<p><strong>ದಾವಣಗೆರೆ:</strong> ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮವು ಕೆಲವು ಸ್ವಾರಸ್ಯಕರ ಹಾಗೂ ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು!<br /> <br /> ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಮನೂರು ಶಿವಶಂಕರಪ್ಪ `ಕೇಕ್' ಕತ್ತರಿಸಿ, ಸಿದ್ದರಾಮಯ್ಯ ಅವರಿಗೆ ನೀಡಿದರು.<br /> <br /> ಅದು ಸಣ್ಣದೊಂದು ತುಂಡಾಗಿತ್ತು. ಅದನ್ನು ಶಾಮನೂರು ಬಾಯಿಗೆ ಇಟ್ಟರು. ಸಿದ್ದರಾಮಯ್ಯ ಅವರಿಗೆ ತೃಪ್ತಿಯಾದಂತೆ ಕಾಣಿಸಲಿಲ್ಲ. ಅವರೇ ಚಾಕು ಹಿಡಿದು ದೊಡ್ಡದೊಂದು ಕೇಕ್ ತುಂಡು ಕತ್ತರಿಸಿ ಬಾಯಿಗೆ ಇಟ್ಟರು. ಆಗ ಶಾಮನೂರು ಕೂಡ ನಕ್ಕು ಸುಮ್ಮನಾದರು.<br /> <br /> ಇನ್ನು ವೇದಿಕೆ ಮೇಲೆ ಸಿಎಂ ಆಸೀನರಾಗುತ್ತಿದಂತೆಯೇ ಪೇಟ (ರುಮಾಲು) ಕಟ್ಟಲು ಸಂಘಟಕರು ಮುಂದಾದರು. ಆಗ ನಗುಮುಖದಿಂದಲೇ ಅದನ್ನು ತಿರಸ್ಕರಿಸಿದರು. ಅ<br /> <br /> ದನ್ನು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಗಮನಿಸಿ, ವೇದಿಕೆ ಮೇಲೆ ಆಸೀನರಾದರು. ಕೆಲವುಕ್ಷಣಗಳ ಬಳಿಕ ಬಲಭಾಗದಲ್ಲಿದ್ದ ಶಾಸಕರಾದ ಡಿ.ಜಿ.ಶಾಂತನಗೌಡ, ವಡ್ನಾಳ್ ರಾಜಣ್ಣ ಹಾಗೂ ಸಚಿವ ಮಹಾದೇವ ಪ್ರಸಾದ್ಗೆ ರುಮಾಲು ಕಟ್ಟಲಾಯಿತು.<br /> <br /> ಮತ್ತೆ ಮುಖ್ಯಮಂತ್ರಿ ಬಳಿ ಬಂದಾಗ ನಯವಾಗಿಯೇ ನಿರಾಕರಿಸಿದರು. ಆಗ ಮಲ್ಲಿಕಾರ್ಜುನ್ ಪಕ್ಕದಲ್ಲಿದ್ದ ಶಾಸಕರ ಕಡೆ ನೋಡಿ ಸುಮ್ಮನಾದರು.<br /> <br /> <strong>ಸೌಮ್ಯವಾಗಿ ಮಾತನಾಡಿದ ಮುಖ್ಯಮಂತ್ರಿ</strong><br /> <strong>ದಾವಣಗೆರೆ:</strong> ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಮಾತಿನ ಧಾಟಿಯಲ್ಲಿ ಬದಲಾದಂತೆ ಕಂಡರು.<br /> <br /> ಕಾರ್ಯಕ್ರಮದ ಉದ್ದಕ್ಕೂ ಹಾಸ್ಯ ಬೆರೆಸಿ ಮಾತನಾಡಲು ಪ್ರಯತ್ನಿಸಿದರು. ಅಪ್ಪಿತಪ್ಪಿಯೂ ವಿರೋಧ ಪಕ್ಷದ ನಾಯಕರ ಟೀಕೆಗೆ ಮುಂದಾಗಲಿಲ್ಲ. ಒಮ್ಮೆ ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದ `ಭ್ರಷ್ಟಾಚಾರ' ಎಂದು ವಿಷಯ ಪ್ರಸ್ತಾಪಿಸಿದರು. ಆಗ ಸಭಿಕರು `ಅವರ ಬಗ್ಗೆ ಮಾತನಾಡ ಬೇಡಿ' ಎಂಬ ಮನವಿ ಮಾಡಿದರು. ಅಷ್ಟಕ್ಕೆ ಸುಮ್ಮನಾದ ಮುಖ್ಯಮಂತ್ರಿ ಗುಟ್ಕಾ ಲಾಬಿಯ ಬಗ್ಗೆ ಮಾತನಾಡುವಾಗ ಮಾತ್ರ ವಿರೋಧ ಪಕ್ಷಗಳ ಮೇಲೆ ಬೆರಳು ಮಾಡಿ ತೋರಿಸಿದರು.<br /> <br /> ರೈತರ ಸಾಲ ಮನ್ನಾ, ಮದ್ಯಪಾನ ನಿಷೇಧ ಮಾಡಿ ಎಂಬ ಘೋಷಣೆಗಳು ಸಭಿಕರಿಂದ ತೂರಿಬಂದವು. ವೇದಿಕೆಯ ಮೇಲಿದ್ದ ಮುಖ್ಯಮಂತ್ರಿ ಪದೇ ಪದೇ ಕೈಬೀಸುತ್ತಿದ್ದ ದೃಶ್ಯ ಕಂಡುಬಂತು.<br /> <br /> ಇನ್ನು ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ಸಿಇಒ ಎ.ಬಿ.ಹೇಮಚಂದ್ರ ಅವರು ಮುಖ್ಯಮಂತ್ರಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮವು ಕೆಲವು ಸ್ವಾರಸ್ಯಕರ ಹಾಗೂ ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು!<br /> <br /> ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಮನೂರು ಶಿವಶಂಕರಪ್ಪ `ಕೇಕ್' ಕತ್ತರಿಸಿ, ಸಿದ್ದರಾಮಯ್ಯ ಅವರಿಗೆ ನೀಡಿದರು.<br /> <br /> ಅದು ಸಣ್ಣದೊಂದು ತುಂಡಾಗಿತ್ತು. ಅದನ್ನು ಶಾಮನೂರು ಬಾಯಿಗೆ ಇಟ್ಟರು. ಸಿದ್ದರಾಮಯ್ಯ ಅವರಿಗೆ ತೃಪ್ತಿಯಾದಂತೆ ಕಾಣಿಸಲಿಲ್ಲ. ಅವರೇ ಚಾಕು ಹಿಡಿದು ದೊಡ್ಡದೊಂದು ಕೇಕ್ ತುಂಡು ಕತ್ತರಿಸಿ ಬಾಯಿಗೆ ಇಟ್ಟರು. ಆಗ ಶಾಮನೂರು ಕೂಡ ನಕ್ಕು ಸುಮ್ಮನಾದರು.<br /> <br /> ಇನ್ನು ವೇದಿಕೆ ಮೇಲೆ ಸಿಎಂ ಆಸೀನರಾಗುತ್ತಿದಂತೆಯೇ ಪೇಟ (ರುಮಾಲು) ಕಟ್ಟಲು ಸಂಘಟಕರು ಮುಂದಾದರು. ಆಗ ನಗುಮುಖದಿಂದಲೇ ಅದನ್ನು ತಿರಸ್ಕರಿಸಿದರು. ಅ<br /> <br /> ದನ್ನು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಗಮನಿಸಿ, ವೇದಿಕೆ ಮೇಲೆ ಆಸೀನರಾದರು. ಕೆಲವುಕ್ಷಣಗಳ ಬಳಿಕ ಬಲಭಾಗದಲ್ಲಿದ್ದ ಶಾಸಕರಾದ ಡಿ.ಜಿ.ಶಾಂತನಗೌಡ, ವಡ್ನಾಳ್ ರಾಜಣ್ಣ ಹಾಗೂ ಸಚಿವ ಮಹಾದೇವ ಪ್ರಸಾದ್ಗೆ ರುಮಾಲು ಕಟ್ಟಲಾಯಿತು.<br /> <br /> ಮತ್ತೆ ಮುಖ್ಯಮಂತ್ರಿ ಬಳಿ ಬಂದಾಗ ನಯವಾಗಿಯೇ ನಿರಾಕರಿಸಿದರು. ಆಗ ಮಲ್ಲಿಕಾರ್ಜುನ್ ಪಕ್ಕದಲ್ಲಿದ್ದ ಶಾಸಕರ ಕಡೆ ನೋಡಿ ಸುಮ್ಮನಾದರು.<br /> <br /> <strong>ಸೌಮ್ಯವಾಗಿ ಮಾತನಾಡಿದ ಮುಖ್ಯಮಂತ್ರಿ</strong><br /> <strong>ದಾವಣಗೆರೆ:</strong> ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಮಾತಿನ ಧಾಟಿಯಲ್ಲಿ ಬದಲಾದಂತೆ ಕಂಡರು.<br /> <br /> ಕಾರ್ಯಕ್ರಮದ ಉದ್ದಕ್ಕೂ ಹಾಸ್ಯ ಬೆರೆಸಿ ಮಾತನಾಡಲು ಪ್ರಯತ್ನಿಸಿದರು. ಅಪ್ಪಿತಪ್ಪಿಯೂ ವಿರೋಧ ಪಕ್ಷದ ನಾಯಕರ ಟೀಕೆಗೆ ಮುಂದಾಗಲಿಲ್ಲ. ಒಮ್ಮೆ ಬಿಜೆಪಿ ಸರ್ಕಾರ ಅವಧಿಯಲ್ಲಿ ನಡೆದ `ಭ್ರಷ್ಟಾಚಾರ' ಎಂದು ವಿಷಯ ಪ್ರಸ್ತಾಪಿಸಿದರು. ಆಗ ಸಭಿಕರು `ಅವರ ಬಗ್ಗೆ ಮಾತನಾಡ ಬೇಡಿ' ಎಂಬ ಮನವಿ ಮಾಡಿದರು. ಅಷ್ಟಕ್ಕೆ ಸುಮ್ಮನಾದ ಮುಖ್ಯಮಂತ್ರಿ ಗುಟ್ಕಾ ಲಾಬಿಯ ಬಗ್ಗೆ ಮಾತನಾಡುವಾಗ ಮಾತ್ರ ವಿರೋಧ ಪಕ್ಷಗಳ ಮೇಲೆ ಬೆರಳು ಮಾಡಿ ತೋರಿಸಿದರು.<br /> <br /> ರೈತರ ಸಾಲ ಮನ್ನಾ, ಮದ್ಯಪಾನ ನಿಷೇಧ ಮಾಡಿ ಎಂಬ ಘೋಷಣೆಗಳು ಸಭಿಕರಿಂದ ತೂರಿಬಂದವು. ವೇದಿಕೆಯ ಮೇಲಿದ್ದ ಮುಖ್ಯಮಂತ್ರಿ ಪದೇ ಪದೇ ಕೈಬೀಸುತ್ತಿದ್ದ ದೃಶ್ಯ ಕಂಡುಬಂತು.<br /> <br /> ಇನ್ನು ವೇದಿಕೆ ಮೇಲಿದ್ದ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ಸಿಇಒ ಎ.ಬಿ.ಹೇಮಚಂದ್ರ ಅವರು ಮುಖ್ಯಮಂತ್ರಿಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡುಬಂತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>