<p><strong>ಕನಕಪುರ</strong>: ತಾಲ್ಲೂ ಕಿನ ಚಿಕ್ಕ ಕಲ್ಬಾಳ್ನಲ್ಲಿರುವ ಬಾಳೆ ಹೊನ್ನೂರು ರಂಭಾ ಪುರಿ ಪೀಠದ ಶಾಖಾ ಮಠದ ಪೀಠಾಧ್ಯಕ್ಷ ಶಿವ ಕುಮಾರ ಸ್ವಾಮೀಜಿ(82) ಅವರು ಭಾನುವಾರ ಬೆಳಿಗ್ಗೆ ಲಿಂಗೈಕ್ಯ ರಾದರು.<br /> <br /> + ಹೃದ್ರೋಗದಿಂದ ಬಳಲುತ್ತಿದ್ದ ಶ್ರೀಗ ಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಒಂದು ವಾರದಿಂದ ಆಸ್ಪತ್ರೆ ಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. <br /> <br /> ಶ್ರೀಗಳ ಲಿಂಗೈಕ್ಯದ ಸುದ್ದಿ ಜಿಲ್ಲೆಯಾದ್ಯಂತ ಹರಡುತ್ತಿದ್ದಂತೆ ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಬಿಲ್ವಪತ್ರೆ ಮಠದ ಶಿವಲಿಂಗಸ್ವಾಮಿ, ಕೆಂಗೇರಿ ಬಂಡೇ ಮಠದ ಶಿವಲಿಂಗಸ್ವಾಮಿ, ಮರಳವಾಡಿ ಮೃತ್ಯುಂಜಯ ಸ್ವಾಮಿ, ಬೇಲಿಮಠದ ಶಿವರುದ್ರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಹರ-ಗುರು ಶರಣರು ಹಾಗೂ ರಾಜಕೀಯ ಮುಖಂಡರು ಮಠಕ್ಕೆ ಆಗಮಿಸಿ, ಸ್ವಾಮೀಜಿ ದರ್ಶನ ಪಡೆದರು.<br /> <br /> ಅಂತ್ಯಕ್ರಿಯೆಯು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶಿವಾನಂದ ಶಿವಾಚಾರ್ಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ</strong>: ತಾಲ್ಲೂ ಕಿನ ಚಿಕ್ಕ ಕಲ್ಬಾಳ್ನಲ್ಲಿರುವ ಬಾಳೆ ಹೊನ್ನೂರು ರಂಭಾ ಪುರಿ ಪೀಠದ ಶಾಖಾ ಮಠದ ಪೀಠಾಧ್ಯಕ್ಷ ಶಿವ ಕುಮಾರ ಸ್ವಾಮೀಜಿ(82) ಅವರು ಭಾನುವಾರ ಬೆಳಿಗ್ಗೆ ಲಿಂಗೈಕ್ಯ ರಾದರು.<br /> <br /> + ಹೃದ್ರೋಗದಿಂದ ಬಳಲುತ್ತಿದ್ದ ಶ್ರೀಗ ಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿ ಸಲಾಗಿತ್ತು. ಒಂದು ವಾರದಿಂದ ಆಸ್ಪತ್ರೆ ಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. <br /> <br /> ಶ್ರೀಗಳ ಲಿಂಗೈಕ್ಯದ ಸುದ್ದಿ ಜಿಲ್ಲೆಯಾದ್ಯಂತ ಹರಡುತ್ತಿದ್ದಂತೆ ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಬಿಲ್ವಪತ್ರೆ ಮಠದ ಶಿವಲಿಂಗಸ್ವಾಮಿ, ಕೆಂಗೇರಿ ಬಂಡೇ ಮಠದ ಶಿವಲಿಂಗಸ್ವಾಮಿ, ಮರಳವಾಡಿ ಮೃತ್ಯುಂಜಯ ಸ್ವಾಮಿ, ಬೇಲಿಮಠದ ಶಿವರುದ್ರಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಹರ-ಗುರು ಶರಣರು ಹಾಗೂ ರಾಜಕೀಯ ಮುಖಂಡರು ಮಠಕ್ಕೆ ಆಗಮಿಸಿ, ಸ್ವಾಮೀಜಿ ದರ್ಶನ ಪಡೆದರು.<br /> <br /> ಅಂತ್ಯಕ್ರಿಯೆಯು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶಿವಾನಂದ ಶಿವಾಚಾರ್ಯರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>