<p>ಬೆಂಗಳೂರು: ವೈಜ್ಞಾನಿಕ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವುದೇ ನಿಜವಾದ ಅನ್ವೇಷಣೆ ಎಂದು ಬಯೋಕಾನ್ನ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ ಹೇಳಿದರು.<br /> <br /> ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಮತ್ತು ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಸಮಿತಿಯ ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿರುವ ಶಾಲಾ ವಿದ್ಯಾರ್ಥಿಗಳ ಪ್ರಯೋಗಾಲಯ ‘ಇನೋವೇಷನ್ ಹಬ್’ನ್ನು ಅವರು ಗುರುವಾರ ಉದ್ಘಾಟಿಸಿದರು.<br /> <br /> ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ‘ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗಳೇ ಅನ್ವೇಷಣೆಯ ಮೂಲ.<br /> <br /> ಪ್ರತಿ ಸಿದ್ಧಾಂತವನ್ನು ಎಲ್ಲಿ ಮತ್ತು ಹೇಗೆ ವಿಭಿನ್ನವಾಗಿ ಅನ್ವಯಿಸಬಹುದು ಎಂದು ಹುಡುಕುವ ಅನ್ವೇಷಣೆ ಅರ್ಥಪೂರ್ಣವಾದುದು. ಭಾರತೀಯರ ಕೈಗೆಟಕುವ ಉತ್ಪನ್ನ-ಗಳನ್ನು ರೂಪಿಸುವೆಡೆ ನಮ್ಮ ಚಿಂತನೆ<br /> ಗಳನ್ನು ಹರಿಸುವ ಅವಶ್ಯಕತೆಯಿದೆ’ ಎಂದರು.<br /> <br /> ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಸಮಿತಿಯ ನಿರ್ದೇಶಕ ಜಿ.ಎಸ್.ರಾಟೆಲಾ ಮಾತನಾಡಿ ‘ಶಾಲೆಗಳು ನೀಡಲಾಗದಂತಹ ಪ್ರಯೋಗ ಮತ್ತು ಅನ್ವೇಷಣೆಯ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಇನೋವೇಷನ್ ಹಬ್ನ್ನು ಸ್ಥಾಪಿಸಲಾಗಿದೆ. ಹಬ್ನ ಸದಸ್ಯರಾಗುವ ಶಾಲಾ ವಿದ್ಯಾರ್ಥಿಗಳು ತಮ್ಮ ಚಿಂತನೆಗಳ ಪ್ರಯೋಗಕ್ಕೆ ಈ ವೇದಿಕೆಯನ್ನು ಬಳಸಿಕೊಳ್ಳಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ವೈಜ್ಞಾನಿಕ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರುವುದೇ ನಿಜವಾದ ಅನ್ವೇಷಣೆ ಎಂದು ಬಯೋಕಾನ್ನ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ ಹೇಳಿದರು.<br /> <br /> ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಮತ್ತು ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಸಮಿತಿಯ ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿರುವ ಶಾಲಾ ವಿದ್ಯಾರ್ಥಿಗಳ ಪ್ರಯೋಗಾಲಯ ‘ಇನೋವೇಷನ್ ಹಬ್’ನ್ನು ಅವರು ಗುರುವಾರ ಉದ್ಘಾಟಿಸಿದರು.<br /> <br /> ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ‘ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗಳೇ ಅನ್ವೇಷಣೆಯ ಮೂಲ.<br /> <br /> ಪ್ರತಿ ಸಿದ್ಧಾಂತವನ್ನು ಎಲ್ಲಿ ಮತ್ತು ಹೇಗೆ ವಿಭಿನ್ನವಾಗಿ ಅನ್ವಯಿಸಬಹುದು ಎಂದು ಹುಡುಕುವ ಅನ್ವೇಷಣೆ ಅರ್ಥಪೂರ್ಣವಾದುದು. ಭಾರತೀಯರ ಕೈಗೆಟಕುವ ಉತ್ಪನ್ನ-ಗಳನ್ನು ರೂಪಿಸುವೆಡೆ ನಮ್ಮ ಚಿಂತನೆ<br /> ಗಳನ್ನು ಹರಿಸುವ ಅವಶ್ಯಕತೆಯಿದೆ’ ಎಂದರು.<br /> <br /> ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಸಮಿತಿಯ ನಿರ್ದೇಶಕ ಜಿ.ಎಸ್.ರಾಟೆಲಾ ಮಾತನಾಡಿ ‘ಶಾಲೆಗಳು ನೀಡಲಾಗದಂತಹ ಪ್ರಯೋಗ ಮತ್ತು ಅನ್ವೇಷಣೆಯ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಇನೋವೇಷನ್ ಹಬ್ನ್ನು ಸ್ಥಾಪಿಸಲಾಗಿದೆ. ಹಬ್ನ ಸದಸ್ಯರಾಗುವ ಶಾಲಾ ವಿದ್ಯಾರ್ಥಿಗಳು ತಮ್ಮ ಚಿಂತನೆಗಳ ಪ್ರಯೋಗಕ್ಕೆ ಈ ವೇದಿಕೆಯನ್ನು ಬಳಸಿಕೊಳ್ಳಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>