<p><strong>ಮೈಸೂರು: </strong>ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಮತ್ತು ಮೈಸೂರು ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಜೂನ್ 28ರಿಂದ ಜುಲೈ 1ರವರೆಗೆ `ವಿದ್ಯಾಶ್ರಮ ಕಪ್~ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ನಡೆಯಲಿದೆ. <br /> <br /> ಮಾನಂದವಾಡಿ ರಸ್ತೆಯ ಎನ್ಐಇ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಪುರುಷ ಮತ್ತು ಮಹಿಳೆಯರ ಸಿಂಗಲ್ಸ್, ಯೂತ್, ಜೂನಿಯರ್, ಸಬ್ ಜೂನಿಯರ್, ಕೆಡೆಟ್ ವಿಭಾಗಗಳ ಬಾಲಕ, ಬಾಲಕಿಯರ ಸ್ಪರ್ಧೆಗಳು, ನಾನ್ಮೆಡಲಿಸ್ಟ್ ಸಿಂಗಲ್ಸ್ ಮತ್ತು ಡಬಲ್ಸ್, ವೆಟರನ್ಸ್ ಸಿಂಗಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. <br /> <br /> ಮುಖ್ಯ ರೆಫರಿಯಾಗಿ ಜಾರ್ಜ್ ಎಸ್. ಹೆನ್ರಿ ಕಾರ್ಯನಿರ್ವಹಿಸುವರು. ಕೆಟಿಟಿಎ ಪ್ರತಿನಿಧಿ ರಾಮಕುಮಾರ್, ಜಂಟಿ ಕಾರ್ಯದರ್ಶಿ ಮತ್ತು ತಾಂತ್ರಿಕ ಸಮಿತಿ ಅಧ್ಯಕ್ಷ ಟಿ.ಜಿ. ಉಪಾಧ್ಯೆ ಆಗಮಿಸಲಿದ್ದಾರೆ. <br /> <br /> ಹೆಸರು ನೋಂದಾಯಿಸಲು ಜೂನ್ 24 ಕೊನೆಯ ದಿನವಾಗಿದ್ದು, ಸಹಾಯಕ ರೆಫರಿ ಕೆ.ಆರ್. ಮಂಜುನಾಥ್ ನಂ. 426, 2ನೇ ಮುಖ್ಯರಸ್ತೆ, ಎಲ್ಐಸಿ ಕಾಲೋನಿ, ಶ್ರೀರಾಮಪುರ ಎರಡನೆ ಹಂತ, ಮೈಸೂರು -570023, (ಮೊಬೈಲ್: 9880977827, ಇಮೇಲ್: <a href="mailto:manjunathkrlic@gmail.com">manjunathkrlic@gmail.com</a> ಅವರಿಗೆ ಕಳುಹಿಸಿಕೊಡಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಮತ್ತು ಮೈಸೂರು ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಜೂನ್ 28ರಿಂದ ಜುಲೈ 1ರವರೆಗೆ `ವಿದ್ಯಾಶ್ರಮ ಕಪ್~ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ ನಡೆಯಲಿದೆ. <br /> <br /> ಮಾನಂದವಾಡಿ ರಸ್ತೆಯ ಎನ್ಐಇ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಪುರುಷ ಮತ್ತು ಮಹಿಳೆಯರ ಸಿಂಗಲ್ಸ್, ಯೂತ್, ಜೂನಿಯರ್, ಸಬ್ ಜೂನಿಯರ್, ಕೆಡೆಟ್ ವಿಭಾಗಗಳ ಬಾಲಕ, ಬಾಲಕಿಯರ ಸ್ಪರ್ಧೆಗಳು, ನಾನ್ಮೆಡಲಿಸ್ಟ್ ಸಿಂಗಲ್ಸ್ ಮತ್ತು ಡಬಲ್ಸ್, ವೆಟರನ್ಸ್ ಸಿಂಗಲ್ಸ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. <br /> <br /> ಮುಖ್ಯ ರೆಫರಿಯಾಗಿ ಜಾರ್ಜ್ ಎಸ್. ಹೆನ್ರಿ ಕಾರ್ಯನಿರ್ವಹಿಸುವರು. ಕೆಟಿಟಿಎ ಪ್ರತಿನಿಧಿ ರಾಮಕುಮಾರ್, ಜಂಟಿ ಕಾರ್ಯದರ್ಶಿ ಮತ್ತು ತಾಂತ್ರಿಕ ಸಮಿತಿ ಅಧ್ಯಕ್ಷ ಟಿ.ಜಿ. ಉಪಾಧ್ಯೆ ಆಗಮಿಸಲಿದ್ದಾರೆ. <br /> <br /> ಹೆಸರು ನೋಂದಾಯಿಸಲು ಜೂನ್ 24 ಕೊನೆಯ ದಿನವಾಗಿದ್ದು, ಸಹಾಯಕ ರೆಫರಿ ಕೆ.ಆರ್. ಮಂಜುನಾಥ್ ನಂ. 426, 2ನೇ ಮುಖ್ಯರಸ್ತೆ, ಎಲ್ಐಸಿ ಕಾಲೋನಿ, ಶ್ರೀರಾಮಪುರ ಎರಡನೆ ಹಂತ, ಮೈಸೂರು -570023, (ಮೊಬೈಲ್: 9880977827, ಇಮೇಲ್: <a href="mailto:manjunathkrlic@gmail.com">manjunathkrlic@gmail.com</a> ಅವರಿಗೆ ಕಳುಹಿಸಿಕೊಡಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>