ಸಂಪರ್ಕ ಸಾರಿಗೆ ವ್ಯವಸ್ಥೆ ಒದಗಿಸಿ
ಕೃಷ್ಣರಾಜಪುರ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ದೂರವಾಣಿ ನಗರ ಅಂದರೆ ಐ.ಟಿ.ಐ. ಕಾಲೊನಿ, ರಾಮಮೂರ್ತಿನಗರ ಮತ್ತು ಬಾಣಸವಾಡಿ ಮೂಲಕ ಮುಂದೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ ಆಟೊಗಳಿಗೆ ದುಬಾರಿ ಬೆಲೆ ತೆತ್ತು ಪ್ರಯಾಣಿಸುವ ಅನಿವಾರ್ಯತೆಯಿದೆ.
ಬಿ.ಎಂ.ಟಿ.ಸಿ. ಅಧಿಕಾರಿಗಳು ಈ ಸಮಸ್ಯೆಯನ್ನು ಪರಿಶೀಲಿಸಿ ಕೃಷ್ಣರಾಜಪುರ ರೈಲ್ವೆ ನಿಲ್ದಾಣದಿಂದ ಐ.ಟಿ.ಐ. ಕಾಲೊನಿ, ರಾಮಮೂರ್ತಿನಗರ, ಚನ್ನಸಂದ್ರ ಸೇತುವೆ, ಬಾಣಸವಾಡಿ ಮಾರ್ಗದಲ್ಲಿ ಕೆಲವು ಬಸ್ಸುಗಳ ಸಂಚಾರ ಕಲ್ಪಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.