<p><strong>ಹೂವಿನಹಡಗಲಿ:</strong> ಬರುವ ಜೂನ್ ತಿಂಗಳೊಳಗೆ ರೈತರ ಹೊಲಗಳಿಗೆ ನೀರು ಕೊಡುವುದಾಗಿ ಮುನಿರಾಬಾದ್ನ ತುಂಗಭದ್ರ ಕೇಂದ್ರವಲಯದ ಮುಖ್ಯ ಎಂಜಿನಿಯರ್ ಕೆ.ಬಿ. ದೇವರಾಜ ಹೇಳಿದರು.<br /> <br /> ತಾಲ್ಲೂಕಿನ ರಾಜವಾಳ್ ಗ್ರಾಮದ ಬಳಿ ಯೋಜಿತವಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನಾ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. <br /> <br /> ಒಟ್ಟು 26 ಗೇಟ್ಗಳಲ್ಲಿ ಮೂರು ಗೇಟ್ಗಳ ಕಾಮಗಾರಿ ಕೆಲಸ ಉಳಿದಿತ್ತು. ಈಗಾಗಲೇ ಆ ಕೆಲಸವೂ ಕೂಡಾ ಸಂಪೂರ್ಣವಾಗಿದೆ ಎಂದರು.<br /> <br /> ಬಲದಂಡೆಯಲ್ಲಿ ನಿರೆತ್ತುವ ಘಟಕದ ಒಂದು ಕಾಮಗಾರಿ ಸಂಪೂರ್ಣ ಮಗಿದಿದೆ. ಉಳಿದಂತೆ ಈ ಭಾಗದಲ್ಲಿ ಒಂದು ಮತ್ತು ಎಡ ದಂಡೆಯ ಭಾಗದಲ್ಲಿ ಮೂರು ಒಟ್ಟು ನಾಲ್ಕು ಲಿಫ್ಟ್ಗಳ ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದರು.<br /> <br /> 12 ಸಾವಿರ ಎಕರೆ ಭೂಮಿಗೆ ಬಲದಂಡೆಯ ಭೂಮಿಗೆ ನೀರನ್ನು ಕೊಡಲಾಗುತ್ತದೆ. ಒಟ್ಟು ಒಂದು ಲಕ್ಷದ 20 ಸಾವಿರ ಎಕರೆ ಭೂಮಿಗೆ ಒಂದು ಮತ್ತು ಎರಡನೇ ಹಂತದಲ್ಲಿ ನೀರನ್ನು ಕೊಡಲಾಗುತ್ತದೆ ಎಂದರು.|<br /> <br /> ಹಡಗಲಿ, ಗದಗ ಮತ್ತು ಕೊಪ್ಪಳ ಭಾಗಗಳಲ್ಲಿ ಕಾಲುವೆಗಳ ಕೆಲಸ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದರು.<br /> <br /> 3.1 ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗಲಿದ್ದು, ಬೇಸಿಗೆ ದಿನಗಳಲ್ಲಿ ಹಡಗಲಿ, ಗದಗ ಮತ್ತು ಕೊಪ್ಪಳ ಭಾಗದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ದೂರವಾಗಲಿದ್ದಾರೆ ಎಂದು ಹೇಳಿದರು.<br /> <br /> ಆದಷ್ಟು ಬೇಗನೇ ಕಾಮಗಾರಿಯನ್ನು ಮುಗಿಸಿ ರೈತರ ಹೊಲಗಳಿಗೆ ನೀರು ಕೊಡುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರು. <br /> <br /> ಸಿಂಗಟಾಲೂರು ಏತ-ನೀರಾವರಿ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಓದುಗಂಗಪ್ಪ, ಡಿವೈಎಸ್ಪಿ ಕೃಷ್ಣಮೂರ್ತಿ ಹೊಸಕೋಟಿ ಸ್ಥಳದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ:</strong> ಬರುವ ಜೂನ್ ತಿಂಗಳೊಳಗೆ ರೈತರ ಹೊಲಗಳಿಗೆ ನೀರು ಕೊಡುವುದಾಗಿ ಮುನಿರಾಬಾದ್ನ ತುಂಗಭದ್ರ ಕೇಂದ್ರವಲಯದ ಮುಖ್ಯ ಎಂಜಿನಿಯರ್ ಕೆ.ಬಿ. ದೇವರಾಜ ಹೇಳಿದರು.<br /> <br /> ತಾಲ್ಲೂಕಿನ ರಾಜವಾಳ್ ಗ್ರಾಮದ ಬಳಿ ಯೋಜಿತವಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನಾ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. <br /> <br /> ಒಟ್ಟು 26 ಗೇಟ್ಗಳಲ್ಲಿ ಮೂರು ಗೇಟ್ಗಳ ಕಾಮಗಾರಿ ಕೆಲಸ ಉಳಿದಿತ್ತು. ಈಗಾಗಲೇ ಆ ಕೆಲಸವೂ ಕೂಡಾ ಸಂಪೂರ್ಣವಾಗಿದೆ ಎಂದರು.<br /> <br /> ಬಲದಂಡೆಯಲ್ಲಿ ನಿರೆತ್ತುವ ಘಟಕದ ಒಂದು ಕಾಮಗಾರಿ ಸಂಪೂರ್ಣ ಮಗಿದಿದೆ. ಉಳಿದಂತೆ ಈ ಭಾಗದಲ್ಲಿ ಒಂದು ಮತ್ತು ಎಡ ದಂಡೆಯ ಭಾಗದಲ್ಲಿ ಮೂರು ಒಟ್ಟು ನಾಲ್ಕು ಲಿಫ್ಟ್ಗಳ ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದರು.<br /> <br /> 12 ಸಾವಿರ ಎಕರೆ ಭೂಮಿಗೆ ಬಲದಂಡೆಯ ಭೂಮಿಗೆ ನೀರನ್ನು ಕೊಡಲಾಗುತ್ತದೆ. ಒಟ್ಟು ಒಂದು ಲಕ್ಷದ 20 ಸಾವಿರ ಎಕರೆ ಭೂಮಿಗೆ ಒಂದು ಮತ್ತು ಎರಡನೇ ಹಂತದಲ್ಲಿ ನೀರನ್ನು ಕೊಡಲಾಗುತ್ತದೆ ಎಂದರು.|<br /> <br /> ಹಡಗಲಿ, ಗದಗ ಮತ್ತು ಕೊಪ್ಪಳ ಭಾಗಗಳಲ್ಲಿ ಕಾಲುವೆಗಳ ಕೆಲಸ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ ಎಂದರು.<br /> <br /> 3.1 ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗಲಿದ್ದು, ಬೇಸಿಗೆ ದಿನಗಳಲ್ಲಿ ಹಡಗಲಿ, ಗದಗ ಮತ್ತು ಕೊಪ್ಪಳ ಭಾಗದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ದೂರವಾಗಲಿದ್ದಾರೆ ಎಂದು ಹೇಳಿದರು.<br /> <br /> ಆದಷ್ಟು ಬೇಗನೇ ಕಾಮಗಾರಿಯನ್ನು ಮುಗಿಸಿ ರೈತರ ಹೊಲಗಳಿಗೆ ನೀರು ಕೊಡುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರು. <br /> <br /> ಸಿಂಗಟಾಲೂರು ಏತ-ನೀರಾವರಿ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಓದುಗಂಗಪ್ಪ, ಡಿವೈಎಸ್ಪಿ ಕೃಷ್ಣಮೂರ್ತಿ ಹೊಸಕೋಟಿ ಸ್ಥಳದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>