<p><strong>ಸಿಂದಗಿ:</strong> ಮೂರು ವರ್ಷಕ್ಕೊಮ್ಮೆ ನಡೆಯುವ ತಾಲ್ಲೂಕಿನ ಸುಕ್ಷೇತ್ರ ಕನ್ನೊಳ್ಳಿ ಗ್ರಾಮದ ಲಕ್ಷ್ಮಿ ಭಾಗ್ಯವಂತಿದೇವಿ ಜಾತ್ರಾ ಮಹೋತ್ಸವ ಅತ್ಯಂತ ವೈಭವಪೂರ್ಣವಾಗಿ ಜರುಗಿತು.<br /> <br /> ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಥೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಂಥನಾಳ ವಿರಕ್ತಮಠದ ವೃಷಭಲಿಂಗ ಸ್ವಾಮೀಜಿ ಮಾತನಾಡಿ ದೇವರು, ಧರ್ಮ, ನಂಬಿಕೆ ಎನ್ನುವುದು ಕೇವಲ ಗ್ರಾಮಗಳಲ್ಲಿ ಉಳಿದುಕೊಂಡಿದೆ. ಆದರೆ ನಗರಗಳು ಧರ್ಮದಿಂದ ವಿಮುಖವಾಗುತ್ತಿವೆ ಎಂದು ವಿಷಾದಿಸಿದರು.<br /> <br /> ಕನ್ನೊಳ್ಳಿ ಶ್ರೀಮಠದ ಮರುಳಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ತಾಲ್ಲೂಕಿನ ಗಡಿಗೌಡಗಾಂವ ಶ್ರೀಮಠದ ಶಾಂತಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿದರು. ಜಾತ್ರಾ ಮಹೋತ್ಸವದಲ್ಲಿ ಡೊಳ್ಳಿನ ಕುಣಿತ ವಿಶೇಷವಾಗಿತ್ತು.<br /> <br /> ಆರ್.ಎಸ್. ನಾಗಠಾಣ, ಕಂಟೆಪ್ಪ ಕಲ್ಲೂರ, ಗೊಲ್ಲಾಳಪ್ಪ ಚೌಧರಿ, ಶಂಕರ ಬಗಲಿ, ಸಿದ್ದನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶ್ರೀಕಾಂತವ್ವ ಬಗಲಿ, ಸಿದ್ದಣ್ಣ ಚೌಧರಿ, ಎಸ್.ಕೆ.ಪಾಟೀಲ, ಎಸ್. ಎಂ.ಚೌಧರಿ, ಕಾಸಪ್ಪ ಬಡಿಗೇರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ಮೂರು ವರ್ಷಕ್ಕೊಮ್ಮೆ ನಡೆಯುವ ತಾಲ್ಲೂಕಿನ ಸುಕ್ಷೇತ್ರ ಕನ್ನೊಳ್ಳಿ ಗ್ರಾಮದ ಲಕ್ಷ್ಮಿ ಭಾಗ್ಯವಂತಿದೇವಿ ಜಾತ್ರಾ ಮಹೋತ್ಸವ ಅತ್ಯಂತ ವೈಭವಪೂರ್ಣವಾಗಿ ಜರುಗಿತು.<br /> <br /> ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಥೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಂಥನಾಳ ವಿರಕ್ತಮಠದ ವೃಷಭಲಿಂಗ ಸ್ವಾಮೀಜಿ ಮಾತನಾಡಿ ದೇವರು, ಧರ್ಮ, ನಂಬಿಕೆ ಎನ್ನುವುದು ಕೇವಲ ಗ್ರಾಮಗಳಲ್ಲಿ ಉಳಿದುಕೊಂಡಿದೆ. ಆದರೆ ನಗರಗಳು ಧರ್ಮದಿಂದ ವಿಮುಖವಾಗುತ್ತಿವೆ ಎಂದು ವಿಷಾದಿಸಿದರು.<br /> <br /> ಕನ್ನೊಳ್ಳಿ ಶ್ರೀಮಠದ ಮರುಳಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಬಸವಕಲ್ಯಾಣ ತಾಲ್ಲೂಕಿನ ಗಡಿಗೌಡಗಾಂವ ಶ್ರೀಮಠದ ಶಾಂತಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿದರು. ಜಾತ್ರಾ ಮಹೋತ್ಸವದಲ್ಲಿ ಡೊಳ್ಳಿನ ಕುಣಿತ ವಿಶೇಷವಾಗಿತ್ತು.<br /> <br /> ಆರ್.ಎಸ್. ನಾಗಠಾಣ, ಕಂಟೆಪ್ಪ ಕಲ್ಲೂರ, ಗೊಲ್ಲಾಳಪ್ಪ ಚೌಧರಿ, ಶಂಕರ ಬಗಲಿ, ಸಿದ್ದನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶ್ರೀಕಾಂತವ್ವ ಬಗಲಿ, ಸಿದ್ದಣ್ಣ ಚೌಧರಿ, ಎಸ್.ಕೆ.ಪಾಟೀಲ, ಎಸ್. ಎಂ.ಚೌಧರಿ, ಕಾಸಪ್ಪ ಬಡಿಗೇರ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>