<p>ನವದೆಹಲಿ (ಐಎಎನ್ಎಸ್): ನ್ಯಾಯಮೂರ್ತಿ (ನಿವೃತ್ತ) ಆರ್.ಎ. ಮೆಹ್ತಾ ಅವರನ್ನು ರಾಜ್ಯದ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಗುಜರಾತ್ ಸರ್ಕಾರ ಗುರುವಾರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದೆ.<br /> <br /> ಈ ದಿನ ಬೆಳಿಗ್ಗೆಯೇ ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.<br /> <br /> ಮೆಹ್ತಾ ಅವರನ್ನು ಗುಜರಾತ್ ಲೋಕಾಯುಕ್ತರಾಗಿ ನೇಮಕ ಮಾಡಿ ರಾಜ್ಯಪಾಲ ಕಮಲಾ ಬೇನಿವಾಲ ಅವರು 2011ರ ಆಗಸ್ಟ್ 26ರಂದು ನೇಮಕ ಮಾಡಿದ್ದನ್ನು ಗುಜರಾತ್ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿತ್ತು. ಈ ನೇಮಕಾತಿಗೆ ಮುನ್ನ 7 ವರ್ಷಗಳ ಕಾಲ ಗುಜರಾತಿನಲ್ಲಿ ಲೋಕಾಯುಕ್ತರೇ ಇರಲಿಲ್ಲ.<br /> <br /> ಲೋಕಾಯುಕ್ತರ ನೇಮಕಾತಿಗೆ ಮುನ್ನ ರಾಜ್ಯಪಾಲರು ಈ ವಿಷಯದ ಕುರಿತು ಸಮಾಲೋಚಿಸಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿ ಸರ್ಕಾರವು ಲೋಕಾಯುಕ್ತ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಕಟ್ಟೆ ಏರಿತ್ತು.<br /> <br /> ರಾಜ್ಯಪಾಲರು ಮಾಡಿದ ಲೋಕಾಯುಕ್ತ ನೇಮಕಾತಿಯನ್ನು ಎತ್ತಿ ಹಿಡಿದು ~ಭಿನ್ನ ತೀರ್ಪು~ ನೀಡಿದ ಹೈಕೋರ್ಟಿನ ವಿಭಾಗೀಯ ಪೀಠವು ~ನರೇಂದ್ರ ಮೋದಿ ಅವರ ಕುಚೇಷ್ಟೆಗಳು ಮಿನಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿವೆ~ ಎಂದು ಟೀಕಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ನ್ಯಾಯಮೂರ್ತಿ (ನಿವೃತ್ತ) ಆರ್.ಎ. ಮೆಹ್ತಾ ಅವರನ್ನು ರಾಜ್ಯದ ಲೋಕಾಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಗುಜರಾತ್ ಸರ್ಕಾರ ಗುರುವಾರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದೆ.<br /> <br /> ಈ ದಿನ ಬೆಳಿಗ್ಗೆಯೇ ಈ ಸಂಬಂಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.<br /> <br /> ಮೆಹ್ತಾ ಅವರನ್ನು ಗುಜರಾತ್ ಲೋಕಾಯುಕ್ತರಾಗಿ ನೇಮಕ ಮಾಡಿ ರಾಜ್ಯಪಾಲ ಕಮಲಾ ಬೇನಿವಾಲ ಅವರು 2011ರ ಆಗಸ್ಟ್ 26ರಂದು ನೇಮಕ ಮಾಡಿದ್ದನ್ನು ಗುಜರಾತ್ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿತ್ತು. ಈ ನೇಮಕಾತಿಗೆ ಮುನ್ನ 7 ವರ್ಷಗಳ ಕಾಲ ಗುಜರಾತಿನಲ್ಲಿ ಲೋಕಾಯುಕ್ತರೇ ಇರಲಿಲ್ಲ.<br /> <br /> ಲೋಕಾಯುಕ್ತರ ನೇಮಕಾತಿಗೆ ಮುನ್ನ ರಾಜ್ಯಪಾಲರು ಈ ವಿಷಯದ ಕುರಿತು ಸಮಾಲೋಚಿಸಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿ ಸರ್ಕಾರವು ಲೋಕಾಯುಕ್ತ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಕಟ್ಟೆ ಏರಿತ್ತು.<br /> <br /> ರಾಜ್ಯಪಾಲರು ಮಾಡಿದ ಲೋಕಾಯುಕ್ತ ನೇಮಕಾತಿಯನ್ನು ಎತ್ತಿ ಹಿಡಿದು ~ಭಿನ್ನ ತೀರ್ಪು~ ನೀಡಿದ ಹೈಕೋರ್ಟಿನ ವಿಭಾಗೀಯ ಪೀಠವು ~ನರೇಂದ್ರ ಮೋದಿ ಅವರ ಕುಚೇಷ್ಟೆಗಳು ಮಿನಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿವೆ~ ಎಂದು ಟೀಕಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>