<p>ನವದೆಹಲಿ (ಪಿಟಿಐ): ರೈಲ್ವೇ ಮುಂಗಡಪತ್ರವನ್ನು ~ಜನಸಾಮಾನ್ಯ ವಿರೋಧಿ~ ಎಂಬುದಾಗಿ ಬಣ್ಣಿಸಿರುವ ಬಿಜೆಪಿ, ಮುಂಗಡ ಪತ್ರದಲ್ಲಿ ಭವಿಷ್ಯದ ಕುರಿತು ~ದೃಷ್ಟಿ~ಯೇ ಇಲ್ಲ. ಈ ಮುಂಗಡಪತ್ರದ ಪರಿಣಾಮವಾಗಿ ಬೆಲೆಗಳು ಗಗನಕ್ಕೆ ಏರಲಿವೆ ಎಂದು ಟೀಕಿಸಿದೆ.<br /> <br /> ಸಂಸತ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹ ಅವರು ರೈಲ್ವೇ ಪ್ರಯಾಣಿಕ ದರ ಹೆಚ್ಚಳವನ್ನು ವಿರೋಧಿಸಿ, ~ಸರ್ಕಾರ ಹೀಗೆ ಒಂದೇ ಹೊಡೆತಕ್ಕೆ ಪ್ರಯಾಣಿಕ ದರವನ್ನು ಏರಿಸಿ ಜನ ಸಾಮಾನ್ಯರ ಮೇಲೆ ಇನ್ನೊಂದು ಹೊರೆ ಹೊರಿಸಬಾರದಿತ್ತು ಎಂದು ಹೇಳಿದರು.<br /> <br /> ಮಾಜಿ ಹಣಕಾಸು ಸಚಿವರೂ ಆದ ಸಿನ್ಹ ~ದರ ಏರಿಕೆಯು ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿರುವುದರಿಂದ ಸಾಮಾನ್ಯರ ಮೇಲೆ ದೊಡ್ಡ ಹೊರೆಯಾಗುತ್ತದೆ ಎಂದು ವಿಶ್ಲೇಷಿಸಿದರು.<br /> <br /> ದರಗಳನ್ನು ಹಲವು ವರ್ಷಗಳ ಬಳಿಕ ಒಮ್ಮಿಂದೊಮ್ಮೆಗೇ ಏರಿಸಲಾಗಿದೆ. ಬದಲಿಗೆ ಪ್ರತಿವರ್ಷ ಸ್ವಲ್ಪ ಸ್ವಲ್ಪ ಏರಿಸಿದ್ದರೆ ಜನರಿಗೆ ಅದು ಹೊರೆಯಾಗುತ್ತಿರಲಿಲ್ಲ. 500 ರಿಂದ 1000 ಕಿ.ಮೀ. ಸಂಚರಿಸುವ ಬಡವರಿಗೆ ಈ ದರ ಏರಿಕೆ ಭಾರಿ ಹೊರೆಯಾಗುತ್ತದೆ ಎಂದು ಅವರು ಹೇಳಿದರು.<br /> <br /> ~ನಾವು ಏನೂ ಮಾಡದೆ ಹಠಾತ್ತನೆ ಒಮ್ಮಿಂದೊಮ್ಮೆಗೇ ಏನಾದರೂ ಮಾಡಿದರೆ ಅದರ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ. ಇದು (ಇಂತಹ ಹೊರೆ) ಸಾಮಾನ್ಯ ಮುಂಗಡಪತ್ರದಲ್ಲೂ ಪುನರಾವರ್ತಿಸಲಾರದು ಎಂದು ನಾನು ಹಾರೈಸುವೆ~ ಎಂದು ಸಿನ್ಹ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ರೈಲ್ವೇ ಮುಂಗಡಪತ್ರವನ್ನು ~ಜನಸಾಮಾನ್ಯ ವಿರೋಧಿ~ ಎಂಬುದಾಗಿ ಬಣ್ಣಿಸಿರುವ ಬಿಜೆಪಿ, ಮುಂಗಡ ಪತ್ರದಲ್ಲಿ ಭವಿಷ್ಯದ ಕುರಿತು ~ದೃಷ್ಟಿ~ಯೇ ಇಲ್ಲ. ಈ ಮುಂಗಡಪತ್ರದ ಪರಿಣಾಮವಾಗಿ ಬೆಲೆಗಳು ಗಗನಕ್ಕೆ ಏರಲಿವೆ ಎಂದು ಟೀಕಿಸಿದೆ.<br /> <br /> ಸಂಸತ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹ ಅವರು ರೈಲ್ವೇ ಪ್ರಯಾಣಿಕ ದರ ಹೆಚ್ಚಳವನ್ನು ವಿರೋಧಿಸಿ, ~ಸರ್ಕಾರ ಹೀಗೆ ಒಂದೇ ಹೊಡೆತಕ್ಕೆ ಪ್ರಯಾಣಿಕ ದರವನ್ನು ಏರಿಸಿ ಜನ ಸಾಮಾನ್ಯರ ಮೇಲೆ ಇನ್ನೊಂದು ಹೊರೆ ಹೊರಿಸಬಾರದಿತ್ತು ಎಂದು ಹೇಳಿದರು.<br /> <br /> ಮಾಜಿ ಹಣಕಾಸು ಸಚಿವರೂ ಆದ ಸಿನ್ಹ ~ದರ ಏರಿಕೆಯು ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿರುವುದರಿಂದ ಸಾಮಾನ್ಯರ ಮೇಲೆ ದೊಡ್ಡ ಹೊರೆಯಾಗುತ್ತದೆ ಎಂದು ವಿಶ್ಲೇಷಿಸಿದರು.<br /> <br /> ದರಗಳನ್ನು ಹಲವು ವರ್ಷಗಳ ಬಳಿಕ ಒಮ್ಮಿಂದೊಮ್ಮೆಗೇ ಏರಿಸಲಾಗಿದೆ. ಬದಲಿಗೆ ಪ್ರತಿವರ್ಷ ಸ್ವಲ್ಪ ಸ್ವಲ್ಪ ಏರಿಸಿದ್ದರೆ ಜನರಿಗೆ ಅದು ಹೊರೆಯಾಗುತ್ತಿರಲಿಲ್ಲ. 500 ರಿಂದ 1000 ಕಿ.ಮೀ. ಸಂಚರಿಸುವ ಬಡವರಿಗೆ ಈ ದರ ಏರಿಕೆ ಭಾರಿ ಹೊರೆಯಾಗುತ್ತದೆ ಎಂದು ಅವರು ಹೇಳಿದರು.<br /> <br /> ~ನಾವು ಏನೂ ಮಾಡದೆ ಹಠಾತ್ತನೆ ಒಮ್ಮಿಂದೊಮ್ಮೆಗೇ ಏನಾದರೂ ಮಾಡಿದರೆ ಅದರ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ. ಇದು (ಇಂತಹ ಹೊರೆ) ಸಾಮಾನ್ಯ ಮುಂಗಡಪತ್ರದಲ್ಲೂ ಪುನರಾವರ್ತಿಸಲಾರದು ಎಂದು ನಾನು ಹಾರೈಸುವೆ~ ಎಂದು ಸಿನ್ಹ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>