<p><strong>ಬೆಂಗಳೂರು:</strong> ನಿವೇಶನ ನೀಡು ವುದಾಗಿ ಹೇಳಿ ಮಾಜಿ ಸೈನಿಕ ರಿಂದ ಹಣ ಪಡೆದು ವಂಚಿ ಸಿದ ಆರೋಪದಡಿ ‘ದುರ್ಗಾ ಪ್ರಾಪರ್ಟಿಸ್ ಲ್ಯಾಂಡ್ ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ಸಂಸ್ಥೆ’ ಮಾಲೀಕ ಶ್ರೀನಿವಾಸ್ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.<br /> <br /> ‘ನಿವೃತ್ತ ಸೈನಿಕರು ನೀಡಿದ ದೂರಿನ ಮೇರೆಗೆ ಸಹಕಾರನಗರದಲ್ಲಿ ವಾಸವಿದ್ದ ಆರೋಪಿ ಶ್ರೀನಿವಾಸ್ಗೌಡನನ್ನು ಬಂಧಿ ಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಬಾಗಲೂರು ಪೊಲೀಸರು ತಿಳಿಸಿದರು.<br /> <br /> ‘ಸೈನಿಕ್ ವೆಲ್ಫೇರ್್ ಆರ್ಗನೈ ಜೇಷನ್ ಇಂಡಿಯಾ ಕಂಪೆನಿಯು ನಿವೇ ಶನ ಹಾಗೂ ಮನೆ ಕೊಡಿಸುವುದಾಗಿ ಹೇಳಿ ನಿವೃತ್ತ ಸೈನಿಕರಿಂದ ₹1.9 ಕೋಟಿ ಪಡೆದು, ಅದೇ ಹಣವನ್ನು ಶ್ರೀನಿವಾಸ್ ಗೌಡನಿಗೆ ನೀಡಿತ್ತು’ ಎಂದು ಮಾಹಿತಿ ನೀಡಿದರು.<br /> <br /> ‘ಹಣ ಪಡೆದಿದ್ದ ಆರೋಪಿಯು ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ದುರ್ಗಾ ನಾರ್ತ್ ಸಿಟಿ ಫೇಸ್–1 ಬಡಾವಣೆ ನಿರ್ಮಿಸಿ ಅಲ್ಲಿಯೇ ನಿವೇಶನ ನೀಡುವುದಾಗಿ ಹೇಳಿದ್ದ. ಆದರೆ ಕೆಲ ತಿಂಗಳ ಬಳಿಕ ನಿವೇಶನ ನೀಡಲು ಶ್ರೀನಿವಾಸ್ಗೌಡ ನಿರಾಕರಿಸಿದ್ದ’ ಎಂದು ಪೊಲೀಸರು ವಿವರಿಸಿದರು.<br /> <br /> ಸುನೀಲ್ಕುಮಾರ್ ಸಾಹು ಎಂಬು ವರಿಂದಲೂ ₹30 ಲಕ್ಷ ಪಡೆದು ಆರೋ ಪಿಯು ವಂಚಿಸಿದ್ದ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿವೇಶನ ನೀಡು ವುದಾಗಿ ಹೇಳಿ ಮಾಜಿ ಸೈನಿಕ ರಿಂದ ಹಣ ಪಡೆದು ವಂಚಿ ಸಿದ ಆರೋಪದಡಿ ‘ದುರ್ಗಾ ಪ್ರಾಪರ್ಟಿಸ್ ಲ್ಯಾಂಡ್ ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ಸಂಸ್ಥೆ’ ಮಾಲೀಕ ಶ್ರೀನಿವಾಸ್ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.<br /> <br /> ‘ನಿವೃತ್ತ ಸೈನಿಕರು ನೀಡಿದ ದೂರಿನ ಮೇರೆಗೆ ಸಹಕಾರನಗರದಲ್ಲಿ ವಾಸವಿದ್ದ ಆರೋಪಿ ಶ್ರೀನಿವಾಸ್ಗೌಡನನ್ನು ಬಂಧಿ ಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಬಾಗಲೂರು ಪೊಲೀಸರು ತಿಳಿಸಿದರು.<br /> <br /> ‘ಸೈನಿಕ್ ವೆಲ್ಫೇರ್್ ಆರ್ಗನೈ ಜೇಷನ್ ಇಂಡಿಯಾ ಕಂಪೆನಿಯು ನಿವೇ ಶನ ಹಾಗೂ ಮನೆ ಕೊಡಿಸುವುದಾಗಿ ಹೇಳಿ ನಿವೃತ್ತ ಸೈನಿಕರಿಂದ ₹1.9 ಕೋಟಿ ಪಡೆದು, ಅದೇ ಹಣವನ್ನು ಶ್ರೀನಿವಾಸ್ ಗೌಡನಿಗೆ ನೀಡಿತ್ತು’ ಎಂದು ಮಾಹಿತಿ ನೀಡಿದರು.<br /> <br /> ‘ಹಣ ಪಡೆದಿದ್ದ ಆರೋಪಿಯು ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ದುರ್ಗಾ ನಾರ್ತ್ ಸಿಟಿ ಫೇಸ್–1 ಬಡಾವಣೆ ನಿರ್ಮಿಸಿ ಅಲ್ಲಿಯೇ ನಿವೇಶನ ನೀಡುವುದಾಗಿ ಹೇಳಿದ್ದ. ಆದರೆ ಕೆಲ ತಿಂಗಳ ಬಳಿಕ ನಿವೇಶನ ನೀಡಲು ಶ್ರೀನಿವಾಸ್ಗೌಡ ನಿರಾಕರಿಸಿದ್ದ’ ಎಂದು ಪೊಲೀಸರು ವಿವರಿಸಿದರು.<br /> <br /> ಸುನೀಲ್ಕುಮಾರ್ ಸಾಹು ಎಂಬು ವರಿಂದಲೂ ₹30 ಲಕ್ಷ ಪಡೆದು ಆರೋ ಪಿಯು ವಂಚಿಸಿದ್ದ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>