<p><strong>ಶ್ರೀಹರಿಕೋಟಾ (ಪಿಟಿಐ): </strong>ಭಾರತದ ಮಹತ್ವಾಕಾಂಕ್ಷೆಯ ಎಲ್ಲಾ ಹವಾಮಾನದಲ್ಲೂ ರಡಾರ್ ಚಿತ್ರಗಳನ್ನು ತೆಗೆಯಬಲ್ಲ ದೇಶೀಯ ನಿರ್ಮಿತ ರಿಸ್ಯಾಟ್ 1 ಉಪಗ್ರಹವನ್ನು ಯಶಸ್ವಿಯಾಗಿ ಗುರುವಾರ ಬೆಳಿಗ್ಗೆ ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡು ಕಕ್ಷೆ ಸೇರಿದೆ.</p>.<p>ಇದು ದೇಶದ ಮೊದಲ ಮೈಕ್ರೋವೇವ್ ದೂರ ಸಂವೇದಿ ಉಪಗ್ರಹವಾಗಿದೆ.<br /> <br /> 1858 ಕೆಜಿ ತೂಕದ ಉಪಗ್ರಹವನ್ನು ಹೊತ್ತ ಪಿಎಸ್ಎಲ್ವಿ ಬಾಹ್ಯಾಕಾಶ ನೌಕೆಯು ಮುಂಜಾನೆ 5.47ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿತು. <br /> <br /> ಕಳೆದ 10 ವರ್ಷಗಳಿಂದ ಇಸ್ರೊ ಸಾಕಷ್ಟು ಶ್ರಮಪಟ್ಟು ತಯಾರಿಸಿದ್ದ ರಿಸ್ಯಾಟ್ 1 ಉಪಗ್ರಹ ದೇಶದ ಬಾಹ್ಯಾಕಾಶ ಜಗತ್ತಿನ ಹೆಗ್ಗುರುತು ಎನಿಸಿದೆ. ಇದು ಹಗಲು-ರಾತ್ರಿ ಎನ್ನದೆ ಮೋಡ ಮುಸುಕಿದ ವಾತಾವರಣದಲ್ಲೂ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ತೆಗೆಯಬಲ್ಲದ್ದಾಗಿದ್ದು, ಇಲ್ಲಿಯವರೆಗೂ ಈ ತರಹದ ಚಿತ್ರಗಳಿಗಾಗಿ ಕೆನಡಾದ ಉಪಗ್ರಹದ ಮೇಲೆ ಭಾರತ ಅವಲಂಬನೆಯಾಗಿತ್ತು.<br /> <br /> ಇದರಿಂದ ಕೃಷಿಗೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಹಕಾರಿಯಾಗಲಿದೆ.<br /> <br /> ಇದನ್ನು ಅತ್ಯಂತ ಯಶಸ್ವಿ ಉಡಾವಣೆ ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ಬಣ್ಣಿಸಿದ್ದಾರೆ.<br /> ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ಉಪಗ್ರಹದ ಯಶಸ್ಸಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀಹರಿಕೋಟಾ (ಪಿಟಿಐ): </strong>ಭಾರತದ ಮಹತ್ವಾಕಾಂಕ್ಷೆಯ ಎಲ್ಲಾ ಹವಾಮಾನದಲ್ಲೂ ರಡಾರ್ ಚಿತ್ರಗಳನ್ನು ತೆಗೆಯಬಲ್ಲ ದೇಶೀಯ ನಿರ್ಮಿತ ರಿಸ್ಯಾಟ್ 1 ಉಪಗ್ರಹವನ್ನು ಯಶಸ್ವಿಯಾಗಿ ಗುರುವಾರ ಬೆಳಿಗ್ಗೆ ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡು ಕಕ್ಷೆ ಸೇರಿದೆ.</p>.<p>ಇದು ದೇಶದ ಮೊದಲ ಮೈಕ್ರೋವೇವ್ ದೂರ ಸಂವೇದಿ ಉಪಗ್ರಹವಾಗಿದೆ.<br /> <br /> 1858 ಕೆಜಿ ತೂಕದ ಉಪಗ್ರಹವನ್ನು ಹೊತ್ತ ಪಿಎಸ್ಎಲ್ವಿ ಬಾಹ್ಯಾಕಾಶ ನೌಕೆಯು ಮುಂಜಾನೆ 5.47ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿತು. <br /> <br /> ಕಳೆದ 10 ವರ್ಷಗಳಿಂದ ಇಸ್ರೊ ಸಾಕಷ್ಟು ಶ್ರಮಪಟ್ಟು ತಯಾರಿಸಿದ್ದ ರಿಸ್ಯಾಟ್ 1 ಉಪಗ್ರಹ ದೇಶದ ಬಾಹ್ಯಾಕಾಶ ಜಗತ್ತಿನ ಹೆಗ್ಗುರುತು ಎನಿಸಿದೆ. ಇದು ಹಗಲು-ರಾತ್ರಿ ಎನ್ನದೆ ಮೋಡ ಮುಸುಕಿದ ವಾತಾವರಣದಲ್ಲೂ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ತೆಗೆಯಬಲ್ಲದ್ದಾಗಿದ್ದು, ಇಲ್ಲಿಯವರೆಗೂ ಈ ತರಹದ ಚಿತ್ರಗಳಿಗಾಗಿ ಕೆನಡಾದ ಉಪಗ್ರಹದ ಮೇಲೆ ಭಾರತ ಅವಲಂಬನೆಯಾಗಿತ್ತು.<br /> <br /> ಇದರಿಂದ ಕೃಷಿಗೆ ಹಾಗೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಹಕಾರಿಯಾಗಲಿದೆ.<br /> <br /> ಇದನ್ನು ಅತ್ಯಂತ ಯಶಸ್ವಿ ಉಡಾವಣೆ ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ಬಣ್ಣಿಸಿದ್ದಾರೆ.<br /> ಪ್ರಧಾನಮಂತ್ರಿ ಮನಮೋಹನಸಿಂಗ್ ಅವರು ಉಪಗ್ರಹದ ಯಶಸ್ಸಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>