<p><strong>ಹೆಲಿಕಾಪ್ಟರ್ ಅಪಘಾತ: 4 ಸಾವು<br /> ಬೀಜಿಂಗ್ (ಐಎಎನ್ಎಸ್):</strong> ಪೊಲೀಸ್ ಹೆಲಿಕಾಪ್ಟರ್ ಒಂದು ಅಪಘಾತಕ್ಕೆ ಒಳಗಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಒಟ್ಟು ಐವರು ಈ ಕಾಪ್ಟರ್ನಲ್ಲಿದ್ದು, ಒಬ್ಬನನ್ನು ಅಫಘಾತ ಸಂಭವಿಸಿದ ಕೂಡಲೇ ರಕ್ಷಿಸಲಾಗಿದೆ.<br /> <br /> <strong>ಬಿರುಗಾಳಿಗೆ ಐವರು ಬಲಿ<br /> ಬ್ರಸೆಲ್ಸ್, ಬೆಲ್ಜಿಯಂ (ಎಎಫ್ಪಿ): </strong>ಹೊರಾಂಗಣದಲ್ಲಿ ಆಯೋಜಿಸಲಾದ ರಾಕ್ ಸಂಗೀತೋತ್ಸವದ ಸಂದರ್ಭದಲ್ಲಿ ಬೀಸಿದ ಬಿರುಗಾಳಿಗೆ ಐವರು ಬಲಿಯಾದ ಘಟನೆ ಗುರುವಾರ ಸಂಜೆ ಜರುಗಿದೆ. ಹೆಸ್ಸೆಲ್ಟ್ ಪಟ್ಟಣದ ಬಳಿ ಕೀವಿಟ್ಲ್ಲಿ ಆಯೋಜಿತವಾಗಿದ್ದ ಸಂಗೀತ ಮೇಳದಲ್ಲಿ ಸಾವಿರಾರು ಜನರು ಸೇರಿದ್ದಾಗ ಈ ಘಟನೆ ನಡೆದಿದೆ. ಬಿರುಗಾಳಿಯ ರಭಸಕ್ಕೆ ಎರಡು ವೇದಿಕೆಗಳು ಮುರಿದುಬಿದ್ದಿದ್ದು, ಮರಗಿಡಗಳು ಬುಡ ಮೇಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಅಮೆರಿಕ ಪ್ರಜೆ ಬಿಡುಗಡೆಗೆ ತಾಕೀತು<br /> ಇಸ್ಲಾಮಾಬಾದ್ (ಐಎಎನ್ಎಸ್): </strong>ಲಾಹೋರ್ನಿಂದ ಅಪಹರಣಕ್ಕೊಳಗಾಗಿರುವ ತನ್ನ ಪ್ರಜೆಯ ಸುರಕ್ಷತೆ ಬಗ್ಗೆ ಖಚಿತಪಡಿಸುವಂತೆ ಪಾಕ್ಗೆ ಅಮೆರಿಕ ತಾಕೀತು ಮಾಡಿದೆ.<br /> <br /> ಲಾಹೋರ್ನಲ್ಲಿ ವಾಸವಾಗಿದ್ದ ಪ್ರೊ. ವಾರೆನ್ ವೆನ್ಸ್ಟೇನ್ ಆ.13ರಂದು ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಈ ಬಗ್ಗೆ ವಿಚಾರಿಸಿದ್ದಾರೆ.<br /> <br /> <strong>ಕಕ್ಷೆ ಸೇರದ ಚೀನಾ ಉಪಗ್ರಹ<br /> ಬೀಜಿಂಗ್ (ಐಎಎನ್ಎಸ್):</strong> ಕ್ಷಿಪಣಿ ಉಡಾವಣಾ ನಿರ್ವಹಣೆಯಲ್ಲಿ ಕಂಡುಬಂದ ದೋಷದ ಪರಿಣಾಮ ಚೀನಾದ ಎಸ್ಜೆ-11-04 ಉಪಗ್ರಹ ಉದ್ದೇಶಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.<br /> <br /> `ಗಾನ್ಸು ಪ್ರಾಂತ್ಯದಿಂದ ಬುಧವಾರ ಸಂಜೆ 5.28ಕ್ಕೆ ಉಪಗ್ರಹವನ್ನು ಮೇಲಕ್ಕೆ ಹಾರಿಬಿಡಲಾಗಿತ್ತು. ಅದನ್ನು ಹೊತ್ತೊಯ್ಯುವ ಲಾಂಗ್ಮಾರ್ಚ್ 2-ಸಿ ಕ್ಷಿಪಣಿ ನಿರ್ವಹಣೆಯಲ್ಲಿ ದೋಷ ಎಸಗಿದ್ದರಿಂದ ಈ ಪ್ರಮಾದ ಸಂಭವಿಸಿದೆ. ಇದೇ ಮೊದಲ ಬಾರಿಗೆ ಲಾಂಗ್ಮಾರ್ಚ್ 2-ಸಿ ಕ್ಷಿಪಣಿ ಕಾರ್ಯಾಚರಣೆ ವೈಫಲ್ಯ ಅನುಭವಿಸಿದೆ~ ಎಂದು ಬೀಜಿಂಗ್ ನ್ಯೂಸ್ ಪ್ರಕಟಿಸಿದೆ.<br /> <br /> <strong>ಯುದ್ಧ ವಿಮಾನ ಪ್ರದರ್ಶನ: ಭಾರತವೂ ಭಾಗಿ <br /> ಕೊಲಂಬೊ (ಐಎಎನ್ಎಸ್):</strong> ಈ ತಿಂಗಳ 22ರಿಂದ ಇಲ್ಲಿನ ರತ್ಮಲಾನಾ ವಿಮಾನ ನಿಲ್ದಾಣದಲ್ಲಿ ನಡೆಯುವ ಅಮೆರಿಕ ಹಾಗೂ ಶ್ರೀಲಂಕಾ ವಾಯು ಪಡೆಗಳ ಯುದ್ಧ ವಿಮಾನ ಪ್ರದರ್ಶನದಲ್ಲಿ ಭಾರತ ಸಹ ಭಾಗವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಭಾರತೀಯ ಸಂಜಾತನಿಗೆ ಶಿಕ್ಷೆ<br /> ಮೆಲ್ಬರ್ನ್ (ಪಿಟಿಐ): </strong>ವಲಸೆ ಅಧಿಕಾರಿ ಎಂದು ಹೇಳಿಕೊಂಡು ವಿದ್ಯಾರ್ಥಿನಿಯಿಂದ ಹಣ ಸುಲಿಗೆ ಮಾಡಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಆಸ್ಟ್ರೇಲಿಯಾದ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. <br /> <br /> ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯನ್ನು ಜಸ್ಬೀರ್ ಸಿಂಗ್ ಎನ್ನಲಾಗಿದ್ದು ಈತ ತಾನು ವಲಸೆ ಅಧಿಕಾರಿ ಎಂದು ಹೇಳಿ, 2009ರಲ್ಲಿ ವಿದ್ಯಾರ್ಥಿನಿಯಿಂದ ಪಾಸ್ಪೋರ್ಟ್, ಹಣಕಾಸಿನ ವಿವರ ಪತ್ರ ಸೇರಿದಂತೆ 2,300 ಡಾಲರ್ ಹಣವನ್ನು ಬಲತ್ಕಾರವಾಗಿ ವಸೂಲಿ ಮಾಡಿದ ಆರೋಪವಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ವಿಕ್ಟೋರಿಯನ್ ಕೌಂಟಿ ಕೋರ್ಟ್ ಜಸ್ಬೀರ್ಗೆ ಶಿಕ್ಷೆ ಪ್ರಕಟಿಸಿದೆ. <br /> <br /> <strong>ಚೀನಾ: ಯುವ ವಿಜ್ಞಾನಿ ನಾಪತ್ತೆ<br /> ಬೀಜಿಂಗ್(ಪಿಟಿಐ): </strong>ಸ್ವಾಯತ್ತತೆಯಿರುವ ದೇಶದ ವಾಯವ್ಯ ಕ್ಸಿಜಿಯಾಂಗ್ ಉಗುರ ಪ್ರಾಂತ್ಯದ ನೀರ್ಗಲ್ಲ ಪ್ರದೇಶದಲ್ಲಿ ಯುವ ವಿಜ್ಞಾನಿ ನಾಪತ್ತೆಯಾಗಿರುವುದಾಗಿ ಚೀನಾದ ವಿಜ್ಞಾನ ಅಕಾಡೆಮಿ ಹೇಳಿದೆ.ಕಾಣೆಯಾಗಿರುವ ವಿಜ್ಞಾನಿಯನ್ನು ಲಿನ್ ಶುಬಿಯೊ ಎಂದು ಗುರುತಿಸಲಾಗಿದ್ದು, 29 ಮಂದಿಯಿರುವ ರಕ್ಷಣಾ ತಂಡ ಈತನ ಹುಡಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.<br /> <br /> <strong>ನಾಯಿಗೆ ಹೆದರಿದ 600 ಮೊಲಗಳ ಸಾವು<br /> ಬೀಜಿಂಗ್ (ಐಎಎನ್ಎಸ್): </strong> ಪೂರ್ವ ಚೀನಾದ `ಫಾರ್ಮ್~ ವೊಂದದಲ್ಲಿ ಮೂರು ನಾಯಿಗಳು ನುಗ್ಗಿದ್ದರಿಂದ ಭಯಬಿದ್ದ 600 ಮೊಲಗಳು ಸಾವನ್ನಪ್ಪಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.<br /> <br /> ಹೆಕ್ಸಿನ್ ಎಂಬ ಗ್ರಾಮದಲ್ಲಿ ನಾಯಿಗಳು ಮೊಲಗಳ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದಾಗ 1000 ಮೊಲಗಳು ಸತ್ತಿವೆ. ಅವುಗಳಲ್ಲಿ 600 ಮೊಲಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕೇವಲ ಭಯಬಿದ್ದು, ಒತ್ತಡದಿಂದಾಗಿ ಮೃತಪಟ್ಟಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.<br /> <br /> ಪ್ರಾಣಿಗಳಲ್ಲಿನ `ಒತ್ತಡ~ದಿಂದ ಇವು ಮೃತಪಟ್ಟಿವೆ. ಮೊಲಗಳು ಭಯಬಿದ್ದಾಗ, ಆಂಡ್ರಿಲೈನ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ಮೊಲಗಳ ನರವ್ಯೆಹ ವ್ಯವಸ್ಥೆಯನ್ನು ಉದ್ರೇಕಿಸುತ್ತದೆ. ಹಾಗಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಅವಯವಗಳು ಕಾರ್ಯ ನಿರ್ವಹಿಸುವಲ್ಲಿ ತಪ್ಪುತ್ತವೆ. ಮೊಲಗಳು ಈ ಭಯದಿಂದಾಗಿಯೇ ಸಾವನ್ನಪ್ಪುತ್ತವೆ ಎಂದು ಪಶುಪಾಲನಾ ತಜ್ಞ ಚೆನ್ ಡಾಕ್ಸಿಯಾಂಗ್ ಹೇಳಿದ್ದಾರೆ.<br /> <br /> <strong>ಭ್ರಷ್ಟಾಚಾರ: ಪಾಕ್ನಲ್ಲೂ ಚಳವಳಿ ಬೆದರಿಕೆ<br /> ಇಸ್ಲಾಮಾಬಾದ್ (ಪಿಟಿಐ): </strong>ಭಾರತದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರಿಂದ ಪ್ರೇರಿತವಾಗಿರುವ ಪಾಕಿಸ್ತಾನದ ವ್ಯಾಪಾರಿಯೊಬ್ಬರು, ತಾವೂ ಶೀಘ್ರ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಮತ್ತು ದಕ್ಷಿಣ ಏಷ್ಯಾದಲ್ಲಿ ಸೇನಾ ವೆಚ್ಚ ಕಡಿತಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. <br /> <br /> 68 ವರ್ಷದ ರಾಜಾ ಜಹಾಂಗೀರ್ ಅಖ್ತರ್ ಅವರು ರಂಜಾನ್ ಉಪವಾಸದ ನಂತರ ಮುಂದಿನ ತಿಂಗಳ 12ರಿಂದ ಈ ಪ್ರತಿಭಟನೆ ಆರಂಭಿಸಲಿದ್ದು, ಲೋಕಪಾಲ ಮಸೂದೆಯ ಮಾದರಿಯಲ್ಲೇ ಪಾಕ್ ಸಂಸತ್ತಿನಲ್ಲೂ ಭ್ರಷ್ಟಾಚಾರ ನಿಗ್ರಹ ಮಸೂದೆ ಅಂಗೀಕರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.<br /> <br /> <strong>`ಅಭಿವೃದ್ಧಿಯಿಂದ ಭಯೋತ್ಪಾದನೆ ನಿರ್ಮೂಲನೆ~ <br /> ಇಸ್ಲಾಮಾಬಾದ್ (ಐಎಎನ್ಎಸ್) :</strong> ಜನರ ಜೀವನಮಟ್ಟ ಸುಧಾರಣೆ ಹೊಂದದ ಹೊರತು ಭಯೋತ್ಪಾದನೆ ನಿರ್ಮೂಲನೆ ಅಸಾಧ್ಯ ಎಂದು ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿದ್ದಾರೆ. ವಿಶ್ವ ಮಾನವೀಯತೆ ದಿನಾಚರಣೆಯ ಅಂಗವಾಗಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನಾವಿಂದು ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದೇವೆ ಹಾಗೂ ಊಹಿಸಲಾಗದ ಸವಾಲುಗಳನ್ನು ಎದುರಿಸುತ್ತಿದ್ದೇವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಲಿಕಾಪ್ಟರ್ ಅಪಘಾತ: 4 ಸಾವು<br /> ಬೀಜಿಂಗ್ (ಐಎಎನ್ಎಸ್):</strong> ಪೊಲೀಸ್ ಹೆಲಿಕಾಪ್ಟರ್ ಒಂದು ಅಪಘಾತಕ್ಕೆ ಒಳಗಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಒಟ್ಟು ಐವರು ಈ ಕಾಪ್ಟರ್ನಲ್ಲಿದ್ದು, ಒಬ್ಬನನ್ನು ಅಫಘಾತ ಸಂಭವಿಸಿದ ಕೂಡಲೇ ರಕ್ಷಿಸಲಾಗಿದೆ.<br /> <br /> <strong>ಬಿರುಗಾಳಿಗೆ ಐವರು ಬಲಿ<br /> ಬ್ರಸೆಲ್ಸ್, ಬೆಲ್ಜಿಯಂ (ಎಎಫ್ಪಿ): </strong>ಹೊರಾಂಗಣದಲ್ಲಿ ಆಯೋಜಿಸಲಾದ ರಾಕ್ ಸಂಗೀತೋತ್ಸವದ ಸಂದರ್ಭದಲ್ಲಿ ಬೀಸಿದ ಬಿರುಗಾಳಿಗೆ ಐವರು ಬಲಿಯಾದ ಘಟನೆ ಗುರುವಾರ ಸಂಜೆ ಜರುಗಿದೆ. ಹೆಸ್ಸೆಲ್ಟ್ ಪಟ್ಟಣದ ಬಳಿ ಕೀವಿಟ್ಲ್ಲಿ ಆಯೋಜಿತವಾಗಿದ್ದ ಸಂಗೀತ ಮೇಳದಲ್ಲಿ ಸಾವಿರಾರು ಜನರು ಸೇರಿದ್ದಾಗ ಈ ಘಟನೆ ನಡೆದಿದೆ. ಬಿರುಗಾಳಿಯ ರಭಸಕ್ಕೆ ಎರಡು ವೇದಿಕೆಗಳು ಮುರಿದುಬಿದ್ದಿದ್ದು, ಮರಗಿಡಗಳು ಬುಡ ಮೇಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಅಮೆರಿಕ ಪ್ರಜೆ ಬಿಡುಗಡೆಗೆ ತಾಕೀತು<br /> ಇಸ್ಲಾಮಾಬಾದ್ (ಐಎಎನ್ಎಸ್): </strong>ಲಾಹೋರ್ನಿಂದ ಅಪಹರಣಕ್ಕೊಳಗಾಗಿರುವ ತನ್ನ ಪ್ರಜೆಯ ಸುರಕ್ಷತೆ ಬಗ್ಗೆ ಖಚಿತಪಡಿಸುವಂತೆ ಪಾಕ್ಗೆ ಅಮೆರಿಕ ತಾಕೀತು ಮಾಡಿದೆ.<br /> <br /> ಲಾಹೋರ್ನಲ್ಲಿ ವಾಸವಾಗಿದ್ದ ಪ್ರೊ. ವಾರೆನ್ ವೆನ್ಸ್ಟೇನ್ ಆ.13ರಂದು ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಈ ಬಗ್ಗೆ ವಿಚಾರಿಸಿದ್ದಾರೆ.<br /> <br /> <strong>ಕಕ್ಷೆ ಸೇರದ ಚೀನಾ ಉಪಗ್ರಹ<br /> ಬೀಜಿಂಗ್ (ಐಎಎನ್ಎಸ್):</strong> ಕ್ಷಿಪಣಿ ಉಡಾವಣಾ ನಿರ್ವಹಣೆಯಲ್ಲಿ ಕಂಡುಬಂದ ದೋಷದ ಪರಿಣಾಮ ಚೀನಾದ ಎಸ್ಜೆ-11-04 ಉಪಗ್ರಹ ಉದ್ದೇಶಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.<br /> <br /> `ಗಾನ್ಸು ಪ್ರಾಂತ್ಯದಿಂದ ಬುಧವಾರ ಸಂಜೆ 5.28ಕ್ಕೆ ಉಪಗ್ರಹವನ್ನು ಮೇಲಕ್ಕೆ ಹಾರಿಬಿಡಲಾಗಿತ್ತು. ಅದನ್ನು ಹೊತ್ತೊಯ್ಯುವ ಲಾಂಗ್ಮಾರ್ಚ್ 2-ಸಿ ಕ್ಷಿಪಣಿ ನಿರ್ವಹಣೆಯಲ್ಲಿ ದೋಷ ಎಸಗಿದ್ದರಿಂದ ಈ ಪ್ರಮಾದ ಸಂಭವಿಸಿದೆ. ಇದೇ ಮೊದಲ ಬಾರಿಗೆ ಲಾಂಗ್ಮಾರ್ಚ್ 2-ಸಿ ಕ್ಷಿಪಣಿ ಕಾರ್ಯಾಚರಣೆ ವೈಫಲ್ಯ ಅನುಭವಿಸಿದೆ~ ಎಂದು ಬೀಜಿಂಗ್ ನ್ಯೂಸ್ ಪ್ರಕಟಿಸಿದೆ.<br /> <br /> <strong>ಯುದ್ಧ ವಿಮಾನ ಪ್ರದರ್ಶನ: ಭಾರತವೂ ಭಾಗಿ <br /> ಕೊಲಂಬೊ (ಐಎಎನ್ಎಸ್):</strong> ಈ ತಿಂಗಳ 22ರಿಂದ ಇಲ್ಲಿನ ರತ್ಮಲಾನಾ ವಿಮಾನ ನಿಲ್ದಾಣದಲ್ಲಿ ನಡೆಯುವ ಅಮೆರಿಕ ಹಾಗೂ ಶ್ರೀಲಂಕಾ ವಾಯು ಪಡೆಗಳ ಯುದ್ಧ ವಿಮಾನ ಪ್ರದರ್ಶನದಲ್ಲಿ ಭಾರತ ಸಹ ಭಾಗವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br /> <br /> <strong>ಭಾರತೀಯ ಸಂಜಾತನಿಗೆ ಶಿಕ್ಷೆ<br /> ಮೆಲ್ಬರ್ನ್ (ಪಿಟಿಐ): </strong>ವಲಸೆ ಅಧಿಕಾರಿ ಎಂದು ಹೇಳಿಕೊಂಡು ವಿದ್ಯಾರ್ಥಿನಿಯಿಂದ ಹಣ ಸುಲಿಗೆ ಮಾಡಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಆಸ್ಟ್ರೇಲಿಯಾದ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. <br /> <br /> ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯನ್ನು ಜಸ್ಬೀರ್ ಸಿಂಗ್ ಎನ್ನಲಾಗಿದ್ದು ಈತ ತಾನು ವಲಸೆ ಅಧಿಕಾರಿ ಎಂದು ಹೇಳಿ, 2009ರಲ್ಲಿ ವಿದ್ಯಾರ್ಥಿನಿಯಿಂದ ಪಾಸ್ಪೋರ್ಟ್, ಹಣಕಾಸಿನ ವಿವರ ಪತ್ರ ಸೇರಿದಂತೆ 2,300 ಡಾಲರ್ ಹಣವನ್ನು ಬಲತ್ಕಾರವಾಗಿ ವಸೂಲಿ ಮಾಡಿದ ಆರೋಪವಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ವಿಕ್ಟೋರಿಯನ್ ಕೌಂಟಿ ಕೋರ್ಟ್ ಜಸ್ಬೀರ್ಗೆ ಶಿಕ್ಷೆ ಪ್ರಕಟಿಸಿದೆ. <br /> <br /> <strong>ಚೀನಾ: ಯುವ ವಿಜ್ಞಾನಿ ನಾಪತ್ತೆ<br /> ಬೀಜಿಂಗ್(ಪಿಟಿಐ): </strong>ಸ್ವಾಯತ್ತತೆಯಿರುವ ದೇಶದ ವಾಯವ್ಯ ಕ್ಸಿಜಿಯಾಂಗ್ ಉಗುರ ಪ್ರಾಂತ್ಯದ ನೀರ್ಗಲ್ಲ ಪ್ರದೇಶದಲ್ಲಿ ಯುವ ವಿಜ್ಞಾನಿ ನಾಪತ್ತೆಯಾಗಿರುವುದಾಗಿ ಚೀನಾದ ವಿಜ್ಞಾನ ಅಕಾಡೆಮಿ ಹೇಳಿದೆ.ಕಾಣೆಯಾಗಿರುವ ವಿಜ್ಞಾನಿಯನ್ನು ಲಿನ್ ಶುಬಿಯೊ ಎಂದು ಗುರುತಿಸಲಾಗಿದ್ದು, 29 ಮಂದಿಯಿರುವ ರಕ್ಷಣಾ ತಂಡ ಈತನ ಹುಡಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.<br /> <br /> <strong>ನಾಯಿಗೆ ಹೆದರಿದ 600 ಮೊಲಗಳ ಸಾವು<br /> ಬೀಜಿಂಗ್ (ಐಎಎನ್ಎಸ್): </strong> ಪೂರ್ವ ಚೀನಾದ `ಫಾರ್ಮ್~ ವೊಂದದಲ್ಲಿ ಮೂರು ನಾಯಿಗಳು ನುಗ್ಗಿದ್ದರಿಂದ ಭಯಬಿದ್ದ 600 ಮೊಲಗಳು ಸಾವನ್ನಪ್ಪಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.<br /> <br /> ಹೆಕ್ಸಿನ್ ಎಂಬ ಗ್ರಾಮದಲ್ಲಿ ನಾಯಿಗಳು ಮೊಲಗಳ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದಾಗ 1000 ಮೊಲಗಳು ಸತ್ತಿವೆ. ಅವುಗಳಲ್ಲಿ 600 ಮೊಲಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕೇವಲ ಭಯಬಿದ್ದು, ಒತ್ತಡದಿಂದಾಗಿ ಮೃತಪಟ್ಟಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.<br /> <br /> ಪ್ರಾಣಿಗಳಲ್ಲಿನ `ಒತ್ತಡ~ದಿಂದ ಇವು ಮೃತಪಟ್ಟಿವೆ. ಮೊಲಗಳು ಭಯಬಿದ್ದಾಗ, ಆಂಡ್ರಿಲೈನ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ಮೊಲಗಳ ನರವ್ಯೆಹ ವ್ಯವಸ್ಥೆಯನ್ನು ಉದ್ರೇಕಿಸುತ್ತದೆ. ಹಾಗಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಅವಯವಗಳು ಕಾರ್ಯ ನಿರ್ವಹಿಸುವಲ್ಲಿ ತಪ್ಪುತ್ತವೆ. ಮೊಲಗಳು ಈ ಭಯದಿಂದಾಗಿಯೇ ಸಾವನ್ನಪ್ಪುತ್ತವೆ ಎಂದು ಪಶುಪಾಲನಾ ತಜ್ಞ ಚೆನ್ ಡಾಕ್ಸಿಯಾಂಗ್ ಹೇಳಿದ್ದಾರೆ.<br /> <br /> <strong>ಭ್ರಷ್ಟಾಚಾರ: ಪಾಕ್ನಲ್ಲೂ ಚಳವಳಿ ಬೆದರಿಕೆ<br /> ಇಸ್ಲಾಮಾಬಾದ್ (ಪಿಟಿಐ): </strong>ಭಾರತದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರಿಂದ ಪ್ರೇರಿತವಾಗಿರುವ ಪಾಕಿಸ್ತಾನದ ವ್ಯಾಪಾರಿಯೊಬ್ಬರು, ತಾವೂ ಶೀಘ್ರ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಮತ್ತು ದಕ್ಷಿಣ ಏಷ್ಯಾದಲ್ಲಿ ಸೇನಾ ವೆಚ್ಚ ಕಡಿತಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. <br /> <br /> 68 ವರ್ಷದ ರಾಜಾ ಜಹಾಂಗೀರ್ ಅಖ್ತರ್ ಅವರು ರಂಜಾನ್ ಉಪವಾಸದ ನಂತರ ಮುಂದಿನ ತಿಂಗಳ 12ರಿಂದ ಈ ಪ್ರತಿಭಟನೆ ಆರಂಭಿಸಲಿದ್ದು, ಲೋಕಪಾಲ ಮಸೂದೆಯ ಮಾದರಿಯಲ್ಲೇ ಪಾಕ್ ಸಂಸತ್ತಿನಲ್ಲೂ ಭ್ರಷ್ಟಾಚಾರ ನಿಗ್ರಹ ಮಸೂದೆ ಅಂಗೀಕರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.<br /> <br /> <strong>`ಅಭಿವೃದ್ಧಿಯಿಂದ ಭಯೋತ್ಪಾದನೆ ನಿರ್ಮೂಲನೆ~ <br /> ಇಸ್ಲಾಮಾಬಾದ್ (ಐಎಎನ್ಎಸ್) :</strong> ಜನರ ಜೀವನಮಟ್ಟ ಸುಧಾರಣೆ ಹೊಂದದ ಹೊರತು ಭಯೋತ್ಪಾದನೆ ನಿರ್ಮೂಲನೆ ಅಸಾಧ್ಯ ಎಂದು ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿದ್ದಾರೆ. ವಿಶ್ವ ಮಾನವೀಯತೆ ದಿನಾಚರಣೆಯ ಅಂಗವಾಗಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನಾವಿಂದು ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದೇವೆ ಹಾಗೂ ಊಹಿಸಲಾಗದ ಸವಾಲುಗಳನ್ನು ಎದುರಿಸುತ್ತಿದ್ದೇವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>