<p><strong>ಬೆಂಗಳೂರು:</strong> ರಾಮನಗರ - ಮಂಡ್ಯ ಜೋಡಿ ರೈಲು ಮಾರ್ಗ, ಚಿಕ್ಕಮಗಳೂರು - ಕಡೂರು, ಶ್ರವಣಬೆಳಗೊಳ - ಹಿರಿಸಾವೆ, ನಾಗಮಂಗಲ - ಸೋಲೂರು ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ರೂ 445 ಕೋಟಿ ಮೀಸಲಿಡಲಾಗಿದೆ. <br /> <br /> ಗದಗ - ವಾಡಿ, ಗದಗ - ಹಾವೇರಿ ಹಾಗೂ ಶ್ರೀನಿವಾಸಪುರ - ಮದನಪಲ್ಲಿ ಮಾರ್ಗ ನಿರ್ಮಾಣ ಕಾರ್ಯವನ್ನು ರೈಲ್ವೆ ಇಲಾಖೆಯ ಜೊತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.<br /> <br /> ಖಾಸಗಿ ಸಹಭಾಗಿತ್ವದಡಿ ತದಡಿಯಲ್ಲಿ ರೂ 3,000 ಕೋಟಿ ಅಂದಾಜು ವೆಚ್ಚದ ಬಂದರು ನಿರ್ಮಿಸುವ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಸಹಕಾರದಿಂದ ಕೈಗೆತ್ತಿಕೊಳ್ಳಲಾಗುವುದು. ಕಾರವಾರ ಮತ್ತು ತದಡಿ ಬಂದರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.<br /> <br /> ಏಷ್ಯಾ ಅಭಿವೃದ್ಧಿ ಬ್ಯಾಂಕ್ನ ಸಾಲದ ನೆರವಿನಿಂದ ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ರೂ 170 ಕೋಟಿ ವೆಚ್ಚದ ಉಳ್ಳಾಲ ಸಮುದ್ರ ತೀರ ನಿರ್ವಹಣಾ ಯೋಜನೆ ಕಾಮಗಾರಿಯನ್ನು 2012-13ರಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಸರ್ಕಾರಕ್ಕಿದೆ.<br /> <br /> ಹುಬ್ಬಳ್ಳಿ - ಅಂಕೋಲ ರೈಲು ಮಾರ್ಗ ನಿರ್ಮಾಣದಲ್ಲಿ ಆಸಕ್ತಿ ತೋರಿಸಿರುವ ಸರ್ಕಾರ, ಈ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಪರಿಸರ ಇಲಾಖೆಯನ್ನು ಕೋರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಮನಗರ - ಮಂಡ್ಯ ಜೋಡಿ ರೈಲು ಮಾರ್ಗ, ಚಿಕ್ಕಮಗಳೂರು - ಕಡೂರು, ಶ್ರವಣಬೆಳಗೊಳ - ಹಿರಿಸಾವೆ, ನಾಗಮಂಗಲ - ಸೋಲೂರು ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ರೂ 445 ಕೋಟಿ ಮೀಸಲಿಡಲಾಗಿದೆ. <br /> <br /> ಗದಗ - ವಾಡಿ, ಗದಗ - ಹಾವೇರಿ ಹಾಗೂ ಶ್ರೀನಿವಾಸಪುರ - ಮದನಪಲ್ಲಿ ಮಾರ್ಗ ನಿರ್ಮಾಣ ಕಾರ್ಯವನ್ನು ರೈಲ್ವೆ ಇಲಾಖೆಯ ಜೊತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.<br /> <br /> ಖಾಸಗಿ ಸಹಭಾಗಿತ್ವದಡಿ ತದಡಿಯಲ್ಲಿ ರೂ 3,000 ಕೋಟಿ ಅಂದಾಜು ವೆಚ್ಚದ ಬಂದರು ನಿರ್ಮಿಸುವ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಸಹಕಾರದಿಂದ ಕೈಗೆತ್ತಿಕೊಳ್ಳಲಾಗುವುದು. ಕಾರವಾರ ಮತ್ತು ತದಡಿ ಬಂದರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.<br /> <br /> ಏಷ್ಯಾ ಅಭಿವೃದ್ಧಿ ಬ್ಯಾಂಕ್ನ ಸಾಲದ ನೆರವಿನಿಂದ ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ರೂ 170 ಕೋಟಿ ವೆಚ್ಚದ ಉಳ್ಳಾಲ ಸಮುದ್ರ ತೀರ ನಿರ್ವಹಣಾ ಯೋಜನೆ ಕಾಮಗಾರಿಯನ್ನು 2012-13ರಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಸರ್ಕಾರಕ್ಕಿದೆ.<br /> <br /> ಹುಬ್ಬಳ್ಳಿ - ಅಂಕೋಲ ರೈಲು ಮಾರ್ಗ ನಿರ್ಮಾಣದಲ್ಲಿ ಆಸಕ್ತಿ ತೋರಿಸಿರುವ ಸರ್ಕಾರ, ಈ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಪರಿಸರ ಇಲಾಖೆಯನ್ನು ಕೋರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>