<p><strong>ಹುಬ್ಬಳ್ಳಿ: </strong>ತನ್ನ ಆವರಣವನ್ನು ಶುಚಿಯಾಗಿಡುವುದಕ್ಕೆ ನಗರದ ಡಾ. ಆರ್.ಬಿ. ಪಾಟೀಲ ಆಸ್ಪತ್ರೆ ಇದೀಗ ದೇವರ ಮೊರೆ ಹೋಗಿದೆ. <br /> <br /> ಹೌದು. ಚಿಕಿತ್ಸೆಗೆಂದು ಎಲ್ಲೆಲ್ಲಿಂದಲೋ ರೋಗಿಗಳು ಇಲ್ಲಿಗೆ ಬರುತ್ತಿದ್ದರೆ, ಆಸ್ಪತ್ರೆ ಮಾತ್ರ ತನ್ನ ಆವರಣದ ಸ್ವಾಸ್ಥ್ಯ ರಕ್ಷಣೆಗಾಗಿ ಶಿವನಿಗೆ ಮೊರೆ ಇಟ್ಟಿದೆ.<br /> <br /> ಆಸ್ಪತ್ರೆಯ ಕಾಂಪೌಂಡ್ ಮೂಲೆಯು ಸಾರ್ವಜನಿಕ ಶೌಚಾಲಯ ರೂಪ ಪಡೆಯುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯವರು, ಅದನ್ನು ಶುಚಿಯಾಗಿಟ್ಟುಕೊಳ್ಳಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಕಾಂಪೌಂಡ್ ಲೆಕ್ಕವಿಲ್ಲಷ್ಟು ಬಾರಿ ಸುಣ್ಣ-ಬಣ್ಣ ಕಂಡಿದೆ. ಆದರೂ ಸುಣ್ಣ ಬಳಿದ ವಾರೊಪ್ಪೊತ್ತಿನಲ್ಲಿ ಅಲ್ಲಿ ಮತ್ತೆ ಮೂತ್ರದ ಚಿಂಗು; ಎಲೆ ಅಡಿಕೆಯ ಕೆಂಬಣ್ಣ! ಅತ್ತ ಸುಣ್ಣ ಬಳಿಯುವುದು; ಇತ್ತ ಮೂತ್ರ ವಿಸರ್ಜನೆಯೂ ನಡೆದೇ ಇತ್ತು. <br /> <br /> `ಆಸ್ಪತ್ರೆಯ ಆವರಣದಲ್ಲಿ ಯಾರೂ ಉಗುಳಬಾರದು~, `ಗೋಡೆಯ ಬಳಿ ಮೂತ್ರ ವಿಸರ್ಜನೆ ಮಾಡಬಾರದು~ ಎಂದು ಬರೆಸಿದ ಗೋಡೆ ಬರಹದ ಜಾಗ ಬಿಟ್ಟರೆ, ಇನ್ನುಳಿದ ಜಾಗದಲ್ಲಿ ಮತ್ತದೇ ಚಿಂಗು ವಾಸನೆ! <br /> <br /> ಮಳೆಗಾಲದಲ್ಲಂತೂ ವಿಪರೀತ ಕಿರಿಕಿರಿ ಎನಿಸುತ್ತಿದ್ದ ಈ ವಾಸನೆಗೆ ರೋಸಿ ಹೋಗುವಂತಾಗಿತ್ತು. ಬೈದು ಹೇಳಿದ ಬುದ್ಧಿಮಾತು ಫಲ ನೀಡದೇ ಹೋಯಿತು; ಎಚ್ಚರಿಕೆಯ ಗಂಟೆಯೂ ಕೆಲಸ ಮಾಡಲಿಲ್ಲ. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗದರಿಕೆಯ ದನಿಗೂ ಬಲ ಇಲ್ಲದಂತಾಯಿತು. ಈ ನಡುವೆ ಜನರು ಶೌಚಾಲಯವನ್ನಾಗಿ ಬಳಸಿಕೊಳ್ಳುತ್ತಿರುವ ಈ ಜಾಗಕ್ಕೆ ತಂತಿ ಬೇಲಿ ಹಾಕಲಾಯಿತು. ಒಂದೆರಡು ದಿನವಷ್ಟೇ, ನಂತರ ಬಾಯಿಯಿಂದ ಪಿಚಕ್ಕನೇ ಪಿಚಕಾರಿ ಬಿಟ್ಟವರು, ಪುಟ್ಟ ತಂತಿಯನ್ನು ದಾಟಿ ಗೋಡೆಗೆ ಮುಖ ಮಾಡಿ ಕುಳಿತವರೇ ಹೆಚ್ಚು! <br /> <br /> ಗದರಿದರಿಲ್ಲ, ಬೈಯ್ದರಿಲ್ಲ.., ಯಾವುದಕ್ಕೂ ಬಗ್ಗುವುದಿಲ್ಲ ಎಂದು ಗೊತ್ತಾದಾಗ, ಕೊನೆ ಪ್ರಯತ್ನ ಎಂಬಂತೆ ಇದೀಗ ಆಸ್ಪತ್ರೆಯ ಆವರಣ ಗೋಡೆಯ ಮೂಲೆಯಲ್ಲಿ ಶಿವಲಿಂಗನನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ತುಳಸಿ ಗಿಡದ ಕುಂಡವನ್ನೂ ಇಡಲಾಗಿದೆ. ಆ ಪ್ರಯತ್ನ ಫಲ ನೀಡುವಂತೆ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಆ ಶಿವಲಿಂಗ ಪೂಜೆಗಾಣುತ್ತಿದೆ. ಇನ್ನೇನು ಶಿವ ಎದ್ದು ಬಂದೇ ಬಿಡುತ್ತಾನೆ ಎನ್ನುವ ತೆರದಲ್ಲಿ ಢಾಳಾಗಿ ಬಳಿದ ವಿಭೂತಿಯ ಮೂರು ಗೆರೆ ಆಸ್ಪತ್ರೆಗೆ ಬಂದು-ಹೋಗುವವರಲ್ಲಿ ಭಯ-ಭಕ್ತಿ ಮೂಡಿಸುತ್ತಿದೆ. <br /> <br /> ಯಾವ ಜಾಗ ಮೂತ್ರ ವಿಸರ್ಜನೆಯ ತಾಣ ಎನಿಸಿತ್ತೋ ಈಗ ಅದೇ ಜಾಗದಲ್ಲಿ ಜನರು ಚಪ್ಪಲಿ ಬಿಟ್ಟು ನಿಂತು, ಶಿವಲಿಂಗಕ್ಕೆ ನಮಸ್ಕರಿಸಿ ಆಸ್ಪತ್ರೆಯ ಒಳ ಹೋಗುತ್ತಾರೆ. ಬೈಕ್-ಕಾರಿನಲ್ಲಿ ಹೋಗುವವರೂ ಗಲ್ಲ ಬಡಿದುಕೊಂಡು ಮುಂದೆ ದಾಟುತ್ತಾರೆ. ಗೋಡೆಯ ಮೇಲೆ ಈಗ `ಎಚ್ಚರಿಕೆ! ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ~ ಎಂಬ ಬರಹವಷ್ಟೇ ಇದೆ. ಗೋಡೆಗೆ ಈಗ ತುಸು ಹಾಯ್ ಎನಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ತನ್ನ ಆವರಣವನ್ನು ಶುಚಿಯಾಗಿಡುವುದಕ್ಕೆ ನಗರದ ಡಾ. ಆರ್.ಬಿ. ಪಾಟೀಲ ಆಸ್ಪತ್ರೆ ಇದೀಗ ದೇವರ ಮೊರೆ ಹೋಗಿದೆ. <br /> <br /> ಹೌದು. ಚಿಕಿತ್ಸೆಗೆಂದು ಎಲ್ಲೆಲ್ಲಿಂದಲೋ ರೋಗಿಗಳು ಇಲ್ಲಿಗೆ ಬರುತ್ತಿದ್ದರೆ, ಆಸ್ಪತ್ರೆ ಮಾತ್ರ ತನ್ನ ಆವರಣದ ಸ್ವಾಸ್ಥ್ಯ ರಕ್ಷಣೆಗಾಗಿ ಶಿವನಿಗೆ ಮೊರೆ ಇಟ್ಟಿದೆ.<br /> <br /> ಆಸ್ಪತ್ರೆಯ ಕಾಂಪೌಂಡ್ ಮೂಲೆಯು ಸಾರ್ವಜನಿಕ ಶೌಚಾಲಯ ರೂಪ ಪಡೆಯುತ್ತಿರುವುದನ್ನು ಗಮನಿಸಿದ ಆಸ್ಪತ್ರೆಯವರು, ಅದನ್ನು ಶುಚಿಯಾಗಿಟ್ಟುಕೊಳ್ಳಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಕಳೆದ ಎರಡು ಮೂರು ವರ್ಷಗಳಲ್ಲಿ ಕಾಂಪೌಂಡ್ ಲೆಕ್ಕವಿಲ್ಲಷ್ಟು ಬಾರಿ ಸುಣ್ಣ-ಬಣ್ಣ ಕಂಡಿದೆ. ಆದರೂ ಸುಣ್ಣ ಬಳಿದ ವಾರೊಪ್ಪೊತ್ತಿನಲ್ಲಿ ಅಲ್ಲಿ ಮತ್ತೆ ಮೂತ್ರದ ಚಿಂಗು; ಎಲೆ ಅಡಿಕೆಯ ಕೆಂಬಣ್ಣ! ಅತ್ತ ಸುಣ್ಣ ಬಳಿಯುವುದು; ಇತ್ತ ಮೂತ್ರ ವಿಸರ್ಜನೆಯೂ ನಡೆದೇ ಇತ್ತು. <br /> <br /> `ಆಸ್ಪತ್ರೆಯ ಆವರಣದಲ್ಲಿ ಯಾರೂ ಉಗುಳಬಾರದು~, `ಗೋಡೆಯ ಬಳಿ ಮೂತ್ರ ವಿಸರ್ಜನೆ ಮಾಡಬಾರದು~ ಎಂದು ಬರೆಸಿದ ಗೋಡೆ ಬರಹದ ಜಾಗ ಬಿಟ್ಟರೆ, ಇನ್ನುಳಿದ ಜಾಗದಲ್ಲಿ ಮತ್ತದೇ ಚಿಂಗು ವಾಸನೆ! <br /> <br /> ಮಳೆಗಾಲದಲ್ಲಂತೂ ವಿಪರೀತ ಕಿರಿಕಿರಿ ಎನಿಸುತ್ತಿದ್ದ ಈ ವಾಸನೆಗೆ ರೋಸಿ ಹೋಗುವಂತಾಗಿತ್ತು. ಬೈದು ಹೇಳಿದ ಬುದ್ಧಿಮಾತು ಫಲ ನೀಡದೇ ಹೋಯಿತು; ಎಚ್ಚರಿಕೆಯ ಗಂಟೆಯೂ ಕೆಲಸ ಮಾಡಲಿಲ್ಲ. ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗದರಿಕೆಯ ದನಿಗೂ ಬಲ ಇಲ್ಲದಂತಾಯಿತು. ಈ ನಡುವೆ ಜನರು ಶೌಚಾಲಯವನ್ನಾಗಿ ಬಳಸಿಕೊಳ್ಳುತ್ತಿರುವ ಈ ಜಾಗಕ್ಕೆ ತಂತಿ ಬೇಲಿ ಹಾಕಲಾಯಿತು. ಒಂದೆರಡು ದಿನವಷ್ಟೇ, ನಂತರ ಬಾಯಿಯಿಂದ ಪಿಚಕ್ಕನೇ ಪಿಚಕಾರಿ ಬಿಟ್ಟವರು, ಪುಟ್ಟ ತಂತಿಯನ್ನು ದಾಟಿ ಗೋಡೆಗೆ ಮುಖ ಮಾಡಿ ಕುಳಿತವರೇ ಹೆಚ್ಚು! <br /> <br /> ಗದರಿದರಿಲ್ಲ, ಬೈಯ್ದರಿಲ್ಲ.., ಯಾವುದಕ್ಕೂ ಬಗ್ಗುವುದಿಲ್ಲ ಎಂದು ಗೊತ್ತಾದಾಗ, ಕೊನೆ ಪ್ರಯತ್ನ ಎಂಬಂತೆ ಇದೀಗ ಆಸ್ಪತ್ರೆಯ ಆವರಣ ಗೋಡೆಯ ಮೂಲೆಯಲ್ಲಿ ಶಿವಲಿಂಗನನ್ನು ನಿರ್ಮಿಸಿದ್ದಾರೆ. ಪಕ್ಕದಲ್ಲಿ ತುಳಸಿ ಗಿಡದ ಕುಂಡವನ್ನೂ ಇಡಲಾಗಿದೆ. ಆ ಪ್ರಯತ್ನ ಫಲ ನೀಡುವಂತೆ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಆ ಶಿವಲಿಂಗ ಪೂಜೆಗಾಣುತ್ತಿದೆ. ಇನ್ನೇನು ಶಿವ ಎದ್ದು ಬಂದೇ ಬಿಡುತ್ತಾನೆ ಎನ್ನುವ ತೆರದಲ್ಲಿ ಢಾಳಾಗಿ ಬಳಿದ ವಿಭೂತಿಯ ಮೂರು ಗೆರೆ ಆಸ್ಪತ್ರೆಗೆ ಬಂದು-ಹೋಗುವವರಲ್ಲಿ ಭಯ-ಭಕ್ತಿ ಮೂಡಿಸುತ್ತಿದೆ. <br /> <br /> ಯಾವ ಜಾಗ ಮೂತ್ರ ವಿಸರ್ಜನೆಯ ತಾಣ ಎನಿಸಿತ್ತೋ ಈಗ ಅದೇ ಜಾಗದಲ್ಲಿ ಜನರು ಚಪ್ಪಲಿ ಬಿಟ್ಟು ನಿಂತು, ಶಿವಲಿಂಗಕ್ಕೆ ನಮಸ್ಕರಿಸಿ ಆಸ್ಪತ್ರೆಯ ಒಳ ಹೋಗುತ್ತಾರೆ. ಬೈಕ್-ಕಾರಿನಲ್ಲಿ ಹೋಗುವವರೂ ಗಲ್ಲ ಬಡಿದುಕೊಂಡು ಮುಂದೆ ದಾಟುತ್ತಾರೆ. ಗೋಡೆಯ ಮೇಲೆ ಈಗ `ಎಚ್ಚರಿಕೆ! ಇಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ~ ಎಂಬ ಬರಹವಷ್ಟೇ ಇದೆ. ಗೋಡೆಗೆ ಈಗ ತುಸು ಹಾಯ್ ಎನಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>