<p><strong>ಮಂಗಳೂರು:</strong> ವಾಣಿಜ್ಯ ಹಡಗುಗಳನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ ನಡೆಯುವ ಐಸಿಎಸ್(ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ಷಿಪ್ ಬ್ರೋಕರ್ಸ್) ತರಬೇತಿ ಕಾರ್ಯಕ್ರಮ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮೊದಲ ಬ್ಯಾಚ್ನ ಮೂವರು ಅಭ್ಯರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.<br /> <br /> ಕೆನರಾ ವಾಣಿಜ್ಯೋದ್ಯಮ ಸಂಘದ(ಕೆಸಿಸಿಐ) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಹಡಗು ನಿರ್ವಹಣಾ ತರಬೇತುದಾರ ಕ್ಯಾಪ್ಟನ್ ಜೆ.ಪಿ.ಮಿನೇಜಸ್ ಅವರು ಅತಿ ಹೆಚ್ಚಿನ ಅಂಕದೊಂದಿಗೆ ತರಬೇತಿ ಪೂರೈಸಿದವರನ್ನು ಸನ್ಮಾನಿಸಿದರು.<br /> <br /> ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ಏಳು ಪ್ರಶ್ನೆಪತ್ರಿಕೆಗಳಿರುವ ಅತ್ಯಂತ ಕ್ಲಿಷ್ಟಕರ ಪರೀಕ್ಷೆ. ಜಗತ್ತಿನ 85 ಸ್ಥಳಗಳಲ್ಲಿ ಮಾತ್ರ ಐಸಿಎಸ್ ತರಬೇತಿ/ಪರೀಕ್ಷಾ ಕೇಂದ್ರಗಳಿವೆ. ಇವುಗಳಲ್ಲಿ ಮಂಗಳೂರು ಸಹ ಒಂದು. 2ರಿಂದ 3 ವರ್ಷದೊಳಗೆ ಈ ಕೋರ್ಸ್ ಪೂರ್ಣಗೊಳಿಸಬಹುದಾಗಿದ್ದು, ಭಾರಿ ಉದ್ಯೋಗ ಅವಕಾಶವೇ ಇದೆ ಎಂದರು.<br /> <br /> ವಾಣಿಜ್ಯ ಹಡಗುಗಳನ್ನು ನಿರ್ವಹಿಸಿದ ಮೂರು ವರ್ಷಗಳ ಅನುಭವ ಅಭ್ಯರ್ಥಿಗೆ ಇರಬೇಕು. ಅತ್ಯಂತ ಕಷ್ಟಕರವಾದ ಈ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಕನಿಷ್ಠ ಮಾಸಿಕ 30 ಸಾವಿರ ರೂಪಾಯಿಯಿಂದ ಲಕ್ಷವರೆಗೂ ಅಧಿಕ ವೇತನದ ಕೆಲಸ ಪಡೆಯುವ ಅವಕಾಶವಿದೆ. ವಿದೇಶದಲ್ಲಿ ಈ ತರಬೇತಿ ಪಡೆದವರಿಗೆ ಅಧಿಕ ಬೇಡಿಕೆ ಇದೆ ಎಂದು ಗಮನ ಸೆಳೆದರು.<br /> <br /> ಈ ತರಬೇತಿಗೆ ನೋಂದಣಿ ಶುಲ್ಕ ಕೇವಲ 4 ಸಾವಿರ ರೂಪಾಯಿ, ಪ್ರತಿ ಪ್ರಶ್ನೆಪತ್ರಿಕೆಗೆ 2 ಸಾವಿರ ರೂಪಾಯಿ ಶುಲ್ಕವಿದೆ. ಕನಿಷ್ಠ ಎಸ್ಎಸ್ಎಲ್ಸಿ ತೇರ್ಗಡೆ ಆದವರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.<br /> <br /> ಮಂಗಳೂರಿನಲ್ಲಿ 2009-10ನೇ ಸಾಲಿನಿಂದ ಐಸಿಎಸ್ ತರಬೇತಿ ಕಾರ್ಯಕ್ರಮ ಆರಂಭವಾಗಿದೆ. ಮೊದಲ ಬ್ಯಾಚ್ನಲ್ಲಿ 16 ಮಂದಿ ಇದ್ದರು. ಇದೀಗ ಆ ಬ್ಯಾಚ್ನ ಆರ್.ಕುಮಾರ್, ಸಿ.ಎಲ್.ಪ್ರಶಾಂತ್ ಮತ್ತು ಹ್ಯೂಬರ್ಟ್ ಡಿಸೋಜ ಅಧಿಕ ಅಂಕಗಳೊಂದಿಗೆ ತರಬೇತಿ ಪೂರ್ಣಗೊಳಿಸಿದ್ದಾರೆ. ಶೇ 54ರಷ್ಟು ಫಲಿತಾಂಶ ಬಂದಿದೆ. ಸಾಮಾನ್ಯವಾಗಿ ಶೇ 40ಕ್ಕಿಂತ ಅಧಿಕ ಉತ್ತೀರ್ಣ ಪ್ರಮಾಣ ಇಲ್ಲದಿರುವುದನ್ನು ನೋಡಿದರೆ ಮಂಗಳೂರಿನಲ್ಲಿ ಹೆಚ್ಚಿನ ಸಾಧನೆ ಆಗಿರುವುದು ಸ್ಪಷ್ಟ ಎಂದು ಹರ್ಷ ವ್ಯಕ್ತಪಡಿಸಿದರು.<br /> <br /> ಈ ಪರೀಕ್ಷೆ 1986ರಲ್ಲಷ್ಟೇ ಆರಂಭವಾಗಿದ್ದು, ಭಾರತಕ್ಕೆ 1990ರಲ್ಲಿ ಕಾಲಿಟ್ಟಿತು. ಇದೊಂದು ಅಂತರರಾಷ್ಟ್ರೀಯ ಮಾನದಂಡದ ಪರೀಕ್ಷೆ. ಮೌಲ್ಯಮಾಪನ ಸಹ ಅಂತರರಾಷ್ಟ್ರೀಯ ಮಟ್ಟದಲ್ಲೇ ನಡೆಯುತ್ತದೆ. ಹೀಗಾಗಿ ಹಡಗಿನ ಮೂಲಕ ವ್ಯಾಪಾರ ವಹಿವಾಟು ನಡೆಸುವ ಕಂಪೆನಿಗಳು, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ತರಬೇತಿ ಪಡೆದವರನ್ನು ನೇಮಿಸಿಕೊಳ್ಳುವುದಕ್ಕೆ ಅವಕಾಶ ಇದೆ ಎಂದರು.<br /> <br /> ಎನ್ಎಂಪಿಟಿ ಹಡಗು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಸ್.ಪಿಳ್ಳೈ, ಕೆಸಿಸಿಐ ಅಧ್ಯಕ್ಷೆ ಲತಾ ಆರ್.ಕಿಣಿ, ಉಪಾಧ್ಯಕ್ಷ ಮೊಹಮ್ಮದ್ ಅಮೀನ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ವಾಣಿಜ್ಯ ಹಡಗುಗಳನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ ನಡೆಯುವ ಐಸಿಎಸ್(ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ಷಿಪ್ ಬ್ರೋಕರ್ಸ್) ತರಬೇತಿ ಕಾರ್ಯಕ್ರಮ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮೊದಲ ಬ್ಯಾಚ್ನ ಮೂವರು ಅಭ್ಯರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.<br /> <br /> ಕೆನರಾ ವಾಣಿಜ್ಯೋದ್ಯಮ ಸಂಘದ(ಕೆಸಿಸಿಐ) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಹಡಗು ನಿರ್ವಹಣಾ ತರಬೇತುದಾರ ಕ್ಯಾಪ್ಟನ್ ಜೆ.ಪಿ.ಮಿನೇಜಸ್ ಅವರು ಅತಿ ಹೆಚ್ಚಿನ ಅಂಕದೊಂದಿಗೆ ತರಬೇತಿ ಪೂರೈಸಿದವರನ್ನು ಸನ್ಮಾನಿಸಿದರು.<br /> <br /> ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ಏಳು ಪ್ರಶ್ನೆಪತ್ರಿಕೆಗಳಿರುವ ಅತ್ಯಂತ ಕ್ಲಿಷ್ಟಕರ ಪರೀಕ್ಷೆ. ಜಗತ್ತಿನ 85 ಸ್ಥಳಗಳಲ್ಲಿ ಮಾತ್ರ ಐಸಿಎಸ್ ತರಬೇತಿ/ಪರೀಕ್ಷಾ ಕೇಂದ್ರಗಳಿವೆ. ಇವುಗಳಲ್ಲಿ ಮಂಗಳೂರು ಸಹ ಒಂದು. 2ರಿಂದ 3 ವರ್ಷದೊಳಗೆ ಈ ಕೋರ್ಸ್ ಪೂರ್ಣಗೊಳಿಸಬಹುದಾಗಿದ್ದು, ಭಾರಿ ಉದ್ಯೋಗ ಅವಕಾಶವೇ ಇದೆ ಎಂದರು.<br /> <br /> ವಾಣಿಜ್ಯ ಹಡಗುಗಳನ್ನು ನಿರ್ವಹಿಸಿದ ಮೂರು ವರ್ಷಗಳ ಅನುಭವ ಅಭ್ಯರ್ಥಿಗೆ ಇರಬೇಕು. ಅತ್ಯಂತ ಕಷ್ಟಕರವಾದ ಈ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಕನಿಷ್ಠ ಮಾಸಿಕ 30 ಸಾವಿರ ರೂಪಾಯಿಯಿಂದ ಲಕ್ಷವರೆಗೂ ಅಧಿಕ ವೇತನದ ಕೆಲಸ ಪಡೆಯುವ ಅವಕಾಶವಿದೆ. ವಿದೇಶದಲ್ಲಿ ಈ ತರಬೇತಿ ಪಡೆದವರಿಗೆ ಅಧಿಕ ಬೇಡಿಕೆ ಇದೆ ಎಂದು ಗಮನ ಸೆಳೆದರು.<br /> <br /> ಈ ತರಬೇತಿಗೆ ನೋಂದಣಿ ಶುಲ್ಕ ಕೇವಲ 4 ಸಾವಿರ ರೂಪಾಯಿ, ಪ್ರತಿ ಪ್ರಶ್ನೆಪತ್ರಿಕೆಗೆ 2 ಸಾವಿರ ರೂಪಾಯಿ ಶುಲ್ಕವಿದೆ. ಕನಿಷ್ಠ ಎಸ್ಎಸ್ಎಲ್ಸಿ ತೇರ್ಗಡೆ ಆದವರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.<br /> <br /> ಮಂಗಳೂರಿನಲ್ಲಿ 2009-10ನೇ ಸಾಲಿನಿಂದ ಐಸಿಎಸ್ ತರಬೇತಿ ಕಾರ್ಯಕ್ರಮ ಆರಂಭವಾಗಿದೆ. ಮೊದಲ ಬ್ಯಾಚ್ನಲ್ಲಿ 16 ಮಂದಿ ಇದ್ದರು. ಇದೀಗ ಆ ಬ್ಯಾಚ್ನ ಆರ್.ಕುಮಾರ್, ಸಿ.ಎಲ್.ಪ್ರಶಾಂತ್ ಮತ್ತು ಹ್ಯೂಬರ್ಟ್ ಡಿಸೋಜ ಅಧಿಕ ಅಂಕಗಳೊಂದಿಗೆ ತರಬೇತಿ ಪೂರ್ಣಗೊಳಿಸಿದ್ದಾರೆ. ಶೇ 54ರಷ್ಟು ಫಲಿತಾಂಶ ಬಂದಿದೆ. ಸಾಮಾನ್ಯವಾಗಿ ಶೇ 40ಕ್ಕಿಂತ ಅಧಿಕ ಉತ್ತೀರ್ಣ ಪ್ರಮಾಣ ಇಲ್ಲದಿರುವುದನ್ನು ನೋಡಿದರೆ ಮಂಗಳೂರಿನಲ್ಲಿ ಹೆಚ್ಚಿನ ಸಾಧನೆ ಆಗಿರುವುದು ಸ್ಪಷ್ಟ ಎಂದು ಹರ್ಷ ವ್ಯಕ್ತಪಡಿಸಿದರು.<br /> <br /> ಈ ಪರೀಕ್ಷೆ 1986ರಲ್ಲಷ್ಟೇ ಆರಂಭವಾಗಿದ್ದು, ಭಾರತಕ್ಕೆ 1990ರಲ್ಲಿ ಕಾಲಿಟ್ಟಿತು. ಇದೊಂದು ಅಂತರರಾಷ್ಟ್ರೀಯ ಮಾನದಂಡದ ಪರೀಕ್ಷೆ. ಮೌಲ್ಯಮಾಪನ ಸಹ ಅಂತರರಾಷ್ಟ್ರೀಯ ಮಟ್ಟದಲ್ಲೇ ನಡೆಯುತ್ತದೆ. ಹೀಗಾಗಿ ಹಡಗಿನ ಮೂಲಕ ವ್ಯಾಪಾರ ವಹಿವಾಟು ನಡೆಸುವ ಕಂಪೆನಿಗಳು, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ತರಬೇತಿ ಪಡೆದವರನ್ನು ನೇಮಿಸಿಕೊಳ್ಳುವುದಕ್ಕೆ ಅವಕಾಶ ಇದೆ ಎಂದರು.<br /> <br /> ಎನ್ಎಂಪಿಟಿ ಹಡಗು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಸ್.ಪಿಳ್ಳೈ, ಕೆಸಿಸಿಐ ಅಧ್ಯಕ್ಷೆ ಲತಾ ಆರ್.ಕಿಣಿ, ಉಪಾಧ್ಯಕ್ಷ ಮೊಹಮ್ಮದ್ ಅಮೀನ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>