<p><strong>ಬೆಂಗಳೂರು: </strong>ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘವು (ಅವೇಕ್) ವಿಡಿಯೊ ಸಂವಾದದ ಮೂಲಕ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಪ್ರಾರಂಭಿಸಿರುವ ‘ವಿಡಿಯೊ ಬ್ಯುಸಿನೆಸ್ ಕೌನ್ಸೆಲಿಂಗ್ ಸೆಂಟರ್’ಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.<br /> <br /> ತನ್ನ ‘ಅಮಿತ ಸಂಪನ್ಮೂಲ ಸೌಕರ್ಯ’ (ಔರ) ಕಾರ್ಯಕ್ರಮದಡಿಯಲ್ಲಿ ‘ಅವೇಕ್’, ನಗರ ಸೇರಿದಂತೆ ರಾಜ್ಯದ ಎಂಟು ಕಡೆ ಇಂತಹ ಸಲಹಾ ಕೇಂದ್ರಗಳನ್ನು ತೆರೆದಿದೆ.<br /> ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಾಜಿನಗರ ಕೈಗಾರಿಕಾ ಪ್ರದೇಶ (ಪ್ರಧಾನ ಕಚೇರಿ), ಬೆಂಗಳೂರು ದಕ್ಷಿಣ, ಬೆಳಗಾವಿ, ವಿಜಾಪುರ, ಗುಲ್ಬರ್ಗ, ಕೊಪ್ಪಳ, ಮಳವಳ್ಳಿ (ಮಂಡ್ಯ), ತುಮಕೂರು- ಗಳಲ್ಲಿರುವ ಅವೇಕ್ ಕಚೇರಿಗಳಲ್ಲಿ ಈ ಸಲಹಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.<br /> <br /> ಉದ್ಘಾಟನಾ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ಸಲಹಾ ಕೇಂದ್ರಗಳ ನಡುವೆ ವಿಡಿಯೊ ಸಂವಾದ ಸಮರ್ಪಕವಾಗಿ ನಡೆಯಲಿಲ್ಲ.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಡಾ.ರಾಜಕುಮಾರ್ ಖತ್ರಿ ಭಾಗವಹಿಸಿದ್ದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ‘ಅವೇಕ್ ಬಜಾರ್’ ಅನ್ನು ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘವು (ಅವೇಕ್) ವಿಡಿಯೊ ಸಂವಾದದ ಮೂಲಕ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಪ್ರಾರಂಭಿಸಿರುವ ‘ವಿಡಿಯೊ ಬ್ಯುಸಿನೆಸ್ ಕೌನ್ಸೆಲಿಂಗ್ ಸೆಂಟರ್’ಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.<br /> <br /> ತನ್ನ ‘ಅಮಿತ ಸಂಪನ್ಮೂಲ ಸೌಕರ್ಯ’ (ಔರ) ಕಾರ್ಯಕ್ರಮದಡಿಯಲ್ಲಿ ‘ಅವೇಕ್’, ನಗರ ಸೇರಿದಂತೆ ರಾಜ್ಯದ ಎಂಟು ಕಡೆ ಇಂತಹ ಸಲಹಾ ಕೇಂದ್ರಗಳನ್ನು ತೆರೆದಿದೆ.<br /> ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜಾಜಿನಗರ ಕೈಗಾರಿಕಾ ಪ್ರದೇಶ (ಪ್ರಧಾನ ಕಚೇರಿ), ಬೆಂಗಳೂರು ದಕ್ಷಿಣ, ಬೆಳಗಾವಿ, ವಿಜಾಪುರ, ಗುಲ್ಬರ್ಗ, ಕೊಪ್ಪಳ, ಮಳವಳ್ಳಿ (ಮಂಡ್ಯ), ತುಮಕೂರು- ಗಳಲ್ಲಿರುವ ಅವೇಕ್ ಕಚೇರಿಗಳಲ್ಲಿ ಈ ಸಲಹಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.<br /> <br /> ಉದ್ಘಾಟನಾ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ಸಲಹಾ ಕೇಂದ್ರಗಳ ನಡುವೆ ವಿಡಿಯೊ ಸಂವಾದ ಸಮರ್ಪಕವಾಗಿ ನಡೆಯಲಿಲ್ಲ.ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಡಾ.ರಾಜಕುಮಾರ್ ಖತ್ರಿ ಭಾಗವಹಿಸಿದ್ದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ‘ಅವೇಕ್ ಬಜಾರ್’ ಅನ್ನು ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>