<p><strong>ಹುದ್ದೆ ಮೇಲ್ದರ್ಜೆಗೆ ಮೀಸಲು ನಿಯಮ ಅನ್ವಯವಾಗದು<br /> ನವದೆಹಲಿ, (ಪಿಟಿಐ):</strong> ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಜಾತಿಯ ಮಿಸಲಾತಿ ಕೋಟಾ ನಿಯಮಗಳು ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದಾಗ ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.<br /> <br /> ಮೀಸಲಾತಿ ಕೋಟಾ ನಿಯಮಗಳನ್ನು ಮುಂಬಡ್ತಿಗೆ ಅನ್ವಯಿಸಬಹುದೇ ವಿನಾ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದಾಗ ಅನ್ವಯಿಸಬಾರದು ಎಂದು ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಮತ್ತು ಮಾರ್ಕಂಡೇಯ ಕಟ್ಜು ಅವರನ್ನು ಒಳಗೊಂಡ ಪೀಠ ತಿಳಿಸಿದೆ.<br /> <br /> ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಚೆನ್ನೈ ಘಟಕ ಮತ್ತು ಮದ್ರಾಸ್ ಹೈಕೋರ್ಟ್, ಮೇಲ್ದರ್ಜೆಗೆ ಏರಿಸಿದ ಹುದ್ದೆಗೂ ಮೀಸಲಾತಿ ಕೋಟಾ ನಿಯಮ ಅನ್ವಯವಾಗುತ್ತದೆ ಎಂದು ನೀಡಿದ್ದ ತೀರ್ಪನ್ನು ಅದು ರದ್ದುಪಡಿಸಿದೆ.<br /> <br /> <strong>ಗೋಧಿ ರಫ್ತು ನಿರ್ಬಂಧ ರದ್ದು<br /> ನವದೆಹಲಿ, (ಪಿಟಿಐ):</strong> ಕಳೆದ ನಾಲ್ಕು ವರ್ಷಗಳಿಂದ ಜಾರಿಯಲ್ಲಿದ್ದ ಗೋಧಿ ರಫ್ತು ನಿಷೇಧವನ್ನು ರದ್ದುಪಡಿಸಿರುವ ಸರ್ಕಾರವು, ಬೆಲೆ ಏರಿಕೆ ನಿಯಂತ್ರಿಸಲು ಈರುಳ್ಳಿ ರಫ್ತನ್ನು ನಿಷೇಧಿಸಿದೆ.<br /> <br /> ದಾಖಲೆ ಗೋಧಿ ಉತ್ಪನ್ನವಾಗಿದ್ದು ಉಗ್ರಾಣದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ, ಆಹಾರಕ್ಕೆ ಸಂಬಂಧಿಸಿದ ಉನ್ನತ ಅಧಿಕಾರದ ಸಚಿವರ ತಂಡ ಈ ನಿರ್ಧಾರ ತೆಗೆದುಕೊಂಡಿದೆ.<br /> <br /> <strong>ಹಡಗು ಸ್ಫೋಟ- 3 ಭಾರತೀಯರ ಸಾವು<br /> ಅಬುಜಾ, (ಪಿಟಿಐ): </strong>ನೈಜೀರಿಯಾ ಜಲ ಗಡಿಯಲ್ಲಿ ಲೈಬೀರಿಯಾದ ಹಡಗೊಂದು ಸ್ಫೋಟಗೊಂಡಿದ್ದರಿಂದ ಅದರಲ್ಲಿದ್ದ 15 ನಾವಿಕರ ಪೈಕಿ ಭಾರತೀಯ ಮೂಲದ ಮೂವರು ಸತ್ತಿದ್ದಾರೆ. 10 ಜನರನ್ನು ರಕ್ಷಿಸಲಾಗಿದೆ. <br /> ಇಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ದುರಂತವು ನೈಜೀರಿಯಾದ ಅಪಾಪಾ ಬಂದರು ಬಳಿ ಸಂಭವಿಸಿದೆ. ರಕ್ಷಿಸಲಾಗಿರುವ 10 ಭಾರತೀಯರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುದ್ದೆ ಮೇಲ್ದರ್ಜೆಗೆ ಮೀಸಲು ನಿಯಮ ಅನ್ವಯವಾಗದು<br /> ನವದೆಹಲಿ, (ಪಿಟಿಐ):</strong> ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಜಾತಿಯ ಮಿಸಲಾತಿ ಕೋಟಾ ನಿಯಮಗಳು ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದಾಗ ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.<br /> <br /> ಮೀಸಲಾತಿ ಕೋಟಾ ನಿಯಮಗಳನ್ನು ಮುಂಬಡ್ತಿಗೆ ಅನ್ವಯಿಸಬಹುದೇ ವಿನಾ ಹುದ್ದೆಯನ್ನು ಮೇಲ್ದರ್ಜೆಗೆ ಏರಿಸಿದಾಗ ಅನ್ವಯಿಸಬಾರದು ಎಂದು ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಮತ್ತು ಮಾರ್ಕಂಡೇಯ ಕಟ್ಜು ಅವರನ್ನು ಒಳಗೊಂಡ ಪೀಠ ತಿಳಿಸಿದೆ.<br /> <br /> ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಚೆನ್ನೈ ಘಟಕ ಮತ್ತು ಮದ್ರಾಸ್ ಹೈಕೋರ್ಟ್, ಮೇಲ್ದರ್ಜೆಗೆ ಏರಿಸಿದ ಹುದ್ದೆಗೂ ಮೀಸಲಾತಿ ಕೋಟಾ ನಿಯಮ ಅನ್ವಯವಾಗುತ್ತದೆ ಎಂದು ನೀಡಿದ್ದ ತೀರ್ಪನ್ನು ಅದು ರದ್ದುಪಡಿಸಿದೆ.<br /> <br /> <strong>ಗೋಧಿ ರಫ್ತು ನಿರ್ಬಂಧ ರದ್ದು<br /> ನವದೆಹಲಿ, (ಪಿಟಿಐ):</strong> ಕಳೆದ ನಾಲ್ಕು ವರ್ಷಗಳಿಂದ ಜಾರಿಯಲ್ಲಿದ್ದ ಗೋಧಿ ರಫ್ತು ನಿಷೇಧವನ್ನು ರದ್ದುಪಡಿಸಿರುವ ಸರ್ಕಾರವು, ಬೆಲೆ ಏರಿಕೆ ನಿಯಂತ್ರಿಸಲು ಈರುಳ್ಳಿ ರಫ್ತನ್ನು ನಿಷೇಧಿಸಿದೆ.<br /> <br /> ದಾಖಲೆ ಗೋಧಿ ಉತ್ಪನ್ನವಾಗಿದ್ದು ಉಗ್ರಾಣದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ, ಆಹಾರಕ್ಕೆ ಸಂಬಂಧಿಸಿದ ಉನ್ನತ ಅಧಿಕಾರದ ಸಚಿವರ ತಂಡ ಈ ನಿರ್ಧಾರ ತೆಗೆದುಕೊಂಡಿದೆ.<br /> <br /> <strong>ಹಡಗು ಸ್ಫೋಟ- 3 ಭಾರತೀಯರ ಸಾವು<br /> ಅಬುಜಾ, (ಪಿಟಿಐ): </strong>ನೈಜೀರಿಯಾ ಜಲ ಗಡಿಯಲ್ಲಿ ಲೈಬೀರಿಯಾದ ಹಡಗೊಂದು ಸ್ಫೋಟಗೊಂಡಿದ್ದರಿಂದ ಅದರಲ್ಲಿದ್ದ 15 ನಾವಿಕರ ಪೈಕಿ ಭಾರತೀಯ ಮೂಲದ ಮೂವರು ಸತ್ತಿದ್ದಾರೆ. 10 ಜನರನ್ನು ರಕ್ಷಿಸಲಾಗಿದೆ. <br /> ಇಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ದುರಂತವು ನೈಜೀರಿಯಾದ ಅಪಾಪಾ ಬಂದರು ಬಳಿ ಸಂಭವಿಸಿದೆ. ರಕ್ಷಿಸಲಾಗಿರುವ 10 ಭಾರತೀಯರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>