<p><strong>ಮಾಲೂರು:</strong> ತಾಲ್ಲೂಕಿನ ನೊಸಗೆರೆ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾಪುರ ಹಾಗೂ ಬೊಪ್ಪನಹಳ್ಳಿ ಗ್ರಾಮಗಳ ಸಮೀಪದ ರೈಲ್ವೆ ಕೆಳ ಸೇತುವೆಯು ಗ್ರಾಮಸ್ಥರಿಗೆ ನಿತ್ಯ ಕಿರಿ ಕಿರಿ ಎಂಬಂತಾಗಿದೆ. ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಈ ಸೇತುವೆಯ ಕೆಳಗಿನಿಂದ ಸಂಚರಿಸುವುದೇ ಒಂದು ಸರ್ಕಸ್ ಎನ್ನುವಂತಾಗಿದೆ.<br /> <br /> `ಮಾಲೂರು ಪಟ್ಟಣದಿಂದ 4.ಕಿ.ಮೀ ಅಂತರದಲ್ಲಿನ ಈ ಗ್ರಾಮಕ್ಕೆ ಸಂಚಾರಕ್ಕೆ ಸೇತುವೆ ಕಲ್ಪಿಸಿದೆ. ಆದರೂ ಬೃಹತ್ ಪ್ರಮಾಣದ ವಾಹನವಾಗಲಿ ಅಥವಾ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ~ ಎನ್ನುತ್ತಾರೆ ಸ್ಥಳೀಯರು.<br /> <br /> `ನಾವು ಬೆಳೆದ ತರಕಾರಿ ಸಾಗಿಸಲು, ವ್ಯಾಪಾರ ವಹಿವಾಟು, ಕಚೇರಿ ಕೆಲಸ, ಶಾಲಾ-ಕಾಲೇಜಿಗೆ ಹೋಗಲು ಸಂಪರ್ಕ ರಸ್ತೆ ಇಲ್ಲವಾಗಿದೆ. ಈ ಸೇತುವೆ ಮಾರ್ಗದಲ್ಲಿ ದ್ವಿಚಕ್ರ ವಾಹನ ಮಾತ್ರ ಸಂಚರಿಸಬಹುದು. ಮಳೆಗಾಲದಲ್ಲಂತೂ ನಮಗೆ ನರಕ ಯಾತನೆ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು ರೈತ ಮಲ್ಲಪ್ಪ.<br /> <br /> ಬಸ್ ಸೌಕರ್ಯವಂತೂ ಇಲ್ಲದ ಗ್ರಾಮಕ್ಕೆ ನೊಸಗೆರೆ ಗ್ರಾ.ಪಂ ವ್ಯಾಪ್ತಿಯ ಚಿಕ್ಕಾಪುರ, ಬೊಪ್ಪನಹಳ್ಳಿ, ಮಾದನಹಟ್ಟಿ, ಹುರಳಗೆರೆ, ಮಾರಸಂದ್ರ ಮತ್ತು ಪಿಚ್ಚಗುಂಟ್ರಹಳ್ಳಿ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು. <br /> ಬೃಹತ್ ವಾಹನಗಳು ಗ್ರಾಮಗಳಿಗೆ ಹೋಗಬೇಕಾದರೆ ಕೈಗಾರಿಕೆ ಪ್ರಾಂಗಣ ಮೂಲಕ ಉಪಾಸಪುರ, ಹುರಳಗೆರೆ ಮಾರ್ಗವಾಗಿ ಸುಮಾರು 10 ಕಿ.ಮೀ ಸುತ್ತಿಕೊಂಡು ತಲುಪಬೇಕು. ಇಂತಹ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳು ಪ್ರಯತ್ನಿಸಿಲ್ಲ .<br /> <br /> ಮಾಜಿ ರೈಲ್ವೆ ಸಚಿವರಾಗಿದ್ದ ಸಿ.ಕೆ. ಜಾಫರ್ ಶರೀಫ್ ಅವಧಿಯಲ್ಲಿ ಚಿಕ್ಕಾಪುರ, ಬೊಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೆಳ ಸೇತುವೆ ವಿಸ್ತರಣೆಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. <br /> <br /> ಈಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಗಮನ ಹರಿಸಿ ಪರ್ಯಾಯ ವ್ಯವಸ್ಥೆಯಾದರೂ ಮಾಡಬೇಕೆಂಬುದು ಸಾರ್ವಜನಿಕರು ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು:</strong> ತಾಲ್ಲೂಕಿನ ನೊಸಗೆರೆ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಾಪುರ ಹಾಗೂ ಬೊಪ್ಪನಹಳ್ಳಿ ಗ್ರಾಮಗಳ ಸಮೀಪದ ರೈಲ್ವೆ ಕೆಳ ಸೇತುವೆಯು ಗ್ರಾಮಸ್ಥರಿಗೆ ನಿತ್ಯ ಕಿರಿ ಕಿರಿ ಎಂಬಂತಾಗಿದೆ. ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಈ ಸೇತುವೆಯ ಕೆಳಗಿನಿಂದ ಸಂಚರಿಸುವುದೇ ಒಂದು ಸರ್ಕಸ್ ಎನ್ನುವಂತಾಗಿದೆ.<br /> <br /> `ಮಾಲೂರು ಪಟ್ಟಣದಿಂದ 4.ಕಿ.ಮೀ ಅಂತರದಲ್ಲಿನ ಈ ಗ್ರಾಮಕ್ಕೆ ಸಂಚಾರಕ್ಕೆ ಸೇತುವೆ ಕಲ್ಪಿಸಿದೆ. ಆದರೂ ಬೃಹತ್ ಪ್ರಮಾಣದ ವಾಹನವಾಗಲಿ ಅಥವಾ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ~ ಎನ್ನುತ್ತಾರೆ ಸ್ಥಳೀಯರು.<br /> <br /> `ನಾವು ಬೆಳೆದ ತರಕಾರಿ ಸಾಗಿಸಲು, ವ್ಯಾಪಾರ ವಹಿವಾಟು, ಕಚೇರಿ ಕೆಲಸ, ಶಾಲಾ-ಕಾಲೇಜಿಗೆ ಹೋಗಲು ಸಂಪರ್ಕ ರಸ್ತೆ ಇಲ್ಲವಾಗಿದೆ. ಈ ಸೇತುವೆ ಮಾರ್ಗದಲ್ಲಿ ದ್ವಿಚಕ್ರ ವಾಹನ ಮಾತ್ರ ಸಂಚರಿಸಬಹುದು. ಮಳೆಗಾಲದಲ್ಲಂತೂ ನಮಗೆ ನರಕ ಯಾತನೆ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು ರೈತ ಮಲ್ಲಪ್ಪ.<br /> <br /> ಬಸ್ ಸೌಕರ್ಯವಂತೂ ಇಲ್ಲದ ಗ್ರಾಮಕ್ಕೆ ನೊಸಗೆರೆ ಗ್ರಾ.ಪಂ ವ್ಯಾಪ್ತಿಯ ಚಿಕ್ಕಾಪುರ, ಬೊಪ್ಪನಹಳ್ಳಿ, ಮಾದನಹಟ್ಟಿ, ಹುರಳಗೆರೆ, ಮಾರಸಂದ್ರ ಮತ್ತು ಪಿಚ್ಚಗುಂಟ್ರಹಳ್ಳಿ ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು. <br /> ಬೃಹತ್ ವಾಹನಗಳು ಗ್ರಾಮಗಳಿಗೆ ಹೋಗಬೇಕಾದರೆ ಕೈಗಾರಿಕೆ ಪ್ರಾಂಗಣ ಮೂಲಕ ಉಪಾಸಪುರ, ಹುರಳಗೆರೆ ಮಾರ್ಗವಾಗಿ ಸುಮಾರು 10 ಕಿ.ಮೀ ಸುತ್ತಿಕೊಂಡು ತಲುಪಬೇಕು. ಇಂತಹ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಜನಪ್ರತಿನಿಧಿಗಳು ಪ್ರಯತ್ನಿಸಿಲ್ಲ .<br /> <br /> ಮಾಜಿ ರೈಲ್ವೆ ಸಚಿವರಾಗಿದ್ದ ಸಿ.ಕೆ. ಜಾಫರ್ ಶರೀಫ್ ಅವಧಿಯಲ್ಲಿ ಚಿಕ್ಕಾಪುರ, ಬೊಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೆಳ ಸೇತುವೆ ವಿಸ್ತರಣೆಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. <br /> <br /> ಈಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಗಮನ ಹರಿಸಿ ಪರ್ಯಾಯ ವ್ಯವಸ್ಥೆಯಾದರೂ ಮಾಡಬೇಕೆಂಬುದು ಸಾರ್ವಜನಿಕರು ಒತ್ತಾಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>