<p><strong>ನವದೆಹಲಿ (ಪಿಟಿಐ):</strong> ಶಿರಡಿಗೆ ತೆರಳುವ ಸಾಯಿಬಾಬಾ ಭಕ್ತರು ಈಗ ನೆಮ್ಮದಿಯಾಗಿ ಅಲ್ಲಿಗೆ ಹೋಗಿ ಇಳಿದುಕೊಂಡು ಸೇವೆ ಸಲ್ಲಿಸಬಹುದು.<br /> <br /> ಶಿರಡಿ ಸಾಯಿಬಾಬಾ ದೇವಾಲಯದ ಉಸ್ತುವಾರಿ ಹೊತ್ತಿರುವ ಟ್ರಸ್ಟ್, 15 ಸಾವಿರ ಜನರಿಗೆ ಒಮ್ಮೆಲೆ ಅವಕಾಶ ಕಲ್ಪಿಸುವ ಬೃಹತ್ ಬಹುಮಹಡಿ ಛತ್ರವನ್ನು ಅಲ್ಲಿ ನಿರ್ಮಿಸಿದ್ದು, ಮುಂದಿನ ತಿಂಗಳು ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ.<br /> <br /> ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್, ಚೆನ್ನೈನ ಶಿರಡಿ ಸಾಯಿ ಟ್ರಸ್ಟ್ ಸಹಯೋಗದಲ್ಲಿ 125 ಕೋಟಿ ರೂಪಾಯಿ ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಈ ಛತ್ರ ನಿರ್ಮಿಸಿದೆ. ಈ ಬೃಹತ್ ಕಟ್ಟಡದಲ್ಲಿ 1,500 ಕೋಣೆಗಳು ಹಾಗೂ 200ರಷ್ಟು ಸಭಾಂಗಣಗಳಿವೆ.<br /> <br /> ಪ್ರತಿದಿನ 30 ಸಾವಿರ ಭಕ್ತರು ಶಿರಡಿಗೆ ಬರುತ್ತಾರೆ. ಅವರಲ್ಲಿ ಬಹುತೇಕರು ಇಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ. ಅಂತಹ ಭಕ್ತಾದಿಗಳಿಗೆ ಛತ್ರದಿಂದ ಪ್ರಯೋಜನವಾಗಲಿದೆ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ನ ಹಿರಿಯ ಟ್ರಸ್ಟಿ ಅಶೋಕ್ ಕಾಂಬೇಕರ್ ಹೇಳಿದ್ದಾರೆ.<br /> <br /> ಇದಲ್ಲದೇ ಸಾಯಿ ಸಂಸ್ಥಾನ ಟ್ರಸ್ಟ್ ಶಿರಡಿ ಗ್ರಾಮ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲು 88 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದೂ ಅವರು ತಿಳಿಸಿದ್ದಾರೆ.<br /> <br /> ಕೇಂದ್ರ ಪ್ರವಾಸೋದ್ಯಮ ಸಚಿವ ಸುಭೋದ್ ಕಾಂತ್ ಸಹಾಯ್ ಅವರನ್ನು ತಾವು ಭೇಟಿಯಾದಾಗ, ಶಿರಡಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಕೇಳಿದ್ದಾಗಿ ಅವರು ಹೇಳಿದರು.<br /> <br /> ಶಿರಡಿಯಲ್ಲಿ ಸಾಯಿಬಾಬಾ ಸಮಾಧಿ ನಿರ್ಮಾಣವಾಗಿ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಹಾಗೂ ಶಿರಡಿ ಸುತ್ತಲಿನ ನಲವತ್ತರಿಂದ ಐವತ್ತು ಗ್ರಾಮಗಳು ಅಭಿವೃದ್ಧಿಯಾಗುವಂತೆ ಶಿರಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವಂತೆ ಟ್ರಸ್ಟ್ ಕೇಂದ್ರಕ್ಕೆ ಮನವಿ ಮಾಡಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಶಿರಡಿಗೆ ತೆರಳುವ ಸಾಯಿಬಾಬಾ ಭಕ್ತರು ಈಗ ನೆಮ್ಮದಿಯಾಗಿ ಅಲ್ಲಿಗೆ ಹೋಗಿ ಇಳಿದುಕೊಂಡು ಸೇವೆ ಸಲ್ಲಿಸಬಹುದು.<br /> <br /> ಶಿರಡಿ ಸಾಯಿಬಾಬಾ ದೇವಾಲಯದ ಉಸ್ತುವಾರಿ ಹೊತ್ತಿರುವ ಟ್ರಸ್ಟ್, 15 ಸಾವಿರ ಜನರಿಗೆ ಒಮ್ಮೆಲೆ ಅವಕಾಶ ಕಲ್ಪಿಸುವ ಬೃಹತ್ ಬಹುಮಹಡಿ ಛತ್ರವನ್ನು ಅಲ್ಲಿ ನಿರ್ಮಿಸಿದ್ದು, ಮುಂದಿನ ತಿಂಗಳು ಅದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಿದೆ.<br /> <br /> ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್, ಚೆನ್ನೈನ ಶಿರಡಿ ಸಾಯಿ ಟ್ರಸ್ಟ್ ಸಹಯೋಗದಲ್ಲಿ 125 ಕೋಟಿ ರೂಪಾಯಿ ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಈ ಛತ್ರ ನಿರ್ಮಿಸಿದೆ. ಈ ಬೃಹತ್ ಕಟ್ಟಡದಲ್ಲಿ 1,500 ಕೋಣೆಗಳು ಹಾಗೂ 200ರಷ್ಟು ಸಭಾಂಗಣಗಳಿವೆ.<br /> <br /> ಪ್ರತಿದಿನ 30 ಸಾವಿರ ಭಕ್ತರು ಶಿರಡಿಗೆ ಬರುತ್ತಾರೆ. ಅವರಲ್ಲಿ ಬಹುತೇಕರು ಇಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ. ಅಂತಹ ಭಕ್ತಾದಿಗಳಿಗೆ ಛತ್ರದಿಂದ ಪ್ರಯೋಜನವಾಗಲಿದೆ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ನ ಹಿರಿಯ ಟ್ರಸ್ಟಿ ಅಶೋಕ್ ಕಾಂಬೇಕರ್ ಹೇಳಿದ್ದಾರೆ.<br /> <br /> ಇದಲ್ಲದೇ ಸಾಯಿ ಸಂಸ್ಥಾನ ಟ್ರಸ್ಟ್ ಶಿರಡಿ ಗ್ರಾಮ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲು 88 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದೂ ಅವರು ತಿಳಿಸಿದ್ದಾರೆ.<br /> <br /> ಕೇಂದ್ರ ಪ್ರವಾಸೋದ್ಯಮ ಸಚಿವ ಸುಭೋದ್ ಕಾಂತ್ ಸಹಾಯ್ ಅವರನ್ನು ತಾವು ಭೇಟಿಯಾದಾಗ, ಶಿರಡಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಕೇಳಿದ್ದಾಗಿ ಅವರು ಹೇಳಿದರು.<br /> <br /> ಶಿರಡಿಯಲ್ಲಿ ಸಾಯಿಬಾಬಾ ಸಮಾಧಿ ನಿರ್ಮಾಣವಾಗಿ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವಂತೆ ಹಾಗೂ ಶಿರಡಿ ಸುತ್ತಲಿನ ನಲವತ್ತರಿಂದ ಐವತ್ತು ಗ್ರಾಮಗಳು ಅಭಿವೃದ್ಧಿಯಾಗುವಂತೆ ಶಿರಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವಂತೆ ಟ್ರಸ್ಟ್ ಕೇಂದ್ರಕ್ಕೆ ಮನವಿ ಮಾಡಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>