<p><strong>ಮೆಣಸಗಿ (ತಾ.ರೋಣ):</strong> `ಪವಾಡ ಪುರುಷ~ ಎಂದೇ ಹೆಸರಾದ ಇಲ್ಲಿಯ ಲಿಂಗ ಬಸವೇಶ್ವರರ ರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು. ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.<br /> <br /> ರಸ್ತೆಯ ಎರಡೂ ಬದಿ ನಿಂತಿದ್ದ ಅಸಂಖ್ಯ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಧನ್ಯತಾಭಾವ ಅನುಭವಿಸಿದರು. ಜಾತ್ರೆಯ ಅಂಗವಾಗಿ ಮಕ್ಕಳ ಆಟಿಕೆ ಸಾಮಾನುಗಳು, ಬೆಂಡು-ಬತ್ತಾಸುಗಳ ಮಾರಾಟದ ಭರಾಟೆ ಜೋರಾಗಿತ್ತು.<br /> <br /> ಲಿಂಗ ಬಸವೇಶ್ವರರು `ಮಣ್ಣಿನ ಗೋಡೆ~ಯನ್ನು ನಡೆಸಿದ್ದಲ್ಲದೆ, ಜಲವನ್ನೇ ತುಪ್ಪವನ್ನಾಗಿ ಪರಿವರ್ತಿಸಿ ಭಕ್ತರಿಗೆ ಹಂಚುವ ಮೂಲಕ ಪವಾಡ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಆದ್ದರಿಂದಲೇ ಅವರನ್ನು `ಪವಾಡ ಪುರುಷ~ ಎಂದೇ ಕರೆಯ ಲಾಗುತ್ತಿತ್ತು. ಸುತ್ತಲಿನ ಜಿಲ್ಲೆಗಳಾದ್ಯಂತ ಲಿಂಗ ಬಸವೇಶ್ವರರ ಅಸಂಖ್ಯ ಭಕ್ತರು ಇದ್ದಾರೆ.<br /> <br /> ಮೆಣಸಗಿಯನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರೂ ಕೊನೆಗೆ ಅವರು ಲಿಂಗೈಕ್ಯರಾಗಿದ್ದು ಬಾದಾಮಿ ತಾಲ್ಲೂಕು ಸುಳ್ಳ ಗ್ರಾಮದಲ್ಲಿ. ಇಂತಹ ಮಹಾ ಚೇತನವನ್ನು ಆದಿ ಪುರುಷನನ್ನಾಗಿ ಹೊಂದಿದ ಲಿಂಗ ಬಸವೇಶ್ವರ ಮಠವು ಪಂಚ ಮಠವಾಗಿ ರೂಪುಗೊಂಡಿದೆ. ಮೆಣಸಗಿ, ಭೋಪಳಾಪುರ, ಗುಳಗಂದಿ, ಬೆಳವಣಕಿವರೆಗೆ ತನ್ನ ಕಾರ್ಯಕ್ಷೇತ್ರ ಹೊಂದಿದೆ.<br /> <br /> 10ರಂದು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದ್ದು, 11ರಂದು ಸಾಮೂಹಿಕ ವಿವಾಹ ಸಮಾರಂಭವನ್ನು ಸಂಘಟಿಸಲಾಗಿದೆ ಎಂದು ಮಠದ ಮುಖ್ಯಸ್ಥರಾದ ಮುದಿಯಪ್ಪಯ್ಯಸ್ವಾಮಿ ಹಿರೇಮಠ ಮತ್ತು ಅಶೋಕ ಚೌಕಿಮಠ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಣಸಗಿ (ತಾ.ರೋಣ):</strong> `ಪವಾಡ ಪುರುಷ~ ಎಂದೇ ಹೆಸರಾದ ಇಲ್ಲಿಯ ಲಿಂಗ ಬಸವೇಶ್ವರರ ರಥೋತ್ಸವ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು. ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.<br /> <br /> ರಸ್ತೆಯ ಎರಡೂ ಬದಿ ನಿಂತಿದ್ದ ಅಸಂಖ್ಯ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಧನ್ಯತಾಭಾವ ಅನುಭವಿಸಿದರು. ಜಾತ್ರೆಯ ಅಂಗವಾಗಿ ಮಕ್ಕಳ ಆಟಿಕೆ ಸಾಮಾನುಗಳು, ಬೆಂಡು-ಬತ್ತಾಸುಗಳ ಮಾರಾಟದ ಭರಾಟೆ ಜೋರಾಗಿತ್ತು.<br /> <br /> ಲಿಂಗ ಬಸವೇಶ್ವರರು `ಮಣ್ಣಿನ ಗೋಡೆ~ಯನ್ನು ನಡೆಸಿದ್ದಲ್ಲದೆ, ಜಲವನ್ನೇ ತುಪ್ಪವನ್ನಾಗಿ ಪರಿವರ್ತಿಸಿ ಭಕ್ತರಿಗೆ ಹಂಚುವ ಮೂಲಕ ಪವಾಡ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಆದ್ದರಿಂದಲೇ ಅವರನ್ನು `ಪವಾಡ ಪುರುಷ~ ಎಂದೇ ಕರೆಯ ಲಾಗುತ್ತಿತ್ತು. ಸುತ್ತಲಿನ ಜಿಲ್ಲೆಗಳಾದ್ಯಂತ ಲಿಂಗ ಬಸವೇಶ್ವರರ ಅಸಂಖ್ಯ ಭಕ್ತರು ಇದ್ದಾರೆ.<br /> <br /> ಮೆಣಸಗಿಯನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರೂ ಕೊನೆಗೆ ಅವರು ಲಿಂಗೈಕ್ಯರಾಗಿದ್ದು ಬಾದಾಮಿ ತಾಲ್ಲೂಕು ಸುಳ್ಳ ಗ್ರಾಮದಲ್ಲಿ. ಇಂತಹ ಮಹಾ ಚೇತನವನ್ನು ಆದಿ ಪುರುಷನನ್ನಾಗಿ ಹೊಂದಿದ ಲಿಂಗ ಬಸವೇಶ್ವರ ಮಠವು ಪಂಚ ಮಠವಾಗಿ ರೂಪುಗೊಂಡಿದೆ. ಮೆಣಸಗಿ, ಭೋಪಳಾಪುರ, ಗುಳಗಂದಿ, ಬೆಳವಣಕಿವರೆಗೆ ತನ್ನ ಕಾರ್ಯಕ್ಷೇತ್ರ ಹೊಂದಿದೆ.<br /> <br /> 10ರಂದು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದ್ದು, 11ರಂದು ಸಾಮೂಹಿಕ ವಿವಾಹ ಸಮಾರಂಭವನ್ನು ಸಂಘಟಿಸಲಾಗಿದೆ ಎಂದು ಮಠದ ಮುಖ್ಯಸ್ಥರಾದ ಮುದಿಯಪ್ಪಯ್ಯಸ್ವಾಮಿ ಹಿರೇಮಠ ಮತ್ತು ಅಶೋಕ ಚೌಕಿಮಠ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>