<p>ಬೆಂಗಳೂರು: `ಸೇವೆಯನ್ನು ಜೀವಾಳ ಮಾಡಿಕೊಂಡಿರುವ ರೋಟರಿ ಕ್ಲಬ್ನ ಕಾರ್ಯವೈಖರಿ ಇತರೆ ಸಂಸ್ಥೆಗಳಿಗೆ ಮಾದರಿ' ಎಂದು ರೋಟರಿ ಕ್ಲಬ್ ಆಫ್ ಬೆಂಗಳೂರು ಅಂತರರಾಷ್ಟ್ರೀಯ ಅಧ್ಯಕ್ಷ ಕಲ್ಯಾಣ ಬ್ಯಾನರ್ಜಿ ಹೇಳಿದರು.<br /> <br /> ರೋಟರಿ ಕ್ಲಬ್ ಆಫ್ ಬೆಂಗಳೂರು ಡಿಸ್ಟ್ರಿಕ್ಟ್ 3190 ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, `ನಮ್ಮಿಂದಾದ ಸಹಾಯವನ್ನು ಸಮಾಜದ ಬಡ ದುರ್ಬಲ ವರ್ಗದವರಿಗೆ ಮಾಡಬೇಕು. ಅಂತಹ ಕಾರ್ಯವನ್ನು ರೋಟರಿ ಕ್ಲಬ್ ಯಾವುದೇ ಪಕ್ಷಪಾತವಿಲ್ಲದೆ ಸಮಾಜದ ಸೇವೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡುತ್ತಿದೆ' ಎಂದರು.<br /> <br /> `ನಮ್ಮನ್ನು ನಾವು ಬದಲಿಸಿಕೊಂಡರೆ ಇಡೀ ಜಗತ್ತನ್ನೇ ಬದಲಿಸಬಹುದು. ಒಂದು ದೀಪ ತನ್ನ ಸಣ್ಣ ಬೆಳಕಿನಿಂದ ಕತ್ತಲೆಯನ್ನು ಓಡಿಸುವಂತೆ ರೋಟರಿ ಕ್ಲಬ್ ಸಮಾಜಕ್ಕೆ ತನ್ನಿಂದಾದ ಬೆಳಕನ್ನು ನೀಡುತ್ತಿದೆ' ಎಂದು ಹೇಳಿದರು.<br /> <br /> ಡಿಸ್ಟ್ರಿಕ್ಟ್ ಗವರ್ನರ್ ಕೆ.ಎಸ್.ನಾಗೇಂದ್ರ ಮಾತನಾಡಿ, `ರೋಟರಿಯ ಜನೋಪಯೋಗಿ ಕಾರ್ಯಗಳಿಂದ ಸಮಾಜವು ಗುರುತಿಸುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸೌರ ವಿದ್ಯುದ್ದೀಪ ಮತ್ತು ಶಬ್ದಕೋಶವನ್ನು ಉಚಿತವಾಗಿ ನೀಡುತ್ತಿದೆ' ಎಂದು ಹೇಳಿದರು.<br /> <br /> ರೋಟರಿ ಕ್ಲಬ್ ಆಫ್ ಬೆಂಗಳೂರು ನೂತನ ಅಧ್ಯಕ್ಷೆ ಪೂರ್ಣಿಮಾ ರಂಗನಾಥ್ ಮಾತನಾಡಿ, `ರೋಟರಿಯು ಸಮಾಜ ಸೇವಾ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಚಿಕ್ಕ ಸೇವೆಯಿಂದಲೇ ಬಹು ದೊಡ್ಡ ಸಾಧನೆಯನ್ನು ಮಾಡಬಹುದು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಸೇವೆಯನ್ನು ಜೀವಾಳ ಮಾಡಿಕೊಂಡಿರುವ ರೋಟರಿ ಕ್ಲಬ್ನ ಕಾರ್ಯವೈಖರಿ ಇತರೆ ಸಂಸ್ಥೆಗಳಿಗೆ ಮಾದರಿ' ಎಂದು ರೋಟರಿ ಕ್ಲಬ್ ಆಫ್ ಬೆಂಗಳೂರು ಅಂತರರಾಷ್ಟ್ರೀಯ ಅಧ್ಯಕ್ಷ ಕಲ್ಯಾಣ ಬ್ಯಾನರ್ಜಿ ಹೇಳಿದರು.<br /> <br /> ರೋಟರಿ ಕ್ಲಬ್ ಆಫ್ ಬೆಂಗಳೂರು ಡಿಸ್ಟ್ರಿಕ್ಟ್ 3190 ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, `ನಮ್ಮಿಂದಾದ ಸಹಾಯವನ್ನು ಸಮಾಜದ ಬಡ ದುರ್ಬಲ ವರ್ಗದವರಿಗೆ ಮಾಡಬೇಕು. ಅಂತಹ ಕಾರ್ಯವನ್ನು ರೋಟರಿ ಕ್ಲಬ್ ಯಾವುದೇ ಪಕ್ಷಪಾತವಿಲ್ಲದೆ ಸಮಾಜದ ಸೇವೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡುತ್ತಿದೆ' ಎಂದರು.<br /> <br /> `ನಮ್ಮನ್ನು ನಾವು ಬದಲಿಸಿಕೊಂಡರೆ ಇಡೀ ಜಗತ್ತನ್ನೇ ಬದಲಿಸಬಹುದು. ಒಂದು ದೀಪ ತನ್ನ ಸಣ್ಣ ಬೆಳಕಿನಿಂದ ಕತ್ತಲೆಯನ್ನು ಓಡಿಸುವಂತೆ ರೋಟರಿ ಕ್ಲಬ್ ಸಮಾಜಕ್ಕೆ ತನ್ನಿಂದಾದ ಬೆಳಕನ್ನು ನೀಡುತ್ತಿದೆ' ಎಂದು ಹೇಳಿದರು.<br /> <br /> ಡಿಸ್ಟ್ರಿಕ್ಟ್ ಗವರ್ನರ್ ಕೆ.ಎಸ್.ನಾಗೇಂದ್ರ ಮಾತನಾಡಿ, `ರೋಟರಿಯ ಜನೋಪಯೋಗಿ ಕಾರ್ಯಗಳಿಂದ ಸಮಾಜವು ಗುರುತಿಸುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸೌರ ವಿದ್ಯುದ್ದೀಪ ಮತ್ತು ಶಬ್ದಕೋಶವನ್ನು ಉಚಿತವಾಗಿ ನೀಡುತ್ತಿದೆ' ಎಂದು ಹೇಳಿದರು.<br /> <br /> ರೋಟರಿ ಕ್ಲಬ್ ಆಫ್ ಬೆಂಗಳೂರು ನೂತನ ಅಧ್ಯಕ್ಷೆ ಪೂರ್ಣಿಮಾ ರಂಗನಾಥ್ ಮಾತನಾಡಿ, `ರೋಟರಿಯು ಸಮಾಜ ಸೇವಾ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಚಿಕ್ಕ ಸೇವೆಯಿಂದಲೇ ಬಹು ದೊಡ್ಡ ಸಾಧನೆಯನ್ನು ಮಾಡಬಹುದು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>