<p><strong>ನವದೆಹಲಿ (ಪಿಟಿಐ):</strong> ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪೆನಿಯೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸಂಬಂಧ ಹೊಂದಿರುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿರುವುದು ನಿಜ ಎಂಬುದು ಈಗ ಸಾಬೀತಾಗಿದೆ.<br /> <br /> ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ದೋನಿ ಅವರ ಕ್ರಮದ ಬಗ್ಗೆ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿರುವ ಮಂಡಳಿಯ ನೂತನ ಖಜಾಂಚಿ ರವಿ ಸಾವಂತ್, `ರಿತಿ'ಯೊಂದಿಗಿನ ಸಂಬಂಧವನ್ನು ಕೂಡಲೇ ಕಡಿದುಕೊಳ್ಳಬೇಕು ಎಂದು ಭಾರತ ತಂಡದ ನಾಯಕನಿಗೆ ತಾಕೀತು ಮಾಡಿದ್ದಾರೆ.<br /> <br /> ತಮ್ಮ ಕ್ರೀಡಾ ವ್ಯವಹಾರ ನೋಡಿಕೊಳ್ಳುವ ರಿತಿ ಸ್ಪೋರ್ಟ್ಸ್ನಲ್ಲಿ ದೋನಿ ಷೇರು ಕೂಡ ಹೊಂದಿದ್ದಾರೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ, ಈ ಕಂಪೆನಿಯು ಭಾರತ ತಂಡದ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ಪ್ರಗ್ಯಾನ್ ಓಜಾ ಅವರ ಕ್ರಿಕೆಟ್ ವ್ಯವಹಾರವನ್ನು ನಿರ್ವಹಿಸುತ್ತಿದೆ. ಹಾಗಾಗಿ ದೋನಿ ಈಗ ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ.<br /> <br /> `ತಂಡದ ನಾಯಕರಾಗಿರುವ ದೋನಿ ತಕ್ಷಣವೇ ಆ ಕಂಪೆನಿಯ ವ್ಯವಹಾರದಿಂದ ಹೊರಬೇಕು. ಅಕಸ್ಮಾತ್ ಮಂಡಳಿಯೊಂದಿಗೆ ದೋನಿ ಮಾಡಿಕೊಂಡಿರುವ ಒಪ್ಪಂದಲ್ಲಿ ಈ ಅಂಶ ಇಲ್ಲ ಎಂದಾದರೆ ಅವರಿಗೆ ನೋಟಿಸ್ ನೀಡಬೇಕು' ಎಂದು ಸಾವಂತ್ ತಿಳಿಸಿದ್ದಾರೆ.<br /> <br /> ಸೋಮವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆಗೆ ಬಂದಿದೆ. ಆದರೆ ದೋನಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಟೂರ್ನಿಯ ಬಳಿಕ ಮತ್ತೊಮ್ಮೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪೆನಿಯೊಂದಿಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸಂಬಂಧ ಹೊಂದಿರುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿರುವುದು ನಿಜ ಎಂಬುದು ಈಗ ಸಾಬೀತಾಗಿದೆ.<br /> <br /> ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ದೋನಿ ಅವರ ಕ್ರಮದ ಬಗ್ಗೆ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿರುವ ಮಂಡಳಿಯ ನೂತನ ಖಜಾಂಚಿ ರವಿ ಸಾವಂತ್, `ರಿತಿ'ಯೊಂದಿಗಿನ ಸಂಬಂಧವನ್ನು ಕೂಡಲೇ ಕಡಿದುಕೊಳ್ಳಬೇಕು ಎಂದು ಭಾರತ ತಂಡದ ನಾಯಕನಿಗೆ ತಾಕೀತು ಮಾಡಿದ್ದಾರೆ.<br /> <br /> ತಮ್ಮ ಕ್ರೀಡಾ ವ್ಯವಹಾರ ನೋಡಿಕೊಳ್ಳುವ ರಿತಿ ಸ್ಪೋರ್ಟ್ಸ್ನಲ್ಲಿ ದೋನಿ ಷೇರು ಕೂಡ ಹೊಂದಿದ್ದಾರೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ, ಈ ಕಂಪೆನಿಯು ಭಾರತ ತಂಡದ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ಪ್ರಗ್ಯಾನ್ ಓಜಾ ಅವರ ಕ್ರಿಕೆಟ್ ವ್ಯವಹಾರವನ್ನು ನಿರ್ವಹಿಸುತ್ತಿದೆ. ಹಾಗಾಗಿ ದೋನಿ ಈಗ ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ.<br /> <br /> `ತಂಡದ ನಾಯಕರಾಗಿರುವ ದೋನಿ ತಕ್ಷಣವೇ ಆ ಕಂಪೆನಿಯ ವ್ಯವಹಾರದಿಂದ ಹೊರಬೇಕು. ಅಕಸ್ಮಾತ್ ಮಂಡಳಿಯೊಂದಿಗೆ ದೋನಿ ಮಾಡಿಕೊಂಡಿರುವ ಒಪ್ಪಂದಲ್ಲಿ ಈ ಅಂಶ ಇಲ್ಲ ಎಂದಾದರೆ ಅವರಿಗೆ ನೋಟಿಸ್ ನೀಡಬೇಕು' ಎಂದು ಸಾವಂತ್ ತಿಳಿಸಿದ್ದಾರೆ.<br /> <br /> ಸೋಮವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೂಡ ಈ ವಿಷಯ ಚರ್ಚೆಗೆ ಬಂದಿದೆ. ಆದರೆ ದೋನಿ ಈಗ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವುದರಿಂದ ಮಂಡಳಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ಟೂರ್ನಿಯ ಬಳಿಕ ಮತ್ತೊಮ್ಮೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>