<p><strong>ಬೆಂಗಳೂರು:</strong> ಪ್ರಯಾಣಿಕರೊಬ್ಬರು ಆಟೊದಲ್ಲಿ ಬಿಟ್ಟು ಹೋಗಿದ್ದ ಅರವತ್ತೈದು ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ಟಾಪ್ ಅನ್ನು ಹಿಂದಿರುಗಿಸುವ ಮೂಲಕ ಚಾಲಕ ಫಝುಲ್ಲಾಖಾನ್ ಎಂಬುವರು ಮಾದರಿ ಕೆಲಸ ಮಾಡಿದ್ದಾರೆ.<br /> <br /> ಆರ್.ಟಿ. ನಗರದ ಮಠದಹಳ್ಳಿ ನಿವಾಸಿಯಾದ ಫಝುಲ್ಲಾ ಅವರು ಜ.13ರಂದು ಕರ್ತವ್ಯ ನಿರ್ವಹಿಸುತ್ತಿದ್ದರು. ನ್ಯೂ ಬಿಇಎಲ್ ರಸ್ತೆಯಲ್ಲಿ ಆಟೊ ಹತ್ತಿಕೊಂಡ ಸಂಶೋಧನಾ ವಿದ್ಯಾರ್ಥಿ ನಿರ್ಮಲ್ಯ ಬಸು ಎಂಬುವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಳಿದುಕೊಂಡಿದ್ದಾರೆ.</p>.<p>ಆದರೆ ಅವರು ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಪೆನ್ಡ್ರೈವ್ ಇದ್ದ ಕೈಚೀಲವನ್ನು ಆಟೊದಲ್ಲಿಯೇ ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>`ವಾಹನದಲ್ಲಿದ್ದ ಲ್ಯಾಪ್ಟಾಪ್ ಮತ್ತಿತರ ವಸ್ತುಗಳಿದ್ದ ಕೈ ಚೀಲವನ್ನು ಫಝುಲ್ಲಾಖಾನ್ ಕಚೇರಿಗೆ ತಂದು ಒಪ್ಪಿಸಿದರು. ಆನಂತರ ಅದರ ಮಾಲೀಕರನ್ನು ಹುಡುಕಿ ಅವರಿಗೆ ಮಾಹಿತಿ ನೀಡಲಾಯಿತು.ಕಚೇರಿಗೆ ಬಂದ ನಿರ್ಮಲ್ಯ ಅವರಿಗೆ ವಸ್ತುಗಳನ್ನು ಹಿಂದಿರುಗಿಸಲಾಯಿತು.</p>.<p>ಪ್ರಾಮಾಣಿಕತೆ ಮೆರೆದು ಮಾದರಿ ಕೆಲಸ ಮಾಡಿದ ಆಟೊ ಚಾಲಕನಿಗೆ ಪ್ರಶಂಸನಾ ಪತ್ರ ಮತ್ತು ಎರಡು ಸಾವಿರ ನಗದು ಬಹುಮಾನ ನೀಡಲಾಯಿತು~ ಎಂದು ಉತ್ತರ ವಿಭಾಗದ ಡಿಸಿಪಿ ಎಚ್.ಎಸ್. ರೇವಣ್ಣ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಯಾಣಿಕರೊಬ್ಬರು ಆಟೊದಲ್ಲಿ ಬಿಟ್ಟು ಹೋಗಿದ್ದ ಅರವತ್ತೈದು ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ಟಾಪ್ ಅನ್ನು ಹಿಂದಿರುಗಿಸುವ ಮೂಲಕ ಚಾಲಕ ಫಝುಲ್ಲಾಖಾನ್ ಎಂಬುವರು ಮಾದರಿ ಕೆಲಸ ಮಾಡಿದ್ದಾರೆ.<br /> <br /> ಆರ್.ಟಿ. ನಗರದ ಮಠದಹಳ್ಳಿ ನಿವಾಸಿಯಾದ ಫಝುಲ್ಲಾ ಅವರು ಜ.13ರಂದು ಕರ್ತವ್ಯ ನಿರ್ವಹಿಸುತ್ತಿದ್ದರು. ನ್ಯೂ ಬಿಇಎಲ್ ರಸ್ತೆಯಲ್ಲಿ ಆಟೊ ಹತ್ತಿಕೊಂಡ ಸಂಶೋಧನಾ ವಿದ್ಯಾರ್ಥಿ ನಿರ್ಮಲ್ಯ ಬಸು ಎಂಬುವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇಳಿದುಕೊಂಡಿದ್ದಾರೆ.</p>.<p>ಆದರೆ ಅವರು ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಪೆನ್ಡ್ರೈವ್ ಇದ್ದ ಕೈಚೀಲವನ್ನು ಆಟೊದಲ್ಲಿಯೇ ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p>.<p>`ವಾಹನದಲ್ಲಿದ್ದ ಲ್ಯಾಪ್ಟಾಪ್ ಮತ್ತಿತರ ವಸ್ತುಗಳಿದ್ದ ಕೈ ಚೀಲವನ್ನು ಫಝುಲ್ಲಾಖಾನ್ ಕಚೇರಿಗೆ ತಂದು ಒಪ್ಪಿಸಿದರು. ಆನಂತರ ಅದರ ಮಾಲೀಕರನ್ನು ಹುಡುಕಿ ಅವರಿಗೆ ಮಾಹಿತಿ ನೀಡಲಾಯಿತು.ಕಚೇರಿಗೆ ಬಂದ ನಿರ್ಮಲ್ಯ ಅವರಿಗೆ ವಸ್ತುಗಳನ್ನು ಹಿಂದಿರುಗಿಸಲಾಯಿತು.</p>.<p>ಪ್ರಾಮಾಣಿಕತೆ ಮೆರೆದು ಮಾದರಿ ಕೆಲಸ ಮಾಡಿದ ಆಟೊ ಚಾಲಕನಿಗೆ ಪ್ರಶಂಸನಾ ಪತ್ರ ಮತ್ತು ಎರಡು ಸಾವಿರ ನಗದು ಬಹುಮಾನ ನೀಡಲಾಯಿತು~ ಎಂದು ಉತ್ತರ ವಿಭಾಗದ ಡಿಸಿಪಿ ಎಚ್.ಎಸ್. ರೇವಣ್ಣ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>