<p><strong>ನವದೆಹಲಿ (ಪಿಟಿಐ):</strong> ಕಾರ್ಯನಿರತ ಪತ್ರಕರ್ತರು ಹಾಗೂ ಪತ್ರಿಕಾ ನೌಕರರ ವೇತನವನ್ನು ಕನಿಷ್ಠ ಎರಡೂವರೆ ಪಟ್ಟು ಹೆಚ್ಚಿಸಲು ಪತ್ರಿಕಾ ವೇತನ ಮಂಡಲಿ ಶಿಫಾರಸು ಮಾಡಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಭಾರತೀಯ ವೃತ್ತಪತ್ರಿಕಾ ಸಂಘ (ಐಎನ್ಎಸ್), ಅದನ್ನು ತಿರಸ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.</p>.<p>ಮಂಡಲಿಯ ಶಿಫಾರಸುಗಳಿಗೆ ಸರ್ಕಾರ ಅನುಮೋದನೆ ನೀಡಿದರೆ ವೃತ್ತಪತ್ರಿಕಾ ಸಂಸ್ಥೆಗಳು ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಸಂಘ ಪತ್ರಿಕಾ ಹೇಳಿಕೆ ನೀಡಿದೆ. ಇದಕ್ಕೆ ಮುನ್ನ ಸಂಘವು ಮುಂಬೈನಲ್ಲಿ ಗುರುವಾರ ತುರ್ತು ಸಭೆ ಕರೆದು ಶಿಫಾರಸುಗಳ ಕುರಿತು ಚರ್ಚಿಸಿತ್ತು.</p>.<p>ಮಂಡಲಿ ಹಲವಾರು ನಿಯಮಗಳನ್ನು ಉಲ್ಲಂಘಿಸಿ ವರದಿ ಸಿದ್ಧಪಡಿಸಿದೆ. ಮಂಡಲಿಯ ಸದಸ್ಯರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಂಘದ ಅಧ್ಯಕ್ಷ ಕುಂದನ್ ವ್ಯಾಸ್ ಆಪಾದಿಸಿದ್ದಾರೆ.</p>.<p>ತನ್ನ ಅಧಿಕಾರ ವ್ಯಾಪ್ತಿಗೆ ಮೀರಿದ ಹಲವು ಶಿಫಾರಸುಗಳನ್ನು ಮಂಡಲಿ ಮಾಡಿದೆ. ಸಂಸ್ಥೆಗಳ ವೇತನ ಪಾವತಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೇ ವರದಿ ಸಿದ್ಧಪಡಿಸಲಾಗಿದೆ ಎಂದೂ ಅವರು ದೂರಿದ್ದಾರೆ.</p>.<p>ಈ ಮುಂಚೆ ವೇತನ ಮಂಡಲಿಗಳು ವರದಿ ಸಲ್ಲಿಸುವ ಮುನ್ನ ಸಂಭಾವ್ಯ ಶಿಫಾರಸುಗಳನ್ನು ಮುಂಚಿತವಾಗಿಯೇ ಪ್ರಕಟಿಸಿ ಪಾರದರ್ಶಕತೆ ಪ್ರದರ್ಶಿಸಿದ್ದವು. ಆದರೆ ಪ್ರಸ್ತುತ ವೇತನ ಮಂಡಲಿ ಇದನ್ನು ಪಾಲಿಸಿಲ್ಲ ಎಂದು ವ್ಯಾಸ್ ಆಕ್ಷೇಪಿಸಿದ್ದಾರೆ.</p>.<p>ಪ್ರಸ್ತುತ ಸನ್ನಿವೇಶದಲ್ಲಿ ಪತ್ರಿಕಾ ವೇತನ ಮಂಡಳಿಯೇ ಅಪ್ರಸ್ತುತ. ರಾಷ್ಟ್ರೀಯ ಕಾರ್ಮಿಕ ಆಯೋಗ ಕೂಡ 2002ರಲ್ಲಿ ವೇತನ ಮಂಡಲಿ ಅಗತ್ಯವಿಲ್ಲವೆಂದು ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಕಾರ್ಯನಿರತ ಪತ್ರಕರ್ತರು ಹಾಗೂ ಪತ್ರಿಕಾ ನೌಕರರ ವೇತನವನ್ನು ಕನಿಷ್ಠ ಎರಡೂವರೆ ಪಟ್ಟು ಹೆಚ್ಚಿಸಲು ಪತ್ರಿಕಾ ವೇತನ ಮಂಡಲಿ ಶಿಫಾರಸು ಮಾಡಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಭಾರತೀಯ ವೃತ್ತಪತ್ರಿಕಾ ಸಂಘ (ಐಎನ್ಎಸ್), ಅದನ್ನು ತಿರಸ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.</p>.<p>ಮಂಡಲಿಯ ಶಿಫಾರಸುಗಳಿಗೆ ಸರ್ಕಾರ ಅನುಮೋದನೆ ನೀಡಿದರೆ ವೃತ್ತಪತ್ರಿಕಾ ಸಂಸ್ಥೆಗಳು ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಸಂಘ ಪತ್ರಿಕಾ ಹೇಳಿಕೆ ನೀಡಿದೆ. ಇದಕ್ಕೆ ಮುನ್ನ ಸಂಘವು ಮುಂಬೈನಲ್ಲಿ ಗುರುವಾರ ತುರ್ತು ಸಭೆ ಕರೆದು ಶಿಫಾರಸುಗಳ ಕುರಿತು ಚರ್ಚಿಸಿತ್ತು.</p>.<p>ಮಂಡಲಿ ಹಲವಾರು ನಿಯಮಗಳನ್ನು ಉಲ್ಲಂಘಿಸಿ ವರದಿ ಸಿದ್ಧಪಡಿಸಿದೆ. ಮಂಡಲಿಯ ಸದಸ್ಯರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಂಘದ ಅಧ್ಯಕ್ಷ ಕುಂದನ್ ವ್ಯಾಸ್ ಆಪಾದಿಸಿದ್ದಾರೆ.</p>.<p>ತನ್ನ ಅಧಿಕಾರ ವ್ಯಾಪ್ತಿಗೆ ಮೀರಿದ ಹಲವು ಶಿಫಾರಸುಗಳನ್ನು ಮಂಡಲಿ ಮಾಡಿದೆ. ಸಂಸ್ಥೆಗಳ ವೇತನ ಪಾವತಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೇ ವರದಿ ಸಿದ್ಧಪಡಿಸಲಾಗಿದೆ ಎಂದೂ ಅವರು ದೂರಿದ್ದಾರೆ.</p>.<p>ಈ ಮುಂಚೆ ವೇತನ ಮಂಡಲಿಗಳು ವರದಿ ಸಲ್ಲಿಸುವ ಮುನ್ನ ಸಂಭಾವ್ಯ ಶಿಫಾರಸುಗಳನ್ನು ಮುಂಚಿತವಾಗಿಯೇ ಪ್ರಕಟಿಸಿ ಪಾರದರ್ಶಕತೆ ಪ್ರದರ್ಶಿಸಿದ್ದವು. ಆದರೆ ಪ್ರಸ್ತುತ ವೇತನ ಮಂಡಲಿ ಇದನ್ನು ಪಾಲಿಸಿಲ್ಲ ಎಂದು ವ್ಯಾಸ್ ಆಕ್ಷೇಪಿಸಿದ್ದಾರೆ.</p>.<p>ಪ್ರಸ್ತುತ ಸನ್ನಿವೇಶದಲ್ಲಿ ಪತ್ರಿಕಾ ವೇತನ ಮಂಡಳಿಯೇ ಅಪ್ರಸ್ತುತ. ರಾಷ್ಟ್ರೀಯ ಕಾರ್ಮಿಕ ಆಯೋಗ ಕೂಡ 2002ರಲ್ಲಿ ವೇತನ ಮಂಡಲಿ ಅಗತ್ಯವಿಲ್ಲವೆಂದು ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>