<p>ನವದೆಹಲಿ (ಪಿಟಿಐ): ರೆಡ್ಡಿ ಸೋದರರ ಜತೆ ತಮಗೆ ವ್ಯಾವಹಾರಿಕ ಸಂಬಂಧವಿದೆ ಎಂಬ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧವಿರುವುದಾಗಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಸೋಮವಾರ ಹೇಳಿದ್ದಾರೆ.<br /> <br /> ಈ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಹಾಕಿದ್ದ ಸವಾಲನ್ನು ಸ್ವೀಕರಿಸುವುದಾಗಿ ಹೇಳಿರುವ ಸುಷ್ಮಾ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನೇ ನೇಮಕ ಮಾಡಬೇಕು ಎಂದಿದ್ದಾರೆ. ಈ ಹಿಂದೆಯೂ ಗಣಿ ಧಣಿಗಳ ಜತೆ ತಮಗೆ ಯಾವುದೇ ಬಾಂಧವ್ಯ ಇರಲಿಲ್ಲ, ಈಗಲೂ ಇಲ್ಲ ಎಂದು ಸುಷ್ಮಾ ಹೇಳಿದ್ದಾರೆ.<br /> <br /> `ದಿಗ್ವಿಜಯಸಿಂಗ್ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಖಂಡಿತವಾಗಿ ಈ ಬಗ್ಗೆ ತನಿಖೆ ನಡೆಯಬೇಕು. ಆಗ ಸತ್ಯಾಂಶ ಹೊರಬಿದ್ದು ನನಗೆ ನ್ಯಾಯ ದೊರಕುತ್ತದೆ~ ಎಂದು ತಿಳಿಸಿದ್ದಾರೆ.<br /> <br /> `ನನ್ನ ವಿರುದ್ಧ ಸರ್ಕಾರ ಯಾವುದೇ ಸಂಸ್ಥೆಯಿಂದ ಯಾವುದೇ ತನಿಖೆ ನಡೆಸಬಹುದು. ಅಥವಾ ಪ್ರಧಾನಿಯವರೇ ಈ ಹಿಂದೆ ಪ್ರತಿಪಕ್ಷದ ನಾಯಕರೇ ವಿಷಯವೊಂದರ ತನಿಖೆ ನಡೆಸಬಹುದು ಎಂದು ಸದನದಲ್ಲಿ ಹೇಳಿದ್ದಂತೆ, ಈಗ ನಾನು ಪ್ರಧಾನಿ ಅವರೇ ನನ್ನ ವಿರುದ್ಧ ಯಾವುದೇ ತನಿಖೆ ಕೈಗೊಳ್ಳಲಿ ಎಂದು ಬಯಸುತ್ತೇನೆ~ ಎಂದು ಸುಷ್ಮಾ ಹೇಳಿದ್ದಾರೆ.<br /> <br /> `ಪ್ರಧಾನಿಯವರು ತಮ್ಮ ಪ್ರತಿನಿಧಿಯಾಗಿ ದಿಗ್ವಿಜಯಸಿಂಗ್ ಅವರನ್ನೇ ತನಿಖೆಗೆ ನೇಮಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಆಗಲಾದರೂ ದಿಗ್ವಿಜಯಸಿಂಗ್ ಕುತೂಹಲ ತಣಿಯುತ್ತದೆ~ ಎಂದು ಹೇಳಿದ್ದಾರೆ.<br /> `ರೆಡ್ಡಿ ಸೋದರರಿಂದ ತಮಗೆ ಈ ಹಿಂದೆಯಾಗಲೀ ಅಥವಾ ಈಗಾಗಲೀ ಏನೂ ಆಗ ಬೇಕಿಲ್ಲ~ ಎಂದೂ ಪುನರುಚ್ಚರಿಸಿದ್ದಾರೆ.<br /> <br /> ನಾಯ್ಡು ನಿರಾಕರಣೆ: ದಿಗ್ವಿಜಯಸಿಂಗ್ ಮಾಡಿರುವ ಆರೋಪವನ್ನು ಬಿಜೆಪಿ ಹಿರಿಯ ನಾಯಕ ವೆಂಕಯ್ಯನಾಯ್ಡು ಅವರೂ ನಿರಾಕರಿಸಿದ್ದು `ಪಕ್ಷದ ಸಂಬಂಧ ಬಿಟ್ಟು ಜನಾರ್ದನ ರೆಡ್ಡಿ ಅಥವಾ ಗಣಿ ಉದ್ದಿಮೆಯ ಯಾರೊಂದಿಗೂ ನನಗೆ ಯಾವುದೇ ವೈಯಕ್ತಿಕ ಸಂಬಂಧ ಇಲ್ಲ~ ಎಂದು ನಾಯ್ಡು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ರೆಡ್ಡಿ ಸೋದರರ ಜತೆ ತಮಗೆ ವ್ಯಾವಹಾರಿಕ ಸಂಬಂಧವಿದೆ ಎಂಬ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧವಿರುವುದಾಗಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಸೋಮವಾರ ಹೇಳಿದ್ದಾರೆ.<br /> <br /> ಈ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಹಾಕಿದ್ದ ಸವಾಲನ್ನು ಸ್ವೀಕರಿಸುವುದಾಗಿ ಹೇಳಿರುವ ಸುಷ್ಮಾ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನೇ ನೇಮಕ ಮಾಡಬೇಕು ಎಂದಿದ್ದಾರೆ. ಈ ಹಿಂದೆಯೂ ಗಣಿ ಧಣಿಗಳ ಜತೆ ತಮಗೆ ಯಾವುದೇ ಬಾಂಧವ್ಯ ಇರಲಿಲ್ಲ, ಈಗಲೂ ಇಲ್ಲ ಎಂದು ಸುಷ್ಮಾ ಹೇಳಿದ್ದಾರೆ.<br /> <br /> `ದಿಗ್ವಿಜಯಸಿಂಗ್ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಖಂಡಿತವಾಗಿ ಈ ಬಗ್ಗೆ ತನಿಖೆ ನಡೆಯಬೇಕು. ಆಗ ಸತ್ಯಾಂಶ ಹೊರಬಿದ್ದು ನನಗೆ ನ್ಯಾಯ ದೊರಕುತ್ತದೆ~ ಎಂದು ತಿಳಿಸಿದ್ದಾರೆ.<br /> <br /> `ನನ್ನ ವಿರುದ್ಧ ಸರ್ಕಾರ ಯಾವುದೇ ಸಂಸ್ಥೆಯಿಂದ ಯಾವುದೇ ತನಿಖೆ ನಡೆಸಬಹುದು. ಅಥವಾ ಪ್ರಧಾನಿಯವರೇ ಈ ಹಿಂದೆ ಪ್ರತಿಪಕ್ಷದ ನಾಯಕರೇ ವಿಷಯವೊಂದರ ತನಿಖೆ ನಡೆಸಬಹುದು ಎಂದು ಸದನದಲ್ಲಿ ಹೇಳಿದ್ದಂತೆ, ಈಗ ನಾನು ಪ್ರಧಾನಿ ಅವರೇ ನನ್ನ ವಿರುದ್ಧ ಯಾವುದೇ ತನಿಖೆ ಕೈಗೊಳ್ಳಲಿ ಎಂದು ಬಯಸುತ್ತೇನೆ~ ಎಂದು ಸುಷ್ಮಾ ಹೇಳಿದ್ದಾರೆ.<br /> <br /> `ಪ್ರಧಾನಿಯವರು ತಮ್ಮ ಪ್ರತಿನಿಧಿಯಾಗಿ ದಿಗ್ವಿಜಯಸಿಂಗ್ ಅವರನ್ನೇ ತನಿಖೆಗೆ ನೇಮಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಆಗಲಾದರೂ ದಿಗ್ವಿಜಯಸಿಂಗ್ ಕುತೂಹಲ ತಣಿಯುತ್ತದೆ~ ಎಂದು ಹೇಳಿದ್ದಾರೆ.<br /> `ರೆಡ್ಡಿ ಸೋದರರಿಂದ ತಮಗೆ ಈ ಹಿಂದೆಯಾಗಲೀ ಅಥವಾ ಈಗಾಗಲೀ ಏನೂ ಆಗ ಬೇಕಿಲ್ಲ~ ಎಂದೂ ಪುನರುಚ್ಚರಿಸಿದ್ದಾರೆ.<br /> <br /> ನಾಯ್ಡು ನಿರಾಕರಣೆ: ದಿಗ್ವಿಜಯಸಿಂಗ್ ಮಾಡಿರುವ ಆರೋಪವನ್ನು ಬಿಜೆಪಿ ಹಿರಿಯ ನಾಯಕ ವೆಂಕಯ್ಯನಾಯ್ಡು ಅವರೂ ನಿರಾಕರಿಸಿದ್ದು `ಪಕ್ಷದ ಸಂಬಂಧ ಬಿಟ್ಟು ಜನಾರ್ದನ ರೆಡ್ಡಿ ಅಥವಾ ಗಣಿ ಉದ್ದಿಮೆಯ ಯಾರೊಂದಿಗೂ ನನಗೆ ಯಾವುದೇ ವೈಯಕ್ತಿಕ ಸಂಬಂಧ ಇಲ್ಲ~ ಎಂದು ನಾಯ್ಡು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>