<p><strong>200 ವಿದೇಶಿ ಕಾರ್ಮಿಕರಿಗೆ ಎಚ್ಚರಿಕೆ</strong><br /> ಸಿಂಗಪುರ (ಪಿಟಿಐ): ಲಿಟ್ಲ್ ಇಂಡಿಯಾ ಪ್ರದೇಶ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡಿದ್ದರು ಎನ್ನುವ ಆರೋಪದ ಮೇಲೆ ಇಲ್ಲಿ ಕೆಲಸ ಮಾಡುತ್ತಿರುವ ಭಾರತೀಯರೂ ಸೇರಿದಂತೆ ಸುಮಾರು 200 ವಿದೇಶಿ ಕಾರ್ಮಿಕರಿಗೆ ಸಿಂಗಪುರ ಪೊಲೀಸರು ಭಾನುವಾರ ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದಾರೆ.<br /> <br /> <strong>ನೈರೋಬಿ: ಹಳಿ ತಪ್ಪಿದ ರೈಲು</strong><br /> ನೈರೋಬಿ (ಎಎಫ್ಪಿ): ಕೊಳೆಗೇರಿ ಪ್ರದೇಶದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿ ಬಿದ್ದ ಪರಿಣಾಮ ಕನಿಷ್ಠ ಆರು ಜನ ಗಾಯಗೊಂಡ ಘಟನೆ ಭಾನುವಾರ ಇಲ್ಲಿ ನಡೆದಿದೆ.<br /> <br /> ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ಮೈಖೆಲ್ ಕಮೂ ಹೇಳಿದ್ದಾರೆ.<br /> <br /> <strong>ವಿಮಾನ ಅಪಘಾತ: ಪೈಲಟ್ ಕೃತ್ಯ</strong><br /> ಲಂಡನ್ (ಐಎಎನ್ಎಸ್): ನಮೀಬಿಯಾದಲ್ಲಿ ಕಳೆದ ತಿಂಗಳು ದುರಂತಕ್ಕೀಡಾಗಿದ್ದ ಮೊಜಾಂಬಿಕ್ ಏರ್ಲೈನ್ಸ್ನ ವಿಮಾನವನ್ನು ಪೈಲಟ್ ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡುಮಾಡಿದ್ದ ಎಂದು ಬಿಬಿಸಿ ವರದಿ ಮಾಡಿದೆ.<br /> <br /> ಅಂಗೋಲಾಕ್ಕೆ ತೆರಳುತ್ತಿದ್ದ ವಿಮಾನ ನವೆಂಬರ್ 30ರಂದು ನಮೀಬಿಯಾದಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನ-ದಲ್ಲಿದ್ದ ಎಲ್ಲಾ 33 ಜನ ಮೃತಪಟ್ಟಿದ್ದರು.<br /> <br /> <strong>‘ಬಾಹ್ಯಾಕಾಶದಲ್ಲಿ ಆಕರಕೋಶ ಬೆಳೆ’</strong><br /> ವಾಷಿಂಗ್ಟನ್ (ಪಿಟಿಐ): ಬಾಹ್ಯಾಕಾಶದಲ್ಲಿ ಮಾನವನ ಆಕರಕೋಶಗಳನ್ನು ಬೆಳೆಸುವ ಪ್ರಯತ್ನಕ್ಕೆ ಅಮೆರಿಕ ವಿಜ್ಞಾನಿಗಳು ಮುಂದಾಗಿದ್ದಾರೆ.<br /> <br /> ಆಕರಕೋಶಗಳನ್ನು ಭೂಮಿಗಿಂತಲೂ ಹೆಚ್ಚು ವೇಗದಲ್ಲಿ ಬಾಹ್ಯಾಕಾಶದಲ್ಲಿ ಬೆಳೆಸಬಹುದೇ ಎಂಬುದನ್ನು ತಿಳಿಯುವುದಕ್ಕಾಗಿ ಅಮೆರಿಕವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಾನವ ಆಕರಕೋಶಗಳನ್ನು ಕಳುಹಿಸಲಿದೆ.<br /> <br /> <strong>ಅಂತರಿಕ್ಷ ಉಡುಪು ದೋಷ</strong><br /> ವಾಷಿಂಗ್ಟನ್ (ಎಎಫ್ಪಿ): ಗಗನಯಾತ್ರಿಯೊಬ್ಬರ ಉಡುಪಿನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಕಾರ್ಯ ಮುಂದೂಡಿದೆ.<br /> <br /> ಐಎಸ್ಎಸ್ನ ದುರಸ್ತಿ ಕಾರ್ಯಕ್ಕಾಗಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದ ಹಿರಿಯ ಗಗನಯಾತ್ರಿ ರಿಕ್ಮಾಸ್ಟ್ರಚಿನೊ ಅವರು ಧರಿಸಿದ್ದ ಬಾಹ್ಯಾಕಾಶ ದಿರಿಸಿನ ಶೀತಲೀಕರಣ ಘಟಕದಲ್ಲಿ ದೋಷ ಕಂಡು ಬಂದ ಕಾರಣ 5.5 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸಿ ಐಎಸ್ಎಸ್ಗೆ ಹಿಂದಿರುಗಿದರು ಎಂದು ನಾಸಾ ಹೇಳಿದೆ.<br /> <br /> <strong>ಭಾರತೀಯ ವೈದ್ಯನ ಶವ ಬ್ರಿಟನ್ಗೆ</strong><br /> ಲಂಡನ್ (ಪಿಟಿಐ): ಸಿರಿಯಾ ಜೈಲಿನಲ್ಲಿ ಶಂಕಾಸ್ಪದ ರೀತಿಯಲ್ಲಿ ಇದೇ 16ರಂದು ಸಾವನ್ನಪ್ಪಿದ್ದ ಭಾರತ ಮೂಲದ ವೈದ್ಯ ಷಾ ಅಬ್ಬಾಸ್ ಖಾನ್ (32) ಅವರ ಶವವನ್ನು ಬ್ರಿಟನ್ಗೆ ರವಾನಿಸಲಾಗಿದೆ. ದಕ್ಷಿಣ ಲಂಡನ್ ನಿವಾಸಿಯಾದ ಅವರು ಮೂಳೆ ಶಸ್ತ್ರಚಿಕಿತ್ಸಕರಾಗಿದ್ದರು.<br /> <br /> ಶವವನ್ನು ಶನಿವಾರವೇ ಲೆಬನಾನ್ಗೆ ಕಳುಹಿಸಲಾಗಿದ್ದು, ಖಾನ್ ಅವರ ತಾಯಿ ಫಾತಿಮಾ ಮತ್ತು ಸೋದರ ಅಫ್ರೋಜ್ ಅವರು ಅದನ್ನು ಸ್ವೀಕರಿಸಿದ್ದಾರೆ. ಅವರು ಶವವನ್ನು ಬ್ರಿಟನ್ಗೆ ತೆಗೆದುಕೊಂಡು ಹೋಗಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>200 ವಿದೇಶಿ ಕಾರ್ಮಿಕರಿಗೆ ಎಚ್ಚರಿಕೆ</strong><br /> ಸಿಂಗಪುರ (ಪಿಟಿಐ): ಲಿಟ್ಲ್ ಇಂಡಿಯಾ ಪ್ರದೇಶ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡಿದ್ದರು ಎನ್ನುವ ಆರೋಪದ ಮೇಲೆ ಇಲ್ಲಿ ಕೆಲಸ ಮಾಡುತ್ತಿರುವ ಭಾರತೀಯರೂ ಸೇರಿದಂತೆ ಸುಮಾರು 200 ವಿದೇಶಿ ಕಾರ್ಮಿಕರಿಗೆ ಸಿಂಗಪುರ ಪೊಲೀಸರು ಭಾನುವಾರ ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದಾರೆ.<br /> <br /> <strong>ನೈರೋಬಿ: ಹಳಿ ತಪ್ಪಿದ ರೈಲು</strong><br /> ನೈರೋಬಿ (ಎಎಫ್ಪಿ): ಕೊಳೆಗೇರಿ ಪ್ರದೇಶದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿ ಬಿದ್ದ ಪರಿಣಾಮ ಕನಿಷ್ಠ ಆರು ಜನ ಗಾಯಗೊಂಡ ಘಟನೆ ಭಾನುವಾರ ಇಲ್ಲಿ ನಡೆದಿದೆ.<br /> <br /> ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ಮೈಖೆಲ್ ಕಮೂ ಹೇಳಿದ್ದಾರೆ.<br /> <br /> <strong>ವಿಮಾನ ಅಪಘಾತ: ಪೈಲಟ್ ಕೃತ್ಯ</strong><br /> ಲಂಡನ್ (ಐಎಎನ್ಎಸ್): ನಮೀಬಿಯಾದಲ್ಲಿ ಕಳೆದ ತಿಂಗಳು ದುರಂತಕ್ಕೀಡಾಗಿದ್ದ ಮೊಜಾಂಬಿಕ್ ಏರ್ಲೈನ್ಸ್ನ ವಿಮಾನವನ್ನು ಪೈಲಟ್ ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡುಮಾಡಿದ್ದ ಎಂದು ಬಿಬಿಸಿ ವರದಿ ಮಾಡಿದೆ.<br /> <br /> ಅಂಗೋಲಾಕ್ಕೆ ತೆರಳುತ್ತಿದ್ದ ವಿಮಾನ ನವೆಂಬರ್ 30ರಂದು ನಮೀಬಿಯಾದಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನ-ದಲ್ಲಿದ್ದ ಎಲ್ಲಾ 33 ಜನ ಮೃತಪಟ್ಟಿದ್ದರು.<br /> <br /> <strong>‘ಬಾಹ್ಯಾಕಾಶದಲ್ಲಿ ಆಕರಕೋಶ ಬೆಳೆ’</strong><br /> ವಾಷಿಂಗ್ಟನ್ (ಪಿಟಿಐ): ಬಾಹ್ಯಾಕಾಶದಲ್ಲಿ ಮಾನವನ ಆಕರಕೋಶಗಳನ್ನು ಬೆಳೆಸುವ ಪ್ರಯತ್ನಕ್ಕೆ ಅಮೆರಿಕ ವಿಜ್ಞಾನಿಗಳು ಮುಂದಾಗಿದ್ದಾರೆ.<br /> <br /> ಆಕರಕೋಶಗಳನ್ನು ಭೂಮಿಗಿಂತಲೂ ಹೆಚ್ಚು ವೇಗದಲ್ಲಿ ಬಾಹ್ಯಾಕಾಶದಲ್ಲಿ ಬೆಳೆಸಬಹುದೇ ಎಂಬುದನ್ನು ತಿಳಿಯುವುದಕ್ಕಾಗಿ ಅಮೆರಿಕವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಾನವ ಆಕರಕೋಶಗಳನ್ನು ಕಳುಹಿಸಲಿದೆ.<br /> <br /> <strong>ಅಂತರಿಕ್ಷ ಉಡುಪು ದೋಷ</strong><br /> ವಾಷಿಂಗ್ಟನ್ (ಎಎಫ್ಪಿ): ಗಗನಯಾತ್ರಿಯೊಬ್ಬರ ಉಡುಪಿನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಕಾರ್ಯ ಮುಂದೂಡಿದೆ.<br /> <br /> ಐಎಸ್ಎಸ್ನ ದುರಸ್ತಿ ಕಾರ್ಯಕ್ಕಾಗಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದ ಹಿರಿಯ ಗಗನಯಾತ್ರಿ ರಿಕ್ಮಾಸ್ಟ್ರಚಿನೊ ಅವರು ಧರಿಸಿದ್ದ ಬಾಹ್ಯಾಕಾಶ ದಿರಿಸಿನ ಶೀತಲೀಕರಣ ಘಟಕದಲ್ಲಿ ದೋಷ ಕಂಡು ಬಂದ ಕಾರಣ 5.5 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸಿ ಐಎಸ್ಎಸ್ಗೆ ಹಿಂದಿರುಗಿದರು ಎಂದು ನಾಸಾ ಹೇಳಿದೆ.<br /> <br /> <strong>ಭಾರತೀಯ ವೈದ್ಯನ ಶವ ಬ್ರಿಟನ್ಗೆ</strong><br /> ಲಂಡನ್ (ಪಿಟಿಐ): ಸಿರಿಯಾ ಜೈಲಿನಲ್ಲಿ ಶಂಕಾಸ್ಪದ ರೀತಿಯಲ್ಲಿ ಇದೇ 16ರಂದು ಸಾವನ್ನಪ್ಪಿದ್ದ ಭಾರತ ಮೂಲದ ವೈದ್ಯ ಷಾ ಅಬ್ಬಾಸ್ ಖಾನ್ (32) ಅವರ ಶವವನ್ನು ಬ್ರಿಟನ್ಗೆ ರವಾನಿಸಲಾಗಿದೆ. ದಕ್ಷಿಣ ಲಂಡನ್ ನಿವಾಸಿಯಾದ ಅವರು ಮೂಳೆ ಶಸ್ತ್ರಚಿಕಿತ್ಸಕರಾಗಿದ್ದರು.<br /> <br /> ಶವವನ್ನು ಶನಿವಾರವೇ ಲೆಬನಾನ್ಗೆ ಕಳುಹಿಸಲಾಗಿದ್ದು, ಖಾನ್ ಅವರ ತಾಯಿ ಫಾತಿಮಾ ಮತ್ತು ಸೋದರ ಅಫ್ರೋಜ್ ಅವರು ಅದನ್ನು ಸ್ವೀಕರಿಸಿದ್ದಾರೆ. ಅವರು ಶವವನ್ನು ಬ್ರಿಟನ್ಗೆ ತೆಗೆದುಕೊಂಡು ಹೋಗಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>