<p><strong>ಬೀದರ್: </strong>ಬಹು ನಿರೀಕ್ಷಿತ ನಾಂದೇಡ್-ಬೆಂಗಳೂರು ನಡುವಣ ರೈಲು ಬೀದರ್ನಿಂದ ಸಂಜೆ ನಿರ್ಗಮಿಸುವಂತೆ ಸಮಯ ಬದಲಾವಣೆಯನ್ನು ಜುಲೈನಿಂದಲೇ ಕಾರ್ಯರೂಪಕ್ಕೆ ತರುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.<br /> <br /> ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಆಗಮಿಸಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, `ಸಮಯ ಬದಲಾವಣೆ ಮಾಡಬೇಕು ಎಂಬುದು ಬಹಳ ದಿನಗಳ ಬೇಡಿಕೆ. <br /> ಜುಲೈನಲ್ಲಿ ಕೆಲ ರೈಲುಗಳ ಸಮಯ ಬದಲಾವಣೆ ಮಾಡಬೇಕಿದ್ದು, ಇದನ್ನು ಪರಿಶೀಲಿಸಲಾಗುವುದು~ ಎಂದರು.<br /> <br /> `ಸಂಸದ ಧರ್ಮಸಿಂಗ್ ಮತ್ತು ಈ ಭಾಗದ ಪ್ರಮುಖರು ಇತ್ತೀಚೆಗೆ ಭೇಟಿಯಾಗಿ ಈ ಬಗೆಗೆ ಮನವಿ ಸಲ್ಲಿಸಿದ್ದಾರೆ. ಬೇಡಿಕೆ ನಮ್ಮ ಗಮನದಲ್ಲಿದೆ. ಪ್ರಸ್ತುತ ಬೆಂಗಳೂರು ಬೆಳಿಗ್ಗೆ 7ರ ವೇಳೆಗೆ ಬೆಂಗಳೂರು ತಲುಪುತ್ತಿದೆ. ಬೀದರ್ನಿಂದ ಈಗಿನ ಬೆಳಿಗ್ಗೆ 12ರ ಬದಲಾಗಿ ಸಂಜೆ 4-5 ಗಂಟೆಗೆ ತೆರಳಬೇಕು ಎಂಬುದು ಬೇಡಿಕೆಯಾಗಿದೆ~ ಎಂದು ವಿವರಿಸಿದರು.<br /> <br /> ಸರ್ಚ್ಖಂಡ್ ಮತ್ತು ನಾಂದೇಡ್ ನಡುವಣ ರೈಲು ಸಂಪರ್ಕವನ್ನು ಬೀದರ್ವರೆಗೂ ವಿಸ್ತರಿಸಬೇಕು ಎಂಬ ಬೇಡಿಕೆ ಕುರಿತು ಗಮನಸೆಳೆದಾಗ, `ತಾವು ಆ ನಿಟ್ಟಿನಲ್ಲಿ ಭರವಸೆ ನೀಡಿಲ್ಲ. ಈ ಭಾಗದ ಜನರು ದೆಹಲಿಗೆ ತೆರಳಲು ಸುಗಮ ಆಗುವಂತೆ ದೆಹಲಿಗೆ ತೆರಳುವ ರೈಲು ಗುಲ್ಬರ್ಗ ಮಾರ್ಗ ಹೋಗಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು~ ಎಂದರು.<br /> <br /> <strong>ರೈಲ್ವೆ ಮೇಲುಸೇತುವೆ ಕಾಮಗಾರಿ:</strong> ನಗರದಲ್ಲಿ ಮಹಾವೀರ ವೃತ್ತದಿಂದ ಬೊಮ್ಮಗುಂಡೇಶ್ವರ ವೃತ್ತದ ನಡುವೆ ನಿರ್ಮಾಣ ಆಗುತ್ತಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿ ವಿಳಂಬ ಆಗುತ್ತಿರುವುದರ ಬಗೆಗೆ ಗಮನಸೆಳೆದಾಗ, `ಭೂಮಿ ಸ್ವಾಧೀನ ಪಡೆಯುವ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ~ ಎಂದರು.<br /> <br /> ಅಧಿಕಾರಿಗಳಿಂದ ಮಾಹಿತಿ ಬಯಸಿದ ಸಚಿವರಿಗೆ ರೈಲ್ವೆ ಅಧಿಕಾರಿಯೊಬ್ಬರು, `ಆ ಭಾಗದಲ್ಲಿ ಭೂಮಿ ಸ್ವಾಧೀನ ಪಡೆಯುವ ಪ್ರಕ್ರಿಯೆ ವಿಳಂಬ ಆಗಿರುವ ಕಾರಣ ಸೇತುವೆ ನಿರ್ಮಾಣವು ವಿಳಂಬವಾಗಿದೆ~ ಎಂದು ಮಾಹಿತಿ ನೀಡಿದರು.<br /> <br /> ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮಾಜ ಬೇಡಿಕೆ ಇಟ್ಟಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. ಇದಕ್ಕೂ ಮುನ್ನ ರೈಲಿನಲ್ಲಿ ಆಗಮಿಸಿದ ಸಚಿವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಬಹು ನಿರೀಕ್ಷಿತ ನಾಂದೇಡ್-ಬೆಂಗಳೂರು ನಡುವಣ ರೈಲು ಬೀದರ್ನಿಂದ ಸಂಜೆ ನಿರ್ಗಮಿಸುವಂತೆ ಸಮಯ ಬದಲಾವಣೆಯನ್ನು ಜುಲೈನಿಂದಲೇ ಕಾರ್ಯರೂಪಕ್ಕೆ ತರುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.<br /> <br /> ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಆಗಮಿಸಿದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, `ಸಮಯ ಬದಲಾವಣೆ ಮಾಡಬೇಕು ಎಂಬುದು ಬಹಳ ದಿನಗಳ ಬೇಡಿಕೆ. <br /> ಜುಲೈನಲ್ಲಿ ಕೆಲ ರೈಲುಗಳ ಸಮಯ ಬದಲಾವಣೆ ಮಾಡಬೇಕಿದ್ದು, ಇದನ್ನು ಪರಿಶೀಲಿಸಲಾಗುವುದು~ ಎಂದರು.<br /> <br /> `ಸಂಸದ ಧರ್ಮಸಿಂಗ್ ಮತ್ತು ಈ ಭಾಗದ ಪ್ರಮುಖರು ಇತ್ತೀಚೆಗೆ ಭೇಟಿಯಾಗಿ ಈ ಬಗೆಗೆ ಮನವಿ ಸಲ್ಲಿಸಿದ್ದಾರೆ. ಬೇಡಿಕೆ ನಮ್ಮ ಗಮನದಲ್ಲಿದೆ. ಪ್ರಸ್ತುತ ಬೆಂಗಳೂರು ಬೆಳಿಗ್ಗೆ 7ರ ವೇಳೆಗೆ ಬೆಂಗಳೂರು ತಲುಪುತ್ತಿದೆ. ಬೀದರ್ನಿಂದ ಈಗಿನ ಬೆಳಿಗ್ಗೆ 12ರ ಬದಲಾಗಿ ಸಂಜೆ 4-5 ಗಂಟೆಗೆ ತೆರಳಬೇಕು ಎಂಬುದು ಬೇಡಿಕೆಯಾಗಿದೆ~ ಎಂದು ವಿವರಿಸಿದರು.<br /> <br /> ಸರ್ಚ್ಖಂಡ್ ಮತ್ತು ನಾಂದೇಡ್ ನಡುವಣ ರೈಲು ಸಂಪರ್ಕವನ್ನು ಬೀದರ್ವರೆಗೂ ವಿಸ್ತರಿಸಬೇಕು ಎಂಬ ಬೇಡಿಕೆ ಕುರಿತು ಗಮನಸೆಳೆದಾಗ, `ತಾವು ಆ ನಿಟ್ಟಿನಲ್ಲಿ ಭರವಸೆ ನೀಡಿಲ್ಲ. ಈ ಭಾಗದ ಜನರು ದೆಹಲಿಗೆ ತೆರಳಲು ಸುಗಮ ಆಗುವಂತೆ ದೆಹಲಿಗೆ ತೆರಳುವ ರೈಲು ಗುಲ್ಬರ್ಗ ಮಾರ್ಗ ಹೋಗಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು~ ಎಂದರು.<br /> <br /> <strong>ರೈಲ್ವೆ ಮೇಲುಸೇತುವೆ ಕಾಮಗಾರಿ:</strong> ನಗರದಲ್ಲಿ ಮಹಾವೀರ ವೃತ್ತದಿಂದ ಬೊಮ್ಮಗುಂಡೇಶ್ವರ ವೃತ್ತದ ನಡುವೆ ನಿರ್ಮಾಣ ಆಗುತ್ತಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿ ವಿಳಂಬ ಆಗುತ್ತಿರುವುದರ ಬಗೆಗೆ ಗಮನಸೆಳೆದಾಗ, `ಭೂಮಿ ಸ್ವಾಧೀನ ಪಡೆಯುವ ಕುರಿತಂತೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತೇನೆ~ ಎಂದರು.<br /> <br /> ಅಧಿಕಾರಿಗಳಿಂದ ಮಾಹಿತಿ ಬಯಸಿದ ಸಚಿವರಿಗೆ ರೈಲ್ವೆ ಅಧಿಕಾರಿಯೊಬ್ಬರು, `ಆ ಭಾಗದಲ್ಲಿ ಭೂಮಿ ಸ್ವಾಧೀನ ಪಡೆಯುವ ಪ್ರಕ್ರಿಯೆ ವಿಳಂಬ ಆಗಿರುವ ಕಾರಣ ಸೇತುವೆ ನಿರ್ಮಾಣವು ವಿಳಂಬವಾಗಿದೆ~ ಎಂದು ಮಾಹಿತಿ ನೀಡಿದರು.<br /> <br /> ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮಾಜ ಬೇಡಿಕೆ ಇಟ್ಟಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. ಇದಕ್ಕೂ ಮುನ್ನ ರೈಲಿನಲ್ಲಿ ಆಗಮಿಸಿದ ಸಚಿವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>