<p><strong>ಜೀವನೋಪಾಯಕ್ಕಾಗಿ ಅರಣ್ಯ ಸಂಪತ್ತಿಗೆ ಕನ್ನ ಹಾಕುತ್ತಿದ್ದವರು ಈಗ ಅರಣ್ಯ ಪರಿಪಾಲಕರು! ಇದು ಕೇರಳದ ಮಾದರಿ! `ವಿನಾಶದಿಂದ ವಿಕಾಸದೆಡೆಗೆ~ ಎನ್ನುವ ಧ್ಯೇಯದಲ್ಲಿ ಸಮುದಾಯ ಆಧಾರಿತ ವನ್ಯಜೀವಿ ಪ್ರವಾಸೋದ್ಯಮ ಕೇರಳದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.</strong> <br /> <br /> ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಅರಣ್ಯದ (ಪಿಟಿಆರ್) ವನ್ಯಜೀವಿ ಪ್ರವಾಸೋದ್ಯಮದ `ಮಾದರಿ~ ಕಥೆ ಇದು. ಇಲ್ಲಿ ಬುಡಕಟ್ಟು ಜನರು ಮತ್ತು ಸ್ಥಳೀಯರು ಸದಸ್ಯರಾಗಿರುವ ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ) ನಡೆಸುತ್ತಿರುವ `ಪರಿಸರ ಸ್ನೇಹಿ ಪ್ರವಾಸೋದ್ಯಮ~ವು ಸ್ಥಳೀಯ ಸಮುದಾಯಕ್ಕೆ ಜೀವನೋಪಾಯ. ಅದು ಅರಣ್ಯ ರಕ್ಷಣೆಗೆ ಮಾರ್ಗೋಪಾಯವೂ ಹೌದು.<br /> <br /> ಪಿಟಿಆರ್ನಲ್ಲಿ 76 ಇಡಿಸಿಗಳಿವೆ. ಪ್ರವಾಸೋದ್ಯಮಕ್ಕೆಂದೇ ಐದು, ಉಳಿದವು ಗ್ರಾಮ ಇಡಿಸಿಗಳು. ಪ್ರವಾಸೋದ್ಯಮದ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು. ದಂತಕ್ಕಾಗಿ ಆನೆ ಹತ್ಯೆ, ಶ್ರೀಗಂಧದ ಮರ ಸೇರಿದಂತೆ ಬೆಲೆ ಬಾಳುವ ಮರಗಳನ್ನು ಕದ್ದು ಸಾಗಿಸುತ್ತಿದ್ದವರು. ಈಗ ಅವರೇ ಅರಣ್ಯದ ಸಂರಕ್ಷಕರು! ಇಡಿಸಿಗಳಲ್ಲಿ ಶೇ 80ರಷ್ಟು ಬುಡಕಟ್ಟು ಜನರು, ಉಳಿದ ಶೇ 20ರಷ್ಟು ಜನರು ಸ್ಥಳೀಯರು.<br /> <br /> ಬುಡಕಟ್ಟು ಜನರ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರವಾಸಿಗರಿಗೆ ಪರಿಚಯಿಸುವ `ಟ್ರೈಬಲ್ ಟ್ರಕ್ಸ್~, ಅರಣ್ಯದ ನಡುವೆಯಿರುವ ಪ್ರವಾಸಿಗರ ಕ್ಯಾಂಪ್ಗಳನ್ನು ನಿರ್ವಹಿಸುವ `ಟೈಗರ್ ಟ್ರಯಲ್ಸ್~, ಬಿದಿರಿನ ತೆಪ್ಪದ ರ್ಯಾಫ್ಟಿಂಗ್ ಮಾಡಿಸುವ `ಟ್ರೈಬಲ್ ಹೆರಿಟೇಜ್~, ತಲೆತಲಾಂತರಗಳಿಂದ ಅರಣ್ಯ ರಕ್ಷಕರಾದ `ಪೆಟ್ಸ್~ ಇಡಿಸಿಗಳ ಜೊತೆಗೆ `ಎಕ್ಸ್ವೈನಾ ಬರಾಕ್ ಕಲೆಕ್ಟರ್ಸ್~, `ವಿಡಿಯಾಲ್ ವನಪಾದುಕಾಪು ಸಂಘಂ~ ಮತ್ತು `ತಳ್ಳಿ ಕಲೆಕ್ಟರ್ಸ್~ ಎಂಬ ಇಡಿಸಿಗಳೂ ಇವೆ. ಈ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯ ಸಂಪತ್ತು ಕಳ್ಳತನ, ವನ್ಯಜೀವಿ ಬೇಟೆಯಂತಹ ಪಾತಕಗಳಲ್ಲಿ ತೊಡಗಿದ್ದವರು.<br /> <br /> `ಎಕ್ಸ್ವೈನಾ ಬರಾಕ್ ಕಲೆಕ್ಟರ್ಸ್~ ಇಡಿಸಿ ಸದಸ್ಯರು `ಸಿನ್ನಮೊಮೊ~ (ಸುಗಂಧ ದ್ರವ್ಯಗಳಲ್ಲಿ ಮತ್ತು ಅಗರಬತ್ತಿಗಳಲ್ಲಿ ಸುವಾಸನೆಗೆ ಉಪಯೋಗಿಸುವ ಪದಾರ್ಥ- ಇದು `ವೈನಾ ಬರಾಕ್~ ಮರಗಳ ತಿರುಳಿನಲ್ಲಿರುತ್ತದೆ) ಕಳ್ಳರಾಗಿದ್ದರು. ಅವರ ಮನವೊಲಿಸಿ ಈಗ ಅರಣ್ಯ ಸಂರಕ್ಷಣೆಗೆ ನಿಯೋಜಿಸಿಕೊಳ್ಳಲಾಗಿದೆ. `ವೈನಾ ಬರಾಕ್~ ಮರಗಳ ಕಳ್ಳಸಾಗಣೆ ನಿಲ್ಲಿಸಿ ಸುಧಾರಣೆಗೊಂಡವರ ಇಡಿಸಿಗೆ `ಎಕ್ಸ್ವೈನಾ ಬರಾಕ್ ಕಲೆಕ್ಟರ್ಸ್~ ಎಂಬ ಅನ್ವರ್ಥ ಹೆಸರನ್ನೇ ನೀಡಲಾಗಿದೆ.<br /> <br /> `ವಿಡಿಯಲ್ ವನಪಾದುಕಾಪು ಸಂಘಂ~ ತಮಿಳಿಗರು ಇರುವ ಇಡಿಸಿ. ಪೆರಿಯಾರ್ ಅರಣ್ಯವು ತಮಿಳುನಾಡಿನ ಗಡಿಗೆ ಹೊಂದಿಕೊಂಡಿದೆ. ಹಾಗಾಗಿ ಈ ಗಡಿ ಭಾಗದ ಜನರಿಗೂ ಇಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. <br /> <br /> ಈ ಇಡಿಸಿಯ 20 ಸದಸ್ಯರು ಹಿಂದೆ ಆನೆ ಹತ್ಯೆ, ದಂತ ಕಳ್ಳತನ, ಶ್ರೀಗಂಧದ ಮರ ಕಳ್ಳ ಸಾಗಾಣಿಕೆಯಂತಹ ಗಂಭೀರ ಸ್ವರೂಪದ ಅಪರಾಧದಲ್ಲಿ ತೊಡಗಿದ್ದವರು. ಅವರ ಮನವೊಲಿಸಿ ಈ ಸಂಘ ರಚಿಸಲಾಗಿದೆ.`ಮೊದಲು ನಾವು ಅರಣ್ಯದಲ್ಲಿ ಕಳ್ಳತನ ಮಾಡುತ್ತಿದ್ದೆವು. ಆಗ ಜನರು ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈಗ ಸಾಮಾಜಿಕ ಸ್ಥಾನಮಾನ ಸಿಕ್ಕಿದೆ. <br /> <br /> ತಿಂಗಳಿಗೆ 9 ಸಾವಿರ ರೂಪಾಯಿ ವರಮಾನ ಇದೆ~ ಎನ್ನುತ್ತಾರೆ ಈ ಇಡಿಸಿ ಅಧ್ಯಕ್ಷ ಬೋಸ್.ಈ ಇಡಿಸಿ ಈಗ ಅರಣ್ಯ ಸಂರಕ್ಷಣೆಗೆ ರಾತ್ರಿ ಗಸ್ತು ತಿರುಗುವುದರ ಜೊತೆಗೆ ಪ್ರವಾಸಿಗರಿಗೆ ಎತ್ತಿನ ಗಾಡಿಯಲ್ಲಿ ವಿಹಾರ ನಡೆಸುತ್ತದೆ.<br /> <br /> ಆದರೆ ಕೆಲವು ತಿಂಗಳ ಹಿಂದೆ ತಮಿಳುನಾಡು- ಕೇರಳ ನಡುವೆ ಉಂಟಾದ ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದದಿಂದಾಗಿ ತಮಿಳುನಾಡಿನ ಕೆಲವು ದುಷ್ಕರ್ಮಿಗಳು `ತಮಿಳಿಗರಾಗಿ ಕೇರಳಕ್ಕೆ ದುಡಿಯುತ್ತೀರಾ~ ಎಂಬ ಆಕ್ರೋಶದಿಂದ ಪರಿಯಾರ್ ಅರಣ್ಯದ ಗಡಿ ಭಾಗದಲ್ಲಿದ್ದ ಈ ಇಡಿಸಿಯ ಶಿಬಿರ ಕಚೇರಿಯನ್ನು ಮತ್ತು ಎತ್ತಿನ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.<br /> <br /> `ತಳ್ಳಿ ಕಲೆಕ್ಟರ್ಸ್~ ಇಡಿಸಿ 25 ಜನರ ಸಮೂಹ. ಇವರು ಮೂಲತಃ ಧೂಪ ಸಂಗ್ರಹಕಾರರು. ಈಗ ಅರಣ್ಯ ಪರಿಪಾಲಕರಾಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.<br /> <br /> ಕೇರಳದಲ್ಲಿ 22 ವನ್ಯಜೀವಿ ಧಾಮಗಳಿವೆ. ಇವುಗಳಲ್ಲಿ ಇಡುಕ್ಕಿ ಜಿಲ್ಲೆಯ ತೇಕ್ಕಡಿಯಲ್ಲಿರುವ ಪೆರಿಯಾರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಳಂ ಕಾಡುಗಳು ಹುಲಿ ಯೋಜನೆಗೆ ಅಡಕವಾಗಿವೆ. ಈ ಅರಣ್ಯಗಳಲ್ಲಿ 80 ಹುಲಿಗಳಿವೆ ಎಂದು ಅಂದಾಜಿಲಾಗಿದೆ. ಪರಂಬಿಕುಳಂನಲ್ಲೂ ಇಡಿಸಿ ಮೂಲಕ ಸಮುದಾಯ ಆಧಾರಿತ ಪರಿಸರ ಸ್ನೇಹಿ ಪ್ರವಾಸೋದ್ಯಮ ಜಾರಿಯ್ಲ್ಲಲಿದೆ. <br /> <br /> ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಶೇ10ರಷ್ಟನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಉಳಿದ ಭಾಗವನ್ನು ಇಡಿಸಿ ಸದಸ್ಯರ ವೇತನ, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. <br /> <br /> ಪೆರಿಯಾರ್ ಅಭಯಾರಣ್ಯದ ಸಮುದಾಯ ಆಧಾರಿತ ಪರಸರ ಸ್ನೇಹಿ ಪ್ರವಾಸೋದ್ಯಮವನ್ನು ಅಧ್ಯಯನ ಮಾಡಲು ವಿಶ್ವಸಂಸ್ಥೆಯ ನಿಯೋಗ ಸೇರಿದಂತೆ ದೇಶ-ವಿದೇಶಗಳ ಅನೇಕ ತಂಡಗಳು ಇಲ್ಲಿಗೆ ಭೇಟಿ ಕೊಟ್ಟಿವೆ. <br /> <br /> ಕೇರಳದಲ್ಲಿ ಮುಖ್ಯವಾಗಿ ಆರು ವಿಧದ ಬುಡಕಟ್ಟು ಜನರು ಇಲ್ಲಿನ ಅರಣ್ಯದ ಆಶ್ರಿತರು. ಇವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಇಲ್ಲಿ ನಡೆದಿಲ್ಲ ಎನ್ನುವುದು ಗಮನಾರ್ಹ.<br /> <br /> ಪೆರಿಯಾರ್ ಅಭಯಾರಣ್ಯದಲ್ಲಿ `ಮನ್ನಾಸ್~. `ಪಳಿಯನ್~, `ಉರಳಿ~ ಬುಡಕಟ್ಟು ಜನರು ಇದ್ದಾರೆ. ಉಳಿದಂತೆ `ಮಲಉಲ್ಲಾಡನ್~, `ಮಲಆರ್ಯನ್~ ವರ್ಗದ ಜನರು ಇದ್ದಾರೆ. ಇವರೆಲ್ಲಾ ಈಗಾಗಲೇ ಬಹುತೇಕ ಸಮಾಜದ ಮುಖ್ಯವಾಹಿನಿಗೆ ಬಂದವರಾಗಿದ್ದಾರೆ. ಆದರೆ ಕಡಿಮೆ ಸಂಖ್ಯೆಯಲ್ಲಿರುವ `ಮಲನ್ಪಂಡ್ರಂ~ ಅಲೆಮಾರಿ ಬುಡಕಟ್ಟು ಜನರು ಇನ್ನೂ ಅರಣ್ಯಗಳ ಒಳಭಾಗದಲ್ಲೇ ವಾಸಿಸುತ್ತಿದ್ದಾರೆ. <br /> <span id="1342261247445S" style="display: none"> </span><strong>(ಸಿಎಸ್ಇ ಫೆಲೊಶಿಪ್ ಲೇಖನ)</strong><br /> <br /> <strong>ಕೇರಳ - ಕರ್ನಾಟಕ: ಅಜಗಜಾಂತರ </strong><br /> ಕರ್ನಾಟಕದ ವನ್ಯಜೀವಿ ಪ್ರವಾಸೋದ್ಯಮ ಕೇರಳದಷ್ಟು ಸುಸ್ಥಿರವಾದುದಲ್ಲ. ಅಣಬೆಗಳಂತೆ ಅರಣ್ಯದ ಪರಧಿಯಲ್ಲಿ ಹಬ್ಬಿಕೊಂಡಿರುವ ರೆಸಾರ್ಟ್ಗಳು, ಹೋಂ ಸ್ಟೇಗಳಿಂದ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಬೀಳುತ್ತಿದೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್ಗಳು ಮತ್ತು ಹೋಂ ಸ್ಟೇಗಳಿವೆ ಎಂದು ಅಂದಾಜಿಸಲಾಗಿದೆ. <br /> <br /> ಅರಣ್ಯ ಇಲಾಖೆ `ಪ್ರವಾಸೋದ್ಯಮ ವಲಯ~ ಎಂದು ಗುರುತಿಸಿರುವ ಕಡೆ ಸಫಾರಿ ನಡೆಸಲಾಗುತ್ತಿರುವ ನಿದರ್ಶನಗಳಿವೆ. ಇಲಾಖೆಯ ವಾಹನಗಳನ್ನು ಹೊರತುಪಡಿಸಿದರೆ ಸರ್ಕಾರಿ ಸ್ವಾಮ್ಯದ ಅರಣ್ಯ ವಸತಿ ಮತ್ತು ವಿಹಾರಧಾಮ (ಜೆಎಲ್ಆರ್) ವಾಹನಗಳಿಗೆ ಮಾತ್ರ ಪ್ರವೇಶ. ಖಾಸಗಿ ರೆಸಾರ್ಟ್ಗಳು ಜೆಎಲ್ಆರ್ ಮೂಲಕ ತನ್ನ ಗ್ರಾಹಕರಿಗೆ ಸಫಾರಿ ನಡೆಸುತ್ತದೆ. <br /> <br /> ಅನೇಕ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ರೆಸಾರ್ಟ್ಗಳ ಆಮಿಷಕ್ಕೆ ಒಳಗಾಗಿ ಖಾಸಗಿ ವಾಹನಗಳನ್ನು ಸಫಾರಿಗೆ ಬಿಡುತ್ತಾರೆ ಎಂಬ ಆರೋಪಗಳಿವೆ. ಇಲಾಖೆ ಪ್ರವಾಸೋದ್ಯಮ ನೀತಿಯ ಬಗ್ಗೆ ಹಲವು ಖಾಸಗಿ ರೆಸಾರ್ಟ್/ಹೋಂ ಸ್ಟೇಗಳಿಗೆ ಅಸಮಾಧಾನವಿದೆ. ಅಣಶಿ-ದಾಂಡೇಲಿಯ ಹುಲಿ ಸಂರಕ್ಷಿತಾರಣ್ಯದ ಪಣಸೋಲಿಯಲ್ಲಿ ಸ್ಥಳೀಯ ಇಡಿಸಿಗಳು ಸಫಾರಿ ನಡೆಸುತ್ತವೆ. ಸುಮಾರು 10 ಜೀಪ್ಗಳು ಇಲ್ಲಿದ್ದು, ಒಂದು ಟ್ರಿಪ್ಗೆ 700 ರೂಪಾಯಿಗಳಂತೆ ಅರಣ್ಯ ಇಲಾಖೆ ಸಫಾರಿಗೆ ಕರೆದುಕೊಂಡು ಹೋಗುವವರಿಗೆ ನೀಡುತ್ತದೆ.<br /> <br /> `ರಜೆ ಅವಧಿಯಲ್ಲಿ ನಿತ್ಯ ಸಫಾರಿ ಸಿಗುತ್ತದೆ. ವಾರಾಂತ್ಯಗಳಲ್ಲಿ ಪರವಾಗಿಲ್ಲ. ಕಚ್ಚಾ ರಸ್ತೆಯಲ್ಲಿ ಓಡಾಡುವುದರಿಂದ ಜೀಪ್ ಬೇಗ ರಿಪೇರಿಗೆ ಬರುತ್ತದೆ~ ಎಂಬುದು ಪಣಸೋಲಿಯಲ್ಲಿ ಸಫಾರಿಗೆ ಜೀಪ್ ಓಡಿಸುವ ಸದಾನಂದ, ಸಿದ್ದು, ಈಶ್ವರ್, ಗಣೇಶ್ ಅವರ ಒಕ್ಕೊರಲ ಧ್ವನಿ.<br /> <br /> ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ ವರ್ಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರ ಕನಿಷ್ಠ ವೇತನ 4,500 ರೂಪಾಯಿಯಿಂದ ಆರಂಭವಾಗುತ್ತದೆ. 20- 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿಗೆ ಬಂದವರೂ ಇದ್ದಾರೆ. ವೇತನ ತಾರತಮ್ಯದ ಬಗ್ಗೆ ಈ ನೌಕರ ವರ್ಗದಲ್ಲಿ ತೀವ್ರ ಅಸಮಾಧಾನವಿದೆ. ಈ ವಿಚಾರದಲ್ಲಿ ಕೇರಳ-ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.<br /> <br /> <strong>ಪ್ರವಾಸೋದ್ಯಮದಿಂದ ಬದುಕು!</strong><br /> ಕೇರಳ ರಾಜ್ಯದ ಒಟ್ಟು ಆದಾಯದಲ್ಲಿ ಶೇ 40ರಷ್ಟು ಪ್ರವಾಸೋದ್ಯಮದಿಂದಲೇ ಬರುತ್ತದೆ. ಇದಕ್ಕೆ ಕಾರಣ ಸ್ಥಳೀಯರ ಸಹಕಾರದಿಂದ ನಡೆಯುತ್ತಿರುವ ಸುಸ್ಥಿರ ಪರಿಸರ ಸ್ನೇಹಿ ಪ್ರವಾಸೋದ್ಯಮ. ಇದು ನಾಲ್ಕು ಸಾವಿರ ಕುಟುಂಬಗಳಿಗೆ (ಸುಮಾರು 40 ಸಾವಿರ ಜನರು) ಆಸರೆ ನೀಡಿದೆ. <br /> <br /> 1997-98ರಲ್ಲೇ ಗ್ರಾಮ ಇಡಿಸಿಗಳ ರಚನೆ ಆಗಿದ್ದು, 2001-02ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಐದು ಇಡಿಸಿಗಳನ್ನು ರಚಿಸಲಾಗಿದೆ. ಗ್ರಾಮ ಇಡಿಸಿಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಸದಸ್ಯತ್ವ ಇರುವ ಉದಾಹರಣೆಯೂ ಇದೆ. <br /> <br /> ಪೆರಿಯಾರ್ ಈ ಇಡಿಸಿಗಳಿಗೆ ಜಾಗತಿಕ ಪರಿಸರ ಫೆಸಿಲಿಟೇಟ್ ಕಾರ್ಯಕ್ರಮದಡಿ ವಿಶ್ವಬ್ಯಾಂಕ್ ಶೇ 80ರಷ್ಟು ಧನ ಸಹಾಯ ಒದಗಿಸಿತ್ತು. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 10ರಷ್ಟು ಹಣಕಾಸಿನ ನೆರವು ನೀಡಿವೆ. ಈ ಯೋಜನೆ 2004ರಿಂದ ಎಂಟು ವರ್ಷಗಳ ಕಾಲ ಜಾರಿಯಲ್ಲಿತ್ತು. ಈ ಯೋಜನೆ ಮುಗಿದ ನಂತರ `ಪೆರಿಯಾರ್ ಪ್ರತಿಷ್ಠಾನ~ ಸ್ಥಾಪಿಸಲಾಗಿದೆ. ಇದು ಇಡಿಸಿಗಳಿಗೆ ಹಣಕಾಸಿನ ನೆರವು ನೀಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೀವನೋಪಾಯಕ್ಕಾಗಿ ಅರಣ್ಯ ಸಂಪತ್ತಿಗೆ ಕನ್ನ ಹಾಕುತ್ತಿದ್ದವರು ಈಗ ಅರಣ್ಯ ಪರಿಪಾಲಕರು! ಇದು ಕೇರಳದ ಮಾದರಿ! `ವಿನಾಶದಿಂದ ವಿಕಾಸದೆಡೆಗೆ~ ಎನ್ನುವ ಧ್ಯೇಯದಲ್ಲಿ ಸಮುದಾಯ ಆಧಾರಿತ ವನ್ಯಜೀವಿ ಪ್ರವಾಸೋದ್ಯಮ ಕೇರಳದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.</strong> <br /> <br /> ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಅರಣ್ಯದ (ಪಿಟಿಆರ್) ವನ್ಯಜೀವಿ ಪ್ರವಾಸೋದ್ಯಮದ `ಮಾದರಿ~ ಕಥೆ ಇದು. ಇಲ್ಲಿ ಬುಡಕಟ್ಟು ಜನರು ಮತ್ತು ಸ್ಥಳೀಯರು ಸದಸ್ಯರಾಗಿರುವ ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ) ನಡೆಸುತ್ತಿರುವ `ಪರಿಸರ ಸ್ನೇಹಿ ಪ್ರವಾಸೋದ್ಯಮ~ವು ಸ್ಥಳೀಯ ಸಮುದಾಯಕ್ಕೆ ಜೀವನೋಪಾಯ. ಅದು ಅರಣ್ಯ ರಕ್ಷಣೆಗೆ ಮಾರ್ಗೋಪಾಯವೂ ಹೌದು.<br /> <br /> ಪಿಟಿಆರ್ನಲ್ಲಿ 76 ಇಡಿಸಿಗಳಿವೆ. ಪ್ರವಾಸೋದ್ಯಮಕ್ಕೆಂದೇ ಐದು, ಉಳಿದವು ಗ್ರಾಮ ಇಡಿಸಿಗಳು. ಪ್ರವಾಸೋದ್ಯಮದ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯದಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು. ದಂತಕ್ಕಾಗಿ ಆನೆ ಹತ್ಯೆ, ಶ್ರೀಗಂಧದ ಮರ ಸೇರಿದಂತೆ ಬೆಲೆ ಬಾಳುವ ಮರಗಳನ್ನು ಕದ್ದು ಸಾಗಿಸುತ್ತಿದ್ದವರು. ಈಗ ಅವರೇ ಅರಣ್ಯದ ಸಂರಕ್ಷಕರು! ಇಡಿಸಿಗಳಲ್ಲಿ ಶೇ 80ರಷ್ಟು ಬುಡಕಟ್ಟು ಜನರು, ಉಳಿದ ಶೇ 20ರಷ್ಟು ಜನರು ಸ್ಥಳೀಯರು.<br /> <br /> ಬುಡಕಟ್ಟು ಜನರ ಕಲೆ ಮತ್ತು ಸಂಸ್ಕೃತಿಗಳನ್ನು ಪ್ರವಾಸಿಗರಿಗೆ ಪರಿಚಯಿಸುವ `ಟ್ರೈಬಲ್ ಟ್ರಕ್ಸ್~, ಅರಣ್ಯದ ನಡುವೆಯಿರುವ ಪ್ರವಾಸಿಗರ ಕ್ಯಾಂಪ್ಗಳನ್ನು ನಿರ್ವಹಿಸುವ `ಟೈಗರ್ ಟ್ರಯಲ್ಸ್~, ಬಿದಿರಿನ ತೆಪ್ಪದ ರ್ಯಾಫ್ಟಿಂಗ್ ಮಾಡಿಸುವ `ಟ್ರೈಬಲ್ ಹೆರಿಟೇಜ್~, ತಲೆತಲಾಂತರಗಳಿಂದ ಅರಣ್ಯ ರಕ್ಷಕರಾದ `ಪೆಟ್ಸ್~ ಇಡಿಸಿಗಳ ಜೊತೆಗೆ `ಎಕ್ಸ್ವೈನಾ ಬರಾಕ್ ಕಲೆಕ್ಟರ್ಸ್~, `ವಿಡಿಯಾಲ್ ವನಪಾದುಕಾಪು ಸಂಘಂ~ ಮತ್ತು `ತಳ್ಳಿ ಕಲೆಕ್ಟರ್ಸ್~ ಎಂಬ ಇಡಿಸಿಗಳೂ ಇವೆ. ಈ ಮೂರು ಇಡಿಸಿಗಳ ಸದಸ್ಯರು ಈ ಹಿಂದೆ ಅರಣ್ಯ ಸಂಪತ್ತು ಕಳ್ಳತನ, ವನ್ಯಜೀವಿ ಬೇಟೆಯಂತಹ ಪಾತಕಗಳಲ್ಲಿ ತೊಡಗಿದ್ದವರು.<br /> <br /> `ಎಕ್ಸ್ವೈನಾ ಬರಾಕ್ ಕಲೆಕ್ಟರ್ಸ್~ ಇಡಿಸಿ ಸದಸ್ಯರು `ಸಿನ್ನಮೊಮೊ~ (ಸುಗಂಧ ದ್ರವ್ಯಗಳಲ್ಲಿ ಮತ್ತು ಅಗರಬತ್ತಿಗಳಲ್ಲಿ ಸುವಾಸನೆಗೆ ಉಪಯೋಗಿಸುವ ಪದಾರ್ಥ- ಇದು `ವೈನಾ ಬರಾಕ್~ ಮರಗಳ ತಿರುಳಿನಲ್ಲಿರುತ್ತದೆ) ಕಳ್ಳರಾಗಿದ್ದರು. ಅವರ ಮನವೊಲಿಸಿ ಈಗ ಅರಣ್ಯ ಸಂರಕ್ಷಣೆಗೆ ನಿಯೋಜಿಸಿಕೊಳ್ಳಲಾಗಿದೆ. `ವೈನಾ ಬರಾಕ್~ ಮರಗಳ ಕಳ್ಳಸಾಗಣೆ ನಿಲ್ಲಿಸಿ ಸುಧಾರಣೆಗೊಂಡವರ ಇಡಿಸಿಗೆ `ಎಕ್ಸ್ವೈನಾ ಬರಾಕ್ ಕಲೆಕ್ಟರ್ಸ್~ ಎಂಬ ಅನ್ವರ್ಥ ಹೆಸರನ್ನೇ ನೀಡಲಾಗಿದೆ.<br /> <br /> `ವಿಡಿಯಲ್ ವನಪಾದುಕಾಪು ಸಂಘಂ~ ತಮಿಳಿಗರು ಇರುವ ಇಡಿಸಿ. ಪೆರಿಯಾರ್ ಅರಣ್ಯವು ತಮಿಳುನಾಡಿನ ಗಡಿಗೆ ಹೊಂದಿಕೊಂಡಿದೆ. ಹಾಗಾಗಿ ಈ ಗಡಿ ಭಾಗದ ಜನರಿಗೂ ಇಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. <br /> <br /> ಈ ಇಡಿಸಿಯ 20 ಸದಸ್ಯರು ಹಿಂದೆ ಆನೆ ಹತ್ಯೆ, ದಂತ ಕಳ್ಳತನ, ಶ್ರೀಗಂಧದ ಮರ ಕಳ್ಳ ಸಾಗಾಣಿಕೆಯಂತಹ ಗಂಭೀರ ಸ್ವರೂಪದ ಅಪರಾಧದಲ್ಲಿ ತೊಡಗಿದ್ದವರು. ಅವರ ಮನವೊಲಿಸಿ ಈ ಸಂಘ ರಚಿಸಲಾಗಿದೆ.`ಮೊದಲು ನಾವು ಅರಣ್ಯದಲ್ಲಿ ಕಳ್ಳತನ ಮಾಡುತ್ತಿದ್ದೆವು. ಆಗ ಜನರು ನಮ್ಮನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಈಗ ಸಾಮಾಜಿಕ ಸ್ಥಾನಮಾನ ಸಿಕ್ಕಿದೆ. <br /> <br /> ತಿಂಗಳಿಗೆ 9 ಸಾವಿರ ರೂಪಾಯಿ ವರಮಾನ ಇದೆ~ ಎನ್ನುತ್ತಾರೆ ಈ ಇಡಿಸಿ ಅಧ್ಯಕ್ಷ ಬೋಸ್.ಈ ಇಡಿಸಿ ಈಗ ಅರಣ್ಯ ಸಂರಕ್ಷಣೆಗೆ ರಾತ್ರಿ ಗಸ್ತು ತಿರುಗುವುದರ ಜೊತೆಗೆ ಪ್ರವಾಸಿಗರಿಗೆ ಎತ್ತಿನ ಗಾಡಿಯಲ್ಲಿ ವಿಹಾರ ನಡೆಸುತ್ತದೆ.<br /> <br /> ಆದರೆ ಕೆಲವು ತಿಂಗಳ ಹಿಂದೆ ತಮಿಳುನಾಡು- ಕೇರಳ ನಡುವೆ ಉಂಟಾದ ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದದಿಂದಾಗಿ ತಮಿಳುನಾಡಿನ ಕೆಲವು ದುಷ್ಕರ್ಮಿಗಳು `ತಮಿಳಿಗರಾಗಿ ಕೇರಳಕ್ಕೆ ದುಡಿಯುತ್ತೀರಾ~ ಎಂಬ ಆಕ್ರೋಶದಿಂದ ಪರಿಯಾರ್ ಅರಣ್ಯದ ಗಡಿ ಭಾಗದಲ್ಲಿದ್ದ ಈ ಇಡಿಸಿಯ ಶಿಬಿರ ಕಚೇರಿಯನ್ನು ಮತ್ತು ಎತ್ತಿನ ಗಾಡಿಗಳನ್ನು ಸುಟ್ಟು ಹಾಕಿದ್ದಾರೆ.<br /> <br /> `ತಳ್ಳಿ ಕಲೆಕ್ಟರ್ಸ್~ ಇಡಿಸಿ 25 ಜನರ ಸಮೂಹ. ಇವರು ಮೂಲತಃ ಧೂಪ ಸಂಗ್ರಹಕಾರರು. ಈಗ ಅರಣ್ಯ ಪರಿಪಾಲಕರಾಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ.<br /> <br /> ಕೇರಳದಲ್ಲಿ 22 ವನ್ಯಜೀವಿ ಧಾಮಗಳಿವೆ. ಇವುಗಳಲ್ಲಿ ಇಡುಕ್ಕಿ ಜಿಲ್ಲೆಯ ತೇಕ್ಕಡಿಯಲ್ಲಿರುವ ಪೆರಿಯಾರ್ ಮತ್ತು ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಳಂ ಕಾಡುಗಳು ಹುಲಿ ಯೋಜನೆಗೆ ಅಡಕವಾಗಿವೆ. ಈ ಅರಣ್ಯಗಳಲ್ಲಿ 80 ಹುಲಿಗಳಿವೆ ಎಂದು ಅಂದಾಜಿಲಾಗಿದೆ. ಪರಂಬಿಕುಳಂನಲ್ಲೂ ಇಡಿಸಿ ಮೂಲಕ ಸಮುದಾಯ ಆಧಾರಿತ ಪರಿಸರ ಸ್ನೇಹಿ ಪ್ರವಾಸೋದ್ಯಮ ಜಾರಿಯ್ಲ್ಲಲಿದೆ. <br /> <br /> ಪ್ರವಾಸೋದ್ಯಮದಿಂದ ಬರುವ ಆದಾಯದಲ್ಲಿ ಶೇ10ರಷ್ಟನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಉಳಿದ ಭಾಗವನ್ನು ಇಡಿಸಿ ಸದಸ್ಯರ ವೇತನ, ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. <br /> <br /> ಪೆರಿಯಾರ್ ಅಭಯಾರಣ್ಯದ ಸಮುದಾಯ ಆಧಾರಿತ ಪರಸರ ಸ್ನೇಹಿ ಪ್ರವಾಸೋದ್ಯಮವನ್ನು ಅಧ್ಯಯನ ಮಾಡಲು ವಿಶ್ವಸಂಸ್ಥೆಯ ನಿಯೋಗ ಸೇರಿದಂತೆ ದೇಶ-ವಿದೇಶಗಳ ಅನೇಕ ತಂಡಗಳು ಇಲ್ಲಿಗೆ ಭೇಟಿ ಕೊಟ್ಟಿವೆ. <br /> <br /> ಕೇರಳದಲ್ಲಿ ಮುಖ್ಯವಾಗಿ ಆರು ವಿಧದ ಬುಡಕಟ್ಟು ಜನರು ಇಲ್ಲಿನ ಅರಣ್ಯದ ಆಶ್ರಿತರು. ಇವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ಇಲ್ಲಿ ನಡೆದಿಲ್ಲ ಎನ್ನುವುದು ಗಮನಾರ್ಹ.<br /> <br /> ಪೆರಿಯಾರ್ ಅಭಯಾರಣ್ಯದಲ್ಲಿ `ಮನ್ನಾಸ್~. `ಪಳಿಯನ್~, `ಉರಳಿ~ ಬುಡಕಟ್ಟು ಜನರು ಇದ್ದಾರೆ. ಉಳಿದಂತೆ `ಮಲಉಲ್ಲಾಡನ್~, `ಮಲಆರ್ಯನ್~ ವರ್ಗದ ಜನರು ಇದ್ದಾರೆ. ಇವರೆಲ್ಲಾ ಈಗಾಗಲೇ ಬಹುತೇಕ ಸಮಾಜದ ಮುಖ್ಯವಾಹಿನಿಗೆ ಬಂದವರಾಗಿದ್ದಾರೆ. ಆದರೆ ಕಡಿಮೆ ಸಂಖ್ಯೆಯಲ್ಲಿರುವ `ಮಲನ್ಪಂಡ್ರಂ~ ಅಲೆಮಾರಿ ಬುಡಕಟ್ಟು ಜನರು ಇನ್ನೂ ಅರಣ್ಯಗಳ ಒಳಭಾಗದಲ್ಲೇ ವಾಸಿಸುತ್ತಿದ್ದಾರೆ. <br /> <span id="1342261247445S" style="display: none"> </span><strong>(ಸಿಎಸ್ಇ ಫೆಲೊಶಿಪ್ ಲೇಖನ)</strong><br /> <br /> <strong>ಕೇರಳ - ಕರ್ನಾಟಕ: ಅಜಗಜಾಂತರ </strong><br /> ಕರ್ನಾಟಕದ ವನ್ಯಜೀವಿ ಪ್ರವಾಸೋದ್ಯಮ ಕೇರಳದಷ್ಟು ಸುಸ್ಥಿರವಾದುದಲ್ಲ. ಅಣಬೆಗಳಂತೆ ಅರಣ್ಯದ ಪರಧಿಯಲ್ಲಿ ಹಬ್ಬಿಕೊಂಡಿರುವ ರೆಸಾರ್ಟ್ಗಳು, ಹೋಂ ಸ್ಟೇಗಳಿಂದ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಒತ್ತಡ ಬೀಳುತ್ತಿದೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್ಗಳು ಮತ್ತು ಹೋಂ ಸ್ಟೇಗಳಿವೆ ಎಂದು ಅಂದಾಜಿಸಲಾಗಿದೆ. <br /> <br /> ಅರಣ್ಯ ಇಲಾಖೆ `ಪ್ರವಾಸೋದ್ಯಮ ವಲಯ~ ಎಂದು ಗುರುತಿಸಿರುವ ಕಡೆ ಸಫಾರಿ ನಡೆಸಲಾಗುತ್ತಿರುವ ನಿದರ್ಶನಗಳಿವೆ. ಇಲಾಖೆಯ ವಾಹನಗಳನ್ನು ಹೊರತುಪಡಿಸಿದರೆ ಸರ್ಕಾರಿ ಸ್ವಾಮ್ಯದ ಅರಣ್ಯ ವಸತಿ ಮತ್ತು ವಿಹಾರಧಾಮ (ಜೆಎಲ್ಆರ್) ವಾಹನಗಳಿಗೆ ಮಾತ್ರ ಪ್ರವೇಶ. ಖಾಸಗಿ ರೆಸಾರ್ಟ್ಗಳು ಜೆಎಲ್ಆರ್ ಮೂಲಕ ತನ್ನ ಗ್ರಾಹಕರಿಗೆ ಸಫಾರಿ ನಡೆಸುತ್ತದೆ. <br /> <br /> ಅನೇಕ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಖಾಸಗಿ ರೆಸಾರ್ಟ್ಗಳ ಆಮಿಷಕ್ಕೆ ಒಳಗಾಗಿ ಖಾಸಗಿ ವಾಹನಗಳನ್ನು ಸಫಾರಿಗೆ ಬಿಡುತ್ತಾರೆ ಎಂಬ ಆರೋಪಗಳಿವೆ. ಇಲಾಖೆ ಪ್ರವಾಸೋದ್ಯಮ ನೀತಿಯ ಬಗ್ಗೆ ಹಲವು ಖಾಸಗಿ ರೆಸಾರ್ಟ್/ಹೋಂ ಸ್ಟೇಗಳಿಗೆ ಅಸಮಾಧಾನವಿದೆ. ಅಣಶಿ-ದಾಂಡೇಲಿಯ ಹುಲಿ ಸಂರಕ್ಷಿತಾರಣ್ಯದ ಪಣಸೋಲಿಯಲ್ಲಿ ಸ್ಥಳೀಯ ಇಡಿಸಿಗಳು ಸಫಾರಿ ನಡೆಸುತ್ತವೆ. ಸುಮಾರು 10 ಜೀಪ್ಗಳು ಇಲ್ಲಿದ್ದು, ಒಂದು ಟ್ರಿಪ್ಗೆ 700 ರೂಪಾಯಿಗಳಂತೆ ಅರಣ್ಯ ಇಲಾಖೆ ಸಫಾರಿಗೆ ಕರೆದುಕೊಂಡು ಹೋಗುವವರಿಗೆ ನೀಡುತ್ತದೆ.<br /> <br /> `ರಜೆ ಅವಧಿಯಲ್ಲಿ ನಿತ್ಯ ಸಫಾರಿ ಸಿಗುತ್ತದೆ. ವಾರಾಂತ್ಯಗಳಲ್ಲಿ ಪರವಾಗಿಲ್ಲ. ಕಚ್ಚಾ ರಸ್ತೆಯಲ್ಲಿ ಓಡಾಡುವುದರಿಂದ ಜೀಪ್ ಬೇಗ ರಿಪೇರಿಗೆ ಬರುತ್ತದೆ~ ಎಂಬುದು ಪಣಸೋಲಿಯಲ್ಲಿ ಸಫಾರಿಗೆ ಜೀಪ್ ಓಡಿಸುವ ಸದಾನಂದ, ಸಿದ್ದು, ಈಶ್ವರ್, ಗಣೇಶ್ ಅವರ ಒಕ್ಕೊರಲ ಧ್ವನಿ.<br /> <br /> ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರ ವರ್ಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರ ಕನಿಷ್ಠ ವೇತನ 4,500 ರೂಪಾಯಿಯಿಂದ ಆರಂಭವಾಗುತ್ತದೆ. 20- 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿಗೆ ಬಂದವರೂ ಇದ್ದಾರೆ. ವೇತನ ತಾರತಮ್ಯದ ಬಗ್ಗೆ ಈ ನೌಕರ ವರ್ಗದಲ್ಲಿ ತೀವ್ರ ಅಸಮಾಧಾನವಿದೆ. ಈ ವಿಚಾರದಲ್ಲಿ ಕೇರಳ-ಕರ್ನಾಟಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.<br /> <br /> <strong>ಪ್ರವಾಸೋದ್ಯಮದಿಂದ ಬದುಕು!</strong><br /> ಕೇರಳ ರಾಜ್ಯದ ಒಟ್ಟು ಆದಾಯದಲ್ಲಿ ಶೇ 40ರಷ್ಟು ಪ್ರವಾಸೋದ್ಯಮದಿಂದಲೇ ಬರುತ್ತದೆ. ಇದಕ್ಕೆ ಕಾರಣ ಸ್ಥಳೀಯರ ಸಹಕಾರದಿಂದ ನಡೆಯುತ್ತಿರುವ ಸುಸ್ಥಿರ ಪರಿಸರ ಸ್ನೇಹಿ ಪ್ರವಾಸೋದ್ಯಮ. ಇದು ನಾಲ್ಕು ಸಾವಿರ ಕುಟುಂಬಗಳಿಗೆ (ಸುಮಾರು 40 ಸಾವಿರ ಜನರು) ಆಸರೆ ನೀಡಿದೆ. <br /> <br /> 1997-98ರಲ್ಲೇ ಗ್ರಾಮ ಇಡಿಸಿಗಳ ರಚನೆ ಆಗಿದ್ದು, 2001-02ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಐದು ಇಡಿಸಿಗಳನ್ನು ರಚಿಸಲಾಗಿದೆ. ಗ್ರಾಮ ಇಡಿಸಿಗಳಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಸದಸ್ಯತ್ವ ಇರುವ ಉದಾಹರಣೆಯೂ ಇದೆ. <br /> <br /> ಪೆರಿಯಾರ್ ಈ ಇಡಿಸಿಗಳಿಗೆ ಜಾಗತಿಕ ಪರಿಸರ ಫೆಸಿಲಿಟೇಟ್ ಕಾರ್ಯಕ್ರಮದಡಿ ವಿಶ್ವಬ್ಯಾಂಕ್ ಶೇ 80ರಷ್ಟು ಧನ ಸಹಾಯ ಒದಗಿಸಿತ್ತು. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 10ರಷ್ಟು ಹಣಕಾಸಿನ ನೆರವು ನೀಡಿವೆ. ಈ ಯೋಜನೆ 2004ರಿಂದ ಎಂಟು ವರ್ಷಗಳ ಕಾಲ ಜಾರಿಯಲ್ಲಿತ್ತು. ಈ ಯೋಜನೆ ಮುಗಿದ ನಂತರ `ಪೆರಿಯಾರ್ ಪ್ರತಿಷ್ಠಾನ~ ಸ್ಥಾಪಿಸಲಾಗಿದೆ. ಇದು ಇಡಿಸಿಗಳಿಗೆ ಹಣಕಾಸಿನ ನೆರವು ನೀಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>