<p>ಚಲನಚಿತ್ರ ಸಬ್ಸಿಡಿ ಸಮಿತಿಯ ಅಧ್ಯಕ್ಷರಾಗಿದ್ದು ಲಂಚದ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಹಿರಿಯ ನಟ ಎಸ್.ಶಿವರಾಂ ಅವರಿಗೆ ಡಾ.ರಾಜ್ಕುಮಾರ್ ಪ್ರಶಸ್ತಿ ನೀಡುವ ವಿಚಾರದಲ್ಲಿ ಆಯ್ಕೆ ಸಮಿತಿಯ ಕೆಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಸಂಗತಿಯೂ ಇದೀಗ ಬಯಲಾಗಿದೆ.<br /> <br /> `ಶಿವರಾಂ ಅವರು ಕನ್ನಡ ಚಿತ್ರರಂಗದ ಹಿರಿಯರು. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದೂ ನಿಜ. ಆದರೆ ಈಗ ಸಬ್ಸಿಡಿ ಲಂಚದ ಪ್ರಕರಣದಲ್ಲಿ ಆರೋಪಿಯಾಗಿರುವ ಸಂದರ್ಭದಲ್ಲಿ ಅವರಿಗೆ ಡಾ.ರಾಜ್ ಹೆಸರಿನ ಪ್ರಶಸ್ತಿ ನೀಡುವುದು ಸೂಕ್ತವಲ್ಲ. ಕಳಂಕಿತರಾಗಿರುವಾಗ ನೈತಿಕವಾಗಿಯೂ ಇದು ಸರಿ ಎನ್ನಿಸುವುದಿಲ್ಲ~ ಎಂದು ಆಯ್ಕೆ ಸಮಿತಿಯ ಮೂವರು ಸದಸ್ಯರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. <br /> <br /> `ಪ್ರಶಸ್ತಿ ನೀಡಲೇಬೇಕೆಂದು ಪಟ್ಟು ಹಿಡಿದ ಸದಸ್ಯರೊಬ್ಬರು, ಆರೋಪ ಯಾರ ಮೇಲಿಲ್ಲ? ಯಡಿಯೂರಪ್ಪ ಅವರ ಮೇಲಿಲ್ಲವೆ? ಜನಾರ್ದನ ರೆಡ್ಡಿಯವರ ಮೇಲಿಲ್ಲವೆ? ಅದು ನಮಗೆ ಸಂಬಂಧಿಸಿದ ಸಂಗತಿ ಅಲ್ಲ. ನಾವು ಪ್ರಶಸ್ತಿ ನೀಡಿದರೆ ಏನೂ ತಪ್ಪಿಲ್ಲ~ ಎಂದೂ ವಾದಿಸಿದರಂತೆ! <br /> <br /> ಕೊನೆಗೆ ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಭಾರತಿ ವಿಷ್ಣುವರ್ಧನ್ ಅವರು `ಪೊಲೀಸ್ ಕೇಸ್ ಬಗ್ಗೆ ಪ್ರಶಸ್ತಿ ಆಯ್ಕೆ ಸಮಿತಿಗೆ ಸರಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ ಪ್ರಶಸ್ತಿ ನೀಡಬಹುದು~ ಎಂದು ವಾದಿಸಿದರಂತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಲನಚಿತ್ರ ಸಬ್ಸಿಡಿ ಸಮಿತಿಯ ಅಧ್ಯಕ್ಷರಾಗಿದ್ದು ಲಂಚದ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಹಿರಿಯ ನಟ ಎಸ್.ಶಿವರಾಂ ಅವರಿಗೆ ಡಾ.ರಾಜ್ಕುಮಾರ್ ಪ್ರಶಸ್ತಿ ನೀಡುವ ವಿಚಾರದಲ್ಲಿ ಆಯ್ಕೆ ಸಮಿತಿಯ ಕೆಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ ಸಂಗತಿಯೂ ಇದೀಗ ಬಯಲಾಗಿದೆ.<br /> <br /> `ಶಿವರಾಂ ಅವರು ಕನ್ನಡ ಚಿತ್ರರಂಗದ ಹಿರಿಯರು. ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದೂ ನಿಜ. ಆದರೆ ಈಗ ಸಬ್ಸಿಡಿ ಲಂಚದ ಪ್ರಕರಣದಲ್ಲಿ ಆರೋಪಿಯಾಗಿರುವ ಸಂದರ್ಭದಲ್ಲಿ ಅವರಿಗೆ ಡಾ.ರಾಜ್ ಹೆಸರಿನ ಪ್ರಶಸ್ತಿ ನೀಡುವುದು ಸೂಕ್ತವಲ್ಲ. ಕಳಂಕಿತರಾಗಿರುವಾಗ ನೈತಿಕವಾಗಿಯೂ ಇದು ಸರಿ ಎನ್ನಿಸುವುದಿಲ್ಲ~ ಎಂದು ಆಯ್ಕೆ ಸಮಿತಿಯ ಮೂವರು ಸದಸ್ಯರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. <br /> <br /> `ಪ್ರಶಸ್ತಿ ನೀಡಲೇಬೇಕೆಂದು ಪಟ್ಟು ಹಿಡಿದ ಸದಸ್ಯರೊಬ್ಬರು, ಆರೋಪ ಯಾರ ಮೇಲಿಲ್ಲ? ಯಡಿಯೂರಪ್ಪ ಅವರ ಮೇಲಿಲ್ಲವೆ? ಜನಾರ್ದನ ರೆಡ್ಡಿಯವರ ಮೇಲಿಲ್ಲವೆ? ಅದು ನಮಗೆ ಸಂಬಂಧಿಸಿದ ಸಂಗತಿ ಅಲ್ಲ. ನಾವು ಪ್ರಶಸ್ತಿ ನೀಡಿದರೆ ಏನೂ ತಪ್ಪಿಲ್ಲ~ ಎಂದೂ ವಾದಿಸಿದರಂತೆ! <br /> <br /> ಕೊನೆಗೆ ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಭಾರತಿ ವಿಷ್ಣುವರ್ಧನ್ ಅವರು `ಪೊಲೀಸ್ ಕೇಸ್ ಬಗ್ಗೆ ಪ್ರಶಸ್ತಿ ಆಯ್ಕೆ ಸಮಿತಿಗೆ ಸರಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ ಪ್ರಶಸ್ತಿ ನೀಡಬಹುದು~ ಎಂದು ವಾದಿಸಿದರಂತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>