<p>ಕಲಾತ್ಮಕ ಚಿತ್ರಗಳನ್ನು ಹಳ್ಳಿ, ಹಳ್ಳಿಗಳಿಗೆ ತಲುಪಿಸುವ ಸನ್ನಾಹ ನಡೆಯುತ್ತಿದ್ದರೆ, ಇತ್ತ ವ್ಯಾಪಾರಿ ಚಿತ್ರಗಳೂ ಈ ಟೂರಿಂಗ್ ಕಾರ್ಯಕ್ರಮಕ್ಕೆ ಅಣಿಯಾಗುತ್ತಿವೆ. ಈಗ ಆ ಸರದಿ ಪ್ರಶಾಂತ್ ರಾಜ್ ನಿರ್ದೇಶನದ `ವಿಜಲ್'ಗೆ. ಚಿರಂಜೀವಿ ಸರ್ಜಾ, ಪ್ರಣೀತಾ ನಟನೆಯ `ವಿಜಲ್'ನ ಸೀಟಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮೊಳಗಿಸಲು ಚಿತ್ರ ತಂಡ ಮುಂದಾಗಿದೆ. ಅಭಿಯಾನಕ್ಕಾಗಿ ಶೀಘ್ರವೇ ಚಿತ್ರತಂಡ ಪ್ರವಾಸ ಕೈಗೊಳ್ಳಲಿದೆಯಂತೆ.<br /> <br /> `ವಿಜಲ್'ನ ಮೊದಲ ಪ್ರತಿ ಸಿದ್ಧಪಡಿಸುವಾಗ ಎದುರಾದ ಸವಾಲಿನ ಬಗ್ಗೆ ಮಾಹಿತಿ ನೀಡುತ್ತಲೇ ಟೂರಿಂಗ್ ಅಭಿಯಾನದ ಯೋಜನೆಯನ್ನು ನಿರ್ದೇಶಕ ಪ್ರಶಾಂತ್ ರಾಜ್ ವಿವರಿಸಿದರು.<br /> <br /> ಮಲ್ಟಿಫ್ಲೆಕ್ಸ್ಗಳಲ್ಲಿ `ವಿಜಲ್'ನ ಪ್ರೊಮೊಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎನ್ನುವ ಸಂತಸ ಅವರದ್ದು. ಚಿತ್ರ ಹಿಂದಿಗೆ ರೀಮೇಕ್ ಆಗುವ ಸಾಧ್ಯತೆ ಬಗ್ಗೆಯೂ ಸುಳಿವು ನೀಡಿ, ಆ ಚಿತ್ರವನ್ನೂ ತಾವೇ ನಿರ್ದೇಶಿಸುವ ಅವಕಾಶ ಒದಗಿ ಬಂದಿರುವುದಾಗಿ ಹೇಳಿಕೊಂಡರು.<br /> <br /> `ವಿಜಲ್'ನ ನಾಲ್ಕು ಹಾಡುಗಳನ್ನು ಪ್ರದರ್ಶಿಸುವ ಮೂಲಕ ಎರಡು ತಿಂಗಳ ಕಾಲ ಶಬ್ದ ಮತ್ತು ಸಂಗೀತದ ಕೆಲಸಕ್ಕೆ ಪರಿಶ್ರಮ ಹಾಕಿರುವುದಾಗಿ ಅವರು ಒತ್ತಿ ಹೇಳಿದರು. ಚಿತ್ರೀಕರಣ ಮುಗಿದ ಮೂರು ತಿಂಗಳ ನಂತರ ಮೊದಲ ಪ್ರತಿ ಸಿದ್ಧವಾಗಿದೆ. ಈ ವೇಳೆಗಾಗಲೇ ತೆರೆಯಲ್ಲಿ ಮೊಳಗಬೇಕಾಗಿದ್ದ `ವಿಜಲ್', ಚಿತ್ರಮಂದಿರದ ಕೊರತೆಯಿಂದ ಜೂನ್ ಮೊದಲ ಅಥವಾ ಎರಡನೇ ವಾರ ಬಿಡುಗಡೆಯಾಗಲಿದೆಯಂತೆ. <br /> <br /> ಚಿತ್ರಕ್ಕೆ ಒಬ್ಬರೇ ನಿರ್ದೇಶಕರಾದರೂ ನಾಯಕ ಚಿರಂಜೀವಿ ಸರ್ಜಾ ಅವರಿಗೆ ಮಾತ್ರ ಮೂವರು ನಿರ್ದೇಶಕರಿಂದ ಮಾರ್ಗದರ್ಶನ ಪಡೆದ ಅನುಭವ. ಈ ಚಿತ್ರ ನನಗೆ ಅದೃಷ್ಟದಂತೆ ಎಂದ ಚಿರು, ಚಿತ್ರದಲ್ಲಿ ನಟಿಸಿರುವ ನಿರ್ದೇಶಕರಾದ ಗುರುಪ್ರಸಾದ್ ಮತ್ತು ಗುರುದತ್ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.<br /> <br /> `ನನಗೆ ಈ ಚಿತ್ರ ಲಕ್ಕಿ' ಎಂದಷ್ಟೇ ಹೇಳಿ ಮಾತು ನಿಲ್ಲಿಸಿದ ಚಿರಂಜೀವಿ ಸರ್ಜಾರ ಮಾತನ್ನು ಪೂರ್ಣಗೊಳಿಸಿದ್ದು ನಿರ್ದೇಶಕ ಗುರುಪ್ರಸಾದ್. ಇಲ್ಲಿಯವರೆಗೂ ಚಿರಂಜೀವಿಯ ಪಾತ್ರಗಳು ಏಕತಾನತೆಯಂತಿವೆ. ಈ ಚಿತ್ರದಲ್ಲಿ ಹೊಸ ರೀತಿಯಲ್ಲಿ ಪಾತ್ರ ಪ್ರವೇಶಿಸುವ ಮೂಲಕ ಎಲ್ಲ ಪಾತ್ರಗಳನ್ನೂ ನಿರ್ವಹಿಸಬಲ್ಲೆ ಎನ್ನುವಷ್ಟು ಶಕ್ತರಾಗಿದ್ದಾರೆ ಎಂಬುದು ಗುರುಪ್ರಸಾದ್ ಹೊಗಳಿಕೆ. ಚಿತ್ರದಲ್ಲಿ ನಟಿಸುವುದಷ್ಟೇ ಅಲ್ಲದೆ ಸಂಭಾಷಣೆಯನ್ನೂ ಗುರುಪ್ರಸಾದ್ ಬರೆದಿದ್ದಾರೆ. ಅಕ್ಷರಗಳನ್ನು ಮುದ್ದಿಸಿ ಮಾತುಗಳನ್ನು ಪೋಣಿಸಲು ಅವರಿಗೆ ಎರಡು ತಿಂಗಳು ಬೇಕಾಯಿತಂತೆ.<br /> <br /> ಎಲ್ಲರಿಂದಲೂ ಮೆಚ್ಚುಗೆ ಸಂದದ್ದು ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಅವರಿಗೆ. ಅವರ ಕ್ಯಾಮೆರಾ ಚಿತ್ರದಲ್ಲಿ ಚಲನಶೀಲವಾಗಿದೆಯಂತೆ. ನಿರ್ಮಾಪಕರಾದ ನವೀನ್, ಪ್ರಸಾದ್, ನಟ ಗುರುದತ್ ಇತರರು ಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಾತ್ಮಕ ಚಿತ್ರಗಳನ್ನು ಹಳ್ಳಿ, ಹಳ್ಳಿಗಳಿಗೆ ತಲುಪಿಸುವ ಸನ್ನಾಹ ನಡೆಯುತ್ತಿದ್ದರೆ, ಇತ್ತ ವ್ಯಾಪಾರಿ ಚಿತ್ರಗಳೂ ಈ ಟೂರಿಂಗ್ ಕಾರ್ಯಕ್ರಮಕ್ಕೆ ಅಣಿಯಾಗುತ್ತಿವೆ. ಈಗ ಆ ಸರದಿ ಪ್ರಶಾಂತ್ ರಾಜ್ ನಿರ್ದೇಶನದ `ವಿಜಲ್'ಗೆ. ಚಿರಂಜೀವಿ ಸರ್ಜಾ, ಪ್ರಣೀತಾ ನಟನೆಯ `ವಿಜಲ್'ನ ಸೀಟಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮೊಳಗಿಸಲು ಚಿತ್ರ ತಂಡ ಮುಂದಾಗಿದೆ. ಅಭಿಯಾನಕ್ಕಾಗಿ ಶೀಘ್ರವೇ ಚಿತ್ರತಂಡ ಪ್ರವಾಸ ಕೈಗೊಳ್ಳಲಿದೆಯಂತೆ.<br /> <br /> `ವಿಜಲ್'ನ ಮೊದಲ ಪ್ರತಿ ಸಿದ್ಧಪಡಿಸುವಾಗ ಎದುರಾದ ಸವಾಲಿನ ಬಗ್ಗೆ ಮಾಹಿತಿ ನೀಡುತ್ತಲೇ ಟೂರಿಂಗ್ ಅಭಿಯಾನದ ಯೋಜನೆಯನ್ನು ನಿರ್ದೇಶಕ ಪ್ರಶಾಂತ್ ರಾಜ್ ವಿವರಿಸಿದರು.<br /> <br /> ಮಲ್ಟಿಫ್ಲೆಕ್ಸ್ಗಳಲ್ಲಿ `ವಿಜಲ್'ನ ಪ್ರೊಮೊಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎನ್ನುವ ಸಂತಸ ಅವರದ್ದು. ಚಿತ್ರ ಹಿಂದಿಗೆ ರೀಮೇಕ್ ಆಗುವ ಸಾಧ್ಯತೆ ಬಗ್ಗೆಯೂ ಸುಳಿವು ನೀಡಿ, ಆ ಚಿತ್ರವನ್ನೂ ತಾವೇ ನಿರ್ದೇಶಿಸುವ ಅವಕಾಶ ಒದಗಿ ಬಂದಿರುವುದಾಗಿ ಹೇಳಿಕೊಂಡರು.<br /> <br /> `ವಿಜಲ್'ನ ನಾಲ್ಕು ಹಾಡುಗಳನ್ನು ಪ್ರದರ್ಶಿಸುವ ಮೂಲಕ ಎರಡು ತಿಂಗಳ ಕಾಲ ಶಬ್ದ ಮತ್ತು ಸಂಗೀತದ ಕೆಲಸಕ್ಕೆ ಪರಿಶ್ರಮ ಹಾಕಿರುವುದಾಗಿ ಅವರು ಒತ್ತಿ ಹೇಳಿದರು. ಚಿತ್ರೀಕರಣ ಮುಗಿದ ಮೂರು ತಿಂಗಳ ನಂತರ ಮೊದಲ ಪ್ರತಿ ಸಿದ್ಧವಾಗಿದೆ. ಈ ವೇಳೆಗಾಗಲೇ ತೆರೆಯಲ್ಲಿ ಮೊಳಗಬೇಕಾಗಿದ್ದ `ವಿಜಲ್', ಚಿತ್ರಮಂದಿರದ ಕೊರತೆಯಿಂದ ಜೂನ್ ಮೊದಲ ಅಥವಾ ಎರಡನೇ ವಾರ ಬಿಡುಗಡೆಯಾಗಲಿದೆಯಂತೆ. <br /> <br /> ಚಿತ್ರಕ್ಕೆ ಒಬ್ಬರೇ ನಿರ್ದೇಶಕರಾದರೂ ನಾಯಕ ಚಿರಂಜೀವಿ ಸರ್ಜಾ ಅವರಿಗೆ ಮಾತ್ರ ಮೂವರು ನಿರ್ದೇಶಕರಿಂದ ಮಾರ್ಗದರ್ಶನ ಪಡೆದ ಅನುಭವ. ಈ ಚಿತ್ರ ನನಗೆ ಅದೃಷ್ಟದಂತೆ ಎಂದ ಚಿರು, ಚಿತ್ರದಲ್ಲಿ ನಟಿಸಿರುವ ನಿರ್ದೇಶಕರಾದ ಗುರುಪ್ರಸಾದ್ ಮತ್ತು ಗುರುದತ್ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.<br /> <br /> `ನನಗೆ ಈ ಚಿತ್ರ ಲಕ್ಕಿ' ಎಂದಷ್ಟೇ ಹೇಳಿ ಮಾತು ನಿಲ್ಲಿಸಿದ ಚಿರಂಜೀವಿ ಸರ್ಜಾರ ಮಾತನ್ನು ಪೂರ್ಣಗೊಳಿಸಿದ್ದು ನಿರ್ದೇಶಕ ಗುರುಪ್ರಸಾದ್. ಇಲ್ಲಿಯವರೆಗೂ ಚಿರಂಜೀವಿಯ ಪಾತ್ರಗಳು ಏಕತಾನತೆಯಂತಿವೆ. ಈ ಚಿತ್ರದಲ್ಲಿ ಹೊಸ ರೀತಿಯಲ್ಲಿ ಪಾತ್ರ ಪ್ರವೇಶಿಸುವ ಮೂಲಕ ಎಲ್ಲ ಪಾತ್ರಗಳನ್ನೂ ನಿರ್ವಹಿಸಬಲ್ಲೆ ಎನ್ನುವಷ್ಟು ಶಕ್ತರಾಗಿದ್ದಾರೆ ಎಂಬುದು ಗುರುಪ್ರಸಾದ್ ಹೊಗಳಿಕೆ. ಚಿತ್ರದಲ್ಲಿ ನಟಿಸುವುದಷ್ಟೇ ಅಲ್ಲದೆ ಸಂಭಾಷಣೆಯನ್ನೂ ಗುರುಪ್ರಸಾದ್ ಬರೆದಿದ್ದಾರೆ. ಅಕ್ಷರಗಳನ್ನು ಮುದ್ದಿಸಿ ಮಾತುಗಳನ್ನು ಪೋಣಿಸಲು ಅವರಿಗೆ ಎರಡು ತಿಂಗಳು ಬೇಕಾಯಿತಂತೆ.<br /> <br /> ಎಲ್ಲರಿಂದಲೂ ಮೆಚ್ಚುಗೆ ಸಂದದ್ದು ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಅವರಿಗೆ. ಅವರ ಕ್ಯಾಮೆರಾ ಚಿತ್ರದಲ್ಲಿ ಚಲನಶೀಲವಾಗಿದೆಯಂತೆ. ನಿರ್ಮಾಪಕರಾದ ನವೀನ್, ಪ್ರಸಾದ್, ನಟ ಗುರುದತ್ ಇತರರು ಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>