<p>ಶಾಂತಿಗಿರಿ ಆಶ್ರಮ ಧಾರ್ಮಿಕ ಚಟುವಟಿಕೆಗಳ ಜತೆ ಜತೆಗೇ ಆರೋಗ್ಯ ರಕ್ಷಣೆಗಾಗಿ ಆಯುರ್ವೇದ, ಭಾರತೀಯ ವೈದ್ಯ ಪದ್ಧತಿಗಳ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದೆ. <br /> <br /> ಆಡುಗೋಡಿ ಬಳಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದೆ. ಕೇರಳದಲ್ಲಿರುವ ಆಶ್ರಮದ ಭೂಮಿಯಲ್ಲಿ ಗಿಡ ಮೂಲಿಕೆಗಳನ್ನು ಬೆಳೆದು ಔಷಧಗಳನ್ನು ತಯಾರಿಸುತ್ತಿದೆ. <br /> <br /> ತನ್ನ ಪ್ರಚಾರ ಅಭಿಯಾನದ ಅಂಗವಾಗಿ ಅದು ಯಲಹಂಕದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಆವರಣದಲ್ಲಿ ಆಯುರ್ವೇದ ಕಾರ್ಯಾಗಾರ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಬಿಎಸ್ಎಫ್ ಯೋಧರು ಔಷಧೀಯ ಮಹತ್ವದ ಸಸಿಗಳನ್ನು ನೆಟ್ಟರು, <br /> <br /> `ಆಯುರ್ವೇದ- ಆರೋಗ್ಯಕರ ಜೀವನ~ ಎಂಬ ವಿಷಯದ ಬಗ್ಗೆ ನಡೆದ ಪ್ರಶ್ನೋತ್ತರದಲ್ಲಿ ಶಾಂತಿಗಿರಿ ಆಸ್ಪತ್ರೆಯ ವೈದ್ಯೆ ಡಾ. ಮಿನಿ ನಾಯರ್ ಮತ್ತು ಜ್ಞಾನತಪಸ್ವಿ ಸ್ವಾಮೀಜಿ ಅವರು ಯೋಧರ ಸಂದೇಹಗಳಿಗೆ ಉತ್ತರಿಸಿದರು. ಕೇಂದ್ರದ ಡಿಐಜಿ ಐ.ವಿ. ಐಪೆ ಕಾರ್ಯಕ್ರಮ ಉದ್ಘಾಟಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಾಂತಿಗಿರಿ ಆಶ್ರಮ ಧಾರ್ಮಿಕ ಚಟುವಟಿಕೆಗಳ ಜತೆ ಜತೆಗೇ ಆರೋಗ್ಯ ರಕ್ಷಣೆಗಾಗಿ ಆಯುರ್ವೇದ, ಭಾರತೀಯ ವೈದ್ಯ ಪದ್ಧತಿಗಳ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದೆ. <br /> <br /> ಆಡುಗೋಡಿ ಬಳಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದೆ. ಕೇರಳದಲ್ಲಿರುವ ಆಶ್ರಮದ ಭೂಮಿಯಲ್ಲಿ ಗಿಡ ಮೂಲಿಕೆಗಳನ್ನು ಬೆಳೆದು ಔಷಧಗಳನ್ನು ತಯಾರಿಸುತ್ತಿದೆ. <br /> <br /> ತನ್ನ ಪ್ರಚಾರ ಅಭಿಯಾನದ ಅಂಗವಾಗಿ ಅದು ಯಲಹಂಕದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಆವರಣದಲ್ಲಿ ಆಯುರ್ವೇದ ಕಾರ್ಯಾಗಾರ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಬಿಎಸ್ಎಫ್ ಯೋಧರು ಔಷಧೀಯ ಮಹತ್ವದ ಸಸಿಗಳನ್ನು ನೆಟ್ಟರು, <br /> <br /> `ಆಯುರ್ವೇದ- ಆರೋಗ್ಯಕರ ಜೀವನ~ ಎಂಬ ವಿಷಯದ ಬಗ್ಗೆ ನಡೆದ ಪ್ರಶ್ನೋತ್ತರದಲ್ಲಿ ಶಾಂತಿಗಿರಿ ಆಸ್ಪತ್ರೆಯ ವೈದ್ಯೆ ಡಾ. ಮಿನಿ ನಾಯರ್ ಮತ್ತು ಜ್ಞಾನತಪಸ್ವಿ ಸ್ವಾಮೀಜಿ ಅವರು ಯೋಧರ ಸಂದೇಹಗಳಿಗೆ ಉತ್ತರಿಸಿದರು. ಕೇಂದ್ರದ ಡಿಐಜಿ ಐ.ವಿ. ಐಪೆ ಕಾರ್ಯಕ್ರಮ ಉದ್ಘಾಟಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>