<p>ಮದ್ದೂರು: ಗುತ್ತಿಗೆ ಪೌರಕಾರ್ಮಿಕರಿಗೆ ಸರ್ಕಾರ ನಿಗಿದಿಗೊಳಿಸಿರುವ ಕನಿಷ್ಟ ವೇತನ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗುತ್ತಿಗೆ ಪೌರಕಾರ್ಮಿಕ ಸಂಘದ ಸದಸ್ಯರು ಪಟ್ಟಣ ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.<br /> <br /> ಪುರಸಭೆ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಬಳಿಕ ಒಂದು ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರು.<br /> ರಾಜ್ಯ ಗುತ್ತಿಗೆ ಪೌರಕಾರ್ಮಿಕ ಸಂಘದ ಗೌರವಾಧ್ಯಕ್ಷ ಎಂ.ಬಿ. ನಾಗಣ್ಣ ಮಾತನಾಡಿ, ಪಟ್ಟಣದ ಪುರಸಭೆಯಲ್ಲಿ 2011ರಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರ ನಿಗಿದಿಗೊಳಿಸಿರುವ ಕನಿಷ್ಟ ವೇತನ ಜಾರಿಗೊಳಿಸಬೇಕು.<br /> <br /> ಈ ಕಾರ್ಮಿಕರು ಹಲವಾರು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಬಾಕಿ ವೇತನ ನೀಡಿಲ್ಲ. ಜಿಲ್ಲೆಯ ಉಳಿದ ಸ್ಥಳಿಯ ಸಂಸ್ಥೆಗಳು ಬಾಕಿ ವೇತನ ನೀಡಿವೆ. ಪಟ್ಟಣದ ಪುರಸಭೆ ಮಾತ್ರ ಇದುವರೆಗೂ ನೀಡಿಲ್ಲ. ಕಾರ್ಮಿಕರು<br /> <br /> ಡಿ. 13ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದರೂ ಕ್ರಮ ಕೈಗೊಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> ಬಳಿಕ ಸ್ಥಳಕ್ಕೆ ಆಗಮಿಸಿದ ಪುರಸಭೆ ಸಿಒ ಗಂಗಾಧರ್ ಹಾಗೂ ಅಧ್ಯಕ್ಷ ಪರ್ವಿಜ್ಪಾಷ ಉದ್ರಿಕ್ತ ಪ್ರತಿಭಟನಾಕಾರನ್ನು ಸಮಧಾನಪಡಿಸಿ, ಕಾರ್ಮಿಕರ ಬಾಕಿ ವೇತನ ಬಿಡುಗಡೆ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಕ್ರಮ ಜರುಗಿಸುವುದಾಗಿ ತಿಳಿಸಿದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.<br /> <br /> ಕಾರ್ಮಿಕ ಮುಖಂಡರಾದ ಸತೀಶ್, ಶ್ರೀನಿವಾಸ್, ರಂಗನಾಥ್, ನಿಂಗಣ್ಣ, ಪಳೀನಿ, ಕಣ್ವ, ಸರಸಮ್ಮ, ಲಕ್ಷ್ಮಿ, ರಘು, ಮಣಿಕಂಠ, ಮದ್ದೂರಮ್ಮ ಸೇರಿದಂತೆ ಹಲವರು ಹಾಜರಿದ್ದರು.<br /> <br /> <strong>ಸ್ಮಾರಕಗಳ ವಿರೂಪ: ಪ್ರತಿಭಟನೆ</strong><br /> ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ಬತೇರಿ ಸೇರಿದಂತೆ ಪ್ರಸಿದ್ಧ ಸ್ಮಾರಕಗಳನ್ನು ವಿರೂಪ ಗೊಳಿಸಲಾಗುತ್ತಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆ ಕಾರ್ಯಕರ್ತರು ಸೋಮವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.<br /> <br /> ಪಟ್ಟಣದಲ್ಲಿ 50ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಅವುಗಳ ಬಳಿ ತಿಪ್ಪೆಗಳ ರಾಶಿಯೇ ಬಿದ್ದಿದೆ. ವಿಜಯನಗರ ಕಾಲದ ನಿರ್ಮಾಣಗಳಲ್ಲಿ ಒಂದಾದ ಬತೇರಿಯ ಆಸು ಪಾಸಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಬತೇರಿಗೆ ಸಗಣಿಯಿಂದ ಬೆರಣಿ ತಟ್ಟಿ ಅಂದಗೆಡಿಸಲಾಗುತ್ತಿದೆ ಎಂದು ವೇದಿಕೆ ತಾಲ್ಲೂಕು ಅಧ್ಯಕ್ಷೆ ಮಾಲಾಶ್ರೀ ದೂರಿದರು.<br /> <br /> ಸ್ಮಾರಕಗಳ ಸುತ್ತಲಿನ ಪರಿಸರ ಸ್ವಚ್ಛ ಗೊಳಿಸಬೇಕು ಎಂದು ಗಂಜಾಂ ರಮೇಶ್ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸ್ಮಾರಕಗಳ ಪರಿಸರ ಸ್ವಚ್ಛತೆಗೆ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದರು. ನಂಜುಂಡ, ಮಮತಾ, ಸುಧಾ, ಅಜಯ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮದ್ದೂರು: ಗುತ್ತಿಗೆ ಪೌರಕಾರ್ಮಿಕರಿಗೆ ಸರ್ಕಾರ ನಿಗಿದಿಗೊಳಿಸಿರುವ ಕನಿಷ್ಟ ವೇತನ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗುತ್ತಿಗೆ ಪೌರಕಾರ್ಮಿಕ ಸಂಘದ ಸದಸ್ಯರು ಪಟ್ಟಣ ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.<br /> <br /> ಪುರಸಭೆ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದ ಅವರು, ಬಳಿಕ ಒಂದು ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರು.<br /> ರಾಜ್ಯ ಗುತ್ತಿಗೆ ಪೌರಕಾರ್ಮಿಕ ಸಂಘದ ಗೌರವಾಧ್ಯಕ್ಷ ಎಂ.ಬಿ. ನಾಗಣ್ಣ ಮಾತನಾಡಿ, ಪಟ್ಟಣದ ಪುರಸಭೆಯಲ್ಲಿ 2011ರಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರ ನಿಗಿದಿಗೊಳಿಸಿರುವ ಕನಿಷ್ಟ ವೇತನ ಜಾರಿಗೊಳಿಸಬೇಕು.<br /> <br /> ಈ ಕಾರ್ಮಿಕರು ಹಲವಾರು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಬಾಕಿ ವೇತನ ನೀಡಿಲ್ಲ. ಜಿಲ್ಲೆಯ ಉಳಿದ ಸ್ಥಳಿಯ ಸಂಸ್ಥೆಗಳು ಬಾಕಿ ವೇತನ ನೀಡಿವೆ. ಪಟ್ಟಣದ ಪುರಸಭೆ ಮಾತ್ರ ಇದುವರೆಗೂ ನೀಡಿಲ್ಲ. ಕಾರ್ಮಿಕರು<br /> <br /> ಡಿ. 13ರಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿದರೂ ಕ್ರಮ ಕೈಗೊಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.<br /> ಬಳಿಕ ಸ್ಥಳಕ್ಕೆ ಆಗಮಿಸಿದ ಪುರಸಭೆ ಸಿಒ ಗಂಗಾಧರ್ ಹಾಗೂ ಅಧ್ಯಕ್ಷ ಪರ್ವಿಜ್ಪಾಷ ಉದ್ರಿಕ್ತ ಪ್ರತಿಭಟನಾಕಾರನ್ನು ಸಮಧಾನಪಡಿಸಿ, ಕಾರ್ಮಿಕರ ಬಾಕಿ ವೇತನ ಬಿಡುಗಡೆ ಸೇರಿದಂತೆ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಕ್ರಮ ಜರುಗಿಸುವುದಾಗಿ ತಿಳಿಸಿದ ಬಳಿಕ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.<br /> <br /> ಕಾರ್ಮಿಕ ಮುಖಂಡರಾದ ಸತೀಶ್, ಶ್ರೀನಿವಾಸ್, ರಂಗನಾಥ್, ನಿಂಗಣ್ಣ, ಪಳೀನಿ, ಕಣ್ವ, ಸರಸಮ್ಮ, ಲಕ್ಷ್ಮಿ, ರಘು, ಮಣಿಕಂಠ, ಮದ್ದೂರಮ್ಮ ಸೇರಿದಂತೆ ಹಲವರು ಹಾಜರಿದ್ದರು.<br /> <br /> <strong>ಸ್ಮಾರಕಗಳ ವಿರೂಪ: ಪ್ರತಿಭಟನೆ</strong><br /> ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ಬತೇರಿ ಸೇರಿದಂತೆ ಪ್ರಸಿದ್ಧ ಸ್ಮಾರಕಗಳನ್ನು ವಿರೂಪ ಗೊಳಿಸಲಾಗುತ್ತಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆ ಕಾರ್ಯಕರ್ತರು ಸೋಮವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.<br /> <br /> ಪಟ್ಟಣದಲ್ಲಿ 50ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಅವುಗಳ ಬಳಿ ತಿಪ್ಪೆಗಳ ರಾಶಿಯೇ ಬಿದ್ದಿದೆ. ವಿಜಯನಗರ ಕಾಲದ ನಿರ್ಮಾಣಗಳಲ್ಲಿ ಒಂದಾದ ಬತೇರಿಯ ಆಸು ಪಾಸಿನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಬತೇರಿಗೆ ಸಗಣಿಯಿಂದ ಬೆರಣಿ ತಟ್ಟಿ ಅಂದಗೆಡಿಸಲಾಗುತ್ತಿದೆ ಎಂದು ವೇದಿಕೆ ತಾಲ್ಲೂಕು ಅಧ್ಯಕ್ಷೆ ಮಾಲಾಶ್ರೀ ದೂರಿದರು.<br /> <br /> ಸ್ಮಾರಕಗಳ ಸುತ್ತಲಿನ ಪರಿಸರ ಸ್ವಚ್ಛ ಗೊಳಿಸಬೇಕು ಎಂದು ಗಂಜಾಂ ರಮೇಶ್ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸ್ಮಾರಕಗಳ ಪರಿಸರ ಸ್ವಚ್ಛತೆಗೆ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದರು. ನಂಜುಂಡ, ಮಮತಾ, ಸುಧಾ, ಅಜಯ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>