<p><strong>ಮುಂಬೈ (ಪಿಟಿಐ):</strong> ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಕೇಂದ್ರವಷ್ಟೇ ಅಲ್ಲ, ರಾಜ್ಯ ಸರ್ಕಾರಗಳೂ ದೂರದೃಷ್ಟಿಯ ವಿತ್ತೀಯ ಧೋರಣೆ ಅನುಸರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದೆ.<br /> <br /> ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಣ ಮತ್ತು ಹಣಕಾಸು ವಹಿವಾಟು ಕುರಿತ 14ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಆರ್ಬಿಐ ಉಪ ಗವರ್ನರ್ ಸುಬೀರ್ ಗೋಕರ್ಣ, ನಿಯಮ ಆಧಾರಿತ ವಿಧಾನ ಅನುಸರಿಸುವ ಕ್ರಮಕ್ಕೆ ಮರಳುವ ವಿಚಾರದಲ್ಲಿ ಸರ್ಕಾರಗಳು ಬದ್ಧತೆ ತೋರಬೇಕಾಗಿರುವುದನ್ನು ಈ ವರ್ಷದ ಮುಂಗಡಪತ್ರದಲ್ಲಿ ಆದ್ಯತೆ ನೀಡಲಾಗಿದೆ ಎಂದರು.<br /> <br /> ಈ ಸಾಲಿನ ಬಜೆಟ್ನಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೂ, `ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದಲ್ಲಿನ ವಿತ್ತೀಯ ಕೊರತೆ ಯನ್ನು ಶೇ 5.9ರಿಂದ ಶೇ 5.1ಕ್ಕೆ ತಗ್ಗಿಸುವ ಅಗತ್ಯವಿದೆ~ ಎಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಕೇಂದ್ರವಷ್ಟೇ ಅಲ್ಲ, ರಾಜ್ಯ ಸರ್ಕಾರಗಳೂ ದೂರದೃಷ್ಟಿಯ ವಿತ್ತೀಯ ಧೋರಣೆ ಅನುಸರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದೆ.<br /> <br /> ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಣ ಮತ್ತು ಹಣಕಾಸು ವಹಿವಾಟು ಕುರಿತ 14ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಆರ್ಬಿಐ ಉಪ ಗವರ್ನರ್ ಸುಬೀರ್ ಗೋಕರ್ಣ, ನಿಯಮ ಆಧಾರಿತ ವಿಧಾನ ಅನುಸರಿಸುವ ಕ್ರಮಕ್ಕೆ ಮರಳುವ ವಿಚಾರದಲ್ಲಿ ಸರ್ಕಾರಗಳು ಬದ್ಧತೆ ತೋರಬೇಕಾಗಿರುವುದನ್ನು ಈ ವರ್ಷದ ಮುಂಗಡಪತ್ರದಲ್ಲಿ ಆದ್ಯತೆ ನೀಡಲಾಗಿದೆ ಎಂದರು.<br /> <br /> ಈ ಸಾಲಿನ ಬಜೆಟ್ನಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೂ, `ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದಲ್ಲಿನ ವಿತ್ತೀಯ ಕೊರತೆ ಯನ್ನು ಶೇ 5.9ರಿಂದ ಶೇ 5.1ಕ್ಕೆ ತಗ್ಗಿಸುವ ಅಗತ್ಯವಿದೆ~ ಎಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>