<p>ಕುಶಾಲನಗರ: ರೈತರ ಪಾಲಿಗೆ ಹೊಸ ವರ್ಷದ ಆರಂಭ ಮತ್ತು ವಿಶಿಷ್ಟ ದಿನವಾದ ಯುಗಾದಿ ಹಬ್ಬದ ಅಂಗವಾಗಿ ಬುಧವಾರ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ‘ಹೊನ್ನಾರು’ (ಚಿನ್ನದ ಉಳುಮೆ) ಉತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. <br /> <br /> ಹೊಸ ಪಂಚಾಂಗದಂತೆ ಬುಧವಾರ ತೊರೆನೂರು, ಶಿರಂಗಾಲ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ರೈತರು, ಬಸವೇಶ್ವರ ದೇವಸ್ಥಾನದ ಬಳಿ ಸೇರಿ ಹೊನ್ನಾರು ಉತ್ಸವ ಆಚರಿಸಿದರು. ದೇವಸ್ಥಾನಕ್ಕೆ ಈಡುಗಾಯಿ ಹಾಕಿ ದೇವರ ಜಮೀನಿಗೆ ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ಉಳುಮೆ ಆರಂಭಿಸಿದರು. <br /> <br /> ತೊರೆನೂರಿನಲ್ಲಿ ಮೊದಲಿಗೆ ರೈತ ಟಿ.ಜಿ.ನಟರಾಜ್ ಎಂಬುವರು ದೇವರ ಜಮೀನಿನಲ್ಲಿ ನೇಗಿಲನ್ನು ಹೂಡಿ ವರ್ಷಧಾರೆ ಉಳುಮೆ ಆರಂಭಿಸಿದರು. ಬಳಿಕ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಹೊನ್ನಾರು ಉಳುಮೆ (ಚಿನ್ನದ ಉಳುಮೆ)ಗೆ ಚಾಲನೆ ನೀಡಿದರು.<br /> <br /> ಉತ್ತರ ಕೊಡಗಿನ ಬಯಲು ಸೀಮೆಯ ಪ್ರದೇಶವಾದ ಶಿರಂಗಾಲ, ತೊರೆನೂರು, ಮಣಜೂರು, ಹೆಬ್ಬಾಲೆ, ಕೂಡಿಗೆ, ಕೂಡ್ಲೂರು, ಹುಲುಸೆ ಮುಂತಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಪ್ರತೀಕವಾದ ‘ಹೊನ್ನಾರು’ ಉತ್ಸವವನ್ನು ಮೊದಲಿನಿಂದಲೂ ಚಾಚು ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ.<br /> <br /> ಜನಪದರು ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ಇಂದಿನ ಆಧುನಿಕತೆ ಹಾಗೂ ಜಾಗತೀಕರಣದ ಎಷ್ಟೇ ಪ್ರಭಾವವಿದ್ದರೂ ಜನಪದ ಸೊಗಡಾಗಿಯೇ ಉಳಿದಿರುವುದು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ.<br /> <br /> ತೊರೆನೂರಿನಲ್ಲಿ ಹೊನ್ನಾರು ಉತ್ಸವವು ದೇವಾಲಯ ಸಮಿತಿ ಅಧ್ಯಕ್ಷ ಟಿ.ಡಿ.ಈಶ್ವರ್, ಕಾರ್ಯದರ್ಶಿ ಟಿ.ಎ. ರಾಮಚಂದ್ರ, ಉಪಾಧ್ಯಕ್ಷ ಟಿ.ಡಿ. ಚನ್ನರಾಜ್, ಡಿ.ಪಿ.ಪುಟ್ಟಸ್ವಾಮಿ, ಟಿ.ವಿ. ವಿಶ್ವೇಶ್ವರಯ್ಯ, ಗ್ರಾ.ಪಂ. ಅಧ್ಯಕ್ಷ ಟಿ.ಕೆ.ವಸಂತ್, ಸದಸ್ಯ ಟಿ.ಎಸ್.ರಾಜಶೇಖರ್ ಇತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಶಾಲನಗರ: ರೈತರ ಪಾಲಿಗೆ ಹೊಸ ವರ್ಷದ ಆರಂಭ ಮತ್ತು ವಿಶಿಷ್ಟ ದಿನವಾದ ಯುಗಾದಿ ಹಬ್ಬದ ಅಂಗವಾಗಿ ಬುಧವಾರ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ‘ಹೊನ್ನಾರು’ (ಚಿನ್ನದ ಉಳುಮೆ) ಉತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. <br /> <br /> ಹೊಸ ಪಂಚಾಂಗದಂತೆ ಬುಧವಾರ ತೊರೆನೂರು, ಶಿರಂಗಾಲ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ರೈತರು, ಬಸವೇಶ್ವರ ದೇವಸ್ಥಾನದ ಬಳಿ ಸೇರಿ ಹೊನ್ನಾರು ಉತ್ಸವ ಆಚರಿಸಿದರು. ದೇವಸ್ಥಾನಕ್ಕೆ ಈಡುಗಾಯಿ ಹಾಕಿ ದೇವರ ಜಮೀನಿಗೆ ಪೂಜೆ ಸಲ್ಲಿಸಿ ಹೊನ್ನಾರು ಹೂಡಿ ಉಳುಮೆ ಆರಂಭಿಸಿದರು. <br /> <br /> ತೊರೆನೂರಿನಲ್ಲಿ ಮೊದಲಿಗೆ ರೈತ ಟಿ.ಜಿ.ನಟರಾಜ್ ಎಂಬುವರು ದೇವರ ಜಮೀನಿನಲ್ಲಿ ನೇಗಿಲನ್ನು ಹೂಡಿ ವರ್ಷಧಾರೆ ಉಳುಮೆ ಆರಂಭಿಸಿದರು. ಬಳಿಕ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಹೊನ್ನಾರು ಉಳುಮೆ (ಚಿನ್ನದ ಉಳುಮೆ)ಗೆ ಚಾಲನೆ ನೀಡಿದರು.<br /> <br /> ಉತ್ತರ ಕೊಡಗಿನ ಬಯಲು ಸೀಮೆಯ ಪ್ರದೇಶವಾದ ಶಿರಂಗಾಲ, ತೊರೆನೂರು, ಮಣಜೂರು, ಹೆಬ್ಬಾಲೆ, ಕೂಡಿಗೆ, ಕೂಡ್ಲೂರು, ಹುಲುಸೆ ಮುಂತಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಪ್ರತೀಕವಾದ ‘ಹೊನ್ನಾರು’ ಉತ್ಸವವನ್ನು ಮೊದಲಿನಿಂದಲೂ ಚಾಚು ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ.<br /> <br /> ಜನಪದರು ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ಇಂದಿನ ಆಧುನಿಕತೆ ಹಾಗೂ ಜಾಗತೀಕರಣದ ಎಷ್ಟೇ ಪ್ರಭಾವವಿದ್ದರೂ ಜನಪದ ಸೊಗಡಾಗಿಯೇ ಉಳಿದಿರುವುದು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ.<br /> <br /> ತೊರೆನೂರಿನಲ್ಲಿ ಹೊನ್ನಾರು ಉತ್ಸವವು ದೇವಾಲಯ ಸಮಿತಿ ಅಧ್ಯಕ್ಷ ಟಿ.ಡಿ.ಈಶ್ವರ್, ಕಾರ್ಯದರ್ಶಿ ಟಿ.ಎ. ರಾಮಚಂದ್ರ, ಉಪಾಧ್ಯಕ್ಷ ಟಿ.ಡಿ. ಚನ್ನರಾಜ್, ಡಿ.ಪಿ.ಪುಟ್ಟಸ್ವಾಮಿ, ಟಿ.ವಿ. ವಿಶ್ವೇಶ್ವರಯ್ಯ, ಗ್ರಾ.ಪಂ. ಅಧ್ಯಕ್ಷ ಟಿ.ಕೆ.ವಸಂತ್, ಸದಸ್ಯ ಟಿ.ಎಸ್.ರಾಜಶೇಖರ್ ಇತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>