<p><strong>ಜನವಾಡ:</strong> ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಲ್ಲಿ ಬೂದಿ ಮೂತಿ ಹುಳುವಿನ ಬಾಧೆ ಕಂಡು ಬಂದಿದೆ. ತಾಲ್ಲೂಕಿನ ಜನವಾಡ ಬಳಿಯ ಕೃಷಿ ವಿಜ್ಞಾನ ಕೇಂದ್ರದ ತಂಡ ಜಿಲ್ಲೆಯಲ್ಲಿ ಕೈಗೊಂಡ ಬೆಳೆ ವೀಕ್ಷಣೆ ವೇಳೆ ಹುಳುವಿನ ಬಾಧೆ ಇರುವುದು ಪತ್ತೆಯಾಗಿದೆ.<br /> <br /> ಜಿವಿವಿಧೆಡೆ ಇರುವ 10-15 ದಿನಗಳ ತೊಗರಿ, ಸೋಯಾ ಅವರೆ, ಉದ್ದು, ಹೆಸರು ಹಾಗೂ ಜೋಳದ ಬೆಳೆಗಳಲ್ಲಿ ಹುಳುವಿನ ಕಾಟ ಕಂಡು ಬಂದಿದೆ. ಬಾಧೆ ಜಾಸ್ತಿ ಆಗಿದ್ದಲ್ಲಿ ಸಸಿಗಳು ಸಾಯುವ ಸಾಧ್ಯತೆಯೂ ಇದ್ದು, ರೈತರು ಮರು ಬಿತ್ತನೆ ಮಾಡಬೇಕಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.<br /> <br /> ಈ ಹುಳುವನ್ನು ವೈಜ್ಞಾನಿಕವಾಗಿ `ಮೈಲೋಸರಸ್ ಅನ್ಡಿಸಿಂಪುಸ್ಟುಲೇಟಸ್ ಅಂಡಾಟಸ್' ಎಂದು ಹೇಳಲಿದ್ದು, ತಿಳಿ ಬಿಳಿ ಅಥವಾ ಬೂದಿ ಬಣ್ಣದ ಈ ಕೀಟ 4 ರಿಂದ 5 ಮಿ.ಮೀ ಉದ್ದ ಇರುತ್ತದೆ. ಬಾಯಿಯ ಮೇಲ್ಭಾಗ ತಿಳಿ ಹಳದಿ ಬಣ್ಣ ಹೊಂದಿದ್ದು, ಕಾಲುಗಳ ಭಾಗದಲ್ಲಿ 2-3 ಗರಗಸದಂಥ ಬೆಳವಣಿಗೆ ಕಾಣಬಹುದು ಎಂದು ವಿವರಿಸಿದ್ದಾರೆ.<br /> <br /> ಪ್ರೌಢ ಹುಳು ಸುಮಾರು 250 ರಿಂದ 360 ಮೊಟ್ಟೆಗಳನ್ನು ಮಣ್ಣಿನಲ್ಲಿನ ಸಾವಯವ ಪದಾರ್ಥಗಳಲ್ಲಿ ಚುಚ್ಚಿ ಇಡುತ್ತದೆ. ಮೊಟ್ಟೆಯಿಂದ 3 ರಿಂದ 5 ದಿನಗಳಲ್ಲಿ ಹೊರ ಬರುವ ಮರಿ ಹುಳು ಬೆಳೆ, ಕಳೆಗಳ ಬೇರು ತಿನ್ನುತ್ತದೆ. ಪ್ರೌಢ ಕೀಟ 8-11 ದಿನಗಳಿಂದ ಕೆಲ ತಿಂಗಳು ಬದುಕುವ ಸಾಮರ್ಥ್ಯ ಇದ್ದು, ಸಾಮಾನ್ಯವಾಗಿ 42 ರಿಂದ 65 ದಿನಗಳಲ್ಲಿ ತನ್ನ ಜೀವನ ಚಕ್ರ ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ.<br /> <br /> ಮರಿ ದುಂಬಿಗಳು ಭೂಮಿ ಒಳಗಿದ್ದು ಇದ್ದು ಬೆಳೆಗಳ ಮೊಳಕೆ ತಿನ್ನುತ್ತವೆ. ಮರಿ ದುಂಬಿ ಸುಮಾರು 10 ಮೊಳಕೆಗಳಿಗೆ ಬಾಧಿಸಿ ಸಾಯಿಸಬಲ್ಲದು.<br /> <br /> ಪ್ರೌಢ ಕೀಟ ಎಲೆಗಳ ಅಂಚು ತಿನ್ನುತ್ತ ಕೆಲವೊಮ್ಮೆ ಮಧ್ಯಭಾಗಕ್ಕೂ ಬಾಧಿಸುತ್ತದೆ. <br /> <br /> ನಿರ್ವಹಣೆ: ಬೂದಿ ಮೂತಿ ಹುಳುಗಳನ್ನು ನಿಯಂತ್ರಿಸಲು ಬೆಳೆಗಳನ್ನು ಆಳವಾಗಿ ಉಳುಮೆ ಮಾಡಬೇಕು. ಉದುರಿದ ಹಾಗೂ ಕೊಳೆತ ಭಾಗಗಳನ್ನು ಸುಟ್ಟು ನಾಶಪಡಿಸಬೇಕು. ಮೊನೊಕ್ರೋಟೊಫಾಸ್ 1 ಮಿ.ಲೀ. ಅಥವಾ ಕ್ಲೋರೊಪೈರಿಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.<br /> <br /> ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರವಿ ದೇಶಮುಖ್, ವಿಜ್ಞಾನಿಗಳಾದ ಡಾ. ಸುನೀಲಕುಮಾರ್ ಎನ್.ಎಂ., ಡಾ. ಆರ್.ಎಲ್. ಜಾಧವ್, ಡಾ. ರವಿ ಎಸ್. ಮತ್ತು ಡಾ. ಸತೀಶ್ ಫತ್ತೇಪುರ ಬೆಳೆ ವೀಕ್ಷಣೆ ತಂಡದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ:</strong> ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಲ್ಲಿ ಬೂದಿ ಮೂತಿ ಹುಳುವಿನ ಬಾಧೆ ಕಂಡು ಬಂದಿದೆ. ತಾಲ್ಲೂಕಿನ ಜನವಾಡ ಬಳಿಯ ಕೃಷಿ ವಿಜ್ಞಾನ ಕೇಂದ್ರದ ತಂಡ ಜಿಲ್ಲೆಯಲ್ಲಿ ಕೈಗೊಂಡ ಬೆಳೆ ವೀಕ್ಷಣೆ ವೇಳೆ ಹುಳುವಿನ ಬಾಧೆ ಇರುವುದು ಪತ್ತೆಯಾಗಿದೆ.<br /> <br /> ಜಿವಿವಿಧೆಡೆ ಇರುವ 10-15 ದಿನಗಳ ತೊಗರಿ, ಸೋಯಾ ಅವರೆ, ಉದ್ದು, ಹೆಸರು ಹಾಗೂ ಜೋಳದ ಬೆಳೆಗಳಲ್ಲಿ ಹುಳುವಿನ ಕಾಟ ಕಂಡು ಬಂದಿದೆ. ಬಾಧೆ ಜಾಸ್ತಿ ಆಗಿದ್ದಲ್ಲಿ ಸಸಿಗಳು ಸಾಯುವ ಸಾಧ್ಯತೆಯೂ ಇದ್ದು, ರೈತರು ಮರು ಬಿತ್ತನೆ ಮಾಡಬೇಕಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.<br /> <br /> ಈ ಹುಳುವನ್ನು ವೈಜ್ಞಾನಿಕವಾಗಿ `ಮೈಲೋಸರಸ್ ಅನ್ಡಿಸಿಂಪುಸ್ಟುಲೇಟಸ್ ಅಂಡಾಟಸ್' ಎಂದು ಹೇಳಲಿದ್ದು, ತಿಳಿ ಬಿಳಿ ಅಥವಾ ಬೂದಿ ಬಣ್ಣದ ಈ ಕೀಟ 4 ರಿಂದ 5 ಮಿ.ಮೀ ಉದ್ದ ಇರುತ್ತದೆ. ಬಾಯಿಯ ಮೇಲ್ಭಾಗ ತಿಳಿ ಹಳದಿ ಬಣ್ಣ ಹೊಂದಿದ್ದು, ಕಾಲುಗಳ ಭಾಗದಲ್ಲಿ 2-3 ಗರಗಸದಂಥ ಬೆಳವಣಿಗೆ ಕಾಣಬಹುದು ಎಂದು ವಿವರಿಸಿದ್ದಾರೆ.<br /> <br /> ಪ್ರೌಢ ಹುಳು ಸುಮಾರು 250 ರಿಂದ 360 ಮೊಟ್ಟೆಗಳನ್ನು ಮಣ್ಣಿನಲ್ಲಿನ ಸಾವಯವ ಪದಾರ್ಥಗಳಲ್ಲಿ ಚುಚ್ಚಿ ಇಡುತ್ತದೆ. ಮೊಟ್ಟೆಯಿಂದ 3 ರಿಂದ 5 ದಿನಗಳಲ್ಲಿ ಹೊರ ಬರುವ ಮರಿ ಹುಳು ಬೆಳೆ, ಕಳೆಗಳ ಬೇರು ತಿನ್ನುತ್ತದೆ. ಪ್ರೌಢ ಕೀಟ 8-11 ದಿನಗಳಿಂದ ಕೆಲ ತಿಂಗಳು ಬದುಕುವ ಸಾಮರ್ಥ್ಯ ಇದ್ದು, ಸಾಮಾನ್ಯವಾಗಿ 42 ರಿಂದ 65 ದಿನಗಳಲ್ಲಿ ತನ್ನ ಜೀವನ ಚಕ್ರ ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ.<br /> <br /> ಮರಿ ದುಂಬಿಗಳು ಭೂಮಿ ಒಳಗಿದ್ದು ಇದ್ದು ಬೆಳೆಗಳ ಮೊಳಕೆ ತಿನ್ನುತ್ತವೆ. ಮರಿ ದುಂಬಿ ಸುಮಾರು 10 ಮೊಳಕೆಗಳಿಗೆ ಬಾಧಿಸಿ ಸಾಯಿಸಬಲ್ಲದು.<br /> <br /> ಪ್ರೌಢ ಕೀಟ ಎಲೆಗಳ ಅಂಚು ತಿನ್ನುತ್ತ ಕೆಲವೊಮ್ಮೆ ಮಧ್ಯಭಾಗಕ್ಕೂ ಬಾಧಿಸುತ್ತದೆ. <br /> <br /> ನಿರ್ವಹಣೆ: ಬೂದಿ ಮೂತಿ ಹುಳುಗಳನ್ನು ನಿಯಂತ್ರಿಸಲು ಬೆಳೆಗಳನ್ನು ಆಳವಾಗಿ ಉಳುಮೆ ಮಾಡಬೇಕು. ಉದುರಿದ ಹಾಗೂ ಕೊಳೆತ ಭಾಗಗಳನ್ನು ಸುಟ್ಟು ನಾಶಪಡಿಸಬೇಕು. ಮೊನೊಕ್ರೋಟೊಫಾಸ್ 1 ಮಿ.ಲೀ. ಅಥವಾ ಕ್ಲೋರೊಪೈರಿಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.<br /> <br /> ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರವಿ ದೇಶಮುಖ್, ವಿಜ್ಞಾನಿಗಳಾದ ಡಾ. ಸುನೀಲಕುಮಾರ್ ಎನ್.ಎಂ., ಡಾ. ಆರ್.ಎಲ್. ಜಾಧವ್, ಡಾ. ರವಿ ಎಸ್. ಮತ್ತು ಡಾ. ಸತೀಶ್ ಫತ್ತೇಪುರ ಬೆಳೆ ವೀಕ್ಷಣೆ ತಂಡದಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>