ಮಣ್ಯಕೌತ್ವಂ, ಆರಭಿ ಜತಿಸ್ವರ, ಯಮನ್ ಕಲ್ಯಾಣಿ ರಾಗದ ಶ್ರಿ ರಾಮಚಂದ್ರ ಕೃಪಾಳು ಭಜನ್, ದೇವಿ ಮಹಿಮೆಯನ್ನು ಸಾರುವ ಕಲ್ಯಾಣಿ ರಾಗದ ಕೃತಿ ವಾರಿಜಾಕ್ಷಿ ಕಾಮಾಕ್ಷಿ , ಚಂದ್ರಚೂಡ ಶಿವಶಂಕರ ಮೊದಲಾದ ನೃತ್ಯಬಂಧಗಳಿಗೆ ಕಲಾವಿದರು ಅದ್ಭುತವಾಗಿ ನರ್ತಿಸಿದರು. <br /> <br /> ಪುರಂದರದಾಸರ ಮತ್ತೊಂದು ಜನಪ್ರಿಯ ಕೃತಿ ಕಾಪಿ ರಾಗದ `ಜಗದೋದ್ಧಾರನ ಆಡಿಸಿದಳೆಶೋದೆ~ ದೇವರನಾಮದಲ್ಲಿ ದೀಪಾ ಭಟ್ ಅಭಿನಯ ಮನಮೋಹಕವಾಗಿತ್ತು. <br /> `ಭಾಗ್ಯದ ಲಕ್ಷ್ಮೀ ಬಾರಮ್ಮೋ~, `ಯಾದವ ನೀ ಬಾ~, `ಆಂಜನೇಯ ರಘುರಾಮದೂತಂ~ ಮತ್ತು ಜಯದೇವ ಕವಿಯ ಗೀತಗೋವಿಂದ ಕಾವ್ಯದಿಂದ ಆಯ್ದ ಅಷ್ಟಪದಿ ಪ್ರಳಯ ಪಯೋಧಿಜಲೇ ದಶಾವತಾರ ಅತ್ಯುತ್ತಮ ನೃತ್ಯ ಸಂಯೊಜನೆಯೊಂದಿಗೆ ಮೂಡಿಬಂತು.<br /> ರಾಮನವಮಿಗೆ ಈ ನೃತ್ಯಾಂಜಲಿ ನೃತ್ಯ ರೂಪಕ ವಿಶೇಷ ಮೆರುಗು ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮನವಮಿ ಪ್ರಯುಕ್ತ ಶನಿವಾರ ಸಂಜೆ ಯಲಹಂಕದ ವಿನಾಯಕನಗರ ಶ್ರೀ ಸೀತಾರಾಮ ದೇವಸ್ಥಾನ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ (ಕೊತ್ತನೂರು) ದೀಪಾಭಟ್ ಮತ್ತು ತಂಡ ನಡೆಸಿಕೊಟ್ಟ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ ತಂಡದ ಪ್ರೌಢ ಪ್ರತಿಭೆಯನ್ನು ಅನಾವರಣಗೊಳಿಸಿತು. <br /> <br /> ದೀಪಾ ಕಲಾಕ್ಷಿತಿಯ ಗುರು ಪ್ರೊ.ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ, ಜನ ಮನ್ನಣೆ ಗಳಿಸಿದ ಕಲಾವಿದೆ. ಪುರಂದರದಾಸರ ರಚನೆ `ಗಜವದನಾ ಬೇಡುವೆ~ ಎಂಬ ಪ್ರಾರ್ಥನಾ ನೃತ್ಯದಿಂದ ಅವರು ಕಾರ್ಯಕ್ರಮ ಪ್ರಾರಂಭಿಸಿದರು.<br /> <br /> ಅಲರಿಪು, ಸುಬ್ರಹ್ಮಣ್ಯಕೌತ್ವಂ, ಆರಭಿ ಜತಿಸ್ವರ, ಯಮನ್ ಕಲ್ಯಾಣಿ ರಾಗದ ಶ್ರಿ ರಾಮಚಂದ್ರ ಕೃಪಾಳು ಭಜನ್, ದೇವಿ ಮಹಿಮೆಯನ್ನು ಸಾರುವ ಕಲ್ಯಾಣಿ ರಾಗದ ಕೃತಿ ವಾರಿಜಾಕ್ಷಿ ಕಾಮಾಕ್ಷಿ , ಚಂದ್ರಚೂಡ ಶಿವಶಂಕರ ಮೊದಲಾದ ನೃತ್ಯಬಂಧಗಳಿಗೆ ಕಲಾವಿದರು ಅದ್ಭುತವಾಗಿ ನರ್ತಿಸಿದರು. <br /> <br /> ಪುರಂದರದಾಸರ ಮತ್ತೊಂದು ಜನಪ್ರಿಯ ಕೃತಿ ಕಾಪಿ ರಾಗದ `ಜಗದೋದ್ಧಾರನ ಆಡಿಸಿದಳೆಶೋದೆ~ ದೇವರನಾಮದಲ್ಲಿ ದೀಪಾ ಭಟ್ ಅಭಿನಯ ಮನಮೋಹಕವಾಗಿತ್ತು. <br /> `ಭಾಗ್ಯದ ಲಕ್ಷ್ಮೀ ಬಾರಮ್ಮೋ~, `ಯಾದವ ನೀ ಬಾ~, `ಆಂಜನೇಯ ರಘುರಾಮದೂತಂ~ ಮತ್ತು ಜಯದೇವ ಕವಿಯ ಗೀತಗೋವಿಂದ ಕಾವ್ಯದಿಂದ ಆಯ್ದ ಅಷ್ಟಪದಿ ಪ್ರಳಯ ಪಯೋಧಿಜಲೇ ದಶಾವತಾರ ಅತ್ಯುತ್ತಮ ನೃತ್ಯ ಸಂಯೊಜನೆಯೊಂದಿಗೆ ಮೂಡಿಬಂತು.<br /> ರಾಮನವಮಿಗೆ ಈ ನೃತ್ಯಾಂಜಲಿ ನೃತ್ಯ ರೂಪಕ ವಿಶೇಷ ಮೆರುಗು ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>