<p>ರಾಷ್ಟ್ರದ ವಾಸ್ತುಶಿಲ್ಪಿ ವಿದ್ಯಾರ್ಥಿಗಳಿಗಾಗಿ ಈಚೆಗೆ ನಗರದಲ್ಲಿ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಾರತೀಯ ವಾಸ್ತುಶಿಲ್ಪ ಸಂಸ್ಥೆ, ವಾಸ್ತುಶಿಲ್ಪ ವಿದ್ಯಾರ್ಥಿಗಳ ಸಂಘಟನೆಯು ಜಂಟಿಯಾಗಿ ಪಿಡಿಲೈಟ್ಗೋದ್ರೆಜ್, ಗ್ರೌಂಡ್ಫೇಸ್ ಹಾಗೂ ಇಂಟರ್ಫೇಸ್ ಜೊತೆಗೂಡಿ ಆಯೋಜಿಸಲಾಗಿತ್ತು. <br /> <br /> ಕೋಲ್ಕತ್ತ, ನವದೆಹಲಿ ಹಾಗೂ ಪುಣೆಗಳಲ್ಲಿ, ಪೂರ್ವ, ಉತ್ತರ ಹಾಗೂ ಪಶ್ಚಿಮವಯಲದ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಈಚೆಗೆ ಅಂತಿಮ ಹಣಾಹಣಿಗೆ ಸಿದ್ಧಪಡಿಸಲಾಗಿತ್ತು.<br /> ಉತ್ತಮ ಆರ್ಚುಮೆನ್ ರಸಪ್ರಶ್ನೆ ಕಾರ್ಯಕ್ರಮ ಆರಂಭವಾಗಿ ಒಂದು ದಶಕವೇ ಕಳೆದಿದೆ. <br /> <br /> ದಶಕದ ಸಂಭ್ರಮದಲ್ಲಿರುವುದರಿಂದ ಈ ಸಲ ವಾಸ್ತುಶಿಲ್ಪಿಗಳಿಗಾಗಿಯೂ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು. ಎರಡನೆಯ ಸ್ಥಾನ ಗಳಿಸಿದವರಿಗೆ 25 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.<br /> <br /> ವಿದ್ಯಾರ್ಥಿಗಳ ವಿಭಾಗದಲ್ಲಿ ಕಳೆದ ವರ್ಷದ ವಿಜೇತರಾದ ಪುಣೆ ಪಿವಿಪಿಸಿಒಎ ಸಂಸ್ಥೆಯ ಅರ್ಣವ್ ಗರ್ದೆ ಹಾಗೂ ಅಶ್ವಿನ್ಜೋಷಿ ಈ ವರ್ಷವೂ ಗೆಲುವಿನ ಪಟ್ಟವನ್ನು ಬಿಟ್ಟುಕೊಡಲಿಲ್ಲ. <br /> <br /> ವಾಸ್ತುಶಿಲ್ಪಿಗಳ ವಿಭಾಗದಲ್ಲಿ ಮಾಧುರಿ ರಾವ್ ಹಾಗೂ ವಿವೇಕ್ ಚಂದ್ರನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರದ ವಾಸ್ತುಶಿಲ್ಪಿ ವಿದ್ಯಾರ್ಥಿಗಳಿಗಾಗಿ ಈಚೆಗೆ ನಗರದಲ್ಲಿ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಾರತೀಯ ವಾಸ್ತುಶಿಲ್ಪ ಸಂಸ್ಥೆ, ವಾಸ್ತುಶಿಲ್ಪ ವಿದ್ಯಾರ್ಥಿಗಳ ಸಂಘಟನೆಯು ಜಂಟಿಯಾಗಿ ಪಿಡಿಲೈಟ್ಗೋದ್ರೆಜ್, ಗ್ರೌಂಡ್ಫೇಸ್ ಹಾಗೂ ಇಂಟರ್ಫೇಸ್ ಜೊತೆಗೂಡಿ ಆಯೋಜಿಸಲಾಗಿತ್ತು. <br /> <br /> ಕೋಲ್ಕತ್ತ, ನವದೆಹಲಿ ಹಾಗೂ ಪುಣೆಗಳಲ್ಲಿ, ಪೂರ್ವ, ಉತ್ತರ ಹಾಗೂ ಪಶ್ಚಿಮವಯಲದ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಈಚೆಗೆ ಅಂತಿಮ ಹಣಾಹಣಿಗೆ ಸಿದ್ಧಪಡಿಸಲಾಗಿತ್ತು.<br /> ಉತ್ತಮ ಆರ್ಚುಮೆನ್ ರಸಪ್ರಶ್ನೆ ಕಾರ್ಯಕ್ರಮ ಆರಂಭವಾಗಿ ಒಂದು ದಶಕವೇ ಕಳೆದಿದೆ. <br /> <br /> ದಶಕದ ಸಂಭ್ರಮದಲ್ಲಿರುವುದರಿಂದ ಈ ಸಲ ವಾಸ್ತುಶಿಲ್ಪಿಗಳಿಗಾಗಿಯೂ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು. ಎರಡನೆಯ ಸ್ಥಾನ ಗಳಿಸಿದವರಿಗೆ 25 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.<br /> <br /> ವಿದ್ಯಾರ್ಥಿಗಳ ವಿಭಾಗದಲ್ಲಿ ಕಳೆದ ವರ್ಷದ ವಿಜೇತರಾದ ಪುಣೆ ಪಿವಿಪಿಸಿಒಎ ಸಂಸ್ಥೆಯ ಅರ್ಣವ್ ಗರ್ದೆ ಹಾಗೂ ಅಶ್ವಿನ್ಜೋಷಿ ಈ ವರ್ಷವೂ ಗೆಲುವಿನ ಪಟ್ಟವನ್ನು ಬಿಟ್ಟುಕೊಡಲಿಲ್ಲ. <br /> <br /> ವಾಸ್ತುಶಿಲ್ಪಿಗಳ ವಿಭಾಗದಲ್ಲಿ ಮಾಧುರಿ ರಾವ್ ಹಾಗೂ ವಿವೇಕ್ ಚಂದ್ರನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>