<p><strong>ಧಾರವಾಡ:</strong> ಹಾಲಿ ಚಾಂಪಿಯನ್ ಬೆಂಗಳೂರು, ಮೈಸೂರು, ವಾರಂಗಲ್ ಹಾಗೂ ವಿಶಾಖಪಟ್ಟಣ ತಂಡಗಳು ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಎಲ್ಐಸಿ ದಕ್ಷಿಣ ಮಧ್ಯ ವಲಯ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ಸೆಮಿ ಫೈನಲ್ಗೆ ಮುನ್ನಡೆ ಪಡೆದಿವೆ.<br /> <br /> ಶುಕ್ರವಾರ ಬೆಳಿಗ್ಗೆ ನಡೆಯುವ ಸೆಮಿ ಫೈನಲ್ ಪಂದ್ಯಗಳಲ್ಲಿ ಬೆಂಗಳೂರು ತಂಡ ಮೈಸೂರನ್ನು ಹಾಗೂ ವಾರಂಗಲ್ ತಂಡ ವಿಶಾಖಪಟ್ಟಣವನ್ನು ಎದುರಿಸಲಿವೆ. ವಾರಂಗಲ್ ತಂಡ ಕಳೆದ ವರ್ಷ ರನ್ನರ್ಸ್ ಅಪ್ ಆಗಿತ್ತು.<br /> <br /> ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಅಂತರರರಾಷ್ಟ್ರೀಯ ಆಟಗಾರರಾದ ಟಿ.ಸಿ. ಶ್ರೀಶೇಖರ್ ಹಾಗೂ ಎಂ.ಎನ್. ವಿಕ್ರಂ ಅವರ ಆಕ್ರಮಣಕಾರಿ ಆಟದ ಪರಿಣಾಮ ಬೆಂಗಳೂರು ತಂಡ 25-8, 25-4, 25-8ರಿಂದ ಬೆಳಗಾವಿ ತಂಡವನ್ನು ಸುಲಭವಾಗಿ ಮಣಿಸಿತು. ಮೈಸೂರು ತಂಡಕ್ಕೂ 25-11, 25-9, 25-12ರಿಂದ ಕರೀಂನಗರ ತಂಡದ ವಿರುದ್ಧ ಗೆಲುವು ಸಾಧಿಸಲು ಹೆಚ್ಚಿನ ಬೆವರು ಹರಿಸುವ ಪ್ರಸಂಗ ಬರಲಿಲ್ಲ. <br /> <br /> ವಾರಂಗಲ್ ತಂಡ 25-10, 25-11, 25-16ರಿಂದ ಹೈದರಾಬಾದ್ ತಂಡದ ವಿರುದ್ಧ ಜಯಿಸಿದರೆ, ವಿಶಾಖಪಟ್ಟಣ ತಂಡ 25-19, 25-14, 25-11ರಿಂದ ಉಡುಪಿ ತಂಡವನ್ನು ಪರಾಭವಗೊಳಿಸಿ ಸೆಮಿ ಫೈನಲ್ ಪ್ರವೇಶಿಸಿತು. ಮೂರನೇ ನೇರ ಸೋಲು ಅನುಭವಿಸಿದ ಆತಿಥೇಯ ಧಾರವಾಡ ತಂಡಕ್ಕೆ ನಾಕೌಟ್ ಹಂತ ತಲುಪಲು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಹಾಲಿ ಚಾಂಪಿಯನ್ ಬೆಂಗಳೂರು, ಮೈಸೂರು, ವಾರಂಗಲ್ ಹಾಗೂ ವಿಶಾಖಪಟ್ಟಣ ತಂಡಗಳು ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಎಲ್ಐಸಿ ದಕ್ಷಿಣ ಮಧ್ಯ ವಲಯ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಗುರುವಾರ ಸೆಮಿ ಫೈನಲ್ಗೆ ಮುನ್ನಡೆ ಪಡೆದಿವೆ.<br /> <br /> ಶುಕ್ರವಾರ ಬೆಳಿಗ್ಗೆ ನಡೆಯುವ ಸೆಮಿ ಫೈನಲ್ ಪಂದ್ಯಗಳಲ್ಲಿ ಬೆಂಗಳೂರು ತಂಡ ಮೈಸೂರನ್ನು ಹಾಗೂ ವಾರಂಗಲ್ ತಂಡ ವಿಶಾಖಪಟ್ಟಣವನ್ನು ಎದುರಿಸಲಿವೆ. ವಾರಂಗಲ್ ತಂಡ ಕಳೆದ ವರ್ಷ ರನ್ನರ್ಸ್ ಅಪ್ ಆಗಿತ್ತು.<br /> <br /> ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಅಂತರರರಾಷ್ಟ್ರೀಯ ಆಟಗಾರರಾದ ಟಿ.ಸಿ. ಶ್ರೀಶೇಖರ್ ಹಾಗೂ ಎಂ.ಎನ್. ವಿಕ್ರಂ ಅವರ ಆಕ್ರಮಣಕಾರಿ ಆಟದ ಪರಿಣಾಮ ಬೆಂಗಳೂರು ತಂಡ 25-8, 25-4, 25-8ರಿಂದ ಬೆಳಗಾವಿ ತಂಡವನ್ನು ಸುಲಭವಾಗಿ ಮಣಿಸಿತು. ಮೈಸೂರು ತಂಡಕ್ಕೂ 25-11, 25-9, 25-12ರಿಂದ ಕರೀಂನಗರ ತಂಡದ ವಿರುದ್ಧ ಗೆಲುವು ಸಾಧಿಸಲು ಹೆಚ್ಚಿನ ಬೆವರು ಹರಿಸುವ ಪ್ರಸಂಗ ಬರಲಿಲ್ಲ. <br /> <br /> ವಾರಂಗಲ್ ತಂಡ 25-10, 25-11, 25-16ರಿಂದ ಹೈದರಾಬಾದ್ ತಂಡದ ವಿರುದ್ಧ ಜಯಿಸಿದರೆ, ವಿಶಾಖಪಟ್ಟಣ ತಂಡ 25-19, 25-14, 25-11ರಿಂದ ಉಡುಪಿ ತಂಡವನ್ನು ಪರಾಭವಗೊಳಿಸಿ ಸೆಮಿ ಫೈನಲ್ ಪ್ರವೇಶಿಸಿತು. ಮೂರನೇ ನೇರ ಸೋಲು ಅನುಭವಿಸಿದ ಆತಿಥೇಯ ಧಾರವಾಡ ತಂಡಕ್ಕೆ ನಾಕೌಟ್ ಹಂತ ತಲುಪಲು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>