<p><strong>ಚಳ್ಳಕೆರೆ:</strong> ತಾಲ್ಲೂಕಿನ ನಗರಂಗೆರೆ ಸಮೀಪ ಕಾರ್ಖಾನೆ ಆವರಣದಲ್ಲಿ ಮಲಗಿದ್ದವರ ಮೇಲೆ ಡೋಜರ್ ವಾಹನ ಹರಿದು ಮೂವರು ಸ್ಥಳದಲ್ಲೇ ಅಸುನೀಗಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. <br /> <br /> ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬಾಲದೇವರ ಹಟ್ಟಿಯ ರಾಜಣ್ಣ(35), ಕೃಷ್ಣಮೂರ್ತಿ(25) ಹಾಗೂ ತಿಮ್ಮಪ್ಪನ ಹಟ್ಟಿ ಗ್ರಾಮದ ಜಗದೀಶ್ (22) ಮೃತಪಟ್ಟವರು. ಇಲ್ಲಿನ ಗಾಯತ್ರಿ ಬಯೋಫಿಲ್ಸ್ ಕಾರ್ಖಾನೆ ಪಕ್ಕದಲ್ಲಿ ಮಲಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.<br /> <br /> ಮೃತರು ಹುಳಿಯಾರಿನಿಂದ ಮರದ ಪುಡಿಯನ್ನು ಲಾರಿಯಲ್ಲಿ ತುಂಬಿಕೊಂಡು ನಗರಂಗೆರೆಯ ಕಾರ್ಖಾನೆಗೆ ಬಂದಿದ್ದರು. ಮಧ್ಯರಾತ್ರಿ ಬಂದವರು ಗಾಯತ್ರಿ ಫ್ಯಾಕ್ಟರಿಯ ಪಕ್ಕದಲ್ಲೇ ಮಲಗಿದ್ದರು. <br /> ಮುಂಜಾನೆ ಕಾರ್ಖಾನೆಯ ಡೋಜರ್ ವಾಹನ ಚಾಲಕ ಮಲಗಿದ್ದವರನ್ನು ಗಮನಿಸದೇ ವಾಹನ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.<br /> <br /> ಲಾರಿಯಲ್ಲಿ ಬಂದಿದ್ದ ನಾಲ್ವರಲ್ಲಿ ಚಾಲಕ ರಾಜಣ್ಣ ಸೇರಿದಂತೆ 3ಜನ ಅಕ್ಕಪಕ್ಕದಲ್ಲಿ ಮಲಗಿದ್ದರು. ಉಳಿದಂತೆ ಚಿತ್ತಪ್ಪ ಎಂಬುವರು ಸ್ವಲ್ಪ ದೂರದಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಳ್ಳಕೆರೆ ಠಾಣೆಯಲ್ಲಿ ಚಾಲಕ ವಿರುದ್ದ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong> ತಾಲ್ಲೂಕಿನ ನಗರಂಗೆರೆ ಸಮೀಪ ಕಾರ್ಖಾನೆ ಆವರಣದಲ್ಲಿ ಮಲಗಿದ್ದವರ ಮೇಲೆ ಡೋಜರ್ ವಾಹನ ಹರಿದು ಮೂವರು ಸ್ಥಳದಲ್ಲೇ ಅಸುನೀಗಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. <br /> <br /> ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಬಾಲದೇವರ ಹಟ್ಟಿಯ ರಾಜಣ್ಣ(35), ಕೃಷ್ಣಮೂರ್ತಿ(25) ಹಾಗೂ ತಿಮ್ಮಪ್ಪನ ಹಟ್ಟಿ ಗ್ರಾಮದ ಜಗದೀಶ್ (22) ಮೃತಪಟ್ಟವರು. ಇಲ್ಲಿನ ಗಾಯತ್ರಿ ಬಯೋಫಿಲ್ಸ್ ಕಾರ್ಖಾನೆ ಪಕ್ಕದಲ್ಲಿ ಮಲಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.<br /> <br /> ಮೃತರು ಹುಳಿಯಾರಿನಿಂದ ಮರದ ಪುಡಿಯನ್ನು ಲಾರಿಯಲ್ಲಿ ತುಂಬಿಕೊಂಡು ನಗರಂಗೆರೆಯ ಕಾರ್ಖಾನೆಗೆ ಬಂದಿದ್ದರು. ಮಧ್ಯರಾತ್ರಿ ಬಂದವರು ಗಾಯತ್ರಿ ಫ್ಯಾಕ್ಟರಿಯ ಪಕ್ಕದಲ್ಲೇ ಮಲಗಿದ್ದರು. <br /> ಮುಂಜಾನೆ ಕಾರ್ಖಾನೆಯ ಡೋಜರ್ ವಾಹನ ಚಾಲಕ ಮಲಗಿದ್ದವರನ್ನು ಗಮನಿಸದೇ ವಾಹನ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.<br /> <br /> ಲಾರಿಯಲ್ಲಿ ಬಂದಿದ್ದ ನಾಲ್ವರಲ್ಲಿ ಚಾಲಕ ರಾಜಣ್ಣ ಸೇರಿದಂತೆ 3ಜನ ಅಕ್ಕಪಕ್ಕದಲ್ಲಿ ಮಲಗಿದ್ದರು. ಉಳಿದಂತೆ ಚಿತ್ತಪ್ಪ ಎಂಬುವರು ಸ್ವಲ್ಪ ದೂರದಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಳ್ಳಕೆರೆ ಠಾಣೆಯಲ್ಲಿ ಚಾಲಕ ವಿರುದ್ದ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>