<p><strong>ಹೊಸನಗರ:</strong> ಅಗಲಿದ ರಾಷ್ಟ್ರಕವಿ ಜಿಎಸ್ಎಸ್ ಅವರ ನಿಧನದ ಅಂಗವಾಗಿ ಸರ್ಕಾರ ರಜೆ ಘೋಷಿಸಿದರೂ ಸಹ ಇಲ್ಲಿನ ಲೋಕೋಪಯೋಗಿ ಇಲಾಖೆ ರಜೆ ನೀಡಿದೆ ಮರಳು ಲಾರಿಗಳಿಗೆ ಪರವಾನಗಿ ನೀಡಿರುವುದು ವರದಿಯಾಗಿದೆ.<br /> <br /> ಸಾರ್ವಜನಿಕರ ಗಮನಕ್ಕೆ ಬಾರದಂತೆ ಕಚೇರಿಯ ಹೊರ ಬಾಗಿಲು ಬಂದ್ ಮಾಡಿಕೊಂಡು, ನಿಯೋಜಿತ ಸಿಬ್ಬಂದಿ ಮರಳು ಪರವಾನಗಿ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.<br /> <br /> ಈ ಬಗ್ಗೆ ‘ಪ್ರಜಾವಾಣಿ’ ವಿಚಾರಿಸಿ ದಾಗ, ಪರವಾನಗಿ ಕೋರಿ ಡಿ.23 ರಂದು ಮರಳಿನ ರಾಜಧನದ ಹಣದ ಡಿಡಿಯನ್ನು ಮರಳು ಲಾರಿ ಮಾಲೀಕರು ನೀಡಿದ್ದರು. ಅದನ್ನು ಇಂಟರ್ನೆಟ್ಗೆ ಅಪ್ಲೋಡ್ ಸಹ ಮಾಡಲಾಗಿತ್ತು. ಈ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನಿ, ಕಂದಾಯ ಇಲಾಖೆಯ ಮೌಖಿಕ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದರು.<br /> <br /> ರಾಜಧನದ ಬ್ಯಾಂಕ್ ಡಿಡಿ 3 ತಿಂಗಳ ಕಾಲಾವಕಾಶ ಇದೆ. ಆದರೆ, ಮರಳು ಲಾರಿ ಮಾಲೀಕರಿಂದ ಡಿಡಿ ಪಡೆದು ತರಾತುರಿಯಲ್ಲಿ ಪರವಾನಗಿ ನೀಡಿದ ಬಗ್ಗೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.<br /> <br /> <strong>ರಜೆ ಬೇಡ: </strong>ಸರ್ಕಾರಿ ರಜಾ ದಿನದಲ್ಲಿಯೂ ಮರಳು ಪರವಾನಗಿ ನೀಡಬೇಕು. ಇದರಿಂದ ಮರಳು ಕಾರ್ಮಿಕರ ಒಂದು ದಿನದ ಕೂಲಿ ಇಲ್ಲದಂತಾಗುತ್ತದೆ. ಅಷ್ಟೇ ಅಲ್ಲದೆ ಮರಳು ಲಾರಿಗೆ ಪ್ರತಿ ದಿನ ತೆರಿಗೆ ಪಾವತಿ ಮಾಡುತ್ತೇವೆ. ರಾಷ್ಟ್ರಕವಿಗೆ ಶ್ರದ್ಧಾಂಜಲಿ ಇದೆ.<br /> ಆದರೆ, ದಿಢೀರನೆ ರಜೆ ಘೋಷಣೆ ಆದ ಸಮಯದಲ್ಲಿ ಕೂಲಿ ಕಾರ್ಮಿಕರ ಪಾಡು ಸಹ ಯೋಚಿಸಬೇಕು ಎಂದು ಲಾರಿ ಮಾಲೀಕರ ಸಂಘದ ಹಾಲಗದ್ದೆ ಉಮೇಶ್ ದೂರಿದ್ದಾರೆ.<br /> <br /> <strong>ಅರ್ಧಕ್ಕೆ ಹಾರದ ಧ್ವಜ: </strong>ತಾಲ್ಲೂಕು ಕಚೇರಿ ಸೇರಿದಂತೆ 3 ಸರ್ಕಾರಿ ಕಚೇರಿಗಳಲ್ಲಿ ಮಾತ್ರ ರಾಷ್ಟ್ರಕವಿ ಜಿಎಸ್ಎಸ್ ನಿಧನದ ಶೋಕಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲಾಗಿತ್ತು. ಉಳಿದಂತೆ ಬಹುತೇಕ ಕಚೇರಿಗಳಿಗೆ ಬೀಗ ಹಾಕಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ಅಗಲಿದ ರಾಷ್ಟ್ರಕವಿ ಜಿಎಸ್ಎಸ್ ಅವರ ನಿಧನದ ಅಂಗವಾಗಿ ಸರ್ಕಾರ ರಜೆ ಘೋಷಿಸಿದರೂ ಸಹ ಇಲ್ಲಿನ ಲೋಕೋಪಯೋಗಿ ಇಲಾಖೆ ರಜೆ ನೀಡಿದೆ ಮರಳು ಲಾರಿಗಳಿಗೆ ಪರವಾನಗಿ ನೀಡಿರುವುದು ವರದಿಯಾಗಿದೆ.<br /> <br /> ಸಾರ್ವಜನಿಕರ ಗಮನಕ್ಕೆ ಬಾರದಂತೆ ಕಚೇರಿಯ ಹೊರ ಬಾಗಿಲು ಬಂದ್ ಮಾಡಿಕೊಂಡು, ನಿಯೋಜಿತ ಸಿಬ್ಬಂದಿ ಮರಳು ಪರವಾನಗಿ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.<br /> <br /> ಈ ಬಗ್ಗೆ ‘ಪ್ರಜಾವಾಣಿ’ ವಿಚಾರಿಸಿ ದಾಗ, ಪರವಾನಗಿ ಕೋರಿ ಡಿ.23 ರಂದು ಮರಳಿನ ರಾಜಧನದ ಹಣದ ಡಿಡಿಯನ್ನು ಮರಳು ಲಾರಿ ಮಾಲೀಕರು ನೀಡಿದ್ದರು. ಅದನ್ನು ಇಂಟರ್ನೆಟ್ಗೆ ಅಪ್ಲೋಡ್ ಸಹ ಮಾಡಲಾಗಿತ್ತು. ಈ ಕುರಿತಂತೆ ಗಣಿ ಮತ್ತು ಭೂ ವಿಜ್ಞಾನಿ, ಕಂದಾಯ ಇಲಾಖೆಯ ಮೌಖಿಕ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದರು.<br /> <br /> ರಾಜಧನದ ಬ್ಯಾಂಕ್ ಡಿಡಿ 3 ತಿಂಗಳ ಕಾಲಾವಕಾಶ ಇದೆ. ಆದರೆ, ಮರಳು ಲಾರಿ ಮಾಲೀಕರಿಂದ ಡಿಡಿ ಪಡೆದು ತರಾತುರಿಯಲ್ಲಿ ಪರವಾನಗಿ ನೀಡಿದ ಬಗ್ಗೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.<br /> <br /> <strong>ರಜೆ ಬೇಡ: </strong>ಸರ್ಕಾರಿ ರಜಾ ದಿನದಲ್ಲಿಯೂ ಮರಳು ಪರವಾನಗಿ ನೀಡಬೇಕು. ಇದರಿಂದ ಮರಳು ಕಾರ್ಮಿಕರ ಒಂದು ದಿನದ ಕೂಲಿ ಇಲ್ಲದಂತಾಗುತ್ತದೆ. ಅಷ್ಟೇ ಅಲ್ಲದೆ ಮರಳು ಲಾರಿಗೆ ಪ್ರತಿ ದಿನ ತೆರಿಗೆ ಪಾವತಿ ಮಾಡುತ್ತೇವೆ. ರಾಷ್ಟ್ರಕವಿಗೆ ಶ್ರದ್ಧಾಂಜಲಿ ಇದೆ.<br /> ಆದರೆ, ದಿಢೀರನೆ ರಜೆ ಘೋಷಣೆ ಆದ ಸಮಯದಲ್ಲಿ ಕೂಲಿ ಕಾರ್ಮಿಕರ ಪಾಡು ಸಹ ಯೋಚಿಸಬೇಕು ಎಂದು ಲಾರಿ ಮಾಲೀಕರ ಸಂಘದ ಹಾಲಗದ್ದೆ ಉಮೇಶ್ ದೂರಿದ್ದಾರೆ.<br /> <br /> <strong>ಅರ್ಧಕ್ಕೆ ಹಾರದ ಧ್ವಜ: </strong>ತಾಲ್ಲೂಕು ಕಚೇರಿ ಸೇರಿದಂತೆ 3 ಸರ್ಕಾರಿ ಕಚೇರಿಗಳಲ್ಲಿ ಮಾತ್ರ ರಾಷ್ಟ್ರಕವಿ ಜಿಎಸ್ಎಸ್ ನಿಧನದ ಶೋಕಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಲಾಗಿತ್ತು. ಉಳಿದಂತೆ ಬಹುತೇಕ ಕಚೇರಿಗಳಿಗೆ ಬೀಗ ಹಾಕಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>