<p>ಮೈಸೂರು: ‘ಸಾಹಿತಿಗಳು ಉತ್ತಮ ಲೇಖನ ಗಳಿಂದ ಯುವಕರನ್ನು ಸರಿದಾರಿಗೆ ತರುವ ಅಗತ್ಯವಿದೆ’ ಎಂದು ಸಾಹಿತಿ ಡಾ.ಸಾ.ಶಿ. ಮರಳಯ್ಯ ಹೇಳಿದರು.<br /> ನಂಜನಗೂಡು ತಾಲ್ಲೂಕಿನ ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾಸಭಾ 22ನೇ ಮಹಾ ಅಧಿವೇಶನದಲ್ಲಿ ಮಹದೇಶ್ವರ ಮಂಟಪದಲ್ಲಿ ಮಂಗಳವಾರ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಕಾವ್ಯ ಜೀವನಾನುಭವದ ಪ್ರತೀಕ. ಜೀವನಾನುಭವ ಇಲ್ಲದೆ ಕಾವ್ಯವಿಲ್ಲ. ಕಾವ್ಯದ ರಚನೆಗೆ ಬದುಕು ಬಂಡವಾಳ ಆಗಬೇಕು. ಕಾವ್ಯವು ಎಂದಿಗೂ ನಿರಂತರವಾಗಿ ಹರಿಯುವ ನೀರು’ ಎಂದು ಬಣ್ಣಿಸಿದರು.<br /> <br /> ‘ಕಾವ್ಯವನ್ನು ರಚಿಸುವ ಕವಿ ಎಂದಿಗೂ ಚಿರಂಜೀವಿ ಆಗುತ್ತಾನೆ. ಕಾವ್ಯವು ಸೌಂದರ್ಯ ಸ್ವರೂಪ. ಚಿರಂತನ ಚೈತನ್ಯ ದೀಪವಾಗಿದೆ. ಕವಿತೆ, ಕವನಗಳನ್ನು ಬರೆಯುವವರು ಆಸಕ್ತಿ ಕಳೆದುಕೊಳ್ಳಬಾರದು. ಮನಸ್ಸಿನಲ್ಲಿ ಮೂಡುವ ವಿಚಾರಗಳು ಕಾವ್ಯಗಳಾಗಿ ಹೊರಹೊಮ್ಮಬೇಕು’ ಎಂದು ತಿಳಿಸಿದರು.<br /> <br /> ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮೇಲಣಗವಿಮಠ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಶಿವಯೋಗೀಂದ್ರ ಸ್ವಾಮೀಜಿ, ಬೇಬಿ ಗ್ರಾಮದ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.<br /> ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಕೃತಿ ಬಿಡುಗಡೆ ಮಾಡಿದರು. ಕವಿ ಕೆ.ಸಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. <br /> <br /> ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕವಿಗಳು ಕಾವ್ಯ ವಾಚಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಕಚಗುಳಿ ಇಟ್ಟರು. ಪ್ರೇಕ್ಷಕರ ಸಾಲಿನಲ್ಲಿ ಕುಳಿತ್ತಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೆಲವೊತ್ತು ಕಾವ್ಯ ವಾಚನ ಆಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಸಾಹಿತಿಗಳು ಉತ್ತಮ ಲೇಖನ ಗಳಿಂದ ಯುವಕರನ್ನು ಸರಿದಾರಿಗೆ ತರುವ ಅಗತ್ಯವಿದೆ’ ಎಂದು ಸಾಹಿತಿ ಡಾ.ಸಾ.ಶಿ. ಮರಳಯ್ಯ ಹೇಳಿದರು.<br /> ನಂಜನಗೂಡು ತಾಲ್ಲೂಕಿನ ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾಸಭಾ 22ನೇ ಮಹಾ ಅಧಿವೇಶನದಲ್ಲಿ ಮಹದೇಶ್ವರ ಮಂಟಪದಲ್ಲಿ ಮಂಗಳವಾರ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಕಾವ್ಯ ಜೀವನಾನುಭವದ ಪ್ರತೀಕ. ಜೀವನಾನುಭವ ಇಲ್ಲದೆ ಕಾವ್ಯವಿಲ್ಲ. ಕಾವ್ಯದ ರಚನೆಗೆ ಬದುಕು ಬಂಡವಾಳ ಆಗಬೇಕು. ಕಾವ್ಯವು ಎಂದಿಗೂ ನಿರಂತರವಾಗಿ ಹರಿಯುವ ನೀರು’ ಎಂದು ಬಣ್ಣಿಸಿದರು.<br /> <br /> ‘ಕಾವ್ಯವನ್ನು ರಚಿಸುವ ಕವಿ ಎಂದಿಗೂ ಚಿರಂಜೀವಿ ಆಗುತ್ತಾನೆ. ಕಾವ್ಯವು ಸೌಂದರ್ಯ ಸ್ವರೂಪ. ಚಿರಂತನ ಚೈತನ್ಯ ದೀಪವಾಗಿದೆ. ಕವಿತೆ, ಕವನಗಳನ್ನು ಬರೆಯುವವರು ಆಸಕ್ತಿ ಕಳೆದುಕೊಳ್ಳಬಾರದು. ಮನಸ್ಸಿನಲ್ಲಿ ಮೂಡುವ ವಿಚಾರಗಳು ಕಾವ್ಯಗಳಾಗಿ ಹೊರಹೊಮ್ಮಬೇಕು’ ಎಂದು ತಿಳಿಸಿದರು.<br /> <br /> ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮೇಲಣಗವಿಮಠ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಶಿವಯೋಗೀಂದ್ರ ಸ್ವಾಮೀಜಿ, ಬೇಬಿ ಗ್ರಾಮದ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.<br /> ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಕೃತಿ ಬಿಡುಗಡೆ ಮಾಡಿದರು. ಕವಿ ಕೆ.ಸಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. <br /> <br /> ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕವಿಗಳು ಕಾವ್ಯ ವಾಚಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಕಚಗುಳಿ ಇಟ್ಟರು. ಪ್ರೇಕ್ಷಕರ ಸಾಲಿನಲ್ಲಿ ಕುಳಿತ್ತಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೆಲವೊತ್ತು ಕಾವ್ಯ ವಾಚನ ಆಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>