<p><strong>ನವದೆಹಲಿ (ಪಿಟಿಐ): </strong>ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿ.ಗೆ (ಎಚ್ಎಎಲ್) ವಿಮಾನಗಳ ಎಂಜಿನ್ ಪೂರೈಕೆಯ ರೂ. 10 ಸಾವಿರ ಕೋಟಿ ವ್ಯವಹಾರದಲ್ಲಿ ಲಂಚ ಪಡೆಯಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಕ್ಷಣಾ ಸಚಿವ ಎ.ಕೆ.ಆಂಟನಿ ಆದೇಶಿಸಿದ್ದಾರೆ.<br /> <br /> 2007ರಿಂದ 2011ರ ನಡುವಿನ ಅವಧಿಯಲ್ಲಿ ಹಾಕ್ ತರಬೇತಿ ವಿಮಾನ ಮತ್ತು ಜಾಗ್ವಾರ್ ಯುದ್ಧ ವಿಮಾನಗಳಿಗೆ ಲಂಡನ್ ಮೂಲದ ರೋಲ್ಸ್ರಾಯ್ಸ್್ ಕಂಪೆನಿಯಿಂದ ಎಂಜಿನ್ ಪೂರೈಕೆ ವ್ಯವಹಾರದಲ್ಲಿ ಈ ಲಂಚದ ಆರೋಪ ಕೇಳಿ ಬಂದಿದೆ. ಎಚ್ಎಎಲ್ನ ಜಾಗೃತ ದಳವು ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಿದ್ದು, ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.</p>.<p>ಪ್ರತಿಕ್ರಿಯೆ ಪಡೆಯುವುದಕ್ಕೆ ರೋಲ್ಸ್ರಾಯ್ಸ್ ಕಂಪೆನಿಯನ್ನು ಇಮೇಲ್ ಮೂಲಕ ಸಂಪರ್ಕಿಸಲಾಗಿದೆ. ಭಾನುವಾರ ರಜಾದಿನ ಆಗಿರುವುದರಿಂದ ಸೋಮವಾರವಷ್ಟೇ ಪ್ರತಿಕ್ರಿಯೆ ನೀಡುವುದಕ್ಕೆ ಸಾಧ್ಯ ಎಂದು ಕಂಪೆನಿ ಹೇಳಿದೆ.<br /> <br /> ಎಂಜಿನ್ ಪೂರೈಕೆ ವ್ಯವಹಾರದಲ್ಲಿ ಗುತ್ತಿಗೆ ಪಡೆಯುವುದಕ್ಕಾಗಿ ಎಚ್ಎಎಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರ ಇಲಾಖೆಗಳಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಿ ಇತ್ತೀಚೆಗೆ ಎಚ್ಎಎಲ್ಗೆ ಪತ್ರವೊಂದು ಬಂದಿತ್ತು. ತಕ್ಷಣವೇ ಮುಖ್ಯ ಜಾಗೃತ ಅಧಿಕಾರಿಯಿಂದ ಎಚ್ಎಎಲ್ ತನಿಖೆ ನಡೆಸಿತು.<br /> <br /> ಲಂಚ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿರುವ 2007ರಿಂದ 2011ರ ಅವಧಿಯಲ್ಲಿ ಕಂಪೆನಿಯು ಹಲವು ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಈ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ.<br /> <br /> ಭಾರತೀಯ ವಾಯುಪಡೆಗಾಗಿ ಎಚ್ಎಎಲ್ ತಯಾರಿಸಿದ ವಿಮಾನಗಳಿಗೆ ಈ ಎಂಜಿನ್ಗಳನ್ನು ಬಳಸಲಾಗಿದೆ.<br /> <br /> ಎಎಚ್ಎಲ್ನೊಂದಿಗೆ ಮಾಡಿಕೊಳ್ಳಬೇಕಿರುವ ಸಮಗ್ರ ಒಪ್ಪಂದದ ಅನ್ವಯ ಮಾರಾಟಗಾರರು ಮತ್ತು ಪೂರೈಕೆದಾರರು ವಹಿವಾಟಿನಲ್ಲಿ ಪ್ರಾಮಾಣಿಕತೆಯನ್ನು ಖಾತರಿಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ಕೆಲವು ಪ್ರಶ್ನೆಗಳನ್ನು ಕಂಪೆನಿಗಳಿಗೆ ಕಳುಹಿಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂತು ಎಂದು ಮೂಲಗಳು ಹೇಳಿವೆ. <br /> <br /> ಎಚ್ಎಎಲ್ನ ಮುಖ್ಯ ಜಾಗೃತ ಅಧಿಕಾರಿಯ ತನಿಖೆಯಲ್ಲಿ ಕಂಡು ಬಂದ ಅಂಶಗಳು ಮತ್ತು ಅವರ ಶಿಫಾರಸು ಆಧಾರದಲ್ಲಿ ಆಂಟನಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ.<br /> <br /> ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ: ಈ ಬೆಳವಣಿಗೆಯಿಂದಾಗಿ ವಾಯುಪಡೆಯ ಹಲವು ಯೋಜನೆಗಳು ವಿಳಂಬವಾಗಬಹುದು. ಆದರೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯಲೇಬಾರದು ಎಂಬ ನಿಲುವು ಹೊಂದಿರುವ ಆಂಟನಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.<br /> <br /> ಸೇನೆಯ ಖರೀದಿಗೆ ಸಂಬಂಧಿಸಿ ಅನಾಮಧೇಯ ಪತ್ರಗಳ ರೂಪದಲ್ಲಿ ಆರೋಪ ಕೇಳಿ ಬಂದಾಗಲೂ ರಕ್ಷಣಾ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಾಗ ಅವರು ಆ ವ್ಯವಹಾರವನ್ನೇ ರದ್ದುಪಡಿಸಿದ್ದರು.<br /> <br /> ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ ಎಂಟು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಆಂಟನಿ ಸಿಬಿಐ ತನಿಖೆಗೆ ಒಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿ.ಗೆ (ಎಚ್ಎಎಲ್) ವಿಮಾನಗಳ ಎಂಜಿನ್ ಪೂರೈಕೆಯ ರೂ. 10 ಸಾವಿರ ಕೋಟಿ ವ್ಯವಹಾರದಲ್ಲಿ ಲಂಚ ಪಡೆಯಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಕ್ಷಣಾ ಸಚಿವ ಎ.ಕೆ.ಆಂಟನಿ ಆದೇಶಿಸಿದ್ದಾರೆ.<br /> <br /> 2007ರಿಂದ 2011ರ ನಡುವಿನ ಅವಧಿಯಲ್ಲಿ ಹಾಕ್ ತರಬೇತಿ ವಿಮಾನ ಮತ್ತು ಜಾಗ್ವಾರ್ ಯುದ್ಧ ವಿಮಾನಗಳಿಗೆ ಲಂಡನ್ ಮೂಲದ ರೋಲ್ಸ್ರಾಯ್ಸ್್ ಕಂಪೆನಿಯಿಂದ ಎಂಜಿನ್ ಪೂರೈಕೆ ವ್ಯವಹಾರದಲ್ಲಿ ಈ ಲಂಚದ ಆರೋಪ ಕೇಳಿ ಬಂದಿದೆ. ಎಚ್ಎಎಲ್ನ ಜಾಗೃತ ದಳವು ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಿದ್ದು, ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.</p>.<p>ಪ್ರತಿಕ್ರಿಯೆ ಪಡೆಯುವುದಕ್ಕೆ ರೋಲ್ಸ್ರಾಯ್ಸ್ ಕಂಪೆನಿಯನ್ನು ಇಮೇಲ್ ಮೂಲಕ ಸಂಪರ್ಕಿಸಲಾಗಿದೆ. ಭಾನುವಾರ ರಜಾದಿನ ಆಗಿರುವುದರಿಂದ ಸೋಮವಾರವಷ್ಟೇ ಪ್ರತಿಕ್ರಿಯೆ ನೀಡುವುದಕ್ಕೆ ಸಾಧ್ಯ ಎಂದು ಕಂಪೆನಿ ಹೇಳಿದೆ.<br /> <br /> ಎಂಜಿನ್ ಪೂರೈಕೆ ವ್ಯವಹಾರದಲ್ಲಿ ಗುತ್ತಿಗೆ ಪಡೆಯುವುದಕ್ಕಾಗಿ ಎಚ್ಎಎಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರ ಇಲಾಖೆಗಳಿಗೆ ಲಂಚ ನೀಡಲಾಗಿದೆ ಎಂದು ಆರೋಪಿಸಿ ಇತ್ತೀಚೆಗೆ ಎಚ್ಎಎಲ್ಗೆ ಪತ್ರವೊಂದು ಬಂದಿತ್ತು. ತಕ್ಷಣವೇ ಮುಖ್ಯ ಜಾಗೃತ ಅಧಿಕಾರಿಯಿಂದ ಎಚ್ಎಎಲ್ ತನಿಖೆ ನಡೆಸಿತು.<br /> <br /> ಲಂಚ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿರುವ 2007ರಿಂದ 2011ರ ಅವಧಿಯಲ್ಲಿ ಕಂಪೆನಿಯು ಹಲವು ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಈ ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ.<br /> <br /> ಭಾರತೀಯ ವಾಯುಪಡೆಗಾಗಿ ಎಚ್ಎಎಲ್ ತಯಾರಿಸಿದ ವಿಮಾನಗಳಿಗೆ ಈ ಎಂಜಿನ್ಗಳನ್ನು ಬಳಸಲಾಗಿದೆ.<br /> <br /> ಎಎಚ್ಎಲ್ನೊಂದಿಗೆ ಮಾಡಿಕೊಳ್ಳಬೇಕಿರುವ ಸಮಗ್ರ ಒಪ್ಪಂದದ ಅನ್ವಯ ಮಾರಾಟಗಾರರು ಮತ್ತು ಪೂರೈಕೆದಾರರು ವಹಿವಾಟಿನಲ್ಲಿ ಪ್ರಾಮಾಣಿಕತೆಯನ್ನು ಖಾತರಿಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ಕೆಲವು ಪ್ರಶ್ನೆಗಳನ್ನು ಕಂಪೆನಿಗಳಿಗೆ ಕಳುಹಿಸಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂತು ಎಂದು ಮೂಲಗಳು ಹೇಳಿವೆ. <br /> <br /> ಎಚ್ಎಎಲ್ನ ಮುಖ್ಯ ಜಾಗೃತ ಅಧಿಕಾರಿಯ ತನಿಖೆಯಲ್ಲಿ ಕಂಡು ಬಂದ ಅಂಶಗಳು ಮತ್ತು ಅವರ ಶಿಫಾರಸು ಆಧಾರದಲ್ಲಿ ಆಂಟನಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ.<br /> <br /> ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ: ಈ ಬೆಳವಣಿಗೆಯಿಂದಾಗಿ ವಾಯುಪಡೆಯ ಹಲವು ಯೋಜನೆಗಳು ವಿಳಂಬವಾಗಬಹುದು. ಆದರೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯಲೇಬಾರದು ಎಂಬ ನಿಲುವು ಹೊಂದಿರುವ ಆಂಟನಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.<br /> <br /> ಸೇನೆಯ ಖರೀದಿಗೆ ಸಂಬಂಧಿಸಿ ಅನಾಮಧೇಯ ಪತ್ರಗಳ ರೂಪದಲ್ಲಿ ಆರೋಪ ಕೇಳಿ ಬಂದಾಗಲೂ ರಕ್ಷಣಾ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಾಗ ಅವರು ಆ ವ್ಯವಹಾರವನ್ನೇ ರದ್ದುಪಡಿಸಿದ್ದರು.<br /> <br /> ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ ಎಂಟು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಆಂಟನಿ ಸಿಬಿಐ ತನಿಖೆಗೆ ಒಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>