<p><strong>ಸಂಡೂರು:</strong> ತಾ.ಪಂ.ಉಪ ಚುನಾವಣೆಯ ಅಭ್ಯರ್ಥಿಗಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಕಿತ್ತಾಟ ನಡೆಸಿದ ಘಟನೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಜರುಗಿತು.<br /> <br /> ಜ.10ರಂದು ನಡೆಯಲಿರುವ ತಾಲ್ಲೂಕಿನ ಕಾಳಿಂಗೇರಿ ತಾ.ಪಂ ಉಪ ಚುನಾವಣೆಗೆ ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಬಿಜೆಪಿಯಿಂದ ಬಿ ಫಾರಂ ಪಡೆದು ಸ್ಪರ್ಧಿಸಿದ್ದ ಅಂಜಿನಪ್ಪನನ್ನು ಕಾಂಗ್ರೆಸ್ ಪಕ್ಷದವರು ಶುಕ್ರವಾರ ಹೈಜಾಕ್ ಮಾಡಿದ್ದಾಗಿ ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.<br /> <br /> ಶನಿವಾರ ನಾಮಪತ್ರ ವಾಪಸ್ಸು ಪಡೆಯಲು ಬಿಜೆಪಿ ಅಭ್ಯರ್ಥಿ ಅಂಜಿನಪ್ಪನನ್ನು ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಕರೆದುಕೊಂಡು ಬರುತ್ತಿದ್ದಂತೆ ಎರಡೂ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ತಮ್ಮ ಕಡೆಗೆ ಬರುವಂತೆ ಎರಡೂ ಬಣದವರು ಅಭ್ಯರ್ಥಿಯನ್ನು ಎಳೆದಾಡಿದರು.<br /> <br /> ಕೊನೆಗೆ ಅಭ್ಯರ್ಥಿ ಅಂಜಿನಪ್ಪ ಬಿಜೆಪಿ ಪರ ಸ್ಪರ್ಧಿಸುವುದಾಗಿ ಖಡಾಖಂಡಿತವಾಗಿ ಹೇಳಿ ಬಿಜೆಪಿಯವರ ವಾಹನದಲ್ಲಿ ತೆರಳುತ್ತಿದ್ದಂತೆ ಗಲಾಟೆ ಶಮನಗೊಂಡಿತು. ಎರಡೂ ಪಕ್ಷಗಳ ಕಾರ್ಯಕರ್ತರ ಎಳೆದಾಟದಲ್ಲಿ ಬಿಜೆಪಿ ಅಭ್ಯರ್ಥಿ ಅಂಜಿನಪ್ಪ ಅಂಗಿ ಹರಿದು ಹೈರಾಣಾಗಿದ್ದ.<br /> <br /> ನಾಮಪತ್ರ ವಾಪಸ್ ಪಡೆಯಲು ಒತ್ತಾಯ: ಶುಕ್ರವಾರ ಗ್ರಾಮದ ಬಳಿ ಕಾಲ್ನಡಿಗೆಯಲ್ಲಿ ಹೊರಟಿದ್ದ ತನ್ನನ್ನು ನಿನ್ನೊಂದಿಗೆ ಮಾತನಾಡುವುದಿದೆ ಎಂದು ನನ್ನ ಸ್ನೇಹಿತರೇ ಆಗಿರುವ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ನನ್ನನ್ನು ವಾಹನದಲ್ಲಿ ಕರೆದೊಯ್ದಿದ್ದರು ಎಂದು ಬಿಜೆಪಿ ಅಭ್ಯರ್ಥಿ ಅಂಜಿನಪ್ಪ ವಿವರಿಸಿದರು.<br /> <br /> ಅಸಹಾಯಕ ತಹಸೀಲ್ದಾರರು: ಬಿಜೆಪಿ ಅಭ್ಯರ್ಥಿ ಕಚೇರಿ ಪ್ರವೇಶಿಸುತ್ತಿದ್ದಂತೆ ತಹಸೀಲ್ದಾರರ ಚೇಂಬರಿನಲ್ಲಿಯೇ ಎರಡೂ ಪಕ್ಷಗಳ 30-40ಜನ ಕಾರ್ಯಕರ್ತರ ಮದ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಸುತ್ತಿದ್ದರೂ ತಹಸೀಲ್ದಾರರು ಅಸಹಾಯಕರಾಗಿ ನೋಡುತ್ತಾ ನಿಲ್ಲುವಂತಾಗಿತ್ತು.<br /> <br /> ಒಬ್ಬನೇ ಕಾನ್ಸ್ಟೇಬಲ್ ಇದ್ದುದರಿಂದ ಗಲಾಟೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ತಹಸೀಲ್ದಾರರು ಠಾಣೆಗೆ ದೂರವಾಣಿ ಮೂಲಕ ಹೆಚ್ಚಿನ ಸಿಬ್ಬಂದಿ ಕಳುಹಿಸು ವಂತೆ ಸೂಚಿಸಿದರು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸುವುದಾಗಿ ಚುನಾವಣಾಧಿಕಾರಿಯೂ ಆಗಿರುವ ಪ್ರಭಾರ ತಹಸೀಲ್ದಾರ ಕೆ. ದಾಸಪ್ಪ ಸುದ್ದಿಗಾರರಿಗೆ ತಿಳಿಸಿದರು.<br /> <br /> ಕಚೇರಿಯಲ್ಲಿ ದಾಂಧಲೆ ನಡೆಸಿದವರ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ `ಪ್ರಜಾವಾಣಿ~ಗೆ ತಹಸೀಲ್ದಾರರು ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿಯುತ್ತಿದ್ದಂತೆ ಕಣದಲ್ಲಿರುವ ಕಾಂಗ್ರೆಸ್ನ ಪೂಜಾರಿ ಮಾರೆವ್ವ, ಬಿಜೆಪಿಯಿಂದ ಅಂಜಿನಪ್ಪ ಅಧಿಕೃತ ಅಭ್ಯರ್ಥಿಗಳೆಂದು ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು:</strong> ತಾ.ಪಂ.ಉಪ ಚುನಾವಣೆಯ ಅಭ್ಯರ್ಥಿಗಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಕಿತ್ತಾಟ ನಡೆಸಿದ ಘಟನೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಜರುಗಿತು.<br /> <br /> ಜ.10ರಂದು ನಡೆಯಲಿರುವ ತಾಲ್ಲೂಕಿನ ಕಾಳಿಂಗೇರಿ ತಾ.ಪಂ ಉಪ ಚುನಾವಣೆಗೆ ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಬಿಜೆಪಿಯಿಂದ ಬಿ ಫಾರಂ ಪಡೆದು ಸ್ಪರ್ಧಿಸಿದ್ದ ಅಂಜಿನಪ್ಪನನ್ನು ಕಾಂಗ್ರೆಸ್ ಪಕ್ಷದವರು ಶುಕ್ರವಾರ ಹೈಜಾಕ್ ಮಾಡಿದ್ದಾಗಿ ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.<br /> <br /> ಶನಿವಾರ ನಾಮಪತ್ರ ವಾಪಸ್ಸು ಪಡೆಯಲು ಬಿಜೆಪಿ ಅಭ್ಯರ್ಥಿ ಅಂಜಿನಪ್ಪನನ್ನು ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಕರೆದುಕೊಂಡು ಬರುತ್ತಿದ್ದಂತೆ ಎರಡೂ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ, ತಮ್ಮ ಕಡೆಗೆ ಬರುವಂತೆ ಎರಡೂ ಬಣದವರು ಅಭ್ಯರ್ಥಿಯನ್ನು ಎಳೆದಾಡಿದರು.<br /> <br /> ಕೊನೆಗೆ ಅಭ್ಯರ್ಥಿ ಅಂಜಿನಪ್ಪ ಬಿಜೆಪಿ ಪರ ಸ್ಪರ್ಧಿಸುವುದಾಗಿ ಖಡಾಖಂಡಿತವಾಗಿ ಹೇಳಿ ಬಿಜೆಪಿಯವರ ವಾಹನದಲ್ಲಿ ತೆರಳುತ್ತಿದ್ದಂತೆ ಗಲಾಟೆ ಶಮನಗೊಂಡಿತು. ಎರಡೂ ಪಕ್ಷಗಳ ಕಾರ್ಯಕರ್ತರ ಎಳೆದಾಟದಲ್ಲಿ ಬಿಜೆಪಿ ಅಭ್ಯರ್ಥಿ ಅಂಜಿನಪ್ಪ ಅಂಗಿ ಹರಿದು ಹೈರಾಣಾಗಿದ್ದ.<br /> <br /> ನಾಮಪತ್ರ ವಾಪಸ್ ಪಡೆಯಲು ಒತ್ತಾಯ: ಶುಕ್ರವಾರ ಗ್ರಾಮದ ಬಳಿ ಕಾಲ್ನಡಿಗೆಯಲ್ಲಿ ಹೊರಟಿದ್ದ ತನ್ನನ್ನು ನಿನ್ನೊಂದಿಗೆ ಮಾತನಾಡುವುದಿದೆ ಎಂದು ನನ್ನ ಸ್ನೇಹಿತರೇ ಆಗಿರುವ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ನನ್ನನ್ನು ವಾಹನದಲ್ಲಿ ಕರೆದೊಯ್ದಿದ್ದರು ಎಂದು ಬಿಜೆಪಿ ಅಭ್ಯರ್ಥಿ ಅಂಜಿನಪ್ಪ ವಿವರಿಸಿದರು.<br /> <br /> ಅಸಹಾಯಕ ತಹಸೀಲ್ದಾರರು: ಬಿಜೆಪಿ ಅಭ್ಯರ್ಥಿ ಕಚೇರಿ ಪ್ರವೇಶಿಸುತ್ತಿದ್ದಂತೆ ತಹಸೀಲ್ದಾರರ ಚೇಂಬರಿನಲ್ಲಿಯೇ ಎರಡೂ ಪಕ್ಷಗಳ 30-40ಜನ ಕಾರ್ಯಕರ್ತರ ಮದ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಸುತ್ತಿದ್ದರೂ ತಹಸೀಲ್ದಾರರು ಅಸಹಾಯಕರಾಗಿ ನೋಡುತ್ತಾ ನಿಲ್ಲುವಂತಾಗಿತ್ತು.<br /> <br /> ಒಬ್ಬನೇ ಕಾನ್ಸ್ಟೇಬಲ್ ಇದ್ದುದರಿಂದ ಗಲಾಟೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ತಹಸೀಲ್ದಾರರು ಠಾಣೆಗೆ ದೂರವಾಣಿ ಮೂಲಕ ಹೆಚ್ಚಿನ ಸಿಬ್ಬಂದಿ ಕಳುಹಿಸು ವಂತೆ ಸೂಚಿಸಿದರು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸುವುದಾಗಿ ಚುನಾವಣಾಧಿಕಾರಿಯೂ ಆಗಿರುವ ಪ್ರಭಾರ ತಹಸೀಲ್ದಾರ ಕೆ. ದಾಸಪ್ಪ ಸುದ್ದಿಗಾರರಿಗೆ ತಿಳಿಸಿದರು.<br /> <br /> ಕಚೇರಿಯಲ್ಲಿ ದಾಂಧಲೆ ನಡೆಸಿದವರ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ `ಪ್ರಜಾವಾಣಿ~ಗೆ ತಹಸೀಲ್ದಾರರು ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿಯುತ್ತಿದ್ದಂತೆ ಕಣದಲ್ಲಿರುವ ಕಾಂಗ್ರೆಸ್ನ ಪೂಜಾರಿ ಮಾರೆವ್ವ, ಬಿಜೆಪಿಯಿಂದ ಅಂಜಿನಪ್ಪ ಅಧಿಕೃತ ಅಭ್ಯರ್ಥಿಗಳೆಂದು ಘೋಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>