<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಕೊಟ್ನಿಕಲ್ ಕ್ಯಾಂಪಿನ ಸುಕ್ಷೇತ್ರ ಶ್ರೀ ಶಂಕರಲಿಂಗೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.<br /> <br /> ತುಂಗಭದ್ರೆಯ ತಟದಲ್ಲಿರುವ ಹುಣಸೆ ವನದಲ್ಲಿ ಮಕರ ಸಂಕ್ರಾಂತಿಯಂದು ವಿಜೃಂಭಣೆಯಿಂದ ಜರುಗಿದ ಸ್ವಾಮಿಯ ಜಾತ್ರೆಯಲ್ಲಿ ಹೂವಿನಹಡಗಲಿ, ನವಲಿ, ಕಾಗನೂರು, ಕೊಟ್ನಿಕಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.<br /> <br /> ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಕರೆ ತರಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ನಡೆದ ನಿಶಾನೆ ಹರಾಜಿನಲ್ಲಿ ಪ್ರಗತಿಪರ ರೈತ ಮಾಗಳದ ಬಿ.ಎಂ.ಮಹೇಶ್ವರಯ್ಯ ₹16,100 ಗಳಿಗೆ ಸ್ವಾಮಿಯ ನಿಶಾನೆ ಪಡೆದರು.<br /> <br /> ಕಾಮನಾಳ ಕ್ಷೇತ್ರದ ಸಿದ್ದವೀರ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.<br /> <br /> ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಪ್ರಕಾಶ ಗೌಡ, ಸದಸ್ಯರಾದ ಸತ್ಯನಾರಾಯಣ, ಓಲಿ ಈಶಪ್ಪ, ಎಸ್.ಎಂ. ವೃಷಬೇಂದ್ರಸ್ವಾಮಿ, ಎಸ್. ರುದ್ರಪ್ಪ, ವೀರಭದ್ರಗೌಡ, ಶಂಭಯ್ಯ, ಮುರುಳಿ ಕೃಷ್ಣ, ಷಣ್ಮುಖಪ್ಪ, ಪಿ.ಕೆ.ಎಂ. ವಿಶ್ವನಾಥಯ್ಯ, ಗಡ್ಡಿ ಚನ್ನಬಸಪ್ಪ, ಗಡ್ಡಿ ಸಿದ್ದಲಿಂಗಪ್ಪ ಕೆ.ವಿರೂಪಾಕ್ಷಗೌಡ್ರು ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಕೊಟ್ನಿಕಲ್ ಕ್ಯಾಂಪಿನ ಸುಕ್ಷೇತ್ರ ಶ್ರೀ ಶಂಕರಲಿಂಗೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.<br /> <br /> ತುಂಗಭದ್ರೆಯ ತಟದಲ್ಲಿರುವ ಹುಣಸೆ ವನದಲ್ಲಿ ಮಕರ ಸಂಕ್ರಾಂತಿಯಂದು ವಿಜೃಂಭಣೆಯಿಂದ ಜರುಗಿದ ಸ್ವಾಮಿಯ ಜಾತ್ರೆಯಲ್ಲಿ ಹೂವಿನಹಡಗಲಿ, ನವಲಿ, ಕಾಗನೂರು, ಕೊಟ್ನಿಕಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.<br /> <br /> ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗಳೊಂದಿಗೆ ಕರೆ ತರಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ನಡೆದ ನಿಶಾನೆ ಹರಾಜಿನಲ್ಲಿ ಪ್ರಗತಿಪರ ರೈತ ಮಾಗಳದ ಬಿ.ಎಂ.ಮಹೇಶ್ವರಯ್ಯ ₹16,100 ಗಳಿಗೆ ಸ್ವಾಮಿಯ ನಿಶಾನೆ ಪಡೆದರು.<br /> <br /> ಕಾಮನಾಳ ಕ್ಷೇತ್ರದ ಸಿದ್ದವೀರ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಹಂಪಸಾಗರದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.<br /> <br /> ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಪ್ರಕಾಶ ಗೌಡ, ಸದಸ್ಯರಾದ ಸತ್ಯನಾರಾಯಣ, ಓಲಿ ಈಶಪ್ಪ, ಎಸ್.ಎಂ. ವೃಷಬೇಂದ್ರಸ್ವಾಮಿ, ಎಸ್. ರುದ್ರಪ್ಪ, ವೀರಭದ್ರಗೌಡ, ಶಂಭಯ್ಯ, ಮುರುಳಿ ಕೃಷ್ಣ, ಷಣ್ಮುಖಪ್ಪ, ಪಿ.ಕೆ.ಎಂ. ವಿಶ್ವನಾಥಯ್ಯ, ಗಡ್ಡಿ ಚನ್ನಬಸಪ್ಪ, ಗಡ್ಡಿ ಸಿದ್ದಲಿಂಗಪ್ಪ ಕೆ.ವಿರೂಪಾಕ್ಷಗೌಡ್ರು ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>