<p><strong>ದಾವಣಗೆರೆ:</strong> ಶೇ 25ರಷ್ಟು ದಾಖಲಾತಿಯನ್ನು ಬಡಮಕ್ಕಳಿಗೆ ಮೀಸಲಿಡಲು ವಿರೋಧಿಸಿ, `ಕುಸ್ಮಾ~ ಅಧ್ಯಕ್ಷ ಜಿ.ಎಸ್. ಶರ್ಮಾ ರಾಜ್ಯದ್ಯಾಂತ ಅನುದಾನ ರಹಿತ ಶಾಲೆಗಳಿಗೆ ಬಂದ್ ಕರೆ ನೀಡಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ತಿಳಿಸಿದರು.<br /> <br /> `ಕುಸ್ಮಾ~ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಿ.ಎಸ್. ಶರ್ಮಾ ದೇಶಬಿಟ್ಟು ಹೋಗಬೇಕು. ಅವರು ನಡೆಸುತ್ತಿರುವ ಶಾಲಾ ಕಾಲೇಜುಗಳನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.<br /> <br /> ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಹಾಗೂ ಬಣಗಳ ರಾಜಕಾರಣದಲ್ಲಿ ಮುಳುಗಿದೆ. ಇವರಿಂದ ಸರ್ಕಾರ ನಡೆಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬರಗಾಲ ಇರುವಾಗ ಬಿಜೆಪಿ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದೆಹಲಿ, ಬೆಂಗಳೂರು ಹಾಗೂ ಹೋಟೆಲ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.<br /> <br /> ಪ್ರತಿಭಟನೆಯಲ್ಲಿ ವಿನಾಯಕ ಪೈಲ್ವಾನ್, ಡಿ.ಆರ್. ಅನಿಲ್ಕುಮಾರ್, ಶಂಭು ಎಸ್. ಉರೇಕುಂಡಿ, ಎಂ. ಹಬೀಬ್, ಜಾನ್ ಡಿಸೋಜ, ಮೊಹಮದ್ ಜಾಫೀರ್, ಬಿ.ಕೆ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಶೇ 25ರಷ್ಟು ದಾಖಲಾತಿಯನ್ನು ಬಡಮಕ್ಕಳಿಗೆ ಮೀಸಲಿಡಲು ವಿರೋಧಿಸಿ, `ಕುಸ್ಮಾ~ ಅಧ್ಯಕ್ಷ ಜಿ.ಎಸ್. ಶರ್ಮಾ ರಾಜ್ಯದ್ಯಾಂತ ಅನುದಾನ ರಹಿತ ಶಾಲೆಗಳಿಗೆ ಬಂದ್ ಕರೆ ನೀಡಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ತಿಳಿಸಿದರು.<br /> <br /> `ಕುಸ್ಮಾ~ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಿ.ಎಸ್. ಶರ್ಮಾ ದೇಶಬಿಟ್ಟು ಹೋಗಬೇಕು. ಅವರು ನಡೆಸುತ್ತಿರುವ ಶಾಲಾ ಕಾಲೇಜುಗಳನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.<br /> <br /> ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಹಾಗೂ ಬಣಗಳ ರಾಜಕಾರಣದಲ್ಲಿ ಮುಳುಗಿದೆ. ಇವರಿಂದ ಸರ್ಕಾರ ನಡೆಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬರಗಾಲ ಇರುವಾಗ ಬಿಜೆಪಿ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದೆಹಲಿ, ಬೆಂಗಳೂರು ಹಾಗೂ ಹೋಟೆಲ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.<br /> <br /> ಪ್ರತಿಭಟನೆಯಲ್ಲಿ ವಿನಾಯಕ ಪೈಲ್ವಾನ್, ಡಿ.ಆರ್. ಅನಿಲ್ಕುಮಾರ್, ಶಂಭು ಎಸ್. ಉರೇಕುಂಡಿ, ಎಂ. ಹಬೀಬ್, ಜಾನ್ ಡಿಸೋಜ, ಮೊಹಮದ್ ಜಾಫೀರ್, ಬಿ.ಕೆ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>