<p>ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ವೆ ನಡೆಸಿದ್ದು, ಒಂದ ರಿಂದ 6 ವರ್ಷ ವಯೋಮಿತಿಯ 100 ಮಕ್ಕಳು ಅಪೌಷ್ಟಿಕತೆಯಿಂದ ಬಳಲು ತ್ತಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಟ್ಟಿ ತಯಾರಿಸಿದೆ.<br /> <br /> ತಾಲ್ಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಅಂದರೆ ಒಟ್ಟು 25 ಮಕ್ಕಳು ಅಪೌಷ್ಟಿ ಕತೆಯಿಂದ ಬಳಲುತ್ತಿವೆ. ನಂತರದಲ್ಲಿ ಶ್ರೀರಂಗಪಟ್ಟಣ ಇದ್ದು ಇಲ್ಲಿ 17 ಮಕ್ಕಳು ಅಪೌಷ್ಟಿಕತೆಯಿಂದ ನರಳು ತ್ತಿವೆ. ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಇಂತಹ 14 ಮಕ್ಕಳಿದ್ದಾರೆ. <br /> <br /> ಪಾಲಹಳ್ಳಿಯಲ್ಲಿ 13, ಮಹದೇವಪುರದಲ್ಲಿ 11, ಅರಕೆರೆಯಲ್ಲಿ 11, ಕೊಡಿಯಾಲದಲ್ಲಿ 5 ಮತ್ತು ಟಿ.ಎಂ.ಹೊಸೂರು ವ್ಯಾಪ್ತಿಯಲ್ಲಿ 4 ಮಕ್ಕಳು ಪೌಷ್ಟಿಕ ಆಹಾರದ ಕೊರತೆ ಎದುರಿಸುತ್ತಿವೆ ಎಂಬುದು ವರದಿಂದ ಖಚಿತವಾಗಿದೆ. ಬಡ, ಕೂಲಿಕಾರರ ಕುಟುಂಬದಲ್ಲಿ ಇಂತಹ ಹೆಚ್ಚು ಮಕ್ಕಳು ಇದ್ದಾರೆ. <br /> <br /> ದೈಹಿಕ ಮತ್ತು ಮಾನಸಿಕ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರುವುದು ಹಾಗೂ ನೀರಸ ಚಟು ವಟಿಕೆ ಈ ಮಕ್ಕಳ ಲಕ್ಷಣ ವಾಗಿದ್ದು, ಸಕಾಲಕ್ಕೆ ಔಧೋಪಚಾರ ಮಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಅಪಾಯ ಇರುತ್ತದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮಂಜುನಾಥ್ ಹೇಳಿದರು.<br /> <br /> ತೀವ್ರತರವಾದ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ `ಬಾಲ ಸಂಜೀವಿನಿ~ ಯೋಜನೆಯಡಿ ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾ ಗುತ್ತದೆ. ಆರಂಭಿಕ ಹಂತದ ಅಪೌಷ್ಟಿಕತೆ ಇರುವ ಮಕ್ಕಳಿಗೆ ರೂ.750 ವರೆಗೆ ಉಚಿತ ಔಷಧ ಕೊಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ಕೂಡ ವಿತರಿಸಲಾ ಗುತ್ತದೆ ಎಂದು ಇಲಾಖೆ ಮೇಲ್ವಿಚಾರಕಿ ಶಿವಮ್ಮ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀರಂಗಪಟ್ಟಣ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ವೆ ನಡೆಸಿದ್ದು, ಒಂದ ರಿಂದ 6 ವರ್ಷ ವಯೋಮಿತಿಯ 100 ಮಕ್ಕಳು ಅಪೌಷ್ಟಿಕತೆಯಿಂದ ಬಳಲು ತ್ತಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಟ್ಟಿ ತಯಾರಿಸಿದೆ.<br /> <br /> ತಾಲ್ಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಅಂದರೆ ಒಟ್ಟು 25 ಮಕ್ಕಳು ಅಪೌಷ್ಟಿ ಕತೆಯಿಂದ ಬಳಲುತ್ತಿವೆ. ನಂತರದಲ್ಲಿ ಶ್ರೀರಂಗಪಟ್ಟಣ ಇದ್ದು ಇಲ್ಲಿ 17 ಮಕ್ಕಳು ಅಪೌಷ್ಟಿಕತೆಯಿಂದ ನರಳು ತ್ತಿವೆ. ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಇಂತಹ 14 ಮಕ್ಕಳಿದ್ದಾರೆ. <br /> <br /> ಪಾಲಹಳ್ಳಿಯಲ್ಲಿ 13, ಮಹದೇವಪುರದಲ್ಲಿ 11, ಅರಕೆರೆಯಲ್ಲಿ 11, ಕೊಡಿಯಾಲದಲ್ಲಿ 5 ಮತ್ತು ಟಿ.ಎಂ.ಹೊಸೂರು ವ್ಯಾಪ್ತಿಯಲ್ಲಿ 4 ಮಕ್ಕಳು ಪೌಷ್ಟಿಕ ಆಹಾರದ ಕೊರತೆ ಎದುರಿಸುತ್ತಿವೆ ಎಂಬುದು ವರದಿಂದ ಖಚಿತವಾಗಿದೆ. ಬಡ, ಕೂಲಿಕಾರರ ಕುಟುಂಬದಲ್ಲಿ ಇಂತಹ ಹೆಚ್ಚು ಮಕ್ಕಳು ಇದ್ದಾರೆ. <br /> <br /> ದೈಹಿಕ ಮತ್ತು ಮಾನಸಿಕ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರುವುದು ಹಾಗೂ ನೀರಸ ಚಟು ವಟಿಕೆ ಈ ಮಕ್ಕಳ ಲಕ್ಷಣ ವಾಗಿದ್ದು, ಸಕಾಲಕ್ಕೆ ಔಧೋಪಚಾರ ಮಾಡದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಅಪಾಯ ಇರುತ್ತದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮಂಜುನಾಥ್ ಹೇಳಿದರು.<br /> <br /> ತೀವ್ರತರವಾದ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ `ಬಾಲ ಸಂಜೀವಿನಿ~ ಯೋಜನೆಯಡಿ ಬೆಂಗಳೂರಿನ 5 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾ ಗುತ್ತದೆ. ಆರಂಭಿಕ ಹಂತದ ಅಪೌಷ್ಟಿಕತೆ ಇರುವ ಮಕ್ಕಳಿಗೆ ರೂ.750 ವರೆಗೆ ಉಚಿತ ಔಷಧ ಕೊಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ಕೂಡ ವಿತರಿಸಲಾ ಗುತ್ತದೆ ಎಂದು ಇಲಾಖೆ ಮೇಲ್ವಿಚಾರಕಿ ಶಿವಮ್ಮ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>