<p>ರಾಮೇಶ್ವರಂ (ಪಿಟಿಐ): ಎಂಭತ್ತು ಕಿ.ಮೀ. ವೇಗದೊಂದಿಗೆ ಬೀಸಿದ ಬಿರುಗಾಳಿ ಮತ್ತು ಭಾರಿ ಮಳೆಯ ಪರಿಣಾಮವಾಗಿ ಇಲ್ಲಿನ ಹಲವಾರು ಮನೆಗಳ ಛಾವಣಿಗಳು ಹಾರಿ ಹೋಗಿದ್ದು, ಇಲ್ಲಿ ಲಂಗರುಹಾಕಿದ್ದ ಸುಮಾರು 100ಕ್ಕೂ ಹೆಚ್ಚು ಯಾಂತ್ರಿಕ ದೋಣಿಗಳು ಹಾನಿಗೊಳಗಾಗಿವೆ.<br /> <br /> ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಸಮುದ್ರದ ಅಲೆಗಳ ಅಬ್ಬರಕ್ಕೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ದೋಣಿಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಮೀನುಗಾರಿಕಾ ತರಬೇತಿ ಸಹಾಯಕ ನಿರ್ದೇಶಕ ಕ್ಸೇವಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿದ ವರದಿಗಾರರಿಗೆ ತಿಳಿಸಿದರು.<br /> <br /> ಪ್ರತಿಯೊಂದು ದೋಣಿಯ ಬೆಲೆ 10 ಲಕ್ಷ ರೂಪಾಯಿಯಷ್ಟಿದ್ದು, ಅವುಗಳ ದುರಸ್ತಿಗೆ ಕನಿಷ್ಠ 4 ಲಕ್ಷ ರೂಪಾಯಿಗಳು ಬೇಕಾಗಬಹುದು ಎಂದು ಅವರು ನುಡಿದರು.<br /> <br /> ಇನ್ನೂ ನಾಲ್ಕುಮಂದಿ ಮೀನುಗಾರರ ಸಾವಿನ ದುಃಖದಲ್ಲಿ ಇರುವಾಗಲೇ ಸಂಭವಿಸಿರುವ ಈ ಅನಾಹುತ ನಮಗೆ ಇನ್ನೊಂದು ಹೊಡೆತ ಎಂದು ಮೀನುಗಾರಿಕಾ ಸಂಘದ ಅಧ್ಯಕ್ಷ ಯೇಸುರಾಜನ್ ಹೇಳಿದರು.<br /> <br /> ನಾಲ್ಕು ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಕೊಂದು ಹಾಕಿದ್ದಾರೆ ಎನ್ನಲಾಗಿದ್ದು ಮೃತರ ಶವಗಳು ಇತ್ತೀಚೆಗಷ್ಟೇ ಪತ್ತೆಯಾಗಿದ್ದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮೇಶ್ವರಂ (ಪಿಟಿಐ): ಎಂಭತ್ತು ಕಿ.ಮೀ. ವೇಗದೊಂದಿಗೆ ಬೀಸಿದ ಬಿರುಗಾಳಿ ಮತ್ತು ಭಾರಿ ಮಳೆಯ ಪರಿಣಾಮವಾಗಿ ಇಲ್ಲಿನ ಹಲವಾರು ಮನೆಗಳ ಛಾವಣಿಗಳು ಹಾರಿ ಹೋಗಿದ್ದು, ಇಲ್ಲಿ ಲಂಗರುಹಾಕಿದ್ದ ಸುಮಾರು 100ಕ್ಕೂ ಹೆಚ್ಚು ಯಾಂತ್ರಿಕ ದೋಣಿಗಳು ಹಾನಿಗೊಳಗಾಗಿವೆ.<br /> <br /> ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಸಮುದ್ರದ ಅಲೆಗಳ ಅಬ್ಬರಕ್ಕೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ದೋಣಿಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಮೀನುಗಾರಿಕಾ ತರಬೇತಿ ಸಹಾಯಕ ನಿರ್ದೇಶಕ ಕ್ಸೇವಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿದ ವರದಿಗಾರರಿಗೆ ತಿಳಿಸಿದರು.<br /> <br /> ಪ್ರತಿಯೊಂದು ದೋಣಿಯ ಬೆಲೆ 10 ಲಕ್ಷ ರೂಪಾಯಿಯಷ್ಟಿದ್ದು, ಅವುಗಳ ದುರಸ್ತಿಗೆ ಕನಿಷ್ಠ 4 ಲಕ್ಷ ರೂಪಾಯಿಗಳು ಬೇಕಾಗಬಹುದು ಎಂದು ಅವರು ನುಡಿದರು.<br /> <br /> ಇನ್ನೂ ನಾಲ್ಕುಮಂದಿ ಮೀನುಗಾರರ ಸಾವಿನ ದುಃಖದಲ್ಲಿ ಇರುವಾಗಲೇ ಸಂಭವಿಸಿರುವ ಈ ಅನಾಹುತ ನಮಗೆ ಇನ್ನೊಂದು ಹೊಡೆತ ಎಂದು ಮೀನುಗಾರಿಕಾ ಸಂಘದ ಅಧ್ಯಕ್ಷ ಯೇಸುರಾಜನ್ ಹೇಳಿದರು.<br /> <br /> ನಾಲ್ಕು ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಕೊಂದು ಹಾಕಿದ್ದಾರೆ ಎನ್ನಲಾಗಿದ್ದು ಮೃತರ ಶವಗಳು ಇತ್ತೀಚೆಗಷ್ಟೇ ಪತ್ತೆಯಾಗಿದ್ದವು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>