<p>ವಿಶ್ವ ಸಂಸ್ಥೆಯ ಅಂಗವಾಗಿರುವ ಯುನೆಸ್ಕೊ (್ಠ್ಞಜಿಠಿಛಿ ಘೆಠಿಜಿಟ್ಞ ಉಛ್ಠ್ಚಠಿಜಿಟ್ಞ, ಖಟ್ಚಜಿಚ್ಝ ಚ್ಞ ್ಚ್ಠ್ಝಠ್ಠ್ಟಿಚ್ಝ ಟ್ಟಜಚ್ಞಜಿಠಿಜಿಟ್ಞ) ಜಾಗತಿಕ ಮಟ್ಟದಲ್ಲಿ ಕೆಲವು ವಿಶಿಷ್ಟವಾದ ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ ಅದರ ಮಹತ್ವ ಕಾಪಾಡಲು `ವಿಶ್ವಪರಂಪರೆಯ ತಾಣ~ಗಳನ್ನು ಘೋಷಿಸುತ್ತಾ ಬಂದಿರುವುದು ಒಂದು ಸಂಪ್ರದಾಯ. ಭಾರತದಲ್ಲಿ ಇಂತಹ 28 ತಾಣಗಳಿವೆ. ಇವುಗಳಲ್ಲಿ ಹೆಚ್ಚಿನವು ಸ್ಮಾರಕಗಳಾಗಿವೆ. ಅಸ್ಸಾಂ ದ ಕಾಜಿರಂಗ, ನಂದಾದೇವಿ, ಮಾನಸ ಹಾಗೂ ಬಂಗಾಲದ ಸುಂದರಬನದಂತಹ ನೈಸರ್ಗಿಕ ಪ್ರದೇಶಗಳನ್ನು ಸಹ ಈ ತಾಣಗಳಲ್ಲಿ ಸೇರಿಸಲಾಗಿದ್ದು ಒಂದು ವಿಶೇಷ. <br /> <br /> ಜಾಗತಿಕ ಮಟ್ಟದಲ್ಲಿ ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶದಲ್ಲಿರುವ ಅಪರೂಪದ ಗಿಡಮರ, ಪ್ರಾಣಿ ಹಾಗೂ ಸೂಕ್ಷ್ಮ ಜೀವಜಾಲವನ್ನು `ಜೀವ ವಿವಿಧತೆಯ ತಾಣ~ ಎಂದು ಗುರುತಿಸಲಾಗಿದೆ. ಕೆಲವು ವರ್ಷಗಳಿಂದ ಈ ಪ್ರದೇಶದ ವಿಶಿಷ್ಟತೆಯನ್ನು ಗಣನೆಗೆ ತೆಗೆದುಕೊಂಡು ಇವನ್ನು ವಿಶ್ವ ಪರಂಪರಾ ಸ್ಥಾನಗಳೆಂದು ಗುರುತಿಸಬೇಕೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದಿದೆ.<br /> <br /> ಈ ಪ್ರಯತ್ನದ ಫಲವಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿರುವ 34 ಸ್ಥಳಗಳನ್ನು `ಪರಂಪರಾಗತ ತಾಣ~ ಎಂದು ಘೋಷಣೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಕೇವಲ 10 ತಾಣಗಳು ಕರ್ನಾಟಕದಲ್ಲಿ, ಕೇರಳದಲ್ಲಿ 19, ತಮಿಳನಾಡಿನಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ 6 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.<br /> <br /> ಈ ಪ್ರಕ್ರಿಯೆ ಕೊನೆಗೊಳ್ಳುತ್ತಿದ್ದಂತೆಯೆ ರಾಜ್ಯ ಸರ್ಕಾರ ಉನ್ನತ ಸಮಿತಿ ರಚಿಸಿ ಇದನ್ನು ವಿರೋಧಿಸುವ ನಿರ್ಣಯವನ್ನು ಕೈಗೊಂಡಿದ್ದಲ್ಲದೆ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ಕ್ರಮವನ್ನು ಕೈ ಬಿಡಬೇಕೆಂದು ಆಗ್ರಹಿಸಿರುವುದು ಖೇದಕರ.<br /> <br /> ರಾಜ್ಯ ಸರ್ಕಾರವು ನೀಡಿರುವ ಪ್ರಮುಖ ಕಾರಣವೆಂದರೆ ಈ ಹಣೆಪಟ್ಟಿಯಿಂದಾಗಿ ಆಯಾ ಪ್ರದೇಶದಲ್ಲಿ `ಅಭಿವೃದ್ಧಿ~ ನಿಂತು ಹೋಗುವುದಲ್ಲದೆ, `ಅಲ್ಲಿನ ಮೂಲನಿವಾಸಿಗಳ ಹಕ್ಕಿನ ಉಲ್ಲಂಘನೆಯಾಗಲಿದೆ~ ಹಾಗೂ `ಇದರಿಂದಾಗಿ ವಿಶೇಷ ಯೋಜನೆಯ ರೂಪದಲ್ಲಿ ಹಣ ಹರಿದು ಬರುವುದಿಲ್ಲ~ ಎಂಬುದಾಗಿದೆ. <br /> <br /> ಈ ಹೇಳಿಕೆಯಲ್ಲಿ ಯಾವ ಸತ್ಯಾಂಶವೂ ಇಲ್ಲ. ಘೋಷಣೆ ಆಗಲಿರುವ 10 ತಾಣಗಳಲ್ಲಿ 5 ತಾಣಗಳು ಈಗಾಗಲೇ ವನ್ಯಜೀವಿ ಧಾಮ ಹಾಗೂ ರಾಷ್ಟ್ರೀಯ ಉದ್ಯಾನವನಗಳಾಗಿ ಘೋಷಿತವಾಗಿದ್ದು ವಿಶೇಷ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಹಣ ಹರಿದು ಬಂದದ್ದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ವಿನಿಯೋಗಿಸಿಲ್ಲ. ಇನ್ನುಳಿದ 5 ತಾಣಗಳು ರಕ್ಷಿತ ಅರಣ್ಯ ಪ್ರದೇಶಗಳಾಗಿದ್ದು, ಮಹತ್ವದ ಗಿಡಮೂಲಿಕೆಗಳ ತವರಾಗಿವೆ. ಜೊತೆಯಲ್ಲಿ ಇವು ರಾಜ್ಯಕ್ಕೆ ನೀರನ್ನು ಒದಗಿಸುವ ನದಿಗಳ ಜಲಾನಯನ ಪ್ರದೇಶಗಳಾಗಿವೆ. <br /> <br /> ಈ ಮಹತ್ವದ ಹಾಗೂ ಸೂಕ್ಷ್ಮಪ್ರದೇಶದ ರಕ್ಷಣೆಯನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ವಿಶ್ವ ಪರಂಪರೆಯ ತಾಣಗಳನ್ನಾಗಿ ಮಾಡಿದಲ್ಲಿ ಇವುಗಳಿಗೆ ಇನ್ನು ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಅನುಕೂಲವಾಗುತ್ತದೆ. ಇದರ ರಕ್ಷಣೆಗೆ ಹಣಕ್ಕಿಂತ ಹೆಚ್ಚಿಗೆ ಪ್ರಕೃತಿ ನಾಶದ ಯೋಜನೆ ಬಾರದಂತೆ ತಡೆಯುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ.<br /> <br /> ಈ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅರಣ್ಯ ನಿವಾಸಿಗಳ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂಬುದು ರಾಜ್ಯ ಸರ್ಕಾರದ ಆರೋಪ. ವಿಪರ್ಯಾಸವೆಂದರೆ ಅರಣ್ಯ ಹಕ್ಕುಗಳ ಕಾಯಿದೆ ಅಡಿಯಲ್ಲಿ ಮೂಲನಿವಾಸಿಗಳಿಗೆ ನೀಡಬೇಕಾಗಿರುವ ಹಕ್ಕನ್ನು ನೀಡದೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದೆ. ಇಷ್ಟಕ್ಕೂ ವಿಶ್ವಸಂಸ್ಥೆಯ `ಪರಂಪರಾಗತ ತಾಣ~ಗಳಿಂದಾಗಿ ರಾಜ್ಯ ಹಾಗೂ ರಾಷ್ಟ್ರದ ಕಾಯಿದೆಯನ್ನು ಉಲ್ಲಂಘಿಸುವ ಪ್ರಶ್ನೆಯೇ ಬಾರದು. <br /> <br /> ಇನ್ನು ದೇಶದ ಸರ್ವೋಚ್ಚ ನ್ಯಾಯಾಲಯ, ಕೇಂದ್ರೀಯ ಸಮಿತಿ, ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಲೋಕಾಯುಕ್ತ ಸಂಸ್ಥೆಗಳು ಸಫಲವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಅರಣ್ಯ ಒತ್ತುವರಿ, ಗಣಿಗಾರಿಕೆ, ರೆಸಾರ್ಟ್ ನಿರ್ಮಾಣ ನಿಯಂತ್ರಣದಲ್ಲಿದೆ. ಆದುದರಿಂದ ಈ ವಿಶ್ವ ತಾಣದ ಹಣೆಪಟ್ಟಿ ಬೇಡ ಎಂಬುದು ಸರ್ಕಾರದ ವಾದ. <br /> <br /> ಈ ವಾದದಲ್ಲಿ ಹುರುಳಿಲ್ಲ ಎಂಬುದನ್ನು ಬಳ್ಳಾರಿ ಗಣಿ ಹಗರಣ ತೋರಿಸಿಕೊಟ್ಟಿದೆ. ಈ ಎಲ್ಲ ಸಂಸ್ಥೆಗಳ ಆದೇಶವನ್ನು ಕಡೆಗಣಿಸಿ ಗಣಿ ಮಾಫಿಯಾ ಬೆಳೆದು ನಿಂತಿದ್ದು ರಾಜ್ಯ ಸರ್ಕಾರದ ಹಾಗೂ ಕನ್ನಡಿಗರ ಸಂಸ್ಕೃತಿಗೆ ಮಾರಕವಾಗಿದ್ದನ್ನು ನಾವಿಂದು ಅನುಭವಿಸುತ್ತಿದ್ದೆೀವೆ. ಬಳ್ಳಾರಿಯ ದುಷ್ಟ ಪರಂಪರೆ ರಾಜ್ಯಕ್ಕೆ ಕಂಟಕ ಪ್ರಾಯವಾಗಿದೆ. ಈ ಪರಂಪರೆಯನ್ನು ಪಶ್ಚಿಮ ಘಟ್ಟ ಪ್ರದೇಶಕ್ಕೂ ಹಬ್ಬಿಸಲು ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ಟೊಂಕ ಕಟ್ಟಿ ನಿಂತ ಹಾಗಿದೆ.<br /> <br /> ಇಂತಹ ಸ್ಥಿತಿ ಪಶ್ಚಿಮ ಘಟ್ಟದಲ್ಲಿ ಮರುಕಳಿಸದಂತೆ ತಡೆಯಲು ಈ ವಿಶ್ವ ಪರಂಪರಾ ತಾಣ ಸಹಾಯಕವಾಗಲಿದೆ, ಇದನ್ನು ಕಡೆಗಣಿಸಿ ಪಶ್ಚಿಮ ಘಟ್ಟದಲ್ಲಿ ಅತಿಕ್ರಮಣ, ಗಣಿಗಾರಿಕೆ, ರೆಸಾರ್ಟ್ ಸಂಸ್ಕೃತಿ ಹಾಗೂ ಕಾಡು ನಾಶಮಾಡುವ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಂತಿದೆ.<br /> <br /> ರಾಜ್ಯ ಸರ್ಕಾರವು ಮೂರು ವರ್ಷಗಳ ಹಿಂದೆ ಇದೇ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ವಿಶೇಷ `ಕಾರ್ಯ ಪಡೆ~ಯನ್ನು ರಚಿಸಿತ್ತು. ದುರಂತವೆಂದರೆ ಇದೇ ಕಾರ್ಯಪಡೆಯು ತನ್ನ ಉದ್ದೇಶವನ್ನೇ ಮರೆತು, ಸರ್ಕಾರದ ಉನ್ನತ ಸಮಿತಿಯಲ್ಲಿ ಹಾಜರಿದ್ದು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕ್ರಮಕ್ಕೆ ಅನುಮೋದನೆ ನೀಡಿದೆ! ಇದೊಂದು ಐತಿಹಾಸಿಕ ದುರಂತ! ಈ ಕಾರ್ಯಪಡೆಗೆ ಕಿಮ್ಮತ್ತು ನೀಡದ ಸರ್ಕಾರ ಪಶ್ಚಿಮ ಘಟ್ಟದ ರಕ್ಷಣೆ ಮಾಡೀತೆ? ಕೇವಲ ಪ್ರಚಾರಕ್ಕಾಗಿ ಇಂತಹ `ನಿಷ್ಕ್ರಿಯ~ ಪಡೆ ರಚಿಸುವುದನ್ನು ಸರ್ಕಾರ ನಿಲ್ಲಿಸಿದರೆ ಒಳಿತು.<br /> <br /> ಪಶ್ಚಿಮಘಟ್ಟದ ಐದು ರಾಜ್ಯಗಳಲ್ಲಿ ಕರ್ನಾಟಕವೊಂದೇ ಈ ಕುರಿತು ಅಪಸ್ವರ ಎತ್ತಿದೆ. ಹೀಗೆ ಮಾಡುವ ಮುನ್ನ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯದಲ್ಲಿರುವ ಪರಂಪರೆಯ ತಾಣಗಳಲ್ಲಿನ ಸ್ಥಿತಿಗತಿಯ ಬಗ್ಗೆ ಅರಿತುಕೊಳ್ಳಬಹುದಿತ್ತು. ಮಲೆನಾಡಿನ ಜನರ ಜೊತೆ ಬಿಚ್ಚು ಮನಸ್ಸಿನಿಂದ ಚರ್ಚಿಸಿ ನಿರ್ಣಯಕ್ಕೆ ಬರಬಹುದಿತ್ತು.<br /> <br /> ಇಡೀ ಪಶ್ಚಿಮ ಘಟ್ಟಗಳನ್ನೇ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲು ಅನುವು ಮಾಡಿಕೊಡಬೇಕಾದ ರಾಜ್ಯ ಸರ್ಕಾರ ಕೇವಲ 10 ಸ್ಥಳಗಳನ್ನು ಘೋಷಿಸಲು ವಿರೋಧ ವ್ಯಕ್ತಪಡಿಸುತ್ತಿರುವುದು ಸಂಕುಚಿತ ಮನೋಭಾವದ ನಿದರ್ಶನವಾಗಿದೆ. <br /> <br /> ರಾಜ್ಯ ಸರ್ಕಾರವು ಉದ್ದಿಮೆ, ಗಣಿಗಾರಿಕೆ ಹಾಗೂ ರೆಸಾರ್ಟ್ ಲಾಬಿಗಳಿಗೆ ಮಣಿದು ಈ ಯೋಜನೆಯನ್ನು ವಿರೋಧಿಸುತ್ತಿರುವುದು ದುಷ್ಟ ಪರಂಪರೆಯ ಜೀವಂತ ನಿದರ್ಶನವಾಗಿದೆ.<br /> <br /> ಈ ದುಷ್ಟ ಶಕ್ತಿಗಳು ಮಲೆನಾಡಿನ ಹಸಿರನ್ನು, ಸ್ವಚ್ಛಂದವಾಗಿ ಹರಿಯುವ ನದಿಗಳನ್ನು, ಕಾಡಿನ ವನ್ಯ ಜೀವಿಗಳನ್ನು ನಾಶಪಡಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಕಲ ಸಿದ್ಧತೆ ಮಾಡಿಕೊಂಡಂತಿದೆ. ಜಾಗತಿಕ ಮಟ್ಟದಲ್ಲಿ ಮಲೆನಾಡಿನ ರಕ್ಷಣೆಯ ಪ್ರಯತ್ನಕ್ಕೆ ಕಲ್ಲು ಹಾಕುವ ಈ ದುಷ್ಟ ಪರಂಪರೆಗೆ ಜನರು ಜಾಗೃತರಾಗಿ ತಡೆ ಹಾಕುವ ಸಮಯ ಕೂಡಿ ಬಂದಿದೆ.<br /> <strong> (ಲೇಖಕರು ಪರಿಸರ ಹೋರಾಟಗಾರರು)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಶ್ವ ಸಂಸ್ಥೆಯ ಅಂಗವಾಗಿರುವ ಯುನೆಸ್ಕೊ (್ಠ್ಞಜಿಠಿಛಿ ಘೆಠಿಜಿಟ್ಞ ಉಛ್ಠ್ಚಠಿಜಿಟ್ಞ, ಖಟ್ಚಜಿಚ್ಝ ಚ್ಞ ್ಚ್ಠ್ಝಠ್ಠ್ಟಿಚ್ಝ ಟ್ಟಜಚ್ಞಜಿಠಿಜಿಟ್ಞ) ಜಾಗತಿಕ ಮಟ್ಟದಲ್ಲಿ ಕೆಲವು ವಿಶಿಷ್ಟವಾದ ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ ಅದರ ಮಹತ್ವ ಕಾಪಾಡಲು `ವಿಶ್ವಪರಂಪರೆಯ ತಾಣ~ಗಳನ್ನು ಘೋಷಿಸುತ್ತಾ ಬಂದಿರುವುದು ಒಂದು ಸಂಪ್ರದಾಯ. ಭಾರತದಲ್ಲಿ ಇಂತಹ 28 ತಾಣಗಳಿವೆ. ಇವುಗಳಲ್ಲಿ ಹೆಚ್ಚಿನವು ಸ್ಮಾರಕಗಳಾಗಿವೆ. ಅಸ್ಸಾಂ ದ ಕಾಜಿರಂಗ, ನಂದಾದೇವಿ, ಮಾನಸ ಹಾಗೂ ಬಂಗಾಲದ ಸುಂದರಬನದಂತಹ ನೈಸರ್ಗಿಕ ಪ್ರದೇಶಗಳನ್ನು ಸಹ ಈ ತಾಣಗಳಲ್ಲಿ ಸೇರಿಸಲಾಗಿದ್ದು ಒಂದು ವಿಶೇಷ. <br /> <br /> ಜಾಗತಿಕ ಮಟ್ಟದಲ್ಲಿ ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶದಲ್ಲಿರುವ ಅಪರೂಪದ ಗಿಡಮರ, ಪ್ರಾಣಿ ಹಾಗೂ ಸೂಕ್ಷ್ಮ ಜೀವಜಾಲವನ್ನು `ಜೀವ ವಿವಿಧತೆಯ ತಾಣ~ ಎಂದು ಗುರುತಿಸಲಾಗಿದೆ. ಕೆಲವು ವರ್ಷಗಳಿಂದ ಈ ಪ್ರದೇಶದ ವಿಶಿಷ್ಟತೆಯನ್ನು ಗಣನೆಗೆ ತೆಗೆದುಕೊಂಡು ಇವನ್ನು ವಿಶ್ವ ಪರಂಪರಾ ಸ್ಥಾನಗಳೆಂದು ಗುರುತಿಸಬೇಕೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದಿದೆ.<br /> <br /> ಈ ಪ್ರಯತ್ನದ ಫಲವಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿರುವ 34 ಸ್ಥಳಗಳನ್ನು `ಪರಂಪರಾಗತ ತಾಣ~ ಎಂದು ಘೋಷಣೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದರಲ್ಲಿ ಕೇವಲ 10 ತಾಣಗಳು ಕರ್ನಾಟಕದಲ್ಲಿ, ಕೇರಳದಲ್ಲಿ 19, ತಮಿಳನಾಡಿನಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ 6 ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.<br /> <br /> ಈ ಪ್ರಕ್ರಿಯೆ ಕೊನೆಗೊಳ್ಳುತ್ತಿದ್ದಂತೆಯೆ ರಾಜ್ಯ ಸರ್ಕಾರ ಉನ್ನತ ಸಮಿತಿ ರಚಿಸಿ ಇದನ್ನು ವಿರೋಧಿಸುವ ನಿರ್ಣಯವನ್ನು ಕೈಗೊಂಡಿದ್ದಲ್ಲದೆ, ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ಕ್ರಮವನ್ನು ಕೈ ಬಿಡಬೇಕೆಂದು ಆಗ್ರಹಿಸಿರುವುದು ಖೇದಕರ.<br /> <br /> ರಾಜ್ಯ ಸರ್ಕಾರವು ನೀಡಿರುವ ಪ್ರಮುಖ ಕಾರಣವೆಂದರೆ ಈ ಹಣೆಪಟ್ಟಿಯಿಂದಾಗಿ ಆಯಾ ಪ್ರದೇಶದಲ್ಲಿ `ಅಭಿವೃದ್ಧಿ~ ನಿಂತು ಹೋಗುವುದಲ್ಲದೆ, `ಅಲ್ಲಿನ ಮೂಲನಿವಾಸಿಗಳ ಹಕ್ಕಿನ ಉಲ್ಲಂಘನೆಯಾಗಲಿದೆ~ ಹಾಗೂ `ಇದರಿಂದಾಗಿ ವಿಶೇಷ ಯೋಜನೆಯ ರೂಪದಲ್ಲಿ ಹಣ ಹರಿದು ಬರುವುದಿಲ್ಲ~ ಎಂಬುದಾಗಿದೆ. <br /> <br /> ಈ ಹೇಳಿಕೆಯಲ್ಲಿ ಯಾವ ಸತ್ಯಾಂಶವೂ ಇಲ್ಲ. ಘೋಷಣೆ ಆಗಲಿರುವ 10 ತಾಣಗಳಲ್ಲಿ 5 ತಾಣಗಳು ಈಗಾಗಲೇ ವನ್ಯಜೀವಿ ಧಾಮ ಹಾಗೂ ರಾಷ್ಟ್ರೀಯ ಉದ್ಯಾನವನಗಳಾಗಿ ಘೋಷಿತವಾಗಿದ್ದು ವಿಶೇಷ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಹಣ ಹರಿದು ಬಂದದ್ದನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ವಿನಿಯೋಗಿಸಿಲ್ಲ. ಇನ್ನುಳಿದ 5 ತಾಣಗಳು ರಕ್ಷಿತ ಅರಣ್ಯ ಪ್ರದೇಶಗಳಾಗಿದ್ದು, ಮಹತ್ವದ ಗಿಡಮೂಲಿಕೆಗಳ ತವರಾಗಿವೆ. ಜೊತೆಯಲ್ಲಿ ಇವು ರಾಜ್ಯಕ್ಕೆ ನೀರನ್ನು ಒದಗಿಸುವ ನದಿಗಳ ಜಲಾನಯನ ಪ್ರದೇಶಗಳಾಗಿವೆ. <br /> <br /> ಈ ಮಹತ್ವದ ಹಾಗೂ ಸೂಕ್ಷ್ಮಪ್ರದೇಶದ ರಕ್ಷಣೆಯನ್ನು ರಾಜ್ಯ ಸರ್ಕಾರ ಮಾಡಬೇಕಾಗಿತ್ತು. ವಿಶ್ವ ಪರಂಪರೆಯ ತಾಣಗಳನ್ನಾಗಿ ಮಾಡಿದಲ್ಲಿ ಇವುಗಳಿಗೆ ಇನ್ನು ಹೆಚ್ಚಿನ ಸುರಕ್ಷತೆಯನ್ನು ಒದಗಿಸಲು ಅನುಕೂಲವಾಗುತ್ತದೆ. ಇದರ ರಕ್ಷಣೆಗೆ ಹಣಕ್ಕಿಂತ ಹೆಚ್ಚಿಗೆ ಪ್ರಕೃತಿ ನಾಶದ ಯೋಜನೆ ಬಾರದಂತೆ ತಡೆಯುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿದೆ.<br /> <br /> ಈ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅರಣ್ಯ ನಿವಾಸಿಗಳ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂಬುದು ರಾಜ್ಯ ಸರ್ಕಾರದ ಆರೋಪ. ವಿಪರ್ಯಾಸವೆಂದರೆ ಅರಣ್ಯ ಹಕ್ಕುಗಳ ಕಾಯಿದೆ ಅಡಿಯಲ್ಲಿ ಮೂಲನಿವಾಸಿಗಳಿಗೆ ನೀಡಬೇಕಾಗಿರುವ ಹಕ್ಕನ್ನು ನೀಡದೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದೆ. ಇಷ್ಟಕ್ಕೂ ವಿಶ್ವಸಂಸ್ಥೆಯ `ಪರಂಪರಾಗತ ತಾಣ~ಗಳಿಂದಾಗಿ ರಾಜ್ಯ ಹಾಗೂ ರಾಷ್ಟ್ರದ ಕಾಯಿದೆಯನ್ನು ಉಲ್ಲಂಘಿಸುವ ಪ್ರಶ್ನೆಯೇ ಬಾರದು. <br /> <br /> ಇನ್ನು ದೇಶದ ಸರ್ವೋಚ್ಚ ನ್ಯಾಯಾಲಯ, ಕೇಂದ್ರೀಯ ಸಮಿತಿ, ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಲೋಕಾಯುಕ್ತ ಸಂಸ್ಥೆಗಳು ಸಫಲವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಅರಣ್ಯ ಒತ್ತುವರಿ, ಗಣಿಗಾರಿಕೆ, ರೆಸಾರ್ಟ್ ನಿರ್ಮಾಣ ನಿಯಂತ್ರಣದಲ್ಲಿದೆ. ಆದುದರಿಂದ ಈ ವಿಶ್ವ ತಾಣದ ಹಣೆಪಟ್ಟಿ ಬೇಡ ಎಂಬುದು ಸರ್ಕಾರದ ವಾದ. <br /> <br /> ಈ ವಾದದಲ್ಲಿ ಹುರುಳಿಲ್ಲ ಎಂಬುದನ್ನು ಬಳ್ಳಾರಿ ಗಣಿ ಹಗರಣ ತೋರಿಸಿಕೊಟ್ಟಿದೆ. ಈ ಎಲ್ಲ ಸಂಸ್ಥೆಗಳ ಆದೇಶವನ್ನು ಕಡೆಗಣಿಸಿ ಗಣಿ ಮಾಫಿಯಾ ಬೆಳೆದು ನಿಂತಿದ್ದು ರಾಜ್ಯ ಸರ್ಕಾರದ ಹಾಗೂ ಕನ್ನಡಿಗರ ಸಂಸ್ಕೃತಿಗೆ ಮಾರಕವಾಗಿದ್ದನ್ನು ನಾವಿಂದು ಅನುಭವಿಸುತ್ತಿದ್ದೆೀವೆ. ಬಳ್ಳಾರಿಯ ದುಷ್ಟ ಪರಂಪರೆ ರಾಜ್ಯಕ್ಕೆ ಕಂಟಕ ಪ್ರಾಯವಾಗಿದೆ. ಈ ಪರಂಪರೆಯನ್ನು ಪಶ್ಚಿಮ ಘಟ್ಟ ಪ್ರದೇಶಕ್ಕೂ ಹಬ್ಬಿಸಲು ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ಟೊಂಕ ಕಟ್ಟಿ ನಿಂತ ಹಾಗಿದೆ.<br /> <br /> ಇಂತಹ ಸ್ಥಿತಿ ಪಶ್ಚಿಮ ಘಟ್ಟದಲ್ಲಿ ಮರುಕಳಿಸದಂತೆ ತಡೆಯಲು ಈ ವಿಶ್ವ ಪರಂಪರಾ ತಾಣ ಸಹಾಯಕವಾಗಲಿದೆ, ಇದನ್ನು ಕಡೆಗಣಿಸಿ ಪಶ್ಚಿಮ ಘಟ್ಟದಲ್ಲಿ ಅತಿಕ್ರಮಣ, ಗಣಿಗಾರಿಕೆ, ರೆಸಾರ್ಟ್ ಸಂಸ್ಕೃತಿ ಹಾಗೂ ಕಾಡು ನಾಶಮಾಡುವ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಂತಿದೆ.<br /> <br /> ರಾಜ್ಯ ಸರ್ಕಾರವು ಮೂರು ವರ್ಷಗಳ ಹಿಂದೆ ಇದೇ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ವಿಶೇಷ `ಕಾರ್ಯ ಪಡೆ~ಯನ್ನು ರಚಿಸಿತ್ತು. ದುರಂತವೆಂದರೆ ಇದೇ ಕಾರ್ಯಪಡೆಯು ತನ್ನ ಉದ್ದೇಶವನ್ನೇ ಮರೆತು, ಸರ್ಕಾರದ ಉನ್ನತ ಸಮಿತಿಯಲ್ಲಿ ಹಾಜರಿದ್ದು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕ್ರಮಕ್ಕೆ ಅನುಮೋದನೆ ನೀಡಿದೆ! ಇದೊಂದು ಐತಿಹಾಸಿಕ ದುರಂತ! ಈ ಕಾರ್ಯಪಡೆಗೆ ಕಿಮ್ಮತ್ತು ನೀಡದ ಸರ್ಕಾರ ಪಶ್ಚಿಮ ಘಟ್ಟದ ರಕ್ಷಣೆ ಮಾಡೀತೆ? ಕೇವಲ ಪ್ರಚಾರಕ್ಕಾಗಿ ಇಂತಹ `ನಿಷ್ಕ್ರಿಯ~ ಪಡೆ ರಚಿಸುವುದನ್ನು ಸರ್ಕಾರ ನಿಲ್ಲಿಸಿದರೆ ಒಳಿತು.<br /> <br /> ಪಶ್ಚಿಮಘಟ್ಟದ ಐದು ರಾಜ್ಯಗಳಲ್ಲಿ ಕರ್ನಾಟಕವೊಂದೇ ಈ ಕುರಿತು ಅಪಸ್ವರ ಎತ್ತಿದೆ. ಹೀಗೆ ಮಾಡುವ ಮುನ್ನ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯದಲ್ಲಿರುವ ಪರಂಪರೆಯ ತಾಣಗಳಲ್ಲಿನ ಸ್ಥಿತಿಗತಿಯ ಬಗ್ಗೆ ಅರಿತುಕೊಳ್ಳಬಹುದಿತ್ತು. ಮಲೆನಾಡಿನ ಜನರ ಜೊತೆ ಬಿಚ್ಚು ಮನಸ್ಸಿನಿಂದ ಚರ್ಚಿಸಿ ನಿರ್ಣಯಕ್ಕೆ ಬರಬಹುದಿತ್ತು.<br /> <br /> ಇಡೀ ಪಶ್ಚಿಮ ಘಟ್ಟಗಳನ್ನೇ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲು ಅನುವು ಮಾಡಿಕೊಡಬೇಕಾದ ರಾಜ್ಯ ಸರ್ಕಾರ ಕೇವಲ 10 ಸ್ಥಳಗಳನ್ನು ಘೋಷಿಸಲು ವಿರೋಧ ವ್ಯಕ್ತಪಡಿಸುತ್ತಿರುವುದು ಸಂಕುಚಿತ ಮನೋಭಾವದ ನಿದರ್ಶನವಾಗಿದೆ. <br /> <br /> ರಾಜ್ಯ ಸರ್ಕಾರವು ಉದ್ದಿಮೆ, ಗಣಿಗಾರಿಕೆ ಹಾಗೂ ರೆಸಾರ್ಟ್ ಲಾಬಿಗಳಿಗೆ ಮಣಿದು ಈ ಯೋಜನೆಯನ್ನು ವಿರೋಧಿಸುತ್ತಿರುವುದು ದುಷ್ಟ ಪರಂಪರೆಯ ಜೀವಂತ ನಿದರ್ಶನವಾಗಿದೆ.<br /> <br /> ಈ ದುಷ್ಟ ಶಕ್ತಿಗಳು ಮಲೆನಾಡಿನ ಹಸಿರನ್ನು, ಸ್ವಚ್ಛಂದವಾಗಿ ಹರಿಯುವ ನದಿಗಳನ್ನು, ಕಾಡಿನ ವನ್ಯ ಜೀವಿಗಳನ್ನು ನಾಶಪಡಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಕಲ ಸಿದ್ಧತೆ ಮಾಡಿಕೊಂಡಂತಿದೆ. ಜಾಗತಿಕ ಮಟ್ಟದಲ್ಲಿ ಮಲೆನಾಡಿನ ರಕ್ಷಣೆಯ ಪ್ರಯತ್ನಕ್ಕೆ ಕಲ್ಲು ಹಾಕುವ ಈ ದುಷ್ಟ ಪರಂಪರೆಗೆ ಜನರು ಜಾಗೃತರಾಗಿ ತಡೆ ಹಾಕುವ ಸಮಯ ಕೂಡಿ ಬಂದಿದೆ.<br /> <strong> (ಲೇಖಕರು ಪರಿಸರ ಹೋರಾಟಗಾರರು)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>